ಜಿಲ್ಲೆಗಳು

ಚುಡಾದ 20 ವರ್ಷಗಳ ಮಾಸ್ಟರ್ ಪ್ಲಾನ್ ಸಿದ್ಧ!

ತಾತ್ಕಾಲಿಕ ಒಪ್ಪಿಗೆ ದೊರೆಕಿದ್ದು ಅಂತಿಮ ಅನುಮೋದನೆ ಬಾಕಿ

ರಾಜೇಶ್ ಬೆಂಡರವಾಡಿ

ಚಾಮರಾಜನಗರ: ಬೆಳೆಯುತ್ತಿರುವ ಚಾಮರಾಜನಗರದ ಮುಂದಿನ ೨೦ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿರಿಸಿಕೊಂಡು  ಚುಡಾ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ (ಪರಿಷ್ಕೃತ -೨)ಕರಡು ಪ್ರತಿಗೆ ಅನುಮೋದನೆ ದೊರಕಿದ್ದು ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸುವುದಷ್ಟೇ ಬಾಕಿ ಇದೆ.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ವ್ಯಾಪ್ತಿ ೧೨೦.೯೯ ಚದರ ಕಿಲೋಮೀಟರ್ ಇದೆ. ಚಾಮರಾಜನಗರ ನಗರಸಭೆಯು ೩೧ ವಾರ್ಡುಗಳಲ್ಲದೆ ನಗರ ಸುತ್ತಮುತ್ತಲಿನ ೨೬ ಗ್ರಾಮಗಳೂ ಇದರಲ್ಲಿ ಸೇರಿವೆ.
ಕೂಡ್ಲೂರು, ಬೂದಿತಿಟ್ಟು, ಶಿವಪುರ, ಕೋಡಿಮೋಳೆ, ಚಂದಕವಾಡಿ, ಬಸವನಪುರ, ಬಂಡಿಗೆರೆ, ದೊಡ್ಡಮೋಳೆ ಇನ್ನಿತರ ಗ್ರಾಮಗಳು ಚುಡಾದ ಕರಡು ನಕ್ಷೆಯಲ್ಲಿದ್ದು, ಈ ಎಲ್ಲಾ ಕಡೆಯ ಬೆಳವಣಿಗೆಯನ್ನು ಮಹಾಯೋಜನೆಯಲ್ಲಿ (ಮಾಸ್ಟರ್ ಪ್ಲಾನ್‌ನಲ್ಲಿ) ದಾಖಲಿಸಲಾಗಿದೆ.
ವಸತಿ, ಉದ್ಯಾನವನ, ವಾಣಿಜ್ಯ, ಕೈಗಾರಿಕೆ, ವ್ಯವಸಾಯ, ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ವಲಯ-ಹೀಗೆ ವಿವಿಧ ಪ್ರಕಾರಗಳ ಅನುಸಾರ ಭೂಮಿಯನ್ನು ವಿಂಗಡಿಸಲಾಗಿದೆ. ಮುಂದಿನ ೨೦೪೧ನೇ ಇಸವಿಯ ೨.೫೦ ಲಕ್ಷ ಜನಸಂಖ್ಯೆಯನ್ನು ಆಧರಿಸಿ ಸಿದ್ಧಪಡಿಸಿರುವ ಈ ಮಾಸ್ಟರ್ ಪ್ಲಾನ್‌ಗೆ ಕಳೆದ ಮಾರ್ಚ್ ನಲ್ಲಿಯೇ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ.
ಕರಡು ಅನುಮೋದನೆ ಬಳಿಕ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಕ್ಕೆ ೬೦ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಆಕ್ಷೇಪಗಳು-ಸಲಹೆಗಳನ್ನು ಪಡೆಯಲಾಗಿದೆ. ಕೆಲವೊಂದು ಸಲಹೆಗಳನ್ನು ಅಳವಡಿಸಿಕೊಂಡು ಅಂತಿಮ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಲ್ಲಿಸಲು ಪ್ರತಿ ಸಿದ್ಧವಾಗಿದೆ.
ಕುಲಗಾಣ ಶಾಂತಮೂರ್ತಿ ಅವರ ನಂತರ ಚುಡಾಕ್ಕೆ ಯಾರನ್ನೂ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದು ಅವರಿಂದ ಸಹಿಪಡೆದು ಅಂತಿಮ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಬೇಕಿದೆ.
ಮೂಲಗಳ ಪ್ರಕಾರ ಈ ತಿಂಗಳ ಒಳಗೆ ಸರ್ಕಾರ ಕ್ಕೆ ಸಲ್ಲಿಕೆಯಾಗಲಿದ್ದು ಅಲ್ಲಿ ಅನುಮೋದನೆ ದೊರೆತ ನಂತರ ಹೊಸ ಮಹಾಯೋಜನೆ(ಪರಿಷ್ಕೃತ೨) ಅನುಷ್ಠಾನಕ್ಕೆ ಬರಲಿದೆ. ಚಾ.ನಗರ ನಗರಸಭೆ ಮಾದರಿಯಲ್ಲೇ ಸುತ್ತಮುತ್ತಲಿನ ೨೬ಗ್ರಾಮಗಳವರು ಕಟ್ಟಡಗಳ ನಿರ್ಮಾಣ ಭೂ ಪರಿವರ್ತನೆ, ಇಷ್ಟೇ ಎತ್ತರದಲ್ಲಿ ಕಟ್ಟಡ ಕಟ್ಟಬೇಕೆಂಬ ನಿಯಮಗಳಿಗೆ ಮಹಾಯೋಜನೆ-೧ಜಾರಿಗೊಂಡಾಗಲೇ ಒಳಪಟ್ಟಿದ್ದಾರೆ. ಆದರೆ ಆಸ್ತಿ ತೆರಿಗೆ, ಕುಡಿಯುವ ನೀರು ಇನ್ನಿತರ ಮೂಲಸೌಕರ್ಯ ವ್ಯವಹಾರಗಳೆಲ್ಲಾ ಎಂದಿನಂತೆ ಗ್ರಾಪಂಗಳಲ್ಲೇ ಮುಂದುವರಿದಿದೆ.
ಚುಡಾ ೧೯೯೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಆಗ ಚಾಮರಾಜನಗರ ನಗರಸಭೆ ಜೊತೆ ಕೆಲ ಗ್ರಾಮಗಳಷ್ಟೇ ಭಾಗಶಃ ಒಳಪಟ್ಟಿದ್ದವು. ೨೦೦೭ರಲ್ಲಿ ಮಹಾಯೋಜನೆ-೧ ರ ಪರಿಷ್ಕರಣೆ ನಡೆದಿತ್ತು.


ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ಮಾಸ್ಟರ್ ಪ್ಲಾನ್-೨ಗೆ ಈಗಾಗಲೇ ತಾತ್ಕಾಲಿಕ ಅನುಮೋದನೆ ದೊರಕಿದೆ. ಅಂತಿಮ ಅನುಮೋದನೆ ದೊರಕಬೇಕಿದೆ.
-ಎಂ.ಎಸ್.ಪಂಕಜಾ, ಆಯುಕ್ತರು, ಚುಡಾ.


ಅನುಷ್ಠಾನ ನಿಶ್ಚಿತ
ಸರ್ಕಾರ ಈಗಾಗಲೇ ತಾತ್ಕಾಲಿಕ ಅನುಮೋದನೆ ನೀಡಿರುವುದರಿಂದ ಪರಿಷ್ಕೃತ ಕರಡು-೨ಗೆ ಅನುಮೋದನೆ ದೊರಕಿ ಅದು ಅನುಷ್ಠಾನಗೊಳ್ಳುವುದು ನಿಶ್ಚಿತ ಎಂದು ಚಾ.ನಗರ ನಗರಾಭಿವೃಧ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago