Collapsed canal: Farmers in panic
ನಂಜನಗೂಡು : ನಗರದ ಹೊರವಲಯದ ಶ್ರೀರಾಂಪುರ ದೇವರಸನಹಳ್ಳಿ ಮಾರ್ಗ ಮಧ್ಯದ ಹುಲ್ಲಹಳ್ಳಿ ನಾಲೆಯ ಬಲಭಾಗದ ಏರಿ ಕುಸಿದಿದ್ದು, ಆ ಭಾಗದ ಅಚ್ಚು ಕಟ್ಟುದಾರರಲ್ಲಿ ಆತಂಕ ಮೂಡಿದೆ.
ನಾಲೆಯ ನೀರು ಜಮೀನಿಗೆ ಹರಿಯುವ ನಲ್ಲಿ ಪಕ್ಕ ಏರಿ ಕುಸಿದುಬಿದ್ದಿದ್ದು ನಾಲೆಯಲ್ಲಿ ನೀರು ಬಿಟ್ಟರೆ ಗುಂಡ್ಲು ನದಿ ಪಾಲಾಗುತ್ತದೆ. ಹಾಗಾದರೆ ಮುಂದಿನ ಅಚ್ಚುಕಟ್ಟುದಾರರ ಪರಿಸ್ಥಿತಿ ಏನು ಎನ್ನುತ್ತಾರೆ ಈ ಭಾಗದ ರೈತರು.
ಏರಿ ಕುಸಿದು ಹತ್ತು ದಿನಗಳ ನಂತರ ಬಂದ ಅಧಿಕಾರಿಗಳು ಕುಸಿದ ಏರಿಯನ್ನು ಭದ್ರವಾಗಿ ಕಟ್ಟುವ ಬದಲು ಜೆಸಿಬಿಯಿಂದ ಆ ಹೊಂಡಕ್ಕೆ ದಡದ ಮಣ್ಣನ್ನೇ ತುಂಬುತ್ತಿರುವುದರಿಂದ ನಾಲೆಯಲ್ಲಿ ನೀರು ಬಿಟ್ಟರೆ ರಭಸಕ್ಕೆ ತುಂಬಿದ ಮಣ್ಣು ಕೊಚ್ಚಿ ಹೋಗುತ್ತದೆ. ಆಗಾದರೆ ನೀರು ಮುಂದಕ್ಕೆ ಹರಿಯುವ ಬಗೆ ಹೇಗೆ ಎನ್ನುವ ರೈತರ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವೇ ಇಲ್ಲದಂತಾಗಿದೆ. ನೀರು ಬಿಡುವ ಮೊದಲು ಕುಸಿದ ಏರಿಯನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು ಎಂದು ಪಕ್ಕ್ಕದ ಜಮೀನಿನ ಮಹದೇವಮ್ಮ ಒತ್ತಾಯಿಸಿದ್ದಾರೆ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…