ಚಾಮರಾಜನಗರ

ಏ.೧೯ಕ್ಕೆ ‘ಚಿರತೆ ಬಂತು ಚಿರತೆ’ ಸಿನಿವಾ ಬಿಡುಗಡೆ

ಚಾಮರಾಜನಗರ: ನಗರ ಹಾಗೂ ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಚಿತ್ರೀಕರಿಸಿರುವ ಮತ್ತು ಜಿಲ್ಲೆಯ ಕಲಾವಿದರನ್ನು ಹಾಕಿಕೊಂಡು ಜೆಆರ್‌ಕೆ ವಿಷನ್ ಸಂಸ್ಥೆ ನಿರ್ಮಿಸಿರುವ ‘ಚಿರತೆ ಬಂತು ಚಿರತೆೞ ಸಿನಿಮಾವು ಏ.೧೯ ರಂದು ಬಿಡುಗಡೆ ಆಗಲಿದೆ ಎಂದು ನಿರ್ದೇಶಕರಾದ ಬೆನಕ ಕೃಷ್ಣಮೂರ್ತಿ ತಿಳಿಸಿದರು.

ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಅರಕಲವಾಡಿ, ಕಟ್ನವಾಡಿ, ಕೊಂಗಳ್ಳಿ ಬೆಟ್ಟ, ಕೊತ್ತಲವಾಡಿ ಗ್ರಾಮಗಳ ಸುತ್ತಮುತ್ತ, ಚಾಮರಾಜನಗರದಲ್ಲಿ ಚಿತ್ರೀಕರಿಸಲಾಗಿದೆ.

ಚಿರತೆಯ ಗ್ರಾಮಗಳಿಗೆ ದಾಳಿಯಿಡುವುದು ನಂತರ ನಡೆಯುವ ಬೆಳವಣಿಗೆಗಳ ಕುರಿತ ಕಥಾವಸ್ತು ಒಳಗೊಂಡ ಸಿನಿವಾ ಇದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿನಿವಾದಲ್ಲಿ ಜಿಲ್ಲೆಯ ಸ್ಥಳೀಯ ಭಾಷೆ ಬಳಸಿಕೊಳ್ಳಲಾಗಿದೆ. ನಟರಾದ ಸುಂದರ್ ವೀಣಾ, ಮೇಕಪ್ಪ ರಾಮಕೃಷ್ಣ, ಗಿರಿಶಿವಣ್ಣ, ವನಿತಾ, ಸುಜಾತ, ಎ.ಡಿ.ಸಿಲ್ವಾ, ಕೆ.ವೆಂಕಟರಾಜು, ಕಿರಣ್ ಗಿರ್ಗಿ, ಮಹಾಲಿಂಗ ಗಿರ್ಗಿ ಇತರರು ನಟಿಸಿದ್ದಾರೆ. ಎಂದು ತಿಳಿಸಿದರು.
ಈ ಸಿನಿವಾದ ನಾುಂಕ ಪಾರ್ಥಪ್ಪ ಸರ್ಕಾರಿ ನೌಕರಿ ಬಿಟ್ಟು ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುತ್ತಾನೆ.

ಗ್ರಾಮದ ಮುಖಂಡ ವಾದಪ್ಪನ ಎತ್ತಿನ ಮೇಲೆ ಚಿರತೆ ದಾಳಿ ವಾಡಿ ಗಾಯಗೊಳಿಸುತ್ತದೆ. ಪಾರ್ಥಪ್ಪನ ಬಳಿಯಿದ್ದ ಪರವಾನಗಿ ಪಡೆದಿರುವ ಬಂದೂಕಿನಿಂದ ಚಿರತೆ ಕೊಲ್ಲಬೇಕು ಎಂದು ವಾದಪ್ಪ ಒತ್ತಾಯ ಮಾಡುತ್ತಾನೆ. ಆದರೆ, ವನ್ಯಪ್ರಾಣಿ ಸಂರಕ್ಷಣಾ ಕಾನೂನು ಅರಿವು ಇರುವ ಪಾರ್ಥಪ್ಪ ಚಿರತೆ ಹತ್ಯೆಗೆ ಒಪ್ಪುವುದಿಲ್ಲ.

ಆಗ ಇಡೀ ಗ್ರಾಮ ಚಿರತೆುಂನ್ನು ಹತ್ಯೆ ವಾಡಬೇಕೆಂದು ಪಾರ್ಥಪ್ಪನ ಮೇಲೆ ಒತ್ತಡ ಹೇರುತ್ತಾರೆ. ಚಿರತೆಯನ್ನು ಸಾಯಿಸಲಾಗುವುದೇ ಅಥವಾ ಬದುಕಿಸಲಾಗುವುದೇ ಎಂಬುದು ಸಿನಿವಾದ ಕ್ಲೈವ್ಯಾಕ್ಸ್ ಆಗಿದೆ ಎಂದು ತಿಳಿಸಿದರು.

ನಿರ್ಮಾಪಕ ಜಗದೀಶ್ ಮಲ್ನಾಡ್, ರಂಗಕರ್ಮಿ ಕೆ.ವೆಂಕಟರಾಜು, ಕಲಾವಿದರಾದ ಎ.ಡಿ.ಸಿಲ್ವಾ, ಕಿರಣ್ ಗಿರ್ಗಿ, ಮಹಾಲಿಂಗಗಿರ್ಗಿ ಹಾಜರಿದ್ದರು.

ಎನ್‌ ಎಂ ಪ್ರದ್ಯುಮ್ನ

ಮೈಸೂರು ಜಿಲ್ಲೆಯ ನಂಜನಗೂಡಿನವನಾದ ನಾನು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದೇನೆ. 2011 ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 8 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಹಲೋ ಮೈಸೂರುʼಯಿಂದ ಪ್ರಾರಂಭಿಸಿ, ಜನಶ್ರೀ(ಟಿವಿ), ಸಿರಿ(ಟಿವಿ), ವಿಶ್ವವಾಣಿ ಪತ್ರಿಕೆ, ಟಿವಿ-೯(ಟಿವಿ) ಸಂಸ್ಥೆಗಳಲ್ಲಿ ವರದಿಗಾರ, ಮುಖ್ಯ ವರದಿಗಾರ ಹಾಗೂ ಉಪ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಪ್ರಿಂಟ್‌ ಮೀಡಿಯಾದಲ್ಲಿ 6 ವರ್ಷ ಹಾಗೂ ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 2 ವರ್ಷಗಳ ಕಾಲ ಅನುಭವ ಹೊಂದಿದ್ದು, ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆʼಯ ಭಾಗವಾದ ʼಆಂದೋಲನ ಡಿಜಿಟಲ್‌ʼನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವೈಲ್ಡ್‌ಲೈಫ್‌ ಫೋಟೋಗ್ರಫಿ, ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸಗಳಾಗಿವೆ.

Recent Posts

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

3 mins ago

ರಾಜ್ಯದಲ್ಲಿ ತೀವ್ರ ಚಳಿ, ದಟ್ಟ ಮಂಜು : ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ…

13 mins ago

ಅರಣ್ಯ ಇಲಾಖೆ ಖಾಯಂ ಅಧಿಕಾರಿ, ಸಿಬ್ಬಂದಿಗೆ ಸಿಹಿ ಸುದ್ದಿ : ೧ ಕೋಟಿ ರೂ.ಅಪಘಾತ ವಿಮೆ

ಬೆಂಗಳೂರು : ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ ೧ ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ…

18 mins ago

ದಿಲ್ಲಿಯಲ್ಲಿ ಅಟಲ್‌ ಕ್ಯಾಂಟಿನ್‌ ಆರಂಭ : ಕರ್ನಾಟಕದ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ 5 ರೂ.ಗೆ ಊಟ

ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜಯಂತಿ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಗುರುವಾರ ರಾಜಧಾನಿಯಲ್ಲಿ…

28 mins ago

ರೈತರ ನೆರವಿಗೆ ಕ್ರೆಡಲ್‌ನಿಂದ `ಪಿಎಂ ಕುಸುಮ್‌ ಬಿ’ ಸಹಾಯವಾಣಿ ಕೇಂದ್ರ ಸ್ಥಾಪನೆ

ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ…

37 mins ago

ಮೈಸೂರು | ಮನುಸ್ಮೃತಿ ಸುಟ್ಟು ಸಮಾನತೆ ಜ್ಯೋತಿ ಬೆಳಗಿಸಿದ ದಸಂಸ

ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…

44 mins ago