ಜಿಲ್ಲೆಗಳು

ಚಾ.ನಗರ: ಪಟಾಕಿ ಶಬ್ದ ಹಿಂದಿಗಿಂತ 8 ಡೆಸಿಬಲ್ ಜಾಸ್ತಿ!

ಬಲಿ ಪಾಡ್ಯಮಿಗಿಂತ ನರಕ ಚತುರ್ದಶಿಯಂದೇ ಹೆಚ್ಚು ಸದ್ದು….

ಚಾಮರಾಜನಗರ: ನಗರದಲ್ಲಿ ದೀಪಾವಳಿ ಪಟಾಕಿ ಶಬ್ದ ಕಳೆದ ವರ್ಷಕ್ಕಿಂತ ಈ ಬಾರಿ ಜೋರಾಗಿದ್ದರಿಂದ ಸಹಜವಾಗಿಯೇ ಶಬ್ದಮಾಲಿನ್ಯ ಪ್ರಮಾಣ ಹಿಂದಿಗಿoತ ಸರಾಸರಿ ೮ ಡೆಸಿಬಲ್ನಷ್ಟು ಜಾಸ್ತಿಯಾಗಿದೆ!
ದೀಪಾವಳಿಯನ್ನು ಎಂದಿನoತೆ ೩ದಿನಗಳ ಕಾಲ ಆಚರಣೆ ಮಾಡಲಾಗಿದ್ದು ಈ ಪೈಕಿ ನರಕ ಚತುರ್ದಶಿಯಂದು(ಅ.೨೪)ಪಟಾಕಿ ಆರ್ಭಟ ಜೋರಾಗಿ ಆ ದಿನ ಶಬ್ದಮಾಲಿನ್ಯ ಪ್ರಮಾಣ ೭೧.೫ಡೆಸಿಬಲ್ ದಾಖಲಾಗಿದೆ.

ಹಬ್ಬದ ೨ನೇ ದಿನವಾದ ಅ.೨೫ರ ಅಮಾವಾಸ್ಯೆಯಂದು ಸೂರ್ಯಗ್ರಹಣ ಇದ್ದ ಕಾರಣದಿಂದಲೋ ಏನೋ ಪಟಾಕಿ ಸದ್ದು ಅಷ್ಟಾಗಿ ಮೊಳಗಿಲ್ಲ. ಹೀಗಾಗಿ ಆ ದಿನ ೬೧.೭ಡೆಸಿಬಲ್
ಶಬ್ದವಿತ್ತು. ಇದು ದೀಪಾವಳಿಗೆ ಮುಂಚಿನ (ಅ.೧೮) ಶಬ್ದಮಾಲಿನ್ಯಕ್ಕೆ ಸಮನಾಗಿದೆ.
ಇನ್ನು ಬಲಿಪಾಡ್ಯಮಿಯಂದು ಶಬ್ದಮಾಲಿನ್ಯ ಸರಾಸರಿ
೬೬.೧ಡೆಸಿಬಲ್ ಕಂಡುಬoದಿದೆ. ಈ ಪ್ರಕಾರ ಬಲಿಪಾಡ್ಯಮಿಗಿಂತ ನರಕಚತುರ್ದಶಿಯಂದೇ
ಪಟಾಕಿ ಮೊರೆತ ಹೆಚ್ಚಾಗಿರುವುದು ಗಮನಾರ್ಹ.

ಕಳೆದ ವರ್ಷ ಬಲಿಪಾಡ್ಯಮಿ ನ.೩ರಂದು ನಡೆದಿತ್ತು. ಆಗ ಶಬ್ದಮಾಲಿನ್ಯ ೫೮.೦೪ ಡೆಸಿಬಲ್ ದಾಖಲಾಗಿತ್ತು. ಆವಾಗ ಕೋವಿಡ್ ಹಿನ್ನೆಲೆಯಲ್ಲಿ ಪಟಾಕಿ ಬಳಕೆ ಕಡಿಮೆ ಕಾರಣ ದೀಪಾವಳಿಗೆ ಮುಂಚಿನ ಶಬ್ದಮಾಲಿನ್ಯಕ್ಕಿಂತ  ೧.೧೦ಡೆಸಿಬಲ್ನಷ್ಟು ಶಬ್ದಮಾಲಿನ್ಯ ಮಾತ್ರ ಜಾಸ್ತಿಕಂಡುಬoದಿತ್ತು.
ಕರ್ನಾಟಕ ರಾಜ್ಯಮಾಲಿನ್ಯ
ನಿಯಂತ್ರಣಮoಡಳಿ ಕಚೇರಿ ಚಾ.ನಗರದ ವಾಣಿಯಾರ್ ಸ್ಟಿoಟ್ ಎಸ್ಪಿಎಸ್ ಕಾಂಪ್ಲೆಕ್ಸ್ನಲ್ಲಿ
ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ಸಂಜೆ ೬ರಿಂದ ರಾತ್ರಿ ೧೨ರ ತನಕ ದೀಪಾವಳಿ ಸಂದರ್ಭ ಶಬ್ದದ ಗುಣಮಟ್ಟ ಮಾಪನಯಂತ್ರ ಇರಿಸಲಾಗಿತ್ತು. ಈ ಕಚೇರಿ ವ್ಯಾಪ್ತಿಯಲ್ಲಿ ದಾಖಲಾಗಿರುವ ಶಬ್ದಮಾಲಿನ್ಯದ ಪ್ರಮಾಣ
ಇದಾಗಿದೆ.

andolanait

Recent Posts

ಮುಡಾ ಕಚೇರಿಯಲ್ಲಿ ಇಂದು ಕೂಡ ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಇಂದು ಕೂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು, ಸಾರ್ವಜನಿಕರ ಕೆಲಸಗಳಿಗೆ ಬ್ರೇಕ್‌ ಹಾಕಲಾಗಿದೆ.…

8 mins ago

ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮೈಸೂರು: ಕಾನೂನು ಬಾಹಿರವಾಗಿ ಸಿ.ಎ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ರಘು ಕೌಟಿಲ್ಯ ವಿರುದ್ಧ ನಾಗೇಂದ್ರ ಎಂಬುವವರು…

30 mins ago

ಕಪಿಲಾ ನದಿಗೆ ಮತ್ತೊಂದು ಸೇತುವೆ

ನಂಜನಗೂಡು: ವರುಣ ಕ್ಷೇತ್ರ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರವನ್ನು ಸಂಪರ್ಕಿಸಲು ಕಪಿಲಾ ನದಿಗೆ ಮತ್ತೊಂದು ಸೇತುವೆ ಮಂಜೂರಾಗಿದೆ. ತಾಲ್ಲೂಕಿನ ನಂಜನಗೂಡು-ಹುಲ್ಲಹಳ್ಳಿ…

54 mins ago

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸಂಕಷ್ಟ

ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ ಎಂಬ ಮಾಹಿತಿ…

58 mins ago

ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮೈಸೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ಕೋರ್ಸ್‌ಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ…

1 hour ago

ನಿಜ್ಜರ್ ಹತ್ಯೆ ಪ್ರತಿಧ್ವನಿ-ಕೆನಡಾ ಭಾರತೀಯರಲ್ಲಿ ಆತಂಕ

ಅಮಿತ್ ಶಾ, ಅಜಿತ್‌ ದೋವಲ್ ಮೇಲೆಯೂ ಆರೋಪ ಡಿ.ವಿ.ರಾಜಶೇಖರ ಖಾಲಿಸ್ತಾನ್ ಉಗ್ರವಾದಿ ನಾಯಕ ಹರದೀಪ್‌ ಸಿಂಗ್ ನಿಜ್ಜರ್ ಹತ್ಯೆಯ ನಂತರದ…

1 hour ago