ಜಿಲ್ಲೆಗಳು

ಚಾ.ನಗರ: ಪಟಾಕಿ ಶಬ್ದ ಹಿಂದಿಗಿಂತ 8 ಡೆಸಿಬಲ್ ಜಾಸ್ತಿ!

ಬಲಿ ಪಾಡ್ಯಮಿಗಿಂತ ನರಕ ಚತುರ್ದಶಿಯಂದೇ ಹೆಚ್ಚು ಸದ್ದು….

ಚಾಮರಾಜನಗರ: ನಗರದಲ್ಲಿ ದೀಪಾವಳಿ ಪಟಾಕಿ ಶಬ್ದ ಕಳೆದ ವರ್ಷಕ್ಕಿಂತ ಈ ಬಾರಿ ಜೋರಾಗಿದ್ದರಿಂದ ಸಹಜವಾಗಿಯೇ ಶಬ್ದಮಾಲಿನ್ಯ ಪ್ರಮಾಣ ಹಿಂದಿಗಿoತ ಸರಾಸರಿ ೮ ಡೆಸಿಬಲ್ನಷ್ಟು ಜಾಸ್ತಿಯಾಗಿದೆ!
ದೀಪಾವಳಿಯನ್ನು ಎಂದಿನoತೆ ೩ದಿನಗಳ ಕಾಲ ಆಚರಣೆ ಮಾಡಲಾಗಿದ್ದು ಈ ಪೈಕಿ ನರಕ ಚತುರ್ದಶಿಯಂದು(ಅ.೨೪)ಪಟಾಕಿ ಆರ್ಭಟ ಜೋರಾಗಿ ಆ ದಿನ ಶಬ್ದಮಾಲಿನ್ಯ ಪ್ರಮಾಣ ೭೧.೫ಡೆಸಿಬಲ್ ದಾಖಲಾಗಿದೆ.

ಹಬ್ಬದ ೨ನೇ ದಿನವಾದ ಅ.೨೫ರ ಅಮಾವಾಸ್ಯೆಯಂದು ಸೂರ್ಯಗ್ರಹಣ ಇದ್ದ ಕಾರಣದಿಂದಲೋ ಏನೋ ಪಟಾಕಿ ಸದ್ದು ಅಷ್ಟಾಗಿ ಮೊಳಗಿಲ್ಲ. ಹೀಗಾಗಿ ಆ ದಿನ ೬೧.೭ಡೆಸಿಬಲ್
ಶಬ್ದವಿತ್ತು. ಇದು ದೀಪಾವಳಿಗೆ ಮುಂಚಿನ (ಅ.೧೮) ಶಬ್ದಮಾಲಿನ್ಯಕ್ಕೆ ಸಮನಾಗಿದೆ.
ಇನ್ನು ಬಲಿಪಾಡ್ಯಮಿಯಂದು ಶಬ್ದಮಾಲಿನ್ಯ ಸರಾಸರಿ
೬೬.೧ಡೆಸಿಬಲ್ ಕಂಡುಬoದಿದೆ. ಈ ಪ್ರಕಾರ ಬಲಿಪಾಡ್ಯಮಿಗಿಂತ ನರಕಚತುರ್ದಶಿಯಂದೇ
ಪಟಾಕಿ ಮೊರೆತ ಹೆಚ್ಚಾಗಿರುವುದು ಗಮನಾರ್ಹ.

ಕಳೆದ ವರ್ಷ ಬಲಿಪಾಡ್ಯಮಿ ನ.೩ರಂದು ನಡೆದಿತ್ತು. ಆಗ ಶಬ್ದಮಾಲಿನ್ಯ ೫೮.೦೪ ಡೆಸಿಬಲ್ ದಾಖಲಾಗಿತ್ತು. ಆವಾಗ ಕೋವಿಡ್ ಹಿನ್ನೆಲೆಯಲ್ಲಿ ಪಟಾಕಿ ಬಳಕೆ ಕಡಿಮೆ ಕಾರಣ ದೀಪಾವಳಿಗೆ ಮುಂಚಿನ ಶಬ್ದಮಾಲಿನ್ಯಕ್ಕಿಂತ  ೧.೧೦ಡೆಸಿಬಲ್ನಷ್ಟು ಶಬ್ದಮಾಲಿನ್ಯ ಮಾತ್ರ ಜಾಸ್ತಿಕಂಡುಬoದಿತ್ತು.
ಕರ್ನಾಟಕ ರಾಜ್ಯಮಾಲಿನ್ಯ
ನಿಯಂತ್ರಣಮoಡಳಿ ಕಚೇರಿ ಚಾ.ನಗರದ ವಾಣಿಯಾರ್ ಸ್ಟಿoಟ್ ಎಸ್ಪಿಎಸ್ ಕಾಂಪ್ಲೆಕ್ಸ್ನಲ್ಲಿ
ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಸಂಜೆ ೬ರಿಂದ ರಾತ್ರಿ ೧೨ರ ತನಕ ದೀಪಾವಳಿ ಸಂದರ್ಭ ಶಬ್ದದ ಗುಣಮಟ್ಟ ಮಾಪನಯಂತ್ರ ಇರಿಸಲಾಗಿತ್ತು. ಈ ಕಚೇರಿ ವ್ಯಾಪ್ತಿಯಲ್ಲಿ ದಾಖಲಾಗಿರುವ ಶಬ್ದಮಾಲಿನ್ಯದ ಪ್ರಮಾಣ
ಇದಾಗಿದೆ.

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

15 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

19 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

19 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

19 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

19 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

19 hours ago