ಜಿಲ್ಲೆಗಳು

ಚಾ.ನಗರ: ಪಟಾಕಿ ಶಬ್ದ ಹಿಂದಿಗಿಂತ 8 ಡೆಸಿಬಲ್ ಜಾಸ್ತಿ!

ಬಲಿ ಪಾಡ್ಯಮಿಗಿಂತ ನರಕ ಚತುರ್ದಶಿಯಂದೇ ಹೆಚ್ಚು ಸದ್ದು….

ಚಾಮರಾಜನಗರ: ನಗರದಲ್ಲಿ ದೀಪಾವಳಿ ಪಟಾಕಿ ಶಬ್ದ ಕಳೆದ ವರ್ಷಕ್ಕಿಂತ ಈ ಬಾರಿ ಜೋರಾಗಿದ್ದರಿಂದ ಸಹಜವಾಗಿಯೇ ಶಬ್ದಮಾಲಿನ್ಯ ಪ್ರಮಾಣ ಹಿಂದಿಗಿoತ ಸರಾಸರಿ ೮ ಡೆಸಿಬಲ್ನಷ್ಟು ಜಾಸ್ತಿಯಾಗಿದೆ!
ದೀಪಾವಳಿಯನ್ನು ಎಂದಿನoತೆ ೩ದಿನಗಳ ಕಾಲ ಆಚರಣೆ ಮಾಡಲಾಗಿದ್ದು ಈ ಪೈಕಿ ನರಕ ಚತುರ್ದಶಿಯಂದು(ಅ.೨೪)ಪಟಾಕಿ ಆರ್ಭಟ ಜೋರಾಗಿ ಆ ದಿನ ಶಬ್ದಮಾಲಿನ್ಯ ಪ್ರಮಾಣ ೭೧.೫ಡೆಸಿಬಲ್ ದಾಖಲಾಗಿದೆ.

ಹಬ್ಬದ ೨ನೇ ದಿನವಾದ ಅ.೨೫ರ ಅಮಾವಾಸ್ಯೆಯಂದು ಸೂರ್ಯಗ್ರಹಣ ಇದ್ದ ಕಾರಣದಿಂದಲೋ ಏನೋ ಪಟಾಕಿ ಸದ್ದು ಅಷ್ಟಾಗಿ ಮೊಳಗಿಲ್ಲ. ಹೀಗಾಗಿ ಆ ದಿನ ೬೧.೭ಡೆಸಿಬಲ್
ಶಬ್ದವಿತ್ತು. ಇದು ದೀಪಾವಳಿಗೆ ಮುಂಚಿನ (ಅ.೧೮) ಶಬ್ದಮಾಲಿನ್ಯಕ್ಕೆ ಸಮನಾಗಿದೆ.
ಇನ್ನು ಬಲಿಪಾಡ್ಯಮಿಯಂದು ಶಬ್ದಮಾಲಿನ್ಯ ಸರಾಸರಿ
೬೬.೧ಡೆಸಿಬಲ್ ಕಂಡುಬoದಿದೆ. ಈ ಪ್ರಕಾರ ಬಲಿಪಾಡ್ಯಮಿಗಿಂತ ನರಕಚತುರ್ದಶಿಯಂದೇ
ಪಟಾಕಿ ಮೊರೆತ ಹೆಚ್ಚಾಗಿರುವುದು ಗಮನಾರ್ಹ.

ಕಳೆದ ವರ್ಷ ಬಲಿಪಾಡ್ಯಮಿ ನ.೩ರಂದು ನಡೆದಿತ್ತು. ಆಗ ಶಬ್ದಮಾಲಿನ್ಯ ೫೮.೦೪ ಡೆಸಿಬಲ್ ದಾಖಲಾಗಿತ್ತು. ಆವಾಗ ಕೋವಿಡ್ ಹಿನ್ನೆಲೆಯಲ್ಲಿ ಪಟಾಕಿ ಬಳಕೆ ಕಡಿಮೆ ಕಾರಣ ದೀಪಾವಳಿಗೆ ಮುಂಚಿನ ಶಬ್ದಮಾಲಿನ್ಯಕ್ಕಿಂತ  ೧.೧೦ಡೆಸಿಬಲ್ನಷ್ಟು ಶಬ್ದಮಾಲಿನ್ಯ ಮಾತ್ರ ಜಾಸ್ತಿಕಂಡುಬoದಿತ್ತು.
ಕರ್ನಾಟಕ ರಾಜ್ಯಮಾಲಿನ್ಯ
ನಿಯಂತ್ರಣಮoಡಳಿ ಕಚೇರಿ ಚಾ.ನಗರದ ವಾಣಿಯಾರ್ ಸ್ಟಿoಟ್ ಎಸ್ಪಿಎಸ್ ಕಾಂಪ್ಲೆಕ್ಸ್ನಲ್ಲಿ
ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಸಂಜೆ ೬ರಿಂದ ರಾತ್ರಿ ೧೨ರ ತನಕ ದೀಪಾವಳಿ ಸಂದರ್ಭ ಶಬ್ದದ ಗುಣಮಟ್ಟ ಮಾಪನಯಂತ್ರ ಇರಿಸಲಾಗಿತ್ತು. ಈ ಕಚೇರಿ ವ್ಯಾಪ್ತಿಯಲ್ಲಿ ದಾಖಲಾಗಿರುವ ಶಬ್ದಮಾಲಿನ್ಯದ ಪ್ರಮಾಣ
ಇದಾಗಿದೆ.

andolanait

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

11 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

11 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

11 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

11 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

11 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

11 hours ago