ಚಾಮರಾಜನಗರ

ಧ್ರುವನಾರಾಯಣ ದಂಪತಿಗಳಿಗೆ ಹೆಗ್ಗವಾಡಿಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ

ಮೈಸೂರು :  ಜನಪರ ರಾಜಕಾರಣದ ಮಾದರಿ ನಾಯಕ, ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಕಾರ್ಯಾದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಆರ್.ಧ್ರುವನಾರಾಯಣ ಹಾಗೂ ಅವರ ಪತ್ನಿ ವೀಣಾರಿಗೆ ಹುಟ್ಟೂರು ಹೆಗ್ಗವಾಡಿಯಲ್ಲಿಂದು ಬಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾತು.

ಮಂಗಳವಾರ ಬೆಳಗ್ಗೆ ಹೆಗ್ಗವಾಡಿಯ ತೊಟದಲ್ಲಿರುವ ತಂದೆ ಧ್ರುವನಾರಾಯಣ ಹಾಗೂ ತಾಯಿ ವೀಣಾ ದಂಪತಿಗಳ ಸಮಾಧಿಗೆ ಧ್ರುವ ಬೆಂಬಲಿಗರೂ, ಅಭಿಮಾನಿಗಳ ಜೊತೆ ಆಗಮಿಸಿದ ಪುತ್ರರಾದ ಶಾಸಕ ದರ್ಶನ್ ದ್ರುವನಾರಾಯಣ ಹಾಗೂ ಧೀರೇನ್ ಧ್ರುವನಾರಾಯಣ ಕಂಬಿನಿ ತಂಬಿಕೊಂಡು ತಂದೆ ತಾಯಿಗಳಿಗೆ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಿದರು.

ಈ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ವಿನಯಕುಮಾರ ಸೊರಕೆ, ಗುಂಡ್ಲುಪೇಟೆ ಶಾಸಕ ಗಣೇಶ ಪ್ರಸಾದ, ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಹುಣಸೂರಿನ ಮಂಜುನಾಥ, ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾದ್ಯಕ್ಷೆ ಪುಷ್ಪಾ ಅಮರನಾಥ್, ಕೆ ಪಿ ಸಿ ಸಿ ಕಾರ್ಯದರ್ಶಿಗಳಾದ ಕಾವೇರಪ್ಪ, ಶ್ರೀಕಂಠು, ಎಸ್ ಸಿ ಬಸವರಾಜು, ಹೀರೇಹಳ್ಳಿ ಸೋಮೇಶ, ರವಿ ಕುಮಾರ್, ಕಾಡಾ ಅದ್ಯಕ್ಷ ಮರಿಸ್ವಾಮಿ, ತಗಡೂರು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಹಾಡ್ಯ ರಂಗಸ್ವಾಮಿ, ಹುಲ್ಲಹಳ್ಳಿಯ ಶ್ರೀಕಂಠ ನಾಯಕ, ಸಿ ಎಂ ಶಂಕರ್, ಗ್ಯಾರಂಟಿ ಸಮಿತಿಯ ಜಿಲ್ಲಾದ್ಯಕ್ಷ ಮಾರುತಿ, ರಾಜ್ಯ ವಿಶ್ವಕರ್ಮ ನಿಗಮದ ಮಾಜಿ ಅದ್ಯಕ್ಷ ನಂದಕುಮಾರ್, ಉಪ್ಪಾರ ನಿಗಮದ ಮಾಜಿ ಅದ್ಯಕ್ಷ ಶಿವಕುಮಾರ್, ಜಿ . ಪಂ ಮಾಜಿ ಸದಸ್ಯರಾದ ಲತಾ ಸಿಧ್ದಶೆಟ್ಟಿ ಯೋಗೀಶ, ಕಬ್ಬಳ್ಳಿ ಮಹೇಶ, ಸದಾಶಿವಮೂರ್ತಿ ನಂಜನಗೂಡು ನಗರಸಭಾ ಅದ್ಯಕ್ಷ ಶ್ರೀಕಂಠ, ಉಪಾದ್ಯಕ್ಷೆ ರೆಹನಾ ಭಾನು, ದೊರೆಸ್ವಾಮಿ ನಾಯಕ, ನಾಗರಾಜು , ರಾಜು ಶ್ರೀನಿವಾಸಮೂರ್ತಿ, ವಿಜಯ ಕುಮಾರ್ ಕಾಗಲವಾಡಿ ಮಾದಪ್ಪ ರವಿಕುಮಾರ್. ನಗರಸಭಾ ಸದಸ್ಯರುಗಳಾದ ಪ್ರದೀಪ್ , ಮಹೇಶ, ಗಂಗಾಧರ್ ಸೇರಿದಂತೆ ಹಲವಾರು ಸದಸ್ಯರುಗಳು ಕಾಂಗ್ರೇಸ್ ಮುಖಂಡರು, ದ್ರುವನಾರಾಯಣರ ಅಭಿಮಾನಿಗಳು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಇಂದು ಪೋಲೀಯೋ ಲಸಿಕಾ ಅಭಿಯಾನ

ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…

3 hours ago

ಮರುಳಯ್ಯನ ಕೊಪ್ಪಲು ಕೊಂತನಾಯಕರಿಗೆ ಬೇಡರ ಕಣ್ಣಪ್ಪನೇ ದೇವರು

ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…

3 hours ago

ಮೈಸೂರಲ್ಲಿ ಎಸ್.ಎಲ್. ಭೈರಪ್ಪನವರ ಸ್ಮಾರಕ ಹೇಗಿರಬೇಕು?

ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…

3 hours ago

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

12 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

13 hours ago