ಜಿಲ್ಲೆಗಳು

ಮಡಿಕೇರಿಯಲ್ಲಿ ಕಾಡಲಾರಂಭಿಸಿದೆ ಚಿಕನ್ ಪಾಕ್ಸ್

ಬೇಸಿಗೆಯಿಂದ ಮಕ್ಕಳಲ್ಲಿ ಕಂಡುಬರುತ್ತಿರುವ ಸೋಂಕು; ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ

– ನವೀನ್ ಡಿಸೋಜ

ಮಡಿಕೇರಿ: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೊಡಗು ಜಿಲ್ಲೆಯ ಮಕ್ಕಳಲ್ಲಿ ‘ಚಿಕನ್ ಪಾಕ್ಸ್’ ಹರಡಲು ಶುರುವಾಗಿದೆ.
ಬೇಸಿಗೆ ಸಮಯದಲ್ಲಿ ರಾಶಸ್, ಸಿಡುಬು ಅಥವಾ ಚಿಕನ್ ಪಾಕ್ಸ್, ಚರ್ಮದ ಮೇಲಿನ ತುರಿಕೆ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳು ಜನರನ್ನು ಕಾಡುವುದು ಸಾಮಾನ್ಯ. ಇವುಗಳಲ್ಲಿ ಚಿಕನ್ ಪಾಕ್ಸ್, ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಮಡಿಕೇರಿಯ ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಭಾಷೆಯಲ್ಲಿ ‘ಅಮ್ಮ’ ಎಂದು ಕರೆಯಲಾಗುವ ರೋಗದಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ವೆರಿಸೆಲ್ಲಾ ಜೊಸ್ಟರ್ ಎನ್ನುವ ವೈರಾಣುವಿನಿಂದ ಬರುವ ಒಂದು ಸಾಂಕ್ರಾಮಿಕ ರೋಗ ಚಿಕನ್ ಪಾಕ್ಸ್. ಸಾಮಾನ್ಯವಾಗಿ ಇದು 2ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಿಕನ್ ಪಾಕ್ಸ್ ಸೋಂಕಾಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಅಥವಾ ಅವರು ಬಳಸಿದ ವಸ್ತುಗಳನ್ನು ಉಪಯೋಗಿಸುವುದರಿಂದ ಈ ರೋಗವು ಹರಡುತ್ತದೆ. ರೋಗಿಯು ಕೆಮ್ಮುವುದು, ಸೀನುವುದರಿಂದ ವೈರಾಣುಗಳು ಗಾಳಿಉಲ್ಲಿ ಸೇರಿ ಬೇರೆಯವರಿಗೆ ಉಸಿರಾಟದ ಮುಖಾಂತರ ಹರಡುತ್ತದೆ.

ಚಿಕನ್ ಪಾಕ್ಸ್ ಲಕ್ಷಣಗಳು:
ಒಮ್ಮಿಂದೊಮ್ಮೆ ಜ್ವರ, ಮೈಕೈ ನೋವು, ಮೂಗು ಸೋರುವುದು, ಸುಸ್ತು ಇದಾದ ಒಂದು ಅಥವಾ ಎರಡನೇ ದಿನದಿಂದ ಮೈ ಮೇಲೆ ಮೊಡವೆಯಂತೆ ಗುಳ್ಳೆಗಳಾಗುತ್ತವೆ. ಕ್ರಮೇಣ ಅದರಲ್ಲಿ ನೀರು ತುಂಬಿಕೊಂಡು ನೀರುಗುಳ್ಳೆಗಳಾಗಿ ಹಾಗೂ ಅದರಿಂದ ತುರಿಕೆ ಶುರುವಾಗುತ್ತದೆ. ಗುಳ್ಳೆಗಳು ಮೊದಲು ಹೊಟ್ಟೆ ಹಾಗೂ ಬೆನ್ನಿನ ಮೇಲೆ ಕಾಣಿಸಿಕೊಂಡು ಕ್ರಮೇಣ ಐದು ದಿನಗಳಲ್ಲಿ ದೇಹದ ಇತರೆ ಭಾಗಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ರೋಗ ನೀರೋಧಕ ಶಕ್ತಿಗನುಗುಣವಾಗಿ 250ರಿಂದ 500ರವರೆಗೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ನಂತರ ಗುಳ್ಳೆಗಳು ಕ್ರಮೇಣ ಒಣಗಿ ಹೆಪ್ಪುಗಟ್ಟಿದಂತಾಗಿ ಒಣಗಿ ಉದುರಿ ಹೋಗುತ್ತವೆ.


ಗಂಭೀರ ಪರಿಣಾಮ:
2 ವರ್ಷದ ಒಳಗಿನ ಮಕ್ಕಳು ಹಾಗೂ 12 ವರ್ಷದ ಮೆಲ್ಪಟ್ಟವರಲ್ಲಿ ಇದು ತೀವ್ರತರವಾಗಿ ಕಾಣಿಸಿಕೊಳ್ಳಬಹುದು. ಗರ್ಭಿಣಿಯರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಅಂದರೆ ಎಚ್‌ಐವಿ, ಏಡ್ಸ್, ಕ್ಯಾನ್ಸರ್, ಕಿಮೋಥೆರಪಿ ಮತ್ತು ಸ್ಟಿರಾಯಿಡ್ ತೆಗೆದುಕೊಳ್ಳುವವರಿಗೆ ಚಿಕನ್ ಪಾಕ್ಸ್ ಸೋಂಕು ಉಂಟಾದರೆ ಗಂಭೀರ ಸ್ವರೂಪದಲ್ಲಿರುತ್ತದೆ. ಕೆಲವೊಮ್ಮೆ ಚಿಕನ್ ಪಾಕ್ಸ್ ಸೋಂಕಿನಿಂದ ಸೆಕೆಂಡರಿ ಇನ್‌ಫೆಕ್ಷನ್ ಆಗಬಹುದು ಅಂದರೆ ತ್ವಚೆಯಲ್ಲಿ ಬ್ಯಾಕ್ಟೀರಿಯಲ್ ಸೋಂಕು, ಶ್ವಾಸಕೋಶಕ್ಕೆ ಸೋಂಕಾಗಿ ನ್ಯೂಮೋನಿಯಾ ಹಾಗೂ ಮಿದುಳಿಗೆ ಸೋಂಕಾಗಿ ಎನ್‌ಕೆಫೆಲೈಟಿಸ್ ಆಗಬಹುದು, ಜ್ವರಕ್ಕೆ ಔಷಧ ಮತ್ತು ತುರಿಕೆಗೆ ಕ್ಯಾಲಮೈನ್ ಲೋಶನ್‌ಗಳನ್ನು ಬಳಸಿದರೆ ಸಾಕು.


ಚಿಕನ್ ಪಾಕ್ಸ್‌ಗೆ ಪಾಲಿಸಬೇಕಾದ ವಿಧಾನಗಳು
* ನಿಮ್ಮ ಮಗುವಿಗೆ ಸೋಂಕಾಗಿದೆ ಎಂದು ಗೊತ್ತಾದ ತಕ್ಷಣ ಶಾಲೆಗೆ ಮಾಹಿತಿ ನೀಡಬೇಕು.
* ಮಗುವನ್ನು ಹೊರಗಡೆ ಎಲ್ಲಿಯೂ ಕಳುಹಿಸಬಾರದು.
* ಎಲ್ಲ ಗುಳ್ಳೆಗಳು ಒಣಗುವವರೆಗೂ ಮನೆಯಲ್ಲಿಯೇ ವಿಶ್ರಾಂತಿ ನೀಡಬೇಕು.
* ಮನೆಯಲ್ಲಿ ಬೇರೆ ಮಕ್ಕಳ ಅಥವಾ ದೊಡ್ಡವರಿಂದ ದೂರ ಇರಿಸಬೇಕು.
* ಸೋಂಕಾದ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಮುಖ ಹಾಗೂ ಮೂಗನ್ನು ಮುಚ್ಚಿಕೊಳ್ಳಬೇಕು.
* ಊಟದ ತಟ್ಟೆ, ನೀರಿನ ಲೋಟ, ಹಾಸಿಗೆ, ಬಟ್ಟೆಗಳನ್ನು ಯಾರ ಜೊತೆಯೂ ಹಂಚಿಕೊಳ್ಳಬಾರದು.
* ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
* ಮನೆಯಲ್ಲಿ ಸೋಂಕಾದವರಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು.



ಮಡಿಕೇರಿಯಲ್ಲಿ ಚಿಕನ್ ಪಾಕ್ಸ್ ವ್ಯಾಪಕವಾಗಿ ಹರಡುತ್ತಿದೆ. ನನ್ನ ಮಗನಿಗೂ ಸೋಂಕು ತಗುಲಿದೆ. ನಗರದ ಶಾಲೆಯೊಂದರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ರಾಣಿಪೇಟೆ, ಮುತ್ತಪ್ಪ ದೇವಾಲಯ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಬಹುತೇಕ ಮಂದಿ ಆಯುರ್ವೇದದ ಮೊರೆ ಹೋಗಿದ್ದಾರೆ.

-ಪವನ್ ಪೆಮ್ಮಯ್ತಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ


ಇಲಾಖೆಯಿಂದ ಪ್ರತಿದಿನ ವರದಿ ತರಿಸಿಕೊಳ್ಳಲಾಗುತ್ತಿದೆ. ಆದರೆ, ಚಿಕನ್ ಪಾಕ್ಸ್ ಸೋಂಕು ಇದುವರೆಗೆ ದೃಢಪಟ್ಟಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ಪತ್ತೆಯಾದಲ್ಲಿ ರೋಗಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ.
ಡಾ.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(ಪ್ರಭಾರ), ಕೊಡಗು



ಸಾಧಾರಣವಾಗಿ ಚಿಕನ್ ಪಾಕ್ಸ್ ಬಂದು ಹತ್ತು ದಿನಗಳವರೆಗೂ ಇದು ಬೇರೆಯವರಿಗೆ ಹಬ್ಬುತ್ತದೆ. ಸೀನುವಾಗ, ಕೆಮ್ಮುವಾಗ ಮತ್ತು ಒಬ್ಬರ ಮೈಯನ್ನು ಒಬ್ಬರು ಮುಟ್ಟುವುದರಿಂದಲೂ ಹಬ್ಬುತ್ತದೆ. ಆದ್ದರಿಂದ ಚಿಕನ್ ಪಾಕ್ಸ್ ಇದ್ದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ.
-ಕೆ.ಬಿ.ಸೂರ್ಯಕುಮಾರ್‌, ವೈದ್ಯರು, ಮಡಿಕೇರಿ

andolanait

Recent Posts

ಓದುಗರ ಪತ್ರ: ರಸ್ತೆ ಕಾಮಗಾರಿ ಪೂರ್ಣಗೊಳಿಸಿ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…

16 mins ago

ಓದುಗರ ಪತ್ರ: ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಮೂಲ ಸೌಕರ್ಯ ಕಲ್ಪಿಸಿ

ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…

24 mins ago

ಅರಮನೆ ಮುಂಭಾಗ ಸಿಲಿಂಡರ್ ಸ್ಪೋಟ : ಮೃತ ವ್ಯಕ್ತಿ ಸಲೀಂ ವಿರುದ್ಧ ಎಫ್ಐಆರ್ ; ಗುರುತು ಪತ್ತೆ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್​ಗೆ ಗ್ಯಾಸ್​ ತುಂಬುವಾಗ ಹೀಲಿಯಂ ಸಿಲಿಂಡರ್​ ಸ್ಫೋಟಗೊಂಡು…

28 mins ago

ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ

ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…

35 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಎಲ್ಲ ನಟರ ಅಭಿಮಾನಿಗಳು ಪೈರೆಸಿ ವಿರುದ್ಧ ಸಮರ ಸಾರುವಂತಾದರೆ!

ವೈಡ್‌ ಆಂಗಲ್‌  ಬಾ.ನಾ.ಸುಬ್ರಹ್ಮಣ್ಯ  ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…

2 hours ago

2025ರ ನೆನಪು: ಅಗಲಿದ ಗಣ್ಯರ ನೆನಪಿನ ಮಾಲಿಕೆ…

2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ  ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…

2 hours ago