ಚಾಮರಾಜನಗರ

ರೈತ ಕುಟುಂಬದ ಮದುವೆಗೆ ಜೋಡೆತ್ತು ಸಾಕ್ಷಿ… !

ಚಾಮರಾಜನಗರ: ಮಠಾಧೀಶರು, ರಾಜಕೀಯ ನಾಯಕರು, ಚಿತ್ರನಟರು ಹೀಗೆ ಸೆಲೆಬ್ರಿಟಿಗಳನ್ನು ಮದುವೆ ಮಂಟಪಕ್ಕೆ ಕರೆತಂದು ಸಪ್ತಪದಿ ತುಳಿಯುವ ಈ ದಿನಮಾನಗಳಲ್ಲಿ ತನ್ನ ಜೀವನೋಪಾಯಕ್ಕೆ ಆಧಾರವಾಗಿರುವ ಎತ್ತುಗಳನ್ನು ಅಲಂಕರಿಸಿ ಕಲ್ಯಾಣ ಮಂಟಪಕ್ಕೆ ಕರೆತಂದು ಅವುಗಳ ಸಮ್ಮುಖದಲ್ಲಿ ವಿವಾಹವಾಗಿರುವ ಅಪರೂಪದ ಪ್ರಸಂಗಕ್ಕೆ ನವಜೋಡಿಗಳಾದ ಮಹೇಶ ಮತ್ತು ಮಹೇಶ್ವರಿ ಸಾಕ್ಷಿಯಾಗಿದ್ದಾರೆ.

ತಾಲ್ಲೂಕಿನ ಪಣ್ಯದಹುಂಡಿ ಶಂಕರೇಶ್ವರ ಕಲ್ಯಾಣಮಂಟಪದಲ್ಲಿ ಇಂತಹದೊಂದು ಅಪರೂಪದ ಮದುವೆ ಸೋಮವಾರ ನಡೆಯಿತು. 2.80 ೮೦ ಲಕ್ಷ ರೂ. ಬೆಲೆಬಾಳುವ ಹಳ್ಳಿಕಾರ್ ತಳಿಯ ಎತ್ತುಗಳು ಮದುವೆಗೆ ಬಂದ ಎಲ್ಲರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸಿ ಆಕರ್ಷಿಸಿದವು. ಎತ್ತುಗಳನ್ನು ಕಟ್ಟಲಾಗಿದ್ದ ಶಾಮಿಯಾನದ ಸುತ್ತಲೂ ವಧು-ವರರು ಕೂರುವ ಮಂಟಪದಂತೆ ಶೃಂಗರಿಸಲಾಗಿತ್ತು.

ಜಾನುವಾರು ಸಂತೆಗಳಿಂದ ಹಳ್ಳಿಕಾರ್ ಎತ್ತು, ಹಸುಗಳನ್ನು ಖರೀದಿ ಮಾಡಿ, ಚೆನ್ನಾಗಿ ಆರೈಕೆ ಮಾಡಿ ದಷ್ಟಪುಷ್ಟವಾಗಿ ಬೆಳೆದ ಬಳಿಕ ಅಗತ್ಯ ಇರುವ ರೈತರಿಗೆ ಮಾರಾಟ ಮಾಡುವುದು ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರ ಮುಖ್ಯಕಸುಬು. ಇದರಿಂದಲೇ ಅವರು ಜೀವನ ಸಾಗಿಸುತ್ತಿದ್ದು ತನಗೆ ಬದುಕು ಕಟ್ಟಿಕೊಟ್ಟಿರುವ ಎತ್ತುಗಳು ತನ್ನ ಜೀವನ ಸಂಗಾತಿ ಮಹೇಶ್ವರಿ ಅವರನ್ನು ಕೈಹಿಡಿಯುವ ಸಂದರ್ಭದಲ್ಲಿ ಸಾಕ್ಷಿಯಾಗಬೇಕು. ಅವೂ ಕೂಡ ಈ ಸಂತೋಷದ ಗಳಿಗೆಗೆ ಸಾಕ್ಷಿಯಾಗಬೇಕೆಂಬ ಉದ್ದೇಶದಿಂದ ವಿವಾಹ ಮಂಟಪಕ್ಕೆ ಕರೆತಂದಿದ್ದಾರೆ. ಮಹೇಶ್ ಅವರ ಈ ಯೋಚನೆಗೆ ವಿವಾಹಕ್ಕೆ ಬಂದ ಬಂಧು ಮಿತ್ರರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು, ಮಕ್ಕಳಾದಿಯಾಗಿ ಮದುವೆಗೆ ಬಂದ ಅತಿಥಿಗಳು ಈ ಸೆಲೆಬ್ರಿಟಿ ಜೋಡೆತ್ತುಗಳ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಮಹೇಶ್‌ ಅವರ ಕುಟುಂಬ ಅವರ ತಾತನ ಕಾಲದಿಂದಲೂ ಜಾನುವಾರು ವ್ಯಾಪಾರ ಮಾಡಿಕೊಂಡು ಬಂದಿದೆ. ಈ ವೃತ್ತಿಯೇ ಇವರ ಜೀವನೋಪಾಯವಾಗಿದೆ. ಸಹಜವಾಗಿಯೇ ಇವರ ಮದುವೆಗೆ ಮಂಡ್ಯ, ಕೆ.ಆರ್.ನಗರ, ಶ್ರೀರಂಗಪಟ್ಟಣ, ರಾಮನಗರ ಮತ್ತಿತರ ಭಾಗದಿಂದ ದನಕರು ವ್ಯಾಪಾರ ಮಾಡುವ ಸಾಕಷ್ಟು ಮಂದಿ ಆಗಮಿಸಿದ್ದರು.

ಹಳ್ಳಿಕಾರ್‌ ಎತ್ತುಗಳೆಂದರೆ ನನಗೆ ಹಿಂದಿನಿಂದಲೂ ವಿಶೇಷ ಮಮತೆ. 2009ರ ಸುತ್ತೂರು ಜಾತ್ರೆಯಲ್ಲಿ ನನ್ನ ಎತ್ತುಗಳು ಚಾಂಪಿಯನ್ ಆಗಿದ್ದವು. ಮುಡುಕುತೊರೆ ಜಾತ್ರೆಯಲ್ಲೂ ಬಹುಮಾನ ಪಡೆದಿದ್ದವು. ತಾತನ ಕಾಲದಿಂದ ನಮ್ಮ ಕುಟುಂಬಕ್ಕೆ ಆಧಾರವಾದ -ಎತ್ತುಗಳ ಸಮ್ಮುಖದಲ್ಲಿಯೇ ಮದುವೆಯಾಗುವುದು ಹೆಚ್ಚು ಸೂಕ್ತ ಎಂದು ಭಾವಿಸಿದೆ. ಈ ನಿರ್ಧಾರಕ್ಕೆ ನನ್ನ ಹೆತ್ತವರು ಮತ್ತು ಮಹೇಶ್ವರಿ ಹೆತ್ತವರು ಬೆಂಬಲವಾಗಿ ನಿಂತರು. ಮದುವೆ ಬಂದ ಅತಿಥಿಗಳೆಲ್ಲರೂ ಖುಷಿಪಟ್ಟಿದ್ದಾರೆ. ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಎನಿಸಿದೆ ಎನ್ನುತ್ತಾರೆ ಮಹೇಶ್.

ಮಹೇಶ್‌ ಅವರು ತಮ್ಮ ಆರು ಎಕರೆ ಜಮೀನಿನ ಕೃಷಿ ಜತೆಗೆ ಜಾನುವಾರು ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದು ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಂಜನಗೂಡು ತಾಲ್ಲೂಕು ತೊರವಳ್ಳಿಯ ಮಹೇಶ್ವರಿ ಅವರ ಪೋಷಕರು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ.

ಹುಡುಗ -ಹುಡುಗಿ ಕುಟುಂಬಗಳೆರಡೂ ಕೃಷಿಯನ್ನೇ ನಂಬಿದ್ದು ಈ ಮದುವೆ ಆಚರಣೆ ರೀತಿ ತಮಗೆ ಖುಷಿ ತಂದಿದೆ ಎಂದು ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಯಲಕ್ಕೂರು ಲಿಂಗರಾಜು ತಿಳಿಸಿದರು.

andolana

Recent Posts

‘ಎಬೋಲಾ ಆತಂಕ ಬೇಡ’ ; ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದೇವೆ : ಆರೋಗ್ಯ ಸಚಿವ

ಬೆಂಗಳೂರು : ಎಬೋಲಾ ಕುರಿತು ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ, ಜಾಗೃತಿ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ…

6 hours ago

ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಸಿಎಂ ಶಂಕುಸ್ಥಾಪನೆ

ಆನೇಕಲ್‌ ಇಂಡ್ಲವಾಡಿಯ ಸೂರ್ಯನಗರದಲ್ಲಿ ನಿರ್ಮಾಣ ಬೆಂಗಳೂರು : ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ,…

8 hours ago

ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ

ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…

9 hours ago

ಕಾಕ್ರೋಚ್‌ ಪಾರ್ಟಿಯ ಎಕ್ಸ್‌, ಇನ್‌ಸ್ಟಾ, ವೆಬ್‌ಸೈಟ್‌ಗೆ ತಡೆ ; ಅಭಿಜಿತ್‌ ದಿಪ್ಕೆ

ನವದೆಹಲಿ :  ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು  ಕಾಕ್ರೋಚ್​ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ.  ಈ…

10 hours ago

ಲಾರಿ ಹಾಗೂ ಕ್ರೂಸರ್‌ ವಾಹನದ ನಡುವೆ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು

ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…

12 hours ago

ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌…

13 hours ago