ಚಾಮರಾಜನಗರ

ಪ್ರೊ.ಮಹೇಶ್ ಚಂದ್ರಗುರು ಅವರ ಜನಪರ ಹೋರಾಟಗಳು ಸದಾ ಜೀವಂತ : ಕುಲಪತಿ ಗಂಗಾಧರ್‌

ಗುಂಡ್ಲುಪೇಟೆ : ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ, ಹೋರಾಟಗಾರ ಡಾ.ಮಹೇಶಚಂದ್ರ ಗುರು ಅವರ ಜನಪರ ಹೋರಾಟಗಳು ಸದಾ ಜೀವಂತವಾಗಿ ಇರುವಂತೆ ಅವರ ಸ್ಮಾರಕವನ್ನು ಉಳಿಸಿಕೊಳ್ಳಬೇಕಿದೆ ಎಂದು ಚಾಮರಾಜನಗರ ವಿವಿ ಕುಲಪತಿಗಳಾದ ಪ್ರೊ.ಗಂಗಾಧರ್ ಅವರು ಸಲಹೆ ನೀಡಿದರು.

ಪಟ್ಟಣದ ಹೊರವಲಯದ ಊಟಿ ರಸ್ತೆ ಬದಿಯಲ್ಲಿರುವ ಪ್ರೊ.ಗುರು ಸ್ಮಾರಕದಲ್ಲಿ ನಡೆದ ಪ್ರೊ.ಮಹೇಶ ಚಂದ್ರ ಗುರು ಅವರ ಪ್ರಥಮ ವರ್ಷದ ಪುಣ್ಯಾನುಮೋದನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೌದ್ಧ ಧಮ್ಮವನ್ನು ಚಾಮರಾಜನಗರ ಜಿಲ್ಲೆಯಿಂದ ಪುನರುಜ್ಜೀವನ ಮಾಡುತ್ತಿರುವ ಪ್ರೊ.ಗುರು ಅವರ ಸ್ಮಾರಕ ಸಮಾಜಕ್ಕೆ ಮಾದರಿಯಾಗಿದೆ. ಅವರು ನಡೆಸಿದ ಹೋರಾಟಗಳನ್ನು ಮನನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಡಾ.ಶಿವಕುಮಾರ್ ಮಾತನಾಡಿ, ಪ್ರೊ.ಗುರು ಅವರು ನಿಷ್ಠುರವಾದಿ ಆಗಿರದಿದ್ದರೆ ೪ ವಿವಿಗಳಿಗೆ ಕುಲಪತಿ ಆಗಬಹುದಿತ್ತು. ಸತ್ತ ನಂತರವೂ ಅವರು ಜೀವಂತವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಅವರ ಶಿಷ್ಯರದಾಗಿದೆ. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಗುರು ಅವರು ಬೆಳಕಾಗಿದ್ಧಾರೆ ಎಂದು ಸ್ಮರಿಸಿದರು.

ಮೈಸೂರು ವಿವಿಯ ಇಎನ್‌ಎಂಆರ್‌ಸಿ ನಿರ್ದೇಶಕರಾದ ಡಾ.ಸಪ್ನಾ ಅವರು ಮಾತನಾಡಿ, ಗುರು ಅವರು ತಮ್ಮ ವಿದ್ಯಾರ್ಥಿಗಳನ್ನು ಶೈಕ್ಷಣಿಕ ತಂದೆಯಂತೆ ಸಲಹಿದ್ದಾರೆ. ನಮ್ಮಂತಹವರು ಪ್ರಾಧ್ಯಾಪಕರಾಗಲು ಗುರು ಅವರ ಕೊಡುಗೆ ದೊಡ್ಡದು. ಅವರ ಕುಟುಂಬದವರು ಮತು ಶಿಷ್ಯಂದಿರು ಅವರ ಸ್ಮಾರಕವನ್ನು ನಿರ್ಮಿಸಿ ಶಾಶ್ವತವಾಗಿ ಇರುವಂತೆ ಮಾಡಬೇಕಿದೆ ಎಂದರು.

ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ ಮಾತನಾಡಿ, ಗುರು ಅವರು ದಲಿತ ಹೋರಾಟಗಾರರಿಗೆ ಚೈತನ್ಯ ತುಂಬುತ್ತಿದ್ದರು. ಅವರ ಅಗಲಿಕೆಯಿಂದ ಸಮಾಜ ಸೈದ್ಧಾಂತಿಕ ಹಾಗೂ ಸಾಮಾಜಿಕವಾಗಿ ಬಡವಾಗಿದೆ. ಅವರಿಲ್ಲದ ಹೋರಾಟಗಳು ಗುರಿ ಇಲ್ಲದೆ ಸಪ್ಪೆಯಾಗಿದೆ ಎಂದರು.

ದಲಿತ ಹೋರಾಟಗಾರರಾದ ಜವರಯ್ಯ ಮಾತನಾಡಿ, ಗುರು ಅವರ ಅಗಲಿಕೆಯಿಂದ ಹೋರಾಟಗಳಿಗೆ ಜೀವ ಇಲ್ಲದಂತಾಗಿದೆ. ಮನುವಾದಿಗಳು ಮತ್ತು ಹಿಂದುತ್ವವಾದಿಗಳ ನಿದ್ದೆಗೆಡಿಸುತ್ತಿದ್ದರು. ಅವರ ವಿದ್ವತ್ತು ಪ್ರಶಂಸನೀಯ. ಅವರೊಂದಿಗೆ ಬೆಳೆದ ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.

ಶೋಭನ ಬಂತೇಜಿ ಸೇರಿದಂತೆ ೯ ಬಂತೇಜಿಗಳ ಸಮ್ಮುಖದಲ್ಲಿ ಪುಣ್ಯಾನುಮೋದನೆ ನೆರವೇರಿತು.

ಡಾ.ಗುರು ಅವರ ಪತ್ನಿ ಪ್ರೊ.ಸಿ.ಹೇಮಾವತಿ, ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಚಂದ್ರಶೇಖರಯ್ಯ, ಪತ್ರಕರ್ತ ಶಿವಕುಮಾರ್, ಪರಿಸರವಾದಿ ಜಗನ್ನಾಥ್, ಸರಗೂರಿನ ಉಪ ತಹಸೀಲ್ದಾರ್ ಪರಶಿವಮೂರ್ತಿ, ಸಾಹಿತಿ ಸಿದ್ದಸ್ವಾಮಿ, ಪ್ರೊ.ರಾಜೇಶ್ವರಿ, ಪ್ರೊ. ಕೋಮಲಾ, ಕಂದಾಯ ಇಲಾಖೆ ಅಧಿಕಾರಿ ಶಾಂತಕುಮಾರಿ, ವೈದ್ಯರಾದ ಡಾ.ದೇವಿಕಾ, ಮಾದಯ್ಯ, ಮಲ್ಕುಂಡಿ ಮಹದೇವಸ್ವಾಮಿ, ಶಿವಸ್ವಾಮಿ, ಕೆನರಾ ಬ್ಯಾಂಕ್ ಶಿವರಾಜು, ಡಾ.ರಾಘವೇಂದ್ರ, ಡಾ. ಶಿವರಾಜು, ಡಾ.ದಿಲೀಪ್ ನರಸಯ್ಯ, ಡಾ.ಸಂಜಯ್, ಡಾ.ಗೌತಮ್ ದೇವನೂರು, ಡಾ.ಗೋಪಾಲ್, ಡಾ.ಕುಮಾರಸ್ವಾಮಿ, ಡಾ.ನಿಂಗರಾಜು, ಡಾ.ಮಧುಸೂದನ್, ಡಾ.ಲೋಕೇಶ್, ಕೊಳ್ಳೇಗಾಲ ಡಾ.ಗುರುಮೂರ್ತಿ, ಡಾ.ಕೃಷ್ಣಮೂರ್ತಿ ಚಮರಂ, ಮಹೇಶ್ ಸೋಸ್ಲೆ, ಅಭಿಮಾನಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

8 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

10 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

11 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

11 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

11 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

11 hours ago