ಚಾಮರಾಜನಗರ

ಕುಸಿದ ನಾಲೆ : ಆತಂಕದಲ್ಲಿ ರೈತರು

ನಂಜನಗೂಡು : ನಗರದ ಹೊರವಲಯದ ಶ್ರೀರಾಂಪುರ ದೇವರಸನಹಳ್ಳಿ ಮಾರ್ಗ ಮಧ್ಯದ ಹುಲ್ಲಹಳ್ಳಿ ನಾಲೆಯ ಬಲಭಾಗದ ಏರಿ ಕುಸಿದಿದ್ದು, ಆ ಭಾಗದ ಅಚ್ಚು ಕಟ್ಟುದಾರರಲ್ಲಿ ಆತಂಕ ಮೂಡಿದೆ.

ನಾಲೆಯ ನೀರು ಜಮೀನಿಗೆ ಹರಿಯುವ ನಲ್ಲಿ ಪಕ್ಕ ಏರಿ ಕುಸಿದುಬಿದ್ದಿದ್ದು ನಾಲೆಯಲ್ಲಿ ನೀರು ಬಿಟ್ಟರೆ ಗುಂಡ್ಲು ನದಿ ಪಾಲಾಗುತ್ತದೆ. ಹಾಗಾದರೆ ಮುಂದಿನ ಅಚ್ಚುಕಟ್ಟುದಾರರ ಪರಿಸ್ಥಿತಿ ಏನು ಎನ್ನುತ್ತಾರೆ ಈ ಭಾಗದ ರೈತರು.

ಏರಿ ಕುಸಿದು ಹತ್ತು ದಿನಗಳ ನಂತರ ಬಂದ ಅಧಿಕಾರಿಗಳು ಕುಸಿದ ಏರಿಯನ್ನು ಭದ್ರವಾಗಿ ಕಟ್ಟುವ ಬದಲು ಜೆಸಿಬಿಯಿಂದ ಆ ಹೊಂಡಕ್ಕೆ ದಡದ ಮಣ್ಣನ್ನೇ ತುಂಬುತ್ತಿರುವುದರಿಂದ ನಾಲೆಯಲ್ಲಿ ನೀರು ಬಿಟ್ಟರೆ ರಭಸಕ್ಕೆ ತುಂಬಿದ ಮಣ್ಣು ಕೊಚ್ಚಿ ಹೋಗುತ್ತದೆ. ಆಗಾದರೆ ನೀರು ಮುಂದಕ್ಕೆ ಹರಿಯುವ ಬಗೆ ಹೇಗೆ ಎನ್ನುವ ರೈತರ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವೇ ಇಲ್ಲದಂತಾಗಿದೆ. ನೀರು ಬಿಡುವ ಮೊದಲು ಕುಸಿದ ಏರಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಎಂದು ಪಕ್ಕ್ಕದ ಜಮೀನಿನ ಮಹದೇವಮ್ಮ ಒತ್ತಾಯಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ; ವಯೋಮಿತಿ ಸಡಿಲಿಕೆ ಸ್ವಾಗತಾರ್ಹ

ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…

54 mins ago

ಓದುಗರ ಪತ್ರ: ಸರ್ಕಾರದ ನಡೆ ಖಂಡನೀಯ

ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…

57 mins ago

ಓದುಗರ ಪತ್ರ: ಐಪಿಎಲ್ ಬೇಕಿತ್ತೇ?

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…

59 mins ago

ಅಭಿವೃದ್ಧಿ ಮತ್ತು ಸಂರಕ್ಷಣೆಯ ನಡುವೆ ಸಮತೋಲನ ಅವಶ್ಯ

ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…

1 hour ago

ಮನುಷ್ಯನ ಮುಖವಾಡ ಕಳಚುವ ನಾಟಕ ‘ಪಾರ್ಟಿ’

ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…

1 hour ago

ತಣ್ಣಗೆ ಕಾಣುವ ಬಣ್ಣದ ಮಡಕೆ: ಆರೋಗ್ಯಕ್ಕೆ ಹಿತವೆ? ಅಹಿತವೇ?

‘ಆಂದೋಲನ’ ತಂಡದಿಂದ ರಿಯಾಲಿಟಿ ಚೆಕ್ ಮೈಸೂರು: ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ದಾಹ ತಣಿಸಿಕೊಳ್ಳಲು ಜನರು…

1 hour ago