ಚಾಮರಾಜನಗರ

ರೈತ ಕುಟುಂಬದ ಮದುವೆಗೆ ಜೋಡೆತ್ತು ಸಾಕ್ಷಿ… !

ಚಾಮರಾಜನಗರ: ಮಠಾಧೀಶರು, ರಾಜಕೀಯ ನಾಯಕರು, ಚಿತ್ರನಟರು ಹೀಗೆ ಸೆಲೆಬ್ರಿಟಿಗಳನ್ನು ಮದುವೆ ಮಂಟಪಕ್ಕೆ ಕರೆತಂದು ಸಪ್ತಪದಿ ತುಳಿಯುವ ಈ ದಿನಮಾನಗಳಲ್ಲಿ ತನ್ನ ಜೀವನೋಪಾಯಕ್ಕೆ ಆಧಾರವಾಗಿರುವ ಎತ್ತುಗಳನ್ನು ಅಲಂಕರಿಸಿ ಕಲ್ಯಾಣ ಮಂಟಪಕ್ಕೆ ಕರೆತಂದು ಅವುಗಳ ಸಮ್ಮುಖದಲ್ಲಿ ವಿವಾಹವಾಗಿರುವ ಅಪರೂಪದ ಪ್ರಸಂಗಕ್ಕೆ ನವಜೋಡಿಗಳಾದ ಮಹೇಶ ಮತ್ತು ಮಹೇಶ್ವರಿ ಸಾಕ್ಷಿಯಾಗಿದ್ದಾರೆ.

ತಾಲ್ಲೂಕಿನ ಪಣ್ಯದಹುಂಡಿ ಶಂಕರೇಶ್ವರ ಕಲ್ಯಾಣಮಂಟಪದಲ್ಲಿ ಇಂತಹದೊಂದು ಅಪರೂಪದ ಮದುವೆ ಸೋಮವಾರ ನಡೆಯಿತು. 2.80 ೮೦ ಲಕ್ಷ ರೂ. ಬೆಲೆಬಾಳುವ ಹಳ್ಳಿಕಾರ್ ತಳಿಯ ಎತ್ತುಗಳು ಮದುವೆಗೆ ಬಂದ ಎಲ್ಲರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸಿ ಆಕರ್ಷಿಸಿದವು. ಎತ್ತುಗಳನ್ನು ಕಟ್ಟಲಾಗಿದ್ದ ಶಾಮಿಯಾನದ ಸುತ್ತಲೂ ವಧು-ವರರು ಕೂರುವ ಮಂಟಪದಂತೆ ಶೃಂಗರಿಸಲಾಗಿತ್ತು.

ಜಾನುವಾರು ಸಂತೆಗಳಿಂದ ಹಳ್ಳಿಕಾರ್ ಎತ್ತು, ಹಸುಗಳನ್ನು ಖರೀದಿ ಮಾಡಿ, ಚೆನ್ನಾಗಿ ಆರೈಕೆ ಮಾಡಿ ದಷ್ಟಪುಷ್ಟವಾಗಿ ಬೆಳೆದ ಬಳಿಕ ಅಗತ್ಯ ಇರುವ ರೈತರಿಗೆ ಮಾರಾಟ ಮಾಡುವುದು ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರ ಮುಖ್ಯಕಸುಬು. ಇದರಿಂದಲೇ ಅವರು ಜೀವನ ಸಾಗಿಸುತ್ತಿದ್ದು ತನಗೆ ಬದುಕು ಕಟ್ಟಿಕೊಟ್ಟಿರುವ ಎತ್ತುಗಳು ತನ್ನ ಜೀವನ ಸಂಗಾತಿ ಮಹೇಶ್ವರಿ ಅವರನ್ನು ಕೈಹಿಡಿಯುವ ಸಂದರ್ಭದಲ್ಲಿ ಸಾಕ್ಷಿಯಾಗಬೇಕು. ಅವೂ ಕೂಡ ಈ ಸಂತೋಷದ ಗಳಿಗೆಗೆ ಸಾಕ್ಷಿಯಾಗಬೇಕೆಂಬ ಉದ್ದೇಶದಿಂದ ವಿವಾಹ ಮಂಟಪಕ್ಕೆ ಕರೆತಂದಿದ್ದಾರೆ. ಮಹೇಶ್ ಅವರ ಈ ಯೋಚನೆಗೆ ವಿವಾಹಕ್ಕೆ ಬಂದ ಬಂಧು ಮಿತ್ರರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು, ಮಕ್ಕಳಾದಿಯಾಗಿ ಮದುವೆಗೆ ಬಂದ ಅತಿಥಿಗಳು ಈ ಸೆಲೆಬ್ರಿಟಿ ಜೋಡೆತ್ತುಗಳ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಮಹೇಶ್‌ ಅವರ ಕುಟುಂಬ ಅವರ ತಾತನ ಕಾಲದಿಂದಲೂ ಜಾನುವಾರು ವ್ಯಾಪಾರ ಮಾಡಿಕೊಂಡು ಬಂದಿದೆ. ಈ ವೃತ್ತಿಯೇ ಇವರ ಜೀವನೋಪಾಯವಾಗಿದೆ. ಸಹಜವಾಗಿಯೇ ಇವರ ಮದುವೆಗೆ ಮಂಡ್ಯ, ಕೆ.ಆರ್.ನಗರ, ಶ್ರೀರಂಗಪಟ್ಟಣ, ರಾಮನಗರ ಮತ್ತಿತರ ಭಾಗದಿಂದ ದನಕರು ವ್ಯಾಪಾರ ಮಾಡುವ ಸಾಕಷ್ಟು ಮಂದಿ ಆಗಮಿಸಿದ್ದರು.

ಹಳ್ಳಿಕಾರ್‌ ಎತ್ತುಗಳೆಂದರೆ ನನಗೆ ಹಿಂದಿನಿಂದಲೂ ವಿಶೇಷ ಮಮತೆ. 2009ರ ಸುತ್ತೂರು ಜಾತ್ರೆಯಲ್ಲಿ ನನ್ನ ಎತ್ತುಗಳು ಚಾಂಪಿಯನ್ ಆಗಿದ್ದವು. ಮುಡುಕುತೊರೆ ಜಾತ್ರೆಯಲ್ಲೂ ಬಹುಮಾನ ಪಡೆದಿದ್ದವು. ತಾತನ ಕಾಲದಿಂದ ನಮ್ಮ ಕುಟುಂಬಕ್ಕೆ ಆಧಾರವಾದ -ಎತ್ತುಗಳ ಸಮ್ಮುಖದಲ್ಲಿಯೇ ಮದುವೆಯಾಗುವುದು ಹೆಚ್ಚು ಸೂಕ್ತ ಎಂದು ಭಾವಿಸಿದೆ. ಈ ನಿರ್ಧಾರಕ್ಕೆ ನನ್ನ ಹೆತ್ತವರು ಮತ್ತು ಮಹೇಶ್ವರಿ ಹೆತ್ತವರು ಬೆಂಬಲವಾಗಿ ನಿಂತರು. ಮದುವೆ ಬಂದ ಅತಿಥಿಗಳೆಲ್ಲರೂ ಖುಷಿಪಟ್ಟಿದ್ದಾರೆ. ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಎನಿಸಿದೆ ಎನ್ನುತ್ತಾರೆ ಮಹೇಶ್.

ಮಹೇಶ್‌ ಅವರು ತಮ್ಮ ಆರು ಎಕರೆ ಜಮೀನಿನ ಕೃಷಿ ಜತೆಗೆ ಜಾನುವಾರು ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದು ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಂಜನಗೂಡು ತಾಲ್ಲೂಕು ತೊರವಳ್ಳಿಯ ಮಹೇಶ್ವರಿ ಅವರ ಪೋಷಕರು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ.

ಹುಡುಗ -ಹುಡುಗಿ ಕುಟುಂಬಗಳೆರಡೂ ಕೃಷಿಯನ್ನೇ ನಂಬಿದ್ದು ಈ ಮದುವೆ ಆಚರಣೆ ರೀತಿ ತಮಗೆ ಖುಷಿ ತಂದಿದೆ ಎಂದು ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಯಲಕ್ಕೂರು ಲಿಂಗರಾಜು ತಿಳಿಸಿದರು.

andolana

Recent Posts

ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…

6 hours ago

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

11 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

11 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

12 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

12 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

12 hours ago