ಜಿಲ್ಲೆಗಳು

‘ಆತಿಥ್ಯ ನೀಡಿದ್ದಕ್ಕೆ ಮಠದ ಜಾಗ ನೀಡಿ ಎನ್ನುವುದು ಸರಿಯೇ?’

ಮೈಸೂರು: ಮೈಸೂರಿನಲ್ಲಿರುವ ನಿರಂಜನ ಮಠಕ್ಕೆ ಸೇರಿರುವ ಒಂದು ಚದರ ಅಡಿ ಜಾಗಕ್ಕೆ ಕುತ್ತು ಬಂದರೆ, ರಾಜ್ಯದ ೧ಲಕ್ಷದ ೯೨ ಸಾವಿರದ ೮೦೦ ಚದರ ಕಿ.ಮೀ. ಆಡಳಿತವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೃ ಶಂಕರ ಮಹದೇವ ಬಿದರಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶ್ರೀ ನಿರಂಜನ ಮಠ ಒಂದು ಅವಲೋಕನ-೨೦೨೨’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬೀದರಿನ ಬಸವಕಲ್ಯಾಣದಿಂದ ಒಂದು ಯಾತ್ರೆ, ಕೂಡಲಸಂಗಮದಿಂದ ಒಂದು ಯಾತ್ರೆ ಮತ್ತು ಉಳವಿಯಿಂದ ಒಂದು ಯಾತ್ರೆಯನ್ನು ಸಂಘಟನೆ ಮಾಡಿ ವೀರಶೈವ-ಲಿಂಗಾಯತರನ್ನು ಜಾಗೃತಿಗೊಳಿಸಲಾಗುತ್ತದೆ. ಈ ಹೋರಾಟ ಕೇವಲ ಕರ್ನಾಟಕದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೇ ಇಡೀ ದೇಶದ ಹೋರಾಟವಾಗುತ್ತದೆ ಎಂದು ಅವರು ಗುಡುಗಿದರು.

ನಾವು ಈವರೆಗೂ ಯಾವ ಸಮಾಜದಿಂದಲೂ ಏನನ್ನೂ ಕಿತ್ತುಕೊಂಡಿಲ್ಲ. ನಮ್ಮಿಂದ ಸಾಕಷ್ಟನ್ನು ಕೊಟ್ಟಿದ್ದೇವೆ. ಆದರೂ ನಮ್ಮ ಅಸ್ತಿತ್ವ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಎಲ್ಲಾ ದಾರ್ಶನಿಕರ ಬಗ್ಗೆ ಗೌರವವಿದೆ. ಬಸವಣ್ಣ, ಅಲ್ಲಮ ಅವರಂತೆ ಕನಕದಾಸರು, ಪುರಂದರದಾಸರು, ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಸೇರಿದಂತೆ ಎಲ್ಲರ ಬಗ್ಗೆಯೂ ಗೌರವವಿದೆ. ಆದರೆ ವಿವೇಕಾನಂದರಿಗೆ ನಿರಂಜನ ಮಠದಲ್ಲಿ ಆತಿಥ್ಯ ನೀಡಲಾಯಿತು ಎಂಬ ಕಾರಣಕ್ಕೆ ಮಠದ ಜಾಗವನ್ನೇ ಕೊಡಿ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ನಮ್ಮ ಸಮಾಜದ ಸ್ವಾಮೀಜಿಗಳು ಪಶ್ಚಿಮಬಂಗಾಳದ ಬೇಲೂರು ಮಠಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಆ ಮಠದವರು ಶಿಷ್ಠಾಚಾರದಂತೆ ಅತಿಥ್ಯ ನೀಡಿ, ಸತ್ಕಾರ ಮಾಡುತ್ತಾರೆ. ಅಂದ ಮಾತ್ರಕ್ಕೆ ನಮ್ಮ ಶ್ರೀಗಳ ಪ್ರತಿಮೆ ಹಾಕಿ, ಬಸವಣ್ಣನವರ ಪ್ರತಿಮೆ ಹಾಕಿ ಎನ್ನಲು ಸಾಧ್ಯವೇ? ಹಾಗೆೆುೀಂ ವಿವೇಕಾನಂದರು ಇಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಈಗ ಮಠವನ್ನೇ ಕೊಡಿ ಎನ್ನುವುದು ಅದು ವಿವೇಕ ರಹಿತ ಚಿಂತನೆ, ವಿವೇಕ ರಹಿತ ತೀರ್ಮಾನ ಎಂದು ಬಿದರಿ ಕಟುವಾಗಿ ಟೀಕಿಸಿದರು.

ಹೊಸಮಠದ ಚಿದಾನಂದಸ್ವಾಮೀಜಿ, ಕುದೇರು ಮಠದ ಗುರುಶಾಂತಸ್ವಾಮೀಜಿ ಉಪಸ್ಥಿತರಿದ್ದರು. ನಿರಂಜನ ಮಠ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಚ್.ವಿ. ಬಸವರಾಜು ಹಿನಕಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಸುನಂದಾ ಪಾಲನೇತ್ರ,ಮಹಾಸಭಾದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಕೆ.ಎಸ್.ಮಹದೇವ ಪ್ರಸಾದ್, ನಗರ ಘಟಕದ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್, ಬಸವಬಳಗಗಳ ಅಧ್ಯಕ್ಷ ಎಲ್.ಎಸ್.ಮಹದೇವಸ್ವಾಮಿ, ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ.ನಾಗರಾಜು, ನಟರಾಜ, ಶಶಿಧರ ಶಾನಭಾಗ್, ಟಿ.ಎಸ್.ಲೋಕೇಶ್ ಮತ್ತಿತರರು ಹಾಜರಿದ್ದರು.

 

 

 

andolana

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

32 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

37 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

46 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago