ಜಿಲ್ಲೆಗಳು

ತಂತ್ರಜ್ಞಾನ ಅಪ್ಪಿಕೊಂಡು ಪರಿಸರ-ನಿಸರ್ಗವನ್ನು ಉಳಿಸಬೇಕಿದೆ: ಕಾರಂತ

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ೧೪ನೇ ಪದವೀಧರರ ದಿನಾಚರಣೆಯಲ್ಲಿ ಭಾಗಿ

ಮೈಸೂರು: ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನಕ್ಕೆ ಹೆದರದೆ,ಬೆದರದೆ ಅಪ್ಪಿಕೊಂಡು ಅಭಿವೃದ್ಧಿಯ ಜೊತೆಗೆ ಪರಿಸರ-ನಿಸರ್ಗವನ್ನು ಉಳಿಸಿಕೊಳ್ಳಬೇಕು. ಸಸ್ಟೇನಬಲ್ ಲ್ಯಾಂಡ್ ಸ್ಕೇಪ್, ಎಕೋ ಮಾಡೆಲ್‌ನಿಂದ ಅರಣ್ಯ,ವನ್ಯಜೀವಿಗಳನ್ನು ಸಂರಕ್ಷಣೆ ಮಾಡಬಹುದು ಎಂದು ಖ್ಯಾತ ವನ್ಯಜೀವಿ ತಜ್ಞ ಡಾ.ಕೆ.ಉಲ್ಲಾಸ ಕಾರಂತ ಹೇಳಿದರು.

ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ೧೪ನೇ ಪದವೀಧರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಿಸರ್ಗ,ವನ್ಯದ ರಕ್ಷಣೆ ಮಾಡಬೇಕು, ಪರಿಸರ ಸಂರಕ್ಷಿಸದಿದ್ದರೆ ಜಗತ್ತಿಗೆ ಅಪಾಯವಿದೆ ಎನ್ನುವ ಕಾಳಜಿಯ ಮಾತುಗಳನ್ನಾಡುತ್ತಾರೆ. ಆದರೆ, ನಿಸರ್ಗಕ್ಕೆ ಒಂದು ಭಾಗದ ಕಾಳಜಿಯನ್ನು ತೋರಿದರೆ ಸಾಲದು. ಇದರಿಂದ ಪ್ರಾಣಿಗಳು,ವನ್ಯಸಂಪತ್ತುಗಳು ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಮನಗಾಣಬೇಕು ಎಂದರು.

ನಿಸರ್ಗದಿಂದ ನಾವು ಸವಲತ್ತು,ಸೌಲಭ್ಯಗಳನ್ನು ಪಡೆದಂತೆ ನಾವು ಅವುಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ವನ್ಯಜೀವಿ, ಜೀವತಾಣದ ರಕ್ಷಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನಮಗೆ ಬದುಕುವ ಹಕ್ಕು ಇರುವಂತೆ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬ ಮನಸ್ಥಿತಿ ಬರಬೇಕು. ಹಿಂದೂ ಧರ್ಮದಲ್ಲಿ ನಮ್ಮಂತೆ ಇತರರೂ ಬದುಕಬೇಕು ಎನ್ನುವುದು ಇದೆ. ಹಿಂದೂಧರ್ಮದಲ್ಲಾಗಲೀ,ಬೌದ್ಧ ಧರ್ಮದಲ್ಲಾಗಲೀ ಇದೆ. ಆದರೆ ಕೆಲವು ದೇಶಗಳಲ್ಲಿ ನಾವು ಮಾತ್ರ ಬದುಕಿನ ಹಕ್ಕು ಹೊಂದಿದ್ದೇವೆಂದು ಹೇಳುತ್ತಾರೆ. ಧಾರ್ಮಿಕ ನಂಬಿಕೆಯಲ್ಲೂ ಅಳವಾಗಿ ಬೇರೂರಿರುವುದರಿಂದ ನಮ್ಮ ಬಳಕೆಗೆ ಜೊತೆಗೆ ವನ್ಯಜೀವಿಗಳಿಗೂ ಬದುಕುವ ಹಕ್ಕು ಇದೆ ಎಂದು ನುಡಿದರು. ಹಲವು ದಶಕಗಳ ಹಿಂದೆ ಕಳ್ಳಬೇಟೆಯಾಡುವುದು, ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿತ್ತು. ಆದರೆ,ಕಾಲ ಕ್ರಮೇಣ ಅದು ನಿಂತಿದೆ.೧೯೭೦ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ತಂದರು.೧೯೮೦ರ ಅವಧಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನುತರಲಾಯಿತು. ಈ ಕಾಯ್ದೆ ತರುವಾಗ ಸಾಕಷ್ಟು ವಿರೋಧ ಬಂದರೂ ತಮ್ಮ ಜನಪ್ರಿಯತೆಯ ಮುಂದೆ ಅದನ್ನು ದಕ್ಕಿಸಿಕೊಂಡರು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜುಟ್ಟು ಹಿಡಿದು ಅನುಷ್ಠಾನಕ್ಕೆ ತಂದ ದೊಡ್ಡ ಗಟ್ಟಿಗಿತ್ತಿ.ಅದೇ ರೀತಿ ಅಧಿಕಾರಿಗಳು,ರೇಂಜರ್‌ಗಳು,ಗಾರ್ಡ್‌ಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದರಿಂದ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿತು ಎಂದು ಅಭಿಪ್ರಾಯಪಟ್ಟರು. ಕೆಲವರು ನಾವು ಈಗ ಮಾಡಿದ್ದೇವೆಂದು ಬೀಗಿಕೊಳ್ಳುತ್ತಿದ್ದಾರೆ. ೧೯೭೦ರಿಂದ ೨೦೦೦ರವರೆಗೆ ನಡೆದಿರುವ ಅರಣ್ಯ ಸಂರಕ್ಷಣೆ ಕಾರ್ಯ ನಂತರದಲ್ಲಿ ನಡೆಯಲಿಲ್ಲ.ಇದರಲ್ಲಿ ಎಲ್ಲರ ಪಾಲು ಇದ್ದರೂ ಇಂದಿರಾಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ತಂದಿದ್ದನ್ನು ಸದಾ ನೆನಪಿಸಿಕೊಳ್ಳಬೇಕು ಎಂದರು.

andolana

Recent Posts

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

25 mins ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

1 hour ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

2 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

3 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

3 hours ago

ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ; ಪಾರದರ್ಶನ ನೇಮಕಾತಿಗೆ ಎಚ್‌ಡಿಕೆ ಆಗ್ರಹ

ಬೆಂಗಳೂರು : ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪಾರದರ್ಶಕ ನೇಮಕಾತಿ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮಗಳಲ್ಲಿ ಮುಳುಗಿದೆ. ಸರ್ಕಾರ ಒಂದೇ…

3 hours ago