ಜಿಲ್ಲೆಗಳು

ಹನೂರು : ತಾ. ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದ ದೈಹಿಕ ಶಿಕ್ಷಣ ಸಂಯೋಜಕ ಮಹದೇವ್

ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಜಯಗಳಿಸಿದ್ದಾರೆ.
ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಸ್ವಾನ ಪಡೆದುಕೊಂಡಿದೆ. ಕಬಡ್ಡಿಯಲ್ಲಿ ರಾಮಾಪುರದ ಇಂದಿರಾಗಾಂಧಿ ವಸತಿ ಶಾಲೆ ಪ್ರಥಮ, ಹೂಗ್ಯಂನ ಮೊರಾರ್ಜಿ ಶಾಲೆ ದ್ವಿತೀಯ ಸ್ಥಾನ, ಖೋ-ಖೋ ಪಂದ್ಯದಲ್ಲಿ ಕಣ್ಣೂರು ಸರ್ಕಾರಿ ಶಾಲೆ ಪ್ರಥಮ, ಕೆಂಪಯ್ಯನಹಟ್ಟಿ ಶಾಲೆ ದ್ವಿತೀಯ, ಥ್ರೋ ಬಾಲ್‍ನಲ್ಲಿ ಹನೂರಿನ ಕ್ರಿಸ್ತರಾಜ ಪ್ರಥಮ, ಹಳೇ ಮಾರ್ಟಳ್ಳಿ ಸರ್ಕರಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ 4*100 ಮೀಟರ್ ರಿಲೆಯಲ್ಲಿ ಹನೂರಿನ ಕ್ರಿಸ್ತರಾಜ ಶಾಲೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಹಳೆ ಮಾರ್ಟಳ್ಳಿ ಸರ್ಕಾರಿ ಶಾಲೆ ಪಡೆದುಕೊಂಡಿದೆ.

ಗುಂಡು ಎಸೆತದಲ್ಲಿ ಸಂದನಪಾಳ್ಯ ಸಂತ ಅತೋಣಿ ಶಾಲೆಯ ಹ್ಯಾರಿಸ್ ಸ್ಯಾಮುವೇಲ್ ಪ್ರಥಮ, ಹನೂರಿನ ಕ್ರಿಸ್ತರಾಜ ಶಾಲೆಯ ಗೌರವ್ ದ್ವಿತೀಯ ಹಾಗೂ ರಾಮಾಪುರ ಜೆಎಸ್‍ಎಸ್ ಶಾಲೆಯ ವಿಷ್ಣುಕುಮಾರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತಟ್ಟೆ ಎಸೆತದಲ್ಲಿ ಸಂತ ಅಂತೋಣಿ ಶಾಲೆಯ ಹ್ಯಾರಿಸ್ ಸ್ಯಾಮುವೆಲ್ (ಪ್ರ), ಇದೇ ಶಾಲೆಯ ಜೈಸನ್ (ದ್ವಿ), ವಡಕೆಹಳ್ಳ ಸರ್ಕಾರಿ ಶಾಲೆಯ ಶ್ರೀನಿವಾಸ್ (ತೃ), ಉದ್ದ ಜಿಗಿತದಲ್ಲಿ ಕ್ರಿಸ್ತರಾಜ ಶಾಲೆಯ ನಿರಂಜನ್ (ಪ್ರ), ಚನ್ನಾಲಿಂಗನಹಳ್ಳಿ ಶಾಲೆಯ ಮಧು (ದ್ವಿ), ಕೌದಳ್ಳಿ ಅಂತೋಣಿ ಶಾಲೆಯ ಸಂಜಯ್ (ತೃ), ಎತ್ತರ ಜಿಗಿತದಲ್ಲಿ ಬೈಲೂರು ಶಾಲೆಯ ನಾಗೇಶ್, ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಜೆಸ್ಟಿನ್ ಲಿಯೋ ಹಾಗೂ ರಾಮಾಪುರ ಜೆಎಸ್‍ಎಸ್‍ನ ವಸಂತ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಗುಂಡು ಎಸೆತದಲ್ಲಿ ಪಿ.ಜಿ ಪಾಳ್ಯ ನಿರ್ಮಲ ಶಾಲೆಯ ಸಂಧ್ಯಾ (ಪ್ರ), ಇದೇ ಶಾಲೆಯ ಸಲೋನಿ ದಿಟಲಿತ (ದ್ವಿ), ತಟ್ಟೆ ಎಸೆತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಶ್ರೇಯ ಜೋಸಿತ್ (ಪ್ರ), ರಾಮಾಪುರ ಜೆಎಸ್‍ಎಸ್ ಶಾಲೆಯ ಸಂಧ್ಯಾ (ದ್ವಿ), ಉದ್ದ ಜಿಗಿತದಲ್ಲಿ ಮ.ಬೆಟ್ಟ ಶ್ರೀ ಶಾಂತಮಲ್ಲಿಕಾರ್ಜುನ ಶಾಲೆಯ ಕೌಶಲ್ಯ (ಪ್ರ), ಪಿ.ಜಿ ಪಾಳ್ಯ ನಿರ್ಮಲ ಶಾಲೆಯ ನಾಗರತ್ನ (ದ್ವಿ), ಹಾಗೂ ಎತ್ತರ ಜಿಗಿತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಪೆಲ್ಸಿ (ಪ್ರ), ರಾಮಾಪುರ ಜೆಎಸ್‍ಎಸ್ ಶಾಲೆಯ ಗಂಗೋತ್ರಿ ದ್ವಿತೀಯ ಸ್ಥಾನ ಪಡೆದಿದಾರೆ.

ವಾಲಿಬಾಲ್‍ನಲ್ಲಿ ಹೂಗ್ಯಂ ಸರ್ಕಾರಿ ಶಾಲೆ ಪ್ರಥಮ, ತೊಮಿಯಾರ್‍ಪಾಳ್ಯ ಸಂತ ಥಾಮಸ್ ದ್ವಿತೀಯ, ಕಬಡ್ಡಿಯಲ್ಲಿ ಮ.ಬೆಟ್ಟ ಶ್ರೀ ಶಾಂತಮಲ್ಲಿಕಾರ್ಜುನ ಶಾಲೆ ಪ್ರಥಮ, ಲೊಕ್ಕನಹಳಿ ಮಾನಸ ಶಾಲೆ ದ್ವಿತೀಯ ಹಾಗೂ ಖೋ-ಖೋದಲ್ಲಿ ಮ.ಬೆಟ್ಟ ಶಾಂತಮಲ್ಲಿಕಾರ್ಜುನ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಹಾಗೂ ಥ್ರೋ ಬಾಲ್‍ನಲ್ಲಿ ಹಳೆ ಮಾರ್ಟಳ್ಳಿ ಸರ್ಕಾರಿ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

andolanait

Recent Posts

ನಾಳೆ ಸಿಎಂ ಡಿ.ಕೆ.ಶಿವಕುಮಾರ್‌ರಿಂದ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು: ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ನಾಳೆ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಪ್ರಧಾನಿ…

13 hours ago

ದಯವಿಟ್ಟು ಕರ್ನಾಟಕ ಬಂದ್‌ ಕೈಬಿಡಿ: ಸಿಎಂ ಡಿಕೆಶಿ ನಮ್ರತೆಯ ಮನವಿ

ಬೆಂಗಳೂರು: ರಾಜ್ಯದ ಹಿತ ಕಾಪಾಡೋಕೆ ನಾವಿದ್ದೀವಿ. ದಯವಿಟ್ಟು ಬಂದ್‌ ಕೈಬಿಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸರ್ಕಾರದ ಪರವಾಗಿ ನಮ್ರತೆಯ ಮನವಿ…

13 hours ago

ಮುಂದುವರಿದ ಕಾವೇರಿ ಕಿಚ್ಚು: ಆಗಸ್ಟ್.‌13ರಂದು ಕರ್ನಾಟಕ ಬಂದ್‌

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC, CWMA ಆದೇಶ ವಿರೋಧಿಸಿ ರಾಜ್ಯದಲ್ಲಿ ರೈತರ ಹೋರಾಟ ಭುಗಿಲೆದ್ದಿದೆ. ರೈತರ…

13 hours ago

ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ…

14 hours ago

ಮೂರನೇ ಆಷಾಢ ಶುಕ್ರವಾರದ ಸಂಭ್ರಮ: ನಾಡದೇವಿಗೆ ಗಜಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೂರನೇ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡದೇವತೆ ಚಾಮುಂಡೇಶ್ವರಿಗೆ ಗಜಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಆಷಾಢ ಮಾಸದ…

14 hours ago

ಓದುಗರ ಪತ್ರ: ಕಾವೇ..ರಿ

ಕಾವೇ..ರಿ ಕನ್ನಡ ನಾಡಿನ ಜೀವನದಿ, ಸದಾ ಹರಿಯುವಳು ಜುಳು ಜುಳು ಕಾವೇರಿ ತಮಿಳು ನಾಡಿನ ತಗಾದೆಯಿಂದಾಗಿ ಆಗಾಗ ಆಗುವಳು ಕಾವೇ..ರಿ…

23 hours ago