ಚಾಮರಾಜನಗರ

ರೈತ ಕುಟುಂಬದ ಮದುವೆಗೆ ಜೋಡೆತ್ತು ಸಾಕ್ಷಿ… !

ಚಾಮರಾಜನಗರ: ಮಠಾಧೀಶರು, ರಾಜಕೀಯ ನಾಯಕರು, ಚಿತ್ರನಟರು ಹೀಗೆ ಸೆಲೆಬ್ರಿಟಿಗಳನ್ನು ಮದುವೆ ಮಂಟಪಕ್ಕೆ ಕರೆತಂದು ಸಪ್ತಪದಿ ತುಳಿಯುವ ಈ ದಿನಮಾನಗಳಲ್ಲಿ ತನ್ನ ಜೀವನೋಪಾಯಕ್ಕೆ ಆಧಾರವಾಗಿರುವ ಎತ್ತುಗಳನ್ನು ಅಲಂಕರಿಸಿ ಕಲ್ಯಾಣ ಮಂಟಪಕ್ಕೆ ಕರೆತಂದು ಅವುಗಳ ಸಮ್ಮುಖದಲ್ಲಿ ವಿವಾಹವಾಗಿರುವ ಅಪರೂಪದ ಪ್ರಸಂಗಕ್ಕೆ ನವಜೋಡಿಗಳಾದ ಮಹೇಶ ಮತ್ತು ಮಹೇಶ್ವರಿ ಸಾಕ್ಷಿಯಾಗಿದ್ದಾರೆ.

ತಾಲ್ಲೂಕಿನ ಪಣ್ಯದಹುಂಡಿ ಶಂಕರೇಶ್ವರ ಕಲ್ಯಾಣಮಂಟಪದಲ್ಲಿ ಇಂತಹದೊಂದು ಅಪರೂಪದ ಮದುವೆ ಸೋಮವಾರ ನಡೆಯಿತು. 2.80 ೮೦ ಲಕ್ಷ ರೂ. ಬೆಲೆಬಾಳುವ ಹಳ್ಳಿಕಾರ್ ತಳಿಯ ಎತ್ತುಗಳು ಮದುವೆಗೆ ಬಂದ ಎಲ್ಲರನ್ನು ಪ್ರವೇಶದ್ವಾರದಲ್ಲಿ ಸ್ವಾಗತಿಸಿ ಆಕರ್ಷಿಸಿದವು. ಎತ್ತುಗಳನ್ನು ಕಟ್ಟಲಾಗಿದ್ದ ಶಾಮಿಯಾನದ ಸುತ್ತಲೂ ವಧು-ವರರು ಕೂರುವ ಮಂಟಪದಂತೆ ಶೃಂಗರಿಸಲಾಗಿತ್ತು.

ಜಾನುವಾರು ಸಂತೆಗಳಿಂದ ಹಳ್ಳಿಕಾರ್ ಎತ್ತು, ಹಸುಗಳನ್ನು ಖರೀದಿ ಮಾಡಿ, ಚೆನ್ನಾಗಿ ಆರೈಕೆ ಮಾಡಿ ದಷ್ಟಪುಷ್ಟವಾಗಿ ಬೆಳೆದ ಬಳಿಕ ಅಗತ್ಯ ಇರುವ ರೈತರಿಗೆ ಮಾರಾಟ ಮಾಡುವುದು ನಂಜನಗೂಡು ತಾಲ್ಲೂಕಿನ ಚಿಕ್ಕಹೊಮ್ಮ ಗ್ರಾಮದ ಮಹೇಶ್ ಅವರ ಮುಖ್ಯಕಸುಬು. ಇದರಿಂದಲೇ ಅವರು ಜೀವನ ಸಾಗಿಸುತ್ತಿದ್ದು ತನಗೆ ಬದುಕು ಕಟ್ಟಿಕೊಟ್ಟಿರುವ ಎತ್ತುಗಳು ತನ್ನ ಜೀವನ ಸಂಗಾತಿ ಮಹೇಶ್ವರಿ ಅವರನ್ನು ಕೈಹಿಡಿಯುವ ಸಂದರ್ಭದಲ್ಲಿ ಸಾಕ್ಷಿಯಾಗಬೇಕು. ಅವೂ ಕೂಡ ಈ ಸಂತೋಷದ ಗಳಿಗೆಗೆ ಸಾಕ್ಷಿಯಾಗಬೇಕೆಂಬ ಉದ್ದೇಶದಿಂದ ವಿವಾಹ ಮಂಟಪಕ್ಕೆ ಕರೆತಂದಿದ್ದಾರೆ. ಮಹೇಶ್ ಅವರ ಈ ಯೋಚನೆಗೆ ವಿವಾಹಕ್ಕೆ ಬಂದ ಬಂಧು ಮಿತ್ರರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರು, ಮಕ್ಕಳಾದಿಯಾಗಿ ಮದುವೆಗೆ ಬಂದ ಅತಿಥಿಗಳು ಈ ಸೆಲೆಬ್ರಿಟಿ ಜೋಡೆತ್ತುಗಳ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

ಮಹೇಶ್‌ ಅವರ ಕುಟುಂಬ ಅವರ ತಾತನ ಕಾಲದಿಂದಲೂ ಜಾನುವಾರು ವ್ಯಾಪಾರ ಮಾಡಿಕೊಂಡು ಬಂದಿದೆ. ಈ ವೃತ್ತಿಯೇ ಇವರ ಜೀವನೋಪಾಯವಾಗಿದೆ. ಸಹಜವಾಗಿಯೇ ಇವರ ಮದುವೆಗೆ ಮಂಡ್ಯ, ಕೆ.ಆರ್.ನಗರ, ಶ್ರೀರಂಗಪಟ್ಟಣ, ರಾಮನಗರ ಮತ್ತಿತರ ಭಾಗದಿಂದ ದನಕರು ವ್ಯಾಪಾರ ಮಾಡುವ ಸಾಕಷ್ಟು ಮಂದಿ ಆಗಮಿಸಿದ್ದರು.

ಹಳ್ಳಿಕಾರ್‌ ಎತ್ತುಗಳೆಂದರೆ ನನಗೆ ಹಿಂದಿನಿಂದಲೂ ವಿಶೇಷ ಮಮತೆ. 2009ರ ಸುತ್ತೂರು ಜಾತ್ರೆಯಲ್ಲಿ ನನ್ನ ಎತ್ತುಗಳು ಚಾಂಪಿಯನ್ ಆಗಿದ್ದವು. ಮುಡುಕುತೊರೆ ಜಾತ್ರೆಯಲ್ಲೂ ಬಹುಮಾನ ಪಡೆದಿದ್ದವು. ತಾತನ ಕಾಲದಿಂದ ನಮ್ಮ ಕುಟುಂಬಕ್ಕೆ ಆಧಾರವಾದ -ಎತ್ತುಗಳ ಸಮ್ಮುಖದಲ್ಲಿಯೇ ಮದುವೆಯಾಗುವುದು ಹೆಚ್ಚು ಸೂಕ್ತ ಎಂದು ಭಾವಿಸಿದೆ. ಈ ನಿರ್ಧಾರಕ್ಕೆ ನನ್ನ ಹೆತ್ತವರು ಮತ್ತು ಮಹೇಶ್ವರಿ ಹೆತ್ತವರು ಬೆಂಬಲವಾಗಿ ನಿಂತರು. ಮದುವೆ ಬಂದ ಅತಿಥಿಗಳೆಲ್ಲರೂ ಖುಷಿಪಟ್ಟಿದ್ದಾರೆ. ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಎನಿಸಿದೆ ಎನ್ನುತ್ತಾರೆ ಮಹೇಶ್.

ಮಹೇಶ್‌ ಅವರು ತಮ್ಮ ಆರು ಎಕರೆ ಜಮೀನಿನ ಕೃಷಿ ಜತೆಗೆ ಜಾನುವಾರು ವ್ಯಾಪಾರದಿಂದ ಉತ್ತಮ ಆದಾಯ ಗಳಿಸುತ್ತಿದ್ದು ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಂಜನಗೂಡು ತಾಲ್ಲೂಕು ತೊರವಳ್ಳಿಯ ಮಹೇಶ್ವರಿ ಅವರ ಪೋಷಕರು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದಾರೆ.

ಹುಡುಗ -ಹುಡುಗಿ ಕುಟುಂಬಗಳೆರಡೂ ಕೃಷಿಯನ್ನೇ ನಂಬಿದ್ದು ಈ ಮದುವೆ ಆಚರಣೆ ರೀತಿ ತಮಗೆ ಖುಷಿ ತಂದಿದೆ ಎಂದು ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಯಲಕ್ಕೂರು ಲಿಂಗರಾಜು ತಿಳಿಸಿದರು.

andolana

Recent Posts

ಮೈಸೂರು| ಹುಬ್ಬಳ್ಳಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ

ಮೈಸೂರು: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಮೈಸೂರು ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಲಾಯಿತು.…

12 mins ago

ಆಂದೋಲನ ವರದಿ ಫಲಶೃತಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರಿಗೆ ಸರತಿ ಸಾಲಿನ ಶೆಡ್ ನಿರ್ಮಾಣಕ್ಕೆ ಗುದ್ದಲಿಪೂಜೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಪ್ರಸಿದ್ದ ಪ್ರೇಕ್ಷಣಿಯ ಕ್ಷೇತ್ರ ಹಾಗೂ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ…

21 mins ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆಯೂಟ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಮನೆಯೂಟ ಪೂರೈಕೆ ವಿಚಾರದಲ್ಲಿ ಕೋರ್ಟ್‌ ತನ್ನ ಆದೇಶ…

2 hours ago

ನಾನೇ ವೆನಿಜುವೆಲಾ ಹಂಗಾಮಿ ಅಧ್ಯಕ್ಷ: ಡೊನಾಲ್ಡ್‌ ಟ್ರಂಪ್‌ ಘೋಷಣೆ

ಅಮೇರಿಕಾ: ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೊ ಅವರನ್ನು ಅಮೆರಿಕಾದ ಪಡೆಗಳು ಬಂಧಿಸಿರುವ ಬೆನ್ನಲ್ಲೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು…

2 hours ago

ಕರೂರು ಕಾಲ್ತುಳಿತ ದುರಂತ ಪ್ರಕರಣ: ಸಿಬಿಐ ಎದುರು ವಿಚಾರಣೆಗೆ ಹಾಜರಾದ ವಿಜಯ್‌

ತಮಿಳುನಾಡು: ಕರೂರು ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತಮಿಳಿಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್‌ ಇಂದು ನವದೆಹಲಿಯಲ್ಲಿ…

2 hours ago

ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ ಪಿಎಸ್‌ಎಲ್‌ವಿ ರಾಕೆಟ್‌

ಶ್ರೀಹರಿಕೋಟಾ: ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಪಿಎಸ್‌ಎಲ್‌ವಿ-C62 ರಾಕೆಟ್‌ ಮೂಲಕ EOS-N1 ಅನ್ವೇಷಾ ಸೇರಿದಂತೆ 16 ಉಪಗ್ರಹಗಳನ್ನು ಉಡಾವಣೆ ಮಾಡಿದೆ.…

3 hours ago