ಜಿಲ್ಲೆಗಳು

ಬಾಲ ಬಿಚ್ಚಬೇಡಿ … ಶಿಸ್ತಿನಿಂದ ಇರಿ…

ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಬುದ್ದಿಮಾತು

ಮೈಸೂರು: ‘ನಗರದಲ್ಲಿ ಗ್ಯಾಂಗ್ ಅನ್ನೋ ಪದ ಕೇಳಿ ಬರಬಾರದು. ಕೇಳಿ ಬಂದ್ರೆ, ಒದ್ದು ಒಳಗೆ ಕೂರಿಸಬೇಕಾಗುತ್ತದೆ. ನೀವು ಎಲ್ಲಿ, ಹೇಗೆ, ಏನು ಕೆಲಸ ಮಾಡ್ತಾ ಇದ್ದೀರಾ ಎನ್ನುವ ಬಗ್ಗೆ ನಮಗೆ ಮಾಹಿತಿ ಇದೆ. ಶಿಸ್ತಿನಿಂದ ಹೆಂಡತಿ ಮಕ್ಕಳ ಜೊತೆಗೆ ಜೀವನ ಮಾಡಿ. ಇಲ್ಲವಾದ್ರೆ, ಬಾಲ ಕತ್ತರಿಸಬೇಕಾಗುತ್ತೆ…’
ಇದು ನಗರದ ರೌಡಿಶೀಟರ್‌ಗಳಿಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಪಾಠ ಹೇಳಿದ ಪರಿ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ನಗರದ ಹೆಬ್ಬಾಳ್ ಪೊಲೀಸ್ ಠಾಣೆಯ ಆವರಣದಲ್ಲಿ ನಗರದ ೭೬ ಮಂದಿ ರೌಡಿಶೀಟರ್‌ಗಳನ್ನು ಕರೆ ತಂದು, ಅವರ ಮೇಲಿರುವ ಪ್ರಕರಣಗಳನ್ನು ಕೇಳಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ರೌಡಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ನಗರದ ಕಾನೂನು-ಸುವ್ಯವಸ್ಥೆಗೆ ಭಂಗ ತರಬಾರದು. ಬಾರು, ರೆಸ್ಟೋರೆಂಟ್ ಕುಡಿದು ನಾಟಕವಾಡೋದು, ಲೇಟ್ ನೈಟ್ ಓಡಾಡೋದು, ಗುಂಪು ಕಟ್ಟಿ ಹರಟೆ ಹೊಡಿಯೋದು ಮಾಡಿದ್ರೆ, ತಕ್ಷಣ ನಮ್ಮವರು ಎತ್ತಿಕೊಂಡು ಬಂದು ಒಳಗೆ ಕೂರಿಸಿಕೊಳ್ತಾರೆ. ನಿಮ್ಮ ಆಟಾಟೋಪಗಳ ಬಗ್ಗೆ ನನಗೆ ಮಾಹಿತಿ ಇದೆ ಎಂದರು.
ನಗರದ ಕಾನೂನು-ಸುವ್ಯವಸ್ಥೆಗೆ ಭಂಗ ತರಬಾರದು. ಬಾರು, ರೆಸ್ಟೋರೆಂಟ್ ಕುಡಿದು ನಾಟಕವಾಡೋದು, ಲೇಟ್ ನೈಟ್ ಓಡಾಡೋದು, ಗುಂಪು ಕಟ್ಟಿ ಹರಟೆ ಹೊಡಿಯೋದು ಮಾಡಿದ್ರೆ, ತಕ್ಷಣ ನಮ್ಮವರು ಎತ್ತಿಕೊಂಡು ಬಂದು ಒಳಗೆ ಕೂರಿಸಿಕೊಳ್ತಾರೆ. ನಿಮ್ಮ ಆಟಾಟೋಪಗಳ ಬಗ್ಗೆ ನನಗೆ ಮಾಹಿತಿ ಇದೆ. ಇಂತ ರೌಡಿ ಚಟುವಟಿಕೆಗಳನ್ನು ಬಿಟ್ಟು ಶಿಸ್ತಿನಿಂದ ಒಳ್ಳೆಯ ದಾರಿಯಲ್ಲಿ ಕುಟುಂಬದವರೊಂದಿಗೆ ಜೀವನ ಮಾಡಿ ಎಂದು ರಮೇಶ್ ಬಿ.ಬಾನೋತ್ ಬುದ್ಧಿ ಹೇಳಿದರು.
ನಗರದ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜ್ ಮಾತನಾಡಿ, ರೌಡಿಸಂ ಮಾಡೋದು ಮಾತ್ರವಲ್ಲ, ರೌಡಿಯ ರೀತಿಯೂ ಕಾಣಿಸಿಕೊಳ್ಳಬಾರದು. ನೀಟಾಗಿ ಹೇರ್ ಕಟ್ ಮಾಡಿಸಿ, ಶೇವ್ ಮಾಡ್ಸಿ. ಜನರು ಹೆದರಿಕೊಳ್ಳುವ ರೀತಿ ಕಾಣಬೇಡಿ ಎಂದು ತಿಳಿಸಿದರು.
‘ನಾನೂ ರೌಡಿ ನನಗೂ ಟಿಕೆಟ್ ಕೊಡಿ’ ಎಂದು ಈ ಹಿಂದೆ ಬೋರ್ಡ್ ಹಿಡಿದುಕೊಂಡು ಬಿಜೆಪಿಯ ಟಿಕೆಟ್ ಕೇಳಿದ್ದ ಮಂಜು ಅಲಿಯಾಸ್ ಪಾನಿಪುರಿ ಮಂಜನಿಗೆ ‘ಜಾಸ್ತಿ ಬಾಲ ಬಿಚ್ಚಿದ್ರೆ ಏನ್ ಮಾಡ್ಬೇಕು ಅಂತಾ ಗೊತ್ತಿದೆ’ ಎಂದು ರಮೇಶ್ ಬಾನೋತ್ ಎಚ್ಚರಿಕೆ ನೀಡಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ರಮೇಶ್ ಬಾನೋತ್ ಅವರು, ಬೆಳಿಗ್ಗೆಯೇ ಮನೆಗಳನ್ನು ಸರ್ಚ್ ಮಾಡಿ ರೌಡಿಶೀಟರ್‌ಗಳನ್ನು ಕರೆತಂದು ಪರೇಡ್ ಮಾಡಲಾಗಿದೆ. ಮನೆಗಳಲ್ಲಿ ಯಾವುದೇ ವೆಪನ್‌ಗಳು ಸಿಕ್ಕಿಲ್ಲ. ಇವರು ಈಗ ಏನ್ ಮಾಡ್ತಾ ಇದ್ದಾರೆ ಎಂದು ಮಾಹಿತಿ ಕಲೆ ಹಾಕಲಾಗಿದೆ. ಇವರಲ್ಲಿ ಕೆಲವರು ಇನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿದ್ದಾರೆ. ಅವರಿಗೆ ಕಾನೂನು-ಸುವ್ಯವಸ್ಥಗೆ ಭಂಗ ಮಾಡದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ೭ ಮಂದಿ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಇನ್ನು ೧೮ ಮಂದಿಯನ್ನು ಮಾಡುವುದು ಬಾಕಿ ಇದೆ. ಕಳೆದ ಪರೇಡ್‌ನಲ್ಲಿ ೪೬ ಮಂದಿಯನ್ನು ಪರೇಡ್‌ಗೆ ಕರೆ ತರಲಾಗಿತ್ತು. ಈ ಬಾರಿ ೭೬ ಮಂದಿಯನ್ನು ಕರೆ ತರಲಾಗಿದೆ ಎಂದು ತಿಳಿಸಿದರು.
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ, ಎಸಿಪಿಗಳಾದ ಅಶ್ವಥ್ ನಾರಾಯಣ್, ಗಂಗಾಧರ ಸ್ವಾಮಿ, ಗಜೇಂದ್ರ ಪ್ರಸಾದ್, ಸಂದೇಶ್ ಕುಮಾರ್ ಸೇರಿದಂತೆ ನಗರದ ಎಲ್ಲ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳು ಹಾಜರಿದ್ದರು.

ಕೋಟ್
ಶೇ.೫೦ರಷ್ಟು ರಿಯಾಯಿತಿ ದಂಡ ಪಾವತಿ ವಿಸ್ತರಣೆಗೆ ಸಂಬಂಧಪಟ್ಟಂತೆ ನಮಗೆ ಆದೇಶ ಬಂದಿಲ್ಲ. ಮೈಸೂರು ನಗರದಲ್ಲಿ ದಂಡ ಹಾಕಿರುವುದು ೧೨೨ ಕೋಟಿ ರೂ., ಇದರಲ್ಲಿ ಪ್ರವಾಸಿಗರ ವಾಹನಗಳು ಸೇರಿವೆ. ಶೇ.೫೦ ಅಂದರೆ ೬೩ ಕೋಟಿ ರೂ. ಬರಬೇಕು. ಈಗ ಫೆ.೧೧ರವರೆಗೂ ೧೨ ಕೋಟಿ ರೂ. ಸಂಗ್ರಹವಾಗಿದೆ. ಅವಧಿ ವಿಸ್ತರಣೆಯಾದರೆ, ಒಳ್ಳೆಯ ರಿಕವರಿಯಾಗಲಿದೆ.
-ರಮೇಶ್ ಬಿ.ಬಾನೋತ್, ನಗರ ಪೊಲೀಸ್ ಆಯುಕ್ತರು.

andolanait

Recent Posts

ಹುಣಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಗ್ರಾಮದ ಕೆರೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಡಿಶಾ…

7 hours ago

ಹನೂರು| ಕೆಸರಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆ ಫಲಿಸದೇ ಸಾವು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ…

8 hours ago

ಪಶ್ಚಿಮ ಬಂಗಾಳದಲ್ಲಿ ನಾಳೆ ಮೊದಲ ಹಂತದ ಚುನಾವಣೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ನಾಳೆ ಉತ್ತರ ಬಂಗಾಳದ ಎಲ್ಲಾ 152…

9 hours ago

24 ಗಂಟೆಯ ಒಳಗಡೆ ಉತ್ತರಿಸಿ: ಮಲ್ಲಿಕಾರ್ಜುನ ಖರ್ಗೆಗೆ ಆಯೋಗ ನೋಟಿಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಕ್ಕಾಗಿ ಚುನಾವಣಾ ಆಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ…

9 hours ago

ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸಚಿವ ಮಧು ಬಂಗಾರಪ್ಪ

ಬೆಂಗಳೂರು: ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.…

11 hours ago

ಧಾರವಾಡ ಆಕಾಶವಾಣಿ ಕೇಂದ್ರ ಸ್ಥಳಾಂತರಿಸದಂತೆ ಅಶ್ವಿನಿ ವೈಷ್ಣವ್‌ ಆದೇಶ

ನವದೆಹಲಿ: ಧಾರವಾಡ ಆಕಾಶವಾಣಿ ಪ್ರಾದೇಶಿಕ ಕೇಂದ್ರ ಸ್ಥಳಾಂತರ ನಿರ್ಧಾರವನ್ನು ಪ್ರಸಾರ ಭಾರತಿ ಹಿಂತೆಗೆದುಕೊಂಡಿದೆ. ಉತ್ತರ ಕರ್ನಾಟಕ ಜನರ ಒತ್ತಾಸೆ, ಅಭಿಲಾಷೆಯಂತೆ…

12 hours ago