ಜಿಲ್ಲೆಗಳು

ತಂತ್ರಜ್ಞಾನ ಅಪ್ಪಿಕೊಂಡು ಪರಿಸರ-ನಿಸರ್ಗವನ್ನು ಉಳಿಸಬೇಕಿದೆ: ಕಾರಂತ

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ೧೪ನೇ ಪದವೀಧರರ ದಿನಾಚರಣೆಯಲ್ಲಿ ಭಾಗಿ

ಮೈಸೂರು: ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನಕ್ಕೆ ಹೆದರದೆ,ಬೆದರದೆ ಅಪ್ಪಿಕೊಂಡು ಅಭಿವೃದ್ಧಿಯ ಜೊತೆಗೆ ಪರಿಸರ-ನಿಸರ್ಗವನ್ನು ಉಳಿಸಿಕೊಳ್ಳಬೇಕು. ಸಸ್ಟೇನಬಲ್ ಲ್ಯಾಂಡ್ ಸ್ಕೇಪ್, ಎಕೋ ಮಾಡೆಲ್‌ನಿಂದ ಅರಣ್ಯ,ವನ್ಯಜೀವಿಗಳನ್ನು ಸಂರಕ್ಷಣೆ ಮಾಡಬಹುದು ಎಂದು ಖ್ಯಾತ ವನ್ಯಜೀವಿ ತಜ್ಞ ಡಾ.ಕೆ.ಉಲ್ಲಾಸ ಕಾರಂತ ಹೇಳಿದರು.

ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ೧೪ನೇ ಪದವೀಧರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಿಸರ್ಗ,ವನ್ಯದ ರಕ್ಷಣೆ ಮಾಡಬೇಕು, ಪರಿಸರ ಸಂರಕ್ಷಿಸದಿದ್ದರೆ ಜಗತ್ತಿಗೆ ಅಪಾಯವಿದೆ ಎನ್ನುವ ಕಾಳಜಿಯ ಮಾತುಗಳನ್ನಾಡುತ್ತಾರೆ. ಆದರೆ, ನಿಸರ್ಗಕ್ಕೆ ಒಂದು ಭಾಗದ ಕಾಳಜಿಯನ್ನು ತೋರಿದರೆ ಸಾಲದು. ಇದರಿಂದ ಪ್ರಾಣಿಗಳು,ವನ್ಯಸಂಪತ್ತುಗಳು ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಮನಗಾಣಬೇಕು ಎಂದರು.

ನಿಸರ್ಗದಿಂದ ನಾವು ಸವಲತ್ತು,ಸೌಲಭ್ಯಗಳನ್ನು ಪಡೆದಂತೆ ನಾವು ಅವುಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ವನ್ಯಜೀವಿ, ಜೀವತಾಣದ ರಕ್ಷಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನಮಗೆ ಬದುಕುವ ಹಕ್ಕು ಇರುವಂತೆ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬ ಮನಸ್ಥಿತಿ ಬರಬೇಕು. ಹಿಂದೂ ಧರ್ಮದಲ್ಲಿ ನಮ್ಮಂತೆ ಇತರರೂ ಬದುಕಬೇಕು ಎನ್ನುವುದು ಇದೆ. ಹಿಂದೂಧರ್ಮದಲ್ಲಾಗಲೀ,ಬೌದ್ಧ ಧರ್ಮದಲ್ಲಾಗಲೀ ಇದೆ. ಆದರೆ ಕೆಲವು ದೇಶಗಳಲ್ಲಿ ನಾವು ಮಾತ್ರ ಬದುಕಿನ ಹಕ್ಕು ಹೊಂದಿದ್ದೇವೆಂದು ಹೇಳುತ್ತಾರೆ. ಧಾರ್ಮಿಕ ನಂಬಿಕೆಯಲ್ಲೂ ಅಳವಾಗಿ ಬೇರೂರಿರುವುದರಿಂದ ನಮ್ಮ ಬಳಕೆಗೆ ಜೊತೆಗೆ ವನ್ಯಜೀವಿಗಳಿಗೂ ಬದುಕುವ ಹಕ್ಕು ಇದೆ ಎಂದು ನುಡಿದರು. ಹಲವು ದಶಕಗಳ ಹಿಂದೆ ಕಳ್ಳಬೇಟೆಯಾಡುವುದು, ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿತ್ತು. ಆದರೆ,ಕಾಲ ಕ್ರಮೇಣ ಅದು ನಿಂತಿದೆ.೧೯೭೦ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ತಂದರು.೧೯೮೦ರ ಅವಧಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನುತರಲಾಯಿತು. ಈ ಕಾಯ್ದೆ ತರುವಾಗ ಸಾಕಷ್ಟು ವಿರೋಧ ಬಂದರೂ ತಮ್ಮ ಜನಪ್ರಿಯತೆಯ ಮುಂದೆ ಅದನ್ನು ದಕ್ಕಿಸಿಕೊಂಡರು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜುಟ್ಟು ಹಿಡಿದು ಅನುಷ್ಠಾನಕ್ಕೆ ತಂದ ದೊಡ್ಡ ಗಟ್ಟಿಗಿತ್ತಿ.ಅದೇ ರೀತಿ ಅಧಿಕಾರಿಗಳು,ರೇಂಜರ್‌ಗಳು,ಗಾರ್ಡ್‌ಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದರಿಂದ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿತು ಎಂದು ಅಭಿಪ್ರಾಯಪಟ್ಟರು. ಕೆಲವರು ನಾವು ಈಗ ಮಾಡಿದ್ದೇವೆಂದು ಬೀಗಿಕೊಳ್ಳುತ್ತಿದ್ದಾರೆ. ೧೯೭೦ರಿಂದ ೨೦೦೦ರವರೆಗೆ ನಡೆದಿರುವ ಅರಣ್ಯ ಸಂರಕ್ಷಣೆ ಕಾರ್ಯ ನಂತರದಲ್ಲಿ ನಡೆಯಲಿಲ್ಲ.ಇದರಲ್ಲಿ ಎಲ್ಲರ ಪಾಲು ಇದ್ದರೂ ಇಂದಿರಾಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ತಂದಿದ್ದನ್ನು ಸದಾ ನೆನಪಿಸಿಕೊಳ್ಳಬೇಕು ಎಂದರು.

andolana

Recent Posts

ಬೆಂಗಳೂರಿಗಿಂತಲೂ ಬಳ್ಳಾರಿಯಲ್ಲಿ ದಿಢೀರ್‌ ಕುಸಿದ ಗಾಳಿಯ ಗುಣಮಟ್ಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜೊತೆಗೆ ವಿವಿಧ ಜಿಲ್ಲೆಗಳಲ್ಲಿಯೂ ಗಾಳಿಯ ಗುಣಮಟ್ಟ ಕಳಪೆ…

2 mins ago

ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಭಾಷಣ ಕಾಯ್ದೆ ತಂದಿಲ್ಲ: ಸಚಿವ ಪರಮೇಶ್ವರ್‌

ಬೆಂಗಳೂರು: ಬಿಜೆಪಿ ದೃಷ್ಟಿಯಲ್ಲಿಟ್ಟುಕೊಂಡು ದ್ವೇಷ ಭಾಷಣ ಕಾಯ್ದೆಯನ್ನು ತಂದಿಲ್ಲ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಗೃಹ ಸಚಿವ…

16 mins ago

ಕಾಡಲ್ಲಿ ಸಿಂಹನೇ ರಾಜ: ಕಿಚ್ಚ ಸುದೀಪ್‌ಗೆ ನಟ ಧನ್ವೀರ್‌ ಟಾಂಗ್‌

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸ್ಟಾರ್‌ ವಾರ್‌ ಶುರುವಾಗಿದೆ. ಕಿಚ್ಚ ಸುದೀಪ್‌ ನೀಡಿದ ಆ ಒಂದು ಹೇಳಿಕೆಯಿಂದ ಡಿ ಬಾಸ್‌ ಅಭಿಮಾನಿಗಳು…

31 mins ago

ಸಿಎಂ ಬದಲಾವಣೆ ವಿಚಾರ: ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್‌ ತೀರ್ಮಾನವೇ…

1 hour ago

ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ: 30 ಮಂದಿಗೆ ಗಾಯ

ಬೆಳಗಾವಿ: ಮೈಸೂರಿನಲ್ಲಿ ನಡೆಯುವ ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬೈಲಹೊಂಗಲ…

2 hours ago

ಅಯ್ಯಪ್ಪಸ್ವಾಮಿ ಭಕ್ತರಿಗೆ ಮುಖ್ಯ ಮಾಹಿತಿ: ಡಿಸೆಂಬರ್.‌27ರಂದು ಶಬರಿಮಲೆಯಲ್ಲಿ ಮಂಡಲ ಪೂಜೆ

ಕೇರಳ: ಶ್ರೀಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.‌27ರಂದು ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 10.10ರಿಂದ 11.30ರವರೆಗಿನ…

2 hours ago