ಮೈಸೂರು: ಮೈಸೂರು ಸೀಮೆಯ ಅನುಪಮ ಜಾನಪದ ಹಾಡುಗಾರ್ತಿ ಮಾರಗೌಡನಹಳ್ಳಿ ಭಾಗ್ಯಮ್ಮ ಸೋಮೇಗೌಡ (೬೫) ಅವರು ಮಂಗಳವಾರ ರಾತ್ರಿ ನಿಧನರಾದರು.
ಮೃತರು ಪತಿ ಸೋಮೇಗೌಡ, ಒಬ್ಬ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಬುಧವಾರ ಭಾಗ್ಯಮ್ಮ ಪಾರ್ಥೀವ ಶರೀರದ ಅಂತ್ಯಕ್ರಿಯೆ ಅವರ ಜಮೀನಿನಲ್ಲಿ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರು ಆಕಾಶವಾಣಿಯ ಉನ್ನತ ಶ್ರೇಣಿಯ ಜಾನಪದ ಕಲಾವಿದೆಯಾಗಿದ್ದ ಅವರು ಹಲವು ಸನ್ಮಾನ ಹಾಗೂ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ತಮ್ಮ ತಂಡದೊಡನೆ ತತ್ವಪದ, ಸೋಬಾನೆ ಪದ, ರಾಗಿ ಬೀಸೋ ಹಾಡು, ಹಸೆ ಹಾಡುಗಳನ್ನು ಹೇಳುತ್ತಾ ಸುತ್ತಲಿನ ಹತ್ತು ಸೀಮೆಗಳಲ್ಲೂ ಖ್ಯಾತರಾಗಿದ್ದ ಭಾಗ್ಯಮ್ಮನವರು ಸುತ್ತೂರು ಜಾತ್ರೆಯಲ್ಲಿ ಹಾಡಲು ತಮ್ಮ ತಂಡವನ್ನು ಸಿದ್ಧಗೊಳಿಸುತ್ತಿರುವಾಗಲೇ ಹಠಾತ್ ಅಸ್ವಸ್ಥಗೊಂಡು ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಪಟ್ಟರು.
ಮಾರಗೌಡನಹಳ್ಳಿಯ ಒಕ್ಕಲುಗೇರಿಯ ನಿವಾಸಿಯಾಗಿದ್ದ ಭಾಗ್ಯಮ್ಮನವರು ಅದೇ ಊರಿನ ದಲಿತರ ಕೇರಿಯ ದೇವಮ್ಮನವರ ಜೊತೆ ಕಳೆದ 50 ವರ್ಷಗಳಿಂದ ಹಾಡುತ್ತಿದ್ದರು. ಜಾತಿ ಅಂತಸ್ತುಗಳನ್ನ ಮೀರಿದ ಇವರಿಬ್ಬರ ಸ್ನೇಹದ ಕಥೆ ಈ ಹಿಂದೆ ಆಂದೋಲನ ಹಾಡು ಪಾಡುವಿನಲ್ಲಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೋಲ್ಕತ್ತ : ಟಿ-20 ವಿಶ್ವಕಪ್ನ ಲೀಗ್ ಹಂತದ ಸಿ ಗುಂಪಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು 5 ವಿಕೆಟ್ಗಳ…
ಮಂಡ್ಯ: ಡಿ.ಕೆ. ಶಿವಕುಮಾರ್ ಅವರು ಅತಿ ಶೀಘ್ರದಲ್ಲೇ ಮುಖ್ಯಮಂತ್ರಿ ಆಗೇ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಿ.ರವಿಕುಮಾರ್…
ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ…
ಮೈಸೂರು : ನಗರದಲ್ಲಿ ಅಕ್ರಮ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಮಂಡಿ ಪೊಲೀಸ್ ಠಾಣಾ ಅಧಿಕಾರಿಗಳು ನಡೆಸಿದ…
ಹಾವೇರಿ : ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ. ಇಲ್ಲಿಯವರೆಗೆ 2.20 ಲಕ್ಷ…
ಬೆಂಗಳೂರು : ಕರ್ನಾಟಕದ ಸಾವಿರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ…