ಜಿಲ್ಲೆಗಳು

ಚಾ.ನಗರದಲ್ಲಿ ಸೊನೆ ಅವರೆ ಘಮಘಮ!

ಮಾರುಕಟ್ಟೆಗೆ ಬಂದಿರುವ ಅವರೆ; ಷಷ್ಠಿ ಹಬ್ಬದ ಹಿನ್ನೆಲೆಯಲ್ಲಿ ಕಿಲೋಗೆ 80 ರೂ

ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಜಿಲ್ಲೆಯಲ್ಲಿ ಚುಮು ಚುಮು ಚಳಿಯೊಂದಿಗೆ ಸೊನೆ ಅವರೆಕಾಯಿಯ ಘಮಲೂ ಪ್ರಾರಂಭವಾಗಿ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಾರಂಭಿಸಿದೆ.
ಮಂಗಳವಾರ ಷಷ್ಠಿ ಹಬ್ಬ ಇರುವ ಹಿನ್ನೆಲೆಯಲ್ಲಿ ಹಬ್ಬದ ಮುನ್ನಾದಿನ ನಗರದಲ್ಲಿ ಅವರೆಕಾಯಿ ಕಿಲೋಗೆ ೮೦ರೂ.ಗೆ ಮಾರಾಟವಾಯಿತು. ಜನರ ಪಾಲಿಗೆ ಈ ಬೆಲೆ ತುಟ್ಟಿ! ಅಲ್ಲಲ್ಲಿ ಕೊಯ್ಲು ಶುರುವಾಗಿ ಅವರೆಕಾಯಿ ಈಗಷ್ಟೇ ಮಾರುಕಟ್ಟೆಗೆ ಬರಲಾರಂಭಿಸಿದೆ. ಕೊಯ್ಲು ಸಾರ್ವತ್ರಿಕವಾಗಿ ನಡೆಯತೊಡಗಿ ಎಲ್ಲೆಡೆಯಿಂದ ಅವರೆ ಬರತೊಡಗಿದರೆ ಬೆಲೆ ದುಬಾರಿ ಇರಲ್ಲ. ನವೆಂಬರ್ ಕೊನೆಯಿಂದ ಜನವರಿ ಅಂತ್ಯದವರೆಗೆ ಅವರೆಕಾಯಿ ಸೀಜನ್ ಇರುವುದಾಗಿ ವ್ಯಾಪಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ಮಳೆ ಆಶ್ರಿತ ಖುಷ್ಕಿ ಜಮೀನಿನಲ್ಲಿ ಅಧಿಕವಾಗಿ ಅವರೆ ಬೆಳೆಯಲಾಗುತ್ತದೆ. ನೀರಾವರಿಯಲ್ಲಿ ಬೆಳೆದಿದ್ದಕ್ಕಿಂತ ಖುಷ್ಕಿ ಜಮೀನಿನಲ್ಲಿ ಬೆಳೆದ ಅವರೆೆಯೇ ಹೆಚ್ಚು ಸ್ವಾದಿಷ್ಟ. ಮಂಜಿನ ಹನಿಯಿಂದ ತೊಯ್ದು ಘಮಘಮಿಸುವ ಸೊನೆ ಸೊಗಡಿನ ಅವರೆ ಬಹಳ ರುಚಿಕರವಾಗಿರುತ್ತದೆ. ಯಾವುದರಲ್ಲಿ ಈ ಸೊಗಡು ಇರುವುದಿಲ್ಲವೋ ಅದು ಅಷ್ಟೊಂದು ರುಚಿಯಾಗಿರುವುದಿಲ್ಲ ಎಂದು ಗ್ರಾಹಕ ಮಲ್ಲು ಹೇಳಿದರು.
ಎಲ್ಲಾ ಕಾಲದಲ್ಲಿ ಹೈಬ್ರಿಡ್ ಅವರೆ ಸಿಗುತ್ತದೆ. ಅದರಲ್ಲಿ ಅವರೆ ಪರಿಮಳವೇ ಇರುವುದಿಲ್ಲ. ಹೀಗಾಗಿ ಚಳಿಗಾಲದ ಅವರೆಕಾಯಿಯನ್ನು ಜನ ಇಷ್ಟಪಡುವುದಾಗಿ ಹೇಳುತ್ತಾರೆ ಅವರು.
ಹನೂರು, ಮಲೆಮಹದೇಶ್ವರಬೆಟ್ಟ, ರಾಮಾಪುರ, ಲೊಕ್ಕನಹಳ್ಳಿ ಹಾಗೂ ಕೊಳ್ಳೇಗಾಲ ಭಾಗದಲ್ಲಿ ಅವರೆಕಾಯಿಯನ್ನು ಹೆಚ್ಚು ಬೆಳೆಲಾಗುತ್ತದೆ. ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕುಗಳಲ್ಲೂ ಈ ಬೆಳೆ ಇದ್ದು ಈಗೀಗ ಕೊಯ್ಲಿಗೆ ಬರತೊಡಗಿದೆ. ಅನೇಕ ಕಡೆ ಇನ್ನೂ ಹೂ ಹಂತದಲ್ಲೇ ಇದೆ. ಟಿ.ನರಸೀಪುರ, ಹುಣಸೂರು ಕಡೆಯಿಂದಲೂ ನಗರದ ಮಾರುಕಟ್ಟೆಗೆ ಅವರೆಕಾಯಿ ಬರುತ್ತಿದೆ.
ಸಂಕ್ರಾಂತಿವರೆಗೂ ಅಡುಗೆ ಮನೆಗಳಲ್ಲಿ ಅವರೆಕಾಯಯದೇ ಕಾರುಬಾರು. ಇದು ದೇಹದ ಉಷ್ಣತೆ ಹೆಚ್ಚಿಸಲಿದೆ. ಹೀಗಾಗಿ ಚಳಿಯ ಋತುಮಾನದ ಬೆಳೆಗಳಲ್ಲಿ ಒಂದಾದ ಅವರೆಯನ್ನು ತಿಂಡಿ, ಊಟಕ್ಕೆ ಪ್ರಜ್ಞಾಪೂರ್ವಕವಾಗಿ ಬಳಕೆ ಮಾಡಲಾಗುತ್ತದೆ ಎಂದು ಪಾಕಪ್ರವೀಣರೊಬ್ಬರು ಮಾಹಿತಿ ನೀಡಿದರು.


ತಳ್ಳುಗಾಡಿಗಳಲ್ಲಿ ಮಾರಾಟ, ಬೇಡಿಕೆ
ಹೊರಗಿನಿಂದ ಮತ್ತು ಸ್ಥಳೀಯವಾಗಿ ಮಾರುಕಟ್ಟೆಗೆ ಬಂದಿರುವ ಅವರೆಕಾಯಿಯನ್ನು ರಸ್ತೆಬದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಯವರು ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಷಷ್ಠಿ ಹಬ್ಬದಂದು ಬೆಳಿಗ್ಗೆ ಅವರೆಕಾಯಿ ಉಪ್ಪಿಟ್ಟು, ಕೋಸಂಬರಿ, ಪಂಚಾಮೃತ ಮಾಡಲಾಗುತ್ತದೆ. ಅಲ್ಲದೆ ಅವರೆ ಸಾಂಬಾರು ಮಾಡಿ ಸವಿಯಲಾಗುತ್ತದೆ. ಹೀಗಾಗಿ ಅವರೆಕಾಯಿಗೆ ಬೇಡಿಕೆ ಕಂಡುಬಂದಿತು.


ಜಿಲ್ಲೆಯಲ್ಲಿ ೧೫೧೦ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಅವರೆ ಬೆಳೆ ಬೆಳೆಯಲಾಗಿದ್ದು ಅಲ್ಲಲ್ಲಿ ಈಗ ಕೊಯ್ಲು ಪ್ರಾರಂಭವಾಗಿದೆ. ಕೊಳ್ಳೇಗಾಲ, ಹನೂರು ತಾಲ್ಲೂಕಿನಲ್ಲಿ ಹೆಚ್ಚು ಬೆಳೆ ಇದೆ. ಕಳೆದ ಮುಂಗಾರಿಗೆ ಹೋಲಿಸಿದರೆ ಈ ಬಾರಿ ಅವರೆ ಬೆಳೆ ಜಾಸ್ತಿ ಇದೆ.
-ಕೆ.ಮಧುಸೂದನ್, ಜಂಟಿ ಕೃಷಿ ನಿರ್ದೇಶಕರು.

andolanait

Recent Posts

ಜೆಫ್ರಿ ಜತೆ ಸಂಪರ್ಕ : ಬ್ರಿಟನ್‌ ಮಾಜಿ ರಾಜಕುಮಾರ ಆ್ಯಂಡ್ರೂ ಬಂಧನ

ಲಂಡನ್ : ಬ್ರಿಟನ್ ಮಾಜಿ ರಾಜಕುಮಾರ ಆ್ಯಂಡ್ರೂ ಮೌಂಟ್‌ಬ್ಯಾಟನ್-ವಿಂಡ್ಸರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಲೈಂಗಿಕ ಅಪರಾಧಿ…

31 mins ago

ಕೂಡುಮಂಗಳೂರು | ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಅಪಘಾತ : ಸವಾರ ಸಾವು, ಪತ್ನಿ ಗಂಭೀರ

ಕೊಡಗು : ವಾಹನ ತಪಾಸಣೆ (ಚೆಕಿಂಗ್) ನಡೆಸುತ್ತಿದ್ದ ಪೊಲೀಸರನ್ನು ಕಂಡು ಗಾಬರಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ,…

46 mins ago

ಸಫಾರಿ ಪುನರಾರಂಭ : ಮೈಸೂರು ಅರಣ್ಯಭವನಕ್ಕೆ ರೈತ ಮುಖಂಡರ ಮುತ್ತಿಗೆ

ಮೈಸೂರು : ನಾಗರಹೊಳೆ ಮತ್ತು ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನರಾರಂಭಿಸಿರುವುದನ್ನು ಖಂಡಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ನಗರದ ಅಶೋಕಪುರಂನಲ್ಲಿರುವ…

1 hour ago

32 ಕ್ಷೇತ್ರಗಳ ಟಾರ್ಗೆಟ್‌: ನಿಖಿಲ್‌ ಕುಮಾರಸ್ವಾಮಿ ರಾಜ್ಯ ಪ್ರವಾಸ

ಬೆಂಗಳೂರು: ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು 2ನೇ ಹಂತದ…

3 hours ago

1.60 ಕೋಟಿ ಲಂಚ ಪಡೆದು ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಬಡ್ತಿ: ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಬೆಂಗಳೂರು: ಮೈಸೂರು ಮುಡಾ ಹಗರಣದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಗಂಭೀರ ಆರೋಪ ಮಾಡಿದ್ದಲ್ಲದೇ ದಾಖಲೆಗಳನ್ನು ಬಿಡುಗಡೆ…

3 hours ago

ಫೆಬ್ರವರಿ.25ರಂದು ಅಜ್ಜಿಪುರ ಗ್ರಾಮದಿಂದ ವಿಧಾನಸೌಧದವರೆಗೆ ಪಾದಯಾತ್ರೆ: ಬಡಗಲಪುರ ನಾಗೇಂದ್ರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಹನೂರು ಭಾಗದ ಉಡುತೊರೆ ಹಳ್ಳ ಜಲಾಶಯ ಸೇರಿದಂತೆ ಪ್ರಮುಖ ಕೆರೆಗಳಿಗೆ…

3 hours ago