ಚಾಮರಾಜನಗರ: ಕಾಡು ಪ್ರಾಣಿಗಳು ಈ ಭಾಗದಲ್ಲಿ ಊರು ಪ್ರವೇಶಿಸುವುದನ್ನು ಕೇಳಿದ್ದೇವೆ- ಕಂಡಿದ್ದೇವೆ. ಆದರೆ ಹುಲಿಯೊಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಸನಿಹದಲ್ಲೇ ಮೇಲಿಂದ ಮೇಲೆ ಸುಳಿದಾಡುತ್ತಿದ್ದು ಸಹಜವಾಗಿಯೇ ಇದರಿಂದ ಜನತೆ ಭಯಭೀತರಾಗಿದ್ದಾರೆ.
ಚಾಮರಾಜನಗರ -ನಂಜನಗೂಡು ಮುಖ್ಯರಸ್ತೆಯಲ್ಲಿರುವ ಮಕಾವ್ ಹೋಟೆಲ್ ಹತ್ತಿರದ ಕಾಳನಹುಂಡಿ ರಸ್ತೆಯಲ್ಲಿ ಸಿಗುವ ಕಟ್ಟೇಪುರದಲ್ಲಿ ಹುಲಿ ಇತ್ತೀಚೆಗೆ ಕರುವನ್ನು ಕೊಂದು ತಿಂದಿತ್ತು.
ಚಾ.ನಗರ ಪ್ರವೇಶ ದ್ವಾರದಿಂದ ಸುಮಾರು 5 ಕಿ.ಮೀ ದೂರದ ಕಟ್ಟೇಪುರದಲ್ಲಿ ಚಾಮರಾಜನಗರದ ಎಸ್ಪಿ ಎಸ್ ಸಾಹುಕಾರ್ ಜಿಯಾವುಲ್ಲಾ ಷರೀಫ್ ಅವರ ತೋಟವಿದ್ದು ಅಲ್ಲಿ ಕಟ್ಟಲಾಗಿದ್ದ ಕರುವನ್ನು ಏ.2ರಂದು ತಿಂದಿತ್ತು.
ಅರಣ್ಯ ಇಲಾಖೆ ಡಿಆರ್ಎಫ್ಒ ಸುರೇಶ್, ಫಾರೆಸ್ಟರ್ ಶ್ವೇತಾದ್ರಿ ಇತರರು ಪರಿಶೀಲನೆ ನಡೆಸಿದಾಗ ಮಾರನೇ ದಿನ ಕರುವಿನ ಕಳೇಬರ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಹುಲಿಯ ಚಲನವಲನ ತಿಳಿಯಲು ಘಟನಾ ಸ್ಥಳದಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿತ್ತು. ಸೆರೆಗೆ ಬೋನನ್ನೂ ಇಟ್ಟು ಅದರ ಒಳಗಡೆ ಮೇಕೆ ಮರಿಯನ್ನು ಕಟ್ಟಲಾಗಿದೆ.
ಮೇಕೆ ತಿನ್ನುವ ಆಸೆಯಿಂದ ಬಂದು ಬೋನಿಗೆ ಬೀಳಲೆಂದು ಹೀಗೆ ಮಾಡಲಾಗಿದೆ. ಆದರೆ, ಚಾಲಾಕಿ ಹುಲಿ ಬೋನಿನತ್ತ ಸುಳಿಯದೇ ಅದರ ಹತ್ತಿರದಲ್ಲೇ ಮಂಗಳವಾರ (ಏ.8) ಮತ್ತೆ ನಡೆದು ಹೋಗಿರುವುದು, ಅದರ ಹೆಜ್ಜೆ ಗುರುತುಗಳು ಮೂಡಿರುವುದು ನೋಡಿ ಅಲ್ಲಿನ ತೋಟದ ಮನೆಗಳವರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆಯವರು ಹೇಳುವ ಪ್ರಕಾರ ಕಟ್ಟೆ ಪುರದಲ್ಲಿ ಏ.2ರಂದು ಕರುವನ್ನು ಕೊಂದು ತಿಂದಿದ್ಧ ಹುಲಿಯೇ ಏ.6ರ ಭಾನುವಾರ ಅರಕಲವಾಡಿ ಬಳಿಯ ಲಿಂಗಣಾಪುರದಲ್ಲಿಯೂ ರೈತರೊಬ್ಬರ ಕರುವನ್ನು ಕೊಂದು ತಿಂದಿದೆ. ಹುಲಿ ಕರುಗಳ ಮೇಲೆ ದಾಳಿ ಮಾಡಿರುವ ಈ ಎರಡೂ ಗ್ರಾಮಗಳ ನಡುವಿನ ಅಂತರ ದೂರ ಇದೆಯಾದರೂ ಹುಲಿ ಈ ಪ್ರದೇಶವನ್ನು ತನ್ನ ಎಲ್ಲೆಯಾಗಿ ಮಾಡಿಕೊಂಡಿದೆ. ಅದು ಆಗಾಗ್ಗೆ ಸಂಚಾರ ಮಾಡುತ್ತಿರುತ್ತದೆ. ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಅರಣ್ಯ ಇಲಾಖೆಯವರು.
ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್.21ರಿಂದ 31ರವರೆಗೆ ಜರುಗಲಿರುವ ಪ್ರತಿಷ್ಠಿತ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ…
ಕೊಚ್ಚಿ: ಖ್ಯಾತ ಮಲಯಾಳಂ ನಟ ಹಾಗೂ ನಿರ್ದೇಶಕ ಶ್ರೀನಿವಾಸ್ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಿವಿಧ…
ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…
ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…
ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…
ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…