ಮೈಸೂರು: ಪ್ರಕೃತಿ ಆಹಾರ ಬಳಗವು ಇನ್ನು ಮುಂದೆ ಪ್ರತಿ ವಾರಾಂತ್ಯದಲ್ಲಿ ಖಾದಿ ನೂಲನ್ನು ತೆಗೆಯುವ ಕಾರ್ಯಾಗಾರವನ್ನು ಪ್ರಾರಂಭಿಸುತ್ತಿದ್ದು, ನ.೫, ೬ರಂದು ‘ಬನ್ನಿ ನೂಲುವ!’ ಎಂಬ ವಾರಾಂತ್ಯದ ಚರಕ ಕಾರ್ಯಾಗಾರವನ್ನು ಆಯೋಜಿಸಿದೆ.
ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಪ್ರಕೃತಿ ಫುಡ್ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ೧೪೦೦ ರೂ. ಪ್ರವೇಶ ಶುಲ್ಕವಿದ್ದು, ಮೊದಲ ೧೫ ಜನರಿಗೆ ಮಾತ್ರ ಪ್ರವೇಶ ಇರಲಿದೆ. ಖಾದಿ ನೂಲನ್ನು ತೆಗೆಯುವುದು ಒಂದು ಕಲೆಯಾಗಿದೆ. ಪೆಟ್ಟಿಗೆ ಚರಕವನ್ನು ಬಳಸಿ ನೂಲುವುದನ್ನು ಕಲಿಸಿಕೊಡಲಾಗುವುದು. ಒಟ್ಟು ೮ ಗಂಟೆಗಳ ಕಾಲ (೨ ದಿನ ತಲಾ ೪ ಗಂಟೆಯ ಹಾಗೆ) ತರಬೇತಿ ನೀಡಲಾಗುವುದು. ಕೆ.ಜೆ.ಸಚ್ಚು, ಮತ್ತು ಅಭಿಲಾಷ್ ತರಬೇತಿ ನೀಡುವರು. ೧೦ ವರ್ಷ ಮೇಲ್ಪಟ್ಟವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಎರಡು ದಿನವು ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಾಗಾರದಲ್ಲಿ ಸುಸ್ಥಿರ ಬದಿಕಿನ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂವಾದ ಇರುತ್ತದೆ. ನೋಂದಣಿಗೆ ಮೊ.ಸಂ.೯೦೦೮೪೮೪೮೮೦ ಸಂಪರ್ಕಿಸಬಹುದು.
ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…
ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…
ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್ಕೌಂಟರ್ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್,…
ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ ಘಟನೆಯ…