ಮೈಸೂರು: ಮೈಸೂರು ಸೀಮೆಯ ಅನುಪಮ ಜಾನಪದ ಹಾಡುಗಾರ್ತಿ ಮಾರಗೌಡನಹಳ್ಳಿ ಭಾಗ್ಯಮ್ಮ ಸೋಮೇಗೌಡ (೬೫) ಅವರು ಮಂಗಳವಾರ ರಾತ್ರಿ ನಿಧನರಾದರು.
ಮೃತರು ಪತಿ ಸೋಮೇಗೌಡ, ಒಬ್ಬ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬುಧವಾರ ಭಾಗ್ಯಮ್ಮ ಪಾರ್ಥೀವ ಶರೀರದ ಅಂತ್ಯಕ್ರಿಯೆ ಅವರ ಜಮೀನಿನಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರು ಆಕಾಶವಾಣಿಯ ಉನ್ನತ ಶ್ರೇಣಿಯ ಜಾನಪದ ಕಲಾವಿದೆಯಾಗಿದ್ದ ಅವರು ಹಲವು ಸನ್ಮಾನ ಹಾಗೂ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ತಮ್ಮ ತಂಡದೊಡನೆ ತತ್ವಪದ, ಸೋಬಾನೆ ಪದ, ರಾಗಿ ಬೀಸೋ ಹಾಡು, ಹಸೆ ಹಾಡುಗಳನ್ನು ಹೇಳುತ್ತಾ ಸುತ್ತಲಿನ ಹತ್ತು ಸೀಮೆಗಳಲ್ಲೂ ಖ್ಯಾತರಾಗಿದ್ದ ಭಾಗ್ಯಮ್ಮನವರು ಸುತ್ತೂರು ಜಾತ್ರೆಯಲ್ಲಿ ಹಾಡಲು ತಮ್ಮ ತಂಡವನ್ನು ಸಿದ್ಧಗೊಳಿಸುತ್ತಿರುವಾಗಲೇ ಹಠಾತ್ ಅಸ್ವಸ್ಥಗೊಂಡು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಪಟ್ಟರು.
ಮಾರಗೌಡನಹಳ್ಳಿಯ ಒಕ್ಕಲುಗೇರಿಯ ನಿವಾಸಿಯಾಗಿದ್ದ ಭಾಗ್ಯಮ್ಮನವರು ಅದೇ ಊರಿನ ದಲಿತರ ಕೇರಿಯ ದೇವಮ್ಮನವರ ಜೊತೆ ಕಳೆದ 50 ವರ್ಷಗಳಿಂದ ಹಾಡುತ್ತಿದ್ದರು. ಜಾತಿ ಅಂತಸ್ತುಗಳನ್ನ ಮೀರಿದ ಇವರಿಬ್ಬರ ಸ್ನೇಹದ ಕಥೆ ಈ ಹಿಂದೆ ಆಂದೋಲನ ಹಾಡು ಪಾಡುವಿನಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…