ಜಿಲ್ಲೆಗಳು

ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೆ ದಂಡ? ಸ್ಪಷ್ಟನೆ ನೀಡಿದ ಗುತ್ತಿಗೆದಾರ ಶ್ರೀನಿವಾಸ್‌

ಅಯೋಧ್ಯೆಯ ರಾಮಮಂದಿರದ ಬಾಲರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಯಶಸ್ವಿಯಾಗಿದ್ದು, ಈ ಮೂರ್ತಿಯನ್ನು ಕೆತ್ತಿದವರು ಕನ್ನಡಿಗ ಹಾಗೂ ಈ ಶಿಲೆ ದೊರೆತದ್ದು ಕರ್ನಾಟಕದ ನೆಲದಲ್ಲಿ ಎಂಬ ವಿಚಾರ ಕನ್ನಡಿಗರಲ್ಲಿ ಹೆಮ್ಮೆಯನ್ನುಂಟುಮಾಡಿತ್ತು.

ಮೈಸೂರು ಜಿಲ್ಲೆಯ ಹೆಚ್‌ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರದಲ್ಲಿ ರಾಮದಾಸ್‌ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಶಿಲೆ ದೊರೆತಿತ್ತು. ಇನ್ನು ಕೆಲ ದಿನಗಳಿಂದ ರಾಮಮಂದಿರಕ್ಕೆ ಕಳುಹಿಸಲು ಜಮೀನಿನಲ್ಲಿ ಕಲ್ಲು ಹೊರ ತೆಗೆದಿದ್ದಕ್ಕೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಗುತ್ತಿಗೆದಾರ ಶ್ರೀನಿವಾಸ್‌ ನಟರಾಜ್‌ ಎಂಬುವವರಿಗೆ 80000 ದಂಡವನ್ನು ವಿಧಿಸಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ಈ ಸುದ್ದಿಗೆ ಇದೀಗ ಗುತ್ತಿಗೆದಾರ ಶ್ರೀನಿವಾಸ್‌ ನಟರಾಜ್‌ ಸ್ಪಷ್ಟನೆ ನೀಡಿದ್ದು, ತಾನು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದಂಡ ಕಟ್ಟಿದ್ದು 2022ರ ಜುಲೈನಲ್ಲಿ ಹಾಗೂ ಬಾಲರಾಮನ ಮೂರ್ತಿಗೆ ಶಿಲೆ ಆಯ್ಕೆಯಾದದ್ದು ಆರು ತಿಂಗಳ ಹಿಂದೆ. ಹೀಗಾಗಿ ತಪ್ಪು ಪ್ರಚಾರ ಮಾಡಬೇಡಿ ಎಂದು ಶ್ರೀನಿವಾಸ್‌ ಹೇಳಿಕೆ ನೀಡಿದ್ದಾರೆ.

ಏನಿದು ಪ್ರಕರಣ?

2022ರಲ್ಲಿ ಜಮೀನಿನ ಮಾಲೀಕ ರಾಮದಾಸ್‌ ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್‌ ನಟರಾಜ್‌ಗೆ ಗುತ್ತಿಗೆ ನೀಡಿದ್ದರು. ಹೀಗೆ ನೆಲಸಮತಟ್ಟು ಮಾಡುವ ವೇಳೆ ಹತ್ತು ಅಡಿ ಆಳದಲ್ಲಿ ಮೂರ್ತಿ ತಯಾರಿಸಲು ಯೋಗ್ಯವಾದ ಕೃಷ್ಣಶಿಲೆ ಪತ್ತೆಯಾಗಿದ್ದವು. ಸಿಕ್ಕ ಶಿಲೆಯನ್ನು ಮೂರು ಭಾಗವಾಗಿ ಮೇಲೆತ್ತೆಲಾಗಿತ್ತು. ಹೀಗೆ ಶಿಲೆಗಳನ್ನು ಮೇಲೆತ್ತಿ ಇಟ್ಟಿದ್ದನ್ನು ಕಂಡವರು ಗಣಿಗಾರಿಕೆ ನಡೆಯುತ್ತಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಭಾರೀ ಗಾತ್ರದ ಕಲ್ಲುಗಳನ್ನು ಹೊರತೆಗೆಯಬೇಕಾದರೆ ಅನುಮತಿ ಪಡೆಯಬೇಕು, ಇದು ಅನಧಿಕೃತ ಎಂದು ಗುತ್ತಿಗೆದಾರ ಶ್ರೀನಿವಾಸ್‌ಗೆ ದಂಡ ವಿಧಿಸಿದ್ದರು. ಇದರ ಬಗ್ಗೆ ಅರಿವಿಲ್ಲದೇ ಕಲ್ಲು ಹೊರತೆಗೆದಿದ್ದ ಶ್ರೀನಿವಾಸ್‌ ದಂಡ ಪಾವತಿಸಿದ್ದರು.

 

andolana

Recent Posts

ಮುಂಗಾರು ಮತ್ತೆ ಚುರುಕು ; ಮೈಸೂರು, ಮಂಡ್ಯ, ಕೊಡಗಿನಲ್ಲಿ ಮಳೆ ಸಾಧ್ಯತೆ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ…

3 hours ago

ಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು, ಬಿಜೆಪಿಯ ಇಬ್ಬರ ಗೆಲುವು,

ಬೆಂಗಳೂರು : ಭಾರಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್​​ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​​ನ ಐವರು ಮತ್ತು ಬಿಜೆಪಿಯ ಎರಡು…

6 hours ago

ಪರಿಷತ್‌ ಚುನಾವಣೆ ; ಕಾಂಗ್ರೆಸ್‌ನ 5ನೇ ಅಭ್ಯರ್ಥಿಗೆ ಜಯ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದನೇ ಅಭ್ಯರ್ಥಿ ವಿನಯ್‌ ಕಾರ್ತಿಕ್‌ ಜಯ ಸಾಧಿಸಿದ್ದಾರೆ. ಅಡ್ಡಮತದ ಪರಿಣಾಮ ಮೈತ್ರಿ ಅಭ್ಯರ್ಥಿ…

7 hours ago

ಪಿಎಫ್‌ಗೆ ಶೇ 8.25 ಬಡ್ಡಿದರ : ಕೇಂದ್ರ ಸರ್ಕಾರದ ಅನುಮೋದನೆ

ಹೊಸದಿಲ್ಲಿ : 2025-26ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ.8.25ರಷ್ಟಿ ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ…

8 hours ago

ಕರ್ತವ್ಯ ಲೋಪ ; ಮಹಿಳಾ ಮತ್ತು ಮಕ್ಕಳ ಇಲಾಖೆ ಡಿಡಿ ಅಮಾನತ್ತು

ಚಾಮರಾಜನಗರ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಸುರೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ…

9 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಏಳು ದಿನ ಭಾರೀ ಮಳೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ರಾಜ್ಯದಲ್ಲಿ ಏಳು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.…

14 hours ago