ಜಿಲ್ಲೆಗಳು

‘ಆತಿಥ್ಯ ನೀಡಿದ್ದಕ್ಕೆ ಮಠದ ಜಾಗ ನೀಡಿ ಎನ್ನುವುದು ಸರಿಯೇ?’

ಮೈಸೂರು: ಮೈಸೂರಿನಲ್ಲಿರುವ ನಿರಂಜನ ಮಠಕ್ಕೆ ಸೇರಿರುವ ಒಂದು ಚದರ ಅಡಿ ಜಾಗಕ್ಕೆ ಕುತ್ತು ಬಂದರೆ, ರಾಜ್ಯದ ೧ಲಕ್ಷದ ೯೨ ಸಾವಿರದ ೮೦೦ ಚದರ ಕಿ.ಮೀ. ಆಡಳಿತವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೃ ಶಂಕರ ಮಹದೇವ ಬಿದರಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಶ್ರೀ ನಿರಂಜನ ಮಠ ಒಂದು ಅವಲೋಕನ-೨೦೨೨’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬೀದರಿನ ಬಸವಕಲ್ಯಾಣದಿಂದ ಒಂದು ಯಾತ್ರೆ, ಕೂಡಲಸಂಗಮದಿಂದ ಒಂದು ಯಾತ್ರೆ ಮತ್ತು ಉಳವಿಯಿಂದ ಒಂದು ಯಾತ್ರೆಯನ್ನು ಸಂಘಟನೆ ಮಾಡಿ ವೀರಶೈವ-ಲಿಂಗಾಯತರನ್ನು ಜಾಗೃತಿಗೊಳಿಸಲಾಗುತ್ತದೆ. ಈ ಹೋರಾಟ ಕೇವಲ ಕರ್ನಾಟಕದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೇ ಇಡೀ ದೇಶದ ಹೋರಾಟವಾಗುತ್ತದೆ ಎಂದು ಅವರು ಗುಡುಗಿದರು.

ನಾವು ಈವರೆಗೂ ಯಾವ ಸಮಾಜದಿಂದಲೂ ಏನನ್ನೂ ಕಿತ್ತುಕೊಂಡಿಲ್ಲ. ನಮ್ಮಿಂದ ಸಾಕಷ್ಟನ್ನು ಕೊಟ್ಟಿದ್ದೇವೆ. ಆದರೂ ನಮ್ಮ ಅಸ್ತಿತ್ವ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮಗೆ ಎಲ್ಲಾ ದಾರ್ಶನಿಕರ ಬಗ್ಗೆ ಗೌರವವಿದೆ. ಬಸವಣ್ಣ, ಅಲ್ಲಮ ಅವರಂತೆ ಕನಕದಾಸರು, ಪುರಂದರದಾಸರು, ವಿವೇಕಾನಂದರು, ರಾಮಕೃಷ್ಣ ಪರಮಹಂಸರು ಸೇರಿದಂತೆ ಎಲ್ಲರ ಬಗ್ಗೆಯೂ ಗೌರವವಿದೆ. ಆದರೆ ವಿವೇಕಾನಂದರಿಗೆ ನಿರಂಜನ ಮಠದಲ್ಲಿ ಆತಿಥ್ಯ ನೀಡಲಾಯಿತು ಎಂಬ ಕಾರಣಕ್ಕೆ ಮಠದ ಜಾಗವನ್ನೇ ಕೊಡಿ ಎಂದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.

ನಮ್ಮ ಸಮಾಜದ ಸ್ವಾಮೀಜಿಗಳು ಪಶ್ಚಿಮಬಂಗಾಳದ ಬೇಲೂರು ಮಠಕ್ಕೆ ಹೋದ ಸಂದರ್ಭದಲ್ಲಿ ಅವರಿಗೆ ಆ ಮಠದವರು ಶಿಷ್ಠಾಚಾರದಂತೆ ಅತಿಥ್ಯ ನೀಡಿ, ಸತ್ಕಾರ ಮಾಡುತ್ತಾರೆ. ಅಂದ ಮಾತ್ರಕ್ಕೆ ನಮ್ಮ ಶ್ರೀಗಳ ಪ್ರತಿಮೆ ಹಾಕಿ, ಬಸವಣ್ಣನವರ ಪ್ರತಿಮೆ ಹಾಕಿ ಎನ್ನಲು ಸಾಧ್ಯವೇ? ಹಾಗೆೆುೀಂ ವಿವೇಕಾನಂದರು ಇಲ್ಲಿ ತಂಗಿದ್ದರು ಎಂಬ ಕಾರಣಕ್ಕೆ ಈಗ ಮಠವನ್ನೇ ಕೊಡಿ ಎನ್ನುವುದು ಅದು ವಿವೇಕ ರಹಿತ ಚಿಂತನೆ, ವಿವೇಕ ರಹಿತ ತೀರ್ಮಾನ ಎಂದು ಬಿದರಿ ಕಟುವಾಗಿ ಟೀಕಿಸಿದರು.

ಹೊಸಮಠದ ಚಿದಾನಂದಸ್ವಾಮೀಜಿ, ಕುದೇರು ಮಠದ ಗುರುಶಾಂತಸ್ವಾಮೀಜಿ ಉಪಸ್ಥಿತರಿದ್ದರು. ನಿರಂಜನ ಮಠ ಸಂರಕ್ಷಣಾ ಸಮಿತಿ ಅಧ್ಯಕ್ಷ ಎಚ್.ವಿ. ಬಸವರಾಜು ಹಿನಕಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ಸುನಂದಾ ಪಾಲನೇತ್ರ,ಮಹಾಸಭಾದ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಕೆ.ಎಸ್.ಮಹದೇವ ಪ್ರಸಾದ್, ನಗರ ಘಟಕದ ಅಧ್ಯಕ್ಷ ಎಂ.ಎಚ್.ಚಂದ್ರಶೇಖರ್, ಬಸವಬಳಗಗಳ ಅಧ್ಯಕ್ಷ ಎಲ್.ಎಸ್.ಮಹದೇವಸ್ವಾಮಿ, ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಕೆ.ನಾಗರಾಜು, ನಟರಾಜ, ಶಶಿಧರ ಶಾನಭಾಗ್, ಟಿ.ಎಸ್.ಲೋಕೇಶ್ ಮತ್ತಿತರರು ಹಾಜರಿದ್ದರು.

 

 

 

andolana

Recent Posts

ಬಿಸಿಲ ಝಳಕ್ಕೆ ನೀರಿಗಿಳಿಯುವ ಮುನ್ನಇರಲಿ ಎಚ್ಚರ..!

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು…

45 mins ago

ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್‌ವಿಂಗಡಣೆ ಗುಮ್ಮ!

ಕೆ.ಬಿ.ರಮೇಶನಾಯಕ ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು  ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ…

50 mins ago

150 ವರ್ಷಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆ!

ಹೇಮಂತ್‌ಕುಮಾರ್ ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ…

55 mins ago

ಸರಸ್ವತಿಪುರಂ ಕಲ್ಯಾಣಿಗೆ ಪುನಶ್ಚೇತನ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ, ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಜಯಚಾಮರಾಜ ಒಡೆಯರ್…

1 hour ago

ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ

ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ   ಪೆರಿಯಾರ್ ರಾಮಸ್ವಾಮಿ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಬೆಂಗಳೂರು: ಮೌಢ್ಯ…

1 hour ago