ಜಿಲ್ಲೆಗಳು

ದಸರೆ ಸಂಭ್ರಮ ಹೆಚ್ಚಿಸಿದ ಕಲಾ ಪ್ರಕಾರಗಳ ಮೆರುಗು

ಜಂಬೂ ಸವಾರಿಯಲ್ಲಿ 70ಕ್ಕೂ ಹೆಚ್ಚು ಕಲಾ ಪ್ರಕಾರಗಳ ವೈಭವ ಪ್ರದರ್ಶನ

ಮೈಸೂರು:ನಾನಾ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಹಿಂದಿನಿಂದಲೂ ವೇದಿಕೆಯಾಗಿರುವ ಮೈಸೂರು ದಸರೆ ಜಂಬೂ ಸವಾರಿಯಲ್ಲಿ ಈ ಬಾರಿ ರಾಜ್ಯ ಮಟ್ಟದ ಮಾತ್ರವಲ್ಲ ರಾಷ್ಟ್ರಮಟ್ಟದ ಹಲವು ಕಲಾವೈಭವ ಅನಾವರಣಗೊಂಡಿತು.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಾಣದ ಕಲಾ ತಂಡಗಳ ಮೆರುಗನ್ನು ಕಂಡ ದಸರಾ ವೀಕ್ಷಕರು ಈ ಬಾರಿ ಮತ್ತೆ ಸಂಭ್ರಮಿಸಿದರು. ಕಲಾವಿದರು ಹೊಸ ಹುರುಪಿನೊಂದಿಗೆ ಪ್ರದರ್ಶನ ನೀಡಿ ಗಮನ ಸೆಳೆದರು.

ಮೈಸೂರಿನ ನಂದಿಧ್ವಜದ ಜತೆ ವಿವಿಧ ಕಲಾ ತಂಡಗಳಾದ ನಂಜನಗೂಡಿನ ವೀರಗಾಸೆ ಕುಣಿತ, ರಾಮನಗರ ಜಿಲ್ಲೆಯ ಪಟಕುಣಿತ, ಹಾವೇರಿ ಜಿಲ್ಲೆಯ ಪುರವಂತಿಗೆ, ಮೈಸೂರು ಜಿಲ್ಲೆಯ ವರಕೂಡಿನ ಕಂಸಾಳೆ ನೃತ್ಯ , ವಿಜಯಪುರದ ಕೀಲುಕುದುರೆ, ಹಾವೇರಿ ಜಿಲ್ಲೆಯ ಕೋಲಾಟ, ಹಾಸನ ಜಿಲ್ಲೆಯ ಚಿಟ್ ಮೇಳ, ಧಾರವಾಡ ಜಿಲ್ಲೆಯ ಕಣಿವಾದನ, ಬಾಗಲಕೋಟೆಯ ಹೂವಿನ ನೃತ್ಯ , ಹೆಜ್ಜೆಯ ಮೇಳ, ಮೈಸೂರಿನ ತಮಟೆ ನಗಾರಿ, ಯಕ್ಷಗಾನ ಗೊಂಬೆ ಇವು ಜಂಬೂ ಸವಾರಿಯಲ್ಲಿ ಗಮನ ಸೆಳೆದವು.

ಅಲ್ಲದೆ, ಟಿ,ನರಸೀಪುರದ ಬನ್ನೂರಿನ ಪೂಜಾ ಕುಣಿತ, ಬೀದರಿನ ಲಂಬಾಣಿ ನೃತ್ಯ, ಬಳ್ಳಾರಿ ಜಿಲ್ಲೆಯ ಹಗಲುವೇಷ , ಕೋಲಾರದ ತಮಟೆ ವಾದನ ಗಮನ ಸೆಳೆಯಿತು. ಉಡುಪಿ ಜಿಲ್ಲೆಯ ದಟ್ಟಿ ಕುಣಿತ ,ಕುಡುಬಿ ನೃತ್ಯ, ಉತ್ತರ ಕನ್ನಡದ ಗೊಂಡರ ಡಕ್ಕೆ , ಟಿ. ನರಸೀಪುರದ ತಲಕಾಡಿನ ಚಿಲಿಪಿಲಿ ಗೊಂಬೆ, ಉಡುಪಿ ಜಿಲ್ಲೆಯ ಸಿಂಗಾರಿ ಮೇಳ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮರಗಾಲು ಕುಣಿತ, ದೊಣ್ಣೆವರಸೆ ರಸಮಯವಾಗಿತ್ತು.

ಜಮ್ಮು ಕಾಶ್ಮೀರದ -ಡೋಂಗ್ರಿ ನೃತ್ಯ, ತೆಲಂಗಾಣದ -ಮಥುರಿ ನೃತ್ಯ, ಪಂಜಾಬಿನ -ಬಾಂಗ್ರಾ ಮತ್ತು ಜಿಂದುವಾ ನೃತ್ಯ, ಪಶ್ಚಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ, ರಾಜಸ್ಥಾನದ ಚಕ್ರಿ ಮತ್ತು ಗೊಮರ್ ನೃತ್ಯ, ತಮಿಳು ನಾಡಿನ – ತಪ್ಪೆಟಂ ನೃತ್ಯ ದಸರೆ ಕಲಾವೈಭವಕ್ಕೆ ರಾಷ್ಟ್ರಮಟ್ಟದ ಮೆರುಗನ್ನು ತಂದುಕೊಟ್ಟಿತು.

ಬೆಳಗಾವಿ ಜಿಲ್ಲೆಯ ಜಗ್ಗಲಗಿ ಮೇಳ , ಮಂಡ್ಯಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ ಕೀಲುಕುದುರೆ, ಬೆಂಗಳೂರಿನ ಹಾಲಕ್ಕಿ ಸುಗ್ಗಿ, ಚಾಮರಾಜ ನಗರ ಜಿಲ್ಲೆಯ ಗೇರ್ ನೃತ್ಯ, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ನಂದೀಕೋಲು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜಡೆ ಕೋಲಾಟ, ಕೋಲಾರದ ಕೀಲು ಕುದುರೆ, ಕೊಡಗಿನ ಜನರ ಗಿರಿಜನ ನೃತ್ಯ, ಹಾವೇರಿ ಜಿಲ್ಲೆಯ ಬೇಡರ ವೇಷ, ಚಿಕ್ಕಬಳ್ಳಾಪುರದ ಕೀಲುಕುದುರೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಉರುಮೆ ವಾದ್ಯ ಪ್ರೇಕ್ಷಕರ ಗಮನ ಸೆಳೆಯಿತು.

ಬೆಂಗಳೂರಿನ ಕೃಷ್ಣ ಜಾನಪದ ನವಿಲು ನೃತ್ಯ ತಂಡದ ನವಿಲು ನೃತ್ಯ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಳ್ಳು ಕುಣಿತ, ಕೊಪ್ಪಳದ ಸಮ್ಮಾಳ ಮೇಳ , ಹಗಲು ವೇಷ, ಧಾರವಾಡ ಜಿಲ್ಲೆಯ ದಾಲಪಟ, ಬೆಳಗಾವಿ ಜಿಲ್ಲೆ ಅಥಣಿಯ ಕರಡಿ ಮಜಲು, ಮಂಡ್ಯದ ಕೋಲಾಟ, ದೊಣ್ಣೆವರಸೆ, ಬಾಗಲಕೋಟೆ ಮುಧೋಳ ತಾಲ್ಲೂಕಿನ ಝಾಂಜ್ ಫಥಕ್, ಧಾರವಾಡ ಜಿಲ್ಲೆಯ ಲಿಂಗೇಶ್ವರ ನಗರದ ಕಥಕಳಿ ಗೊಂಬೆ , ಚಾಮರಾಜ ನಗರ ಜಿಲ್ಲೆಯ ಮಲ್ಲಿಕಾರ್ಜುಣ ಕಲಾ ತಂಡದ ಗೊರವರ ಕುಣಿತ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಡೊಳ್ಳು ಕುಣಿತ, ಮೈಸೂರಿನ ಮಹಾಲಿಂಗೇಶ್ವರ ಸೇವಾ ಸಮಿತಿಯ ಮೂಡಲ ಪಾಯ ಯಕ್ಷಗಾನ ನೃತ್ಯ ಮನಮೋಹಕವಾಗಿ ಜನರನ್ನು ರಂಜಿಸಿದವು.

ಮಂಡ್ಯ ಜಿಲ್ಲೆ ಪಾಂಡವಪುರದ ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಂದೀಕೋಲು, ಬಾಗಲಕೋಟೆಯ ಚಿನ್ನಿಕೋಲು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದ ನಗಾರಿ ಕುಣಿತ, ವಿಜಯಪುರ ಜಿಲ್ಲೆಯ ಸತ್ತಿಗೆ ಕುಣಿತ, ಬಬಲೇಶ್ವರ ತಾಲ್ಲೂಕಿನ ಕೀಲುಕುದುರೆ, ಉಡುಪಿಯ ಕಂಗಿಲು ನೃತ್ಯ, ಶಿವಮೊಗ್ಗದ ಡೊಳ್ಳು ಕುಣಿತ, ಮೈಸೂರಿನ ಗಣೇಶ ನಗರದ ಸ್ಯಾಕ್ಸೋಪೋನ್, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಝಾಂಜ್ ಫಥಕ್, ನಾಡ ಹಬ್ಬ ದಸರಾದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದವು.

andolana

Recent Posts

ವೀರನಪುರ ಬಳಿ ಟಿಪ್ಪರ್ ಪಲ್ಟಿ: ಚಾಲಕ ಸಾವು

ಚಾಮರಾಜನಗರ: ತಾಲ್ಲೂಕಿನ ವೀರನಪುರ ಸಮೀಪವಿರುವ ಕರಿಕಲ್ಲು ಕ್ವಾರಿಯೊಂದರಲ್ಲಿ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.…

8 hours ago

ಮುಂದಿನ ದಿನಗಳಲ್ಲಿಯೂ ಬಂಜಾರ ಸಮುದಾಯದವರ ಜೊತೆಗೆ ಸದಾ ಬೆಂಬಲವಾಗಿರುತ್ತೇನೆ: ಬಿಜೆಪಿ ಒ.ಬಿ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಜನಧ್ವನಿ ವೆಂಕಟೇಶ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಬಂಜಾರ ಸಮುದಾಯದ ಜನತೆಗೆ ಒಳ ಮೀಸಲಾತಿಯಲ್ಲಿ ಆಗಿರುವ ಅನ್ಯಾಯದ ಬಗ್ಗೆ…

8 hours ago

ಕರ್ನಾಟಕ ಸೋಲಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಎತ್ತಿ ಹಿಡಿದ ಜಮ್ಮು-ಕಾಶ್ಮೀರ

ಹುಬ್ಬಳ್ಳಿ: ಹನ್ನೊಂದು ವರ್ಷಗಳ ಬಳಿಕ ಚಾಂಪಿಯನ್‌ ಪಟ್ಟಕ್ಕೇರುವ ಕರ್ನಾಟಕದ ಕನಸು ನನಸಾಗಲಿಲ್ಲ. ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದು, ಜಮ್ಮು-ಕಾಶ್ಮೀರ…

11 hours ago

ಹನೂರಿನಲ್ಲಿ ವಿಜೃಂಭಣೆಯಿಂದ ನಡೆದ ಸೇವಾಲಾಲ್‌ ಜಯಂತಿ ಕಾರ್ಯಕ್ರಮ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ತಾಲೂಕು ಕೇಂದ್ರದಲ್ಲಿ ವಿಭಾಗಿಯ ಮಟ್ಟದ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು…

12 hours ago

ಹಣೆಯಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ: ಡಿ.ಕೆ.ಸುರೇಶ್‌

ಬೆಂಗಳೂರು: ಹಣೆ ಬರಹದಲ್ಲಿ ಬರೆದಿದ್ದರೆ ನನ್ನ ಅಣ್ಣ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿಕೆ ನೀಡಿದ್ದಾರೆ. ಈ…

12 hours ago

ಸದ್ದಿಲ್ಲದೆ ಸಮಾಜಸೇವೆಗೆ ನಿಂತ ಎಂಬಿಶ್ರೀ ಪ್ರತಿಷ್ಠಾನ ತಂಡ

ಹೇಮಂತ್‌ಕುಮಾರ್ ಮಂಡ್ಯ: ನಗರದ ಹಲವಾರು ಬಡಾವಣೆಗಳಲ್ಲಿನ ರಸ್ತೆಗಳು ಸಾರ್ವಜನಿಕ ಮೂತ್ರಾಲಯವಾಗಿ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಎರಚಾಡುತ್ತ…

12 hours ago