ಜಿಲ್ಲೆಗಳು

ಚಾ.ನಗರದಲ್ಲಿ ಸೊನೆ ಅವರೆ ಘಮಘಮ!

ಮಾರುಕಟ್ಟೆಗೆ ಬಂದಿರುವ ಅವರೆ; ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ಕಿಲೋಗೆ 80 ರೂ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಜಿಲ್ಲೆಯಲ್ಲಿ ಚುಮು ಚುಮು ಚಳಿಯೊಂದಿಗೆ ಸೊನೆ ಅವರೆಕಾಯಿಯ ಘಮಲೂ ಪ್ರಾರಂಭವಾಗಿ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಾರಂಭಿಸಿದೆ.
ಮಂಗಳವಾರ ಷಷ್ಠಿ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾದಿನ ನಗರದಲ್ಲಿ ಅವರೆಕಾಯಿ ಕಿಲೋಗೆ ೮೦ರೂ.ಗೆ ಮಾರಾಟವಾಯಿತು. ಜನರ ಪಾಲಿಗೆ ಈ ಬೆಲೆ ತುಟ್ಟಿ! ಅಲ್ಲಲ್ಲಿ ಕೊಯ್ಲು ಶುರುವಾಗಿ ಅವರೆಕಾಯಿ ಈಗಷ್ಟೇ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೊಯ್ಲು ಸಾರ್ವತ್ರಿಕವಾಗಿ ನಡೆಯತೊಡಗಿ ಎಲ್ಲೆಡೆಯಿಂದ ಅವರೆ ಬರತೊಡಗಿದರೆ ಬೆಲೆ ದುಬಾರಿ ಇರಲ್ಲ. ನವೆಂಬರ್ ಕೊನೆಯಿಂದ ಜನವರಿ ಅಂತ್ಯದವರೆಗೆ ಅವರೆಕಾಯಿ ಸೀಜನ್ ಇರುವುದಾಗಿ ವ್ಯಾಪಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಮಳೆ ಆಶ್ರಿತ ಖುಷ್ಕಿ ಜಮೀನಿನಲ್ಲಿ ಅಧಿಕವಾಗಿ ಅವರೆ ಬೆಳೆಯಲಾಗುತ್ತದೆ. ನೀರಾವರಿಯಲ್ಲಿ ಬೆಳೆದಿದ್ದಕ್ಕಿಂತ ಖುಷ್ಕಿ ಜಮೀನಿನಲ್ಲಿ ಬೆಳೆದ ಅವರೆೆಯೇ ಹೆಚ್ಚು ಸ್ವಾದಿಷ್ಟ. ಮಂಜಿನ ಹನಿಯಿಂದ ತೊಯ್ದು ಘಮಘಮಿಸುವ ಸೊನೆ ಸೊಗಡಿನ ಅವರೆ ಬಹಳ ರುಚಿಕರವಾಗಿರುತ್ತದೆ. ಯಾವುದರಲ್ಲಿ ಈ ಸೊಗಡು ಇರುವುದಿಲ್ಲವೋ ಅದು ಅಷ್ಟೊಂದು ರುಚಿಯಾಗಿರುವುದಿಲ್ಲ ಎಂದು ಗ್ರಾಹಕ ಮಲ್ಲು ಹೇಳಿದರು.
ಎಲ್ಲಾ ಕಾಲದಲ್ಲಿ ಹೈಬ್ರಿಡ್ ಅವರೆ ಸಿಗುತ್ತದೆ. ಅದರಲ್ಲಿ ಅವರೆ ಪರಿಮಳವೇ ಇರುವುದಿಲ್ಲ. ಹೀಗಾಗಿ ಚಳಿಗಾಲದ ಅವರೆಕಾಯಿಯನ್ನು ಜನ ಇಷ್ಟಪಡುವುದಾಗಿ ಹೇಳುತ್ತಾರೆ ಅವರು.
ಹನೂರು, ಮಲೆಮಹದೇಶ್ವರಬೆಟ್ಟ, ರಾಮಾಪುರ, ಲೊಕ್ಕನಹಳ್ಳಿ ಹಾಗೂ ಕೊಳ್ಳೇಗಾಲ ಭಾಗದಲ್ಲಿ ಅವರೆಕಾಯಿಯನ್ನು ಹೆಚ್ಚು ಬೆಳೆಲಾಗುತ್ತದೆ. ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕುಗಳಲ್ಲೂ ಈ ಬೆಳೆ ಇದ್ದು ಈಗೀಗ ಕೊಯ್ಲಿಗೆ ಬರತೊಡಗಿದೆ. ಅನೇಕ ಕಡೆ ಇನ್ನೂ ಹೂ ಹಂತದಲ್ಲೇ ಇದೆ. ಟಿ.ನರಸೀಪುರ, ಹುಣಸೂರು ಕಡೆಯಿಂದಲೂ ನಗರದ ಮಾರುಕಟ್ಟೆಗೆ ಅವರೆಕಾಯಿ ಬರುತ್ತಿದೆ.
ಸಂಕ್ರಾಂತಿವರೆಗೂ ಅಡುಗೆ ಮನೆಗಳಲ್ಲಿ ಅವರೆಕಾಯಯದೇ ಕಾರುಬಾರು. ಇದು ದೇಹದ ಉಷ್ಣತೆ ಹೆಚ್ಚಿಸಲಿದೆ. ಹೀಗಾಗಿ ಚಳಿಯ ಋತುಮಾನದ ಬೆಳೆಗಳಲ್ಲಿ ಒಂದಾದ ಅವರೆಯನ್ನು ತಿಂಡಿ, ಊಟಕ್ಕೆ ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಲಾಗುತ್ತದೆ ಎಂದು ಪಾಕಪ್ರವೀಣರೊಬ್ಬರು ಮಾಹಿತಿ ನೀಡಿದರು.


ತಳ್ಳುಗಾಡಿಗಳಲ್ಲಿ ಮಾರಾಟ, ಬೇಡಿಕೆ
ಹೊರಗಿನಿಂದ ಮತ್ತು ಸ್ಥಳೀಯವಾಗಿ ಮಾರುಕಟ್ಟೆಗೆ ಬಂದಿರುವ ಅವರೆಕಾಯಿಯನ್ನು ರಸ್ತೆಬದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಯವರು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಷಷ್ಠಿ ಹಬ್ಬದಂದು ಬೆಳಿಗ್ಗೆ ಅವರೆಕಾಯಿ ಉಪ್ಪಿಟ್ಟು, ಕೋಸಂಬರಿ, ಪಂಚಾಮೃತ ಮಾಡಲಾಗುತ್ತದೆ. ಅಲ್ಲದೆ ಅವರೆ ಸಾಂಬಾರು ಮಾಡಿ ಸವಿಯಲಾಗುತ್ತದೆ. ಹೀಗಾಗಿ ಅವರೆಕಾಯಿಗೆ ಬೇಡಿಕೆ ಕಂಡುಬಂದಿತು.


ಜಿಲ್ಲೆಯಲ್ಲಿ ೧೫೧೦ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಅವರೆ ಬೆಳೆ ಬೆಳೆಯಲಾಗಿದ್ದು ಅಲ್ಲಲ್ಲಿ ಈಗ ಕೊಯ್ಲು ಪ್ರಾರಂಭವಾಗಿದೆ. ಕೊಳ್ಳೇಗಾಲ, ಹನೂರು ತಾಲ್ಲೂಕಿನಲ್ಲಿ ಹೆಚ್ಚು ಬೆಳೆ ಇದೆ. ಕಳೆದ ಮುಂಗಾರಿಗೆ ಹೋಲಿಸಿದರೆ ಈ ಬಾರಿ ಅವರೆ ಬೆಳೆ ಜಾಸ್ತಿ ಇದೆ.
-ಕೆ.ಮಧುಸೂದನ್, ಜಂಟಿ ಕೃಷಿ ನಿರ್ದೇಶಕರು.

andolanait

Recent Posts

ಸುವರ್ಣಸೌಧದಲ್ಲಿ ನಾಟಿ ಕೋಳಿ ಬಗ್ಗೆ ಸ್ವಾರಸ್ಯಕರ ಚರ್ಚೆ..!

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನಡುವೆ ನಾಟಿ ಕೋಳಿಯ ಬಗ್ಗೆ ಚರ್ಚೆ…

6 mins ago

ಯುವನಿಧಿ | 2.84 ಲಕ್ಷ ಮಂದಿಗೆ 757 ಕೋಟಿ ರೂ.ಆರ್ಥಿಕ ನೆರವು

ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿಯಡಿ ಇದುವರೆಗೆ 2,84,802 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅವರಿಗೆ…

24 mins ago

ಕೇಬಲ್‌ ಟಿವಿ ಆಪರೇಟರ್‌ ಶುಲ್ಕ ಶೇ.50 ರಷ್ಟು ಕಡಿತ : ಕೆ.ಜೆ.ಜಾರ್ಜ್‌

ಬೆಳಗಾವಿ (ಸುವರ್ಣಸೌಧ) : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೇಬಲ್ ಟಿವಿ ಆಪರೇಟರ್‌ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು…

49 mins ago

ಅನಗತ್ಯ ಸಿಜೇರಿಯನ್‌ ಹೆರಿಗೆ : ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಖಚಿತ

ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…

2 hours ago

ಚಿಕ್ಕಮಗಳೂರಲ್ಲಿ ಮತ್ತೊಮ್ಮೆ ಹೆಲಿ ಟೂರಿಸಂಗೆ ನಿರ್ಧಾರ : ಪರಿಸರ ಸಂಘಟನೆಗಳಿಂದ ತೀವ್ರ ವಿರೋಧ

ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…

2 hours ago

ಇತಿಹಾಸ ತಿರುಚಲು ಮೋದಿ ಯತ್ನ : ಗೌರವ್‌ ಗೊಗೊಯ್‌ ಆರೋಪ

ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…

2 hours ago