ಜಿಲ್ಲೆಗಳು

ಗ್ರಾಮಕ್ಕೆ ಲಗ್ಗೆ ಇಟ್ಟ ಆನೆ ಹಿಂಡು: ರೈತರು ಕಂಗಾಲು

ಚಾ. ನಗರದ ಅರಕಲವಾಡಿ ,ಲಿಂಗನಪುರದಲ್ಲಿ ಆನೆ ದಾಳಿಗೆ ಬೆಳೆ, ಫಸಲು ನಾಶ
ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ, ಲಿಂಗನಪುರದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಹಿಂಡು ಹಿಂಡಾಗಿ ರೈತರ ಜಮೀನುಗಳಿಗೆ ನುಗ್ಗಿ ಬಾಳೆ, ಮುಸುಕಿನ ಜೋಳ ಹಾಗೂ ತೆಂಗಿನ ಸಸಿಗಳನ್ನು ತಿಂದು ತುಳಿದು ಹಾಳು ಮಾಡಿವೆ.


ಅರಕಲವಾಡಿ ಹನುಮಯ್ಯ ಅವರಿಗೆ ಸೇರಿದ 800 ಬಾಳೆಗಿಡಗಳು ಆನೆ ದಾಳಿಗೆ ಸಿಲುಕಿ ನೆಲಕಚ್ಚಿದೆ. 1ಎಕರೆಯಲ್ಲಿ ಹಾಕಿದ್ದ ಮೂರ್ನಾಲ್ಕು ತಿಂಗಳ ಅವಧಿಯ ಬಾಳೆಯನ್ನು ಸಂಪೂರ್ಣ ಮೇಯ್ದು ಲದ್ದಿ ಹಾಕಿ ಅಡ್ಡಾಡಿವೆ. ಇದೇ ರೀತಿ ತೆಂಗಿನ ಸಸಿಗಳನ್ನು ಕಿತ್ತುಹಾಕಿವೆ. ಕೊಯ್ಲಿಗೆ ಬಂದ ಮುಸುಕಿನ ಜೋಳವನ್ನೂ ನಾಮಾವಶೇಷ ಮಾಡಿವೆ ಎಂದು ರೈತ ಹನುಮಯ್ಯ ಆಂದೋಲನದ ಜತೆ ದು:ಖ ತೋಡಿಕೊಂಡರು.
ಅರಕಲವಾಡಿ ಪಕ್ಕದ ಲಿಂಗನಪುರದಲ್ಲಿ ರಾಮಣ್ಣ ಎಂಬುವರಿಗೆ ಸೇರಿದ 2 ಎಕರೆ ಮುಸುಕಿನ ಜೋಳವನ್ನು ಆನೆಗಳು ಮೇಯ್ದು ಇನ್ನಿಲ್ಲದಂತೆ ಮಾಡಿವೆ.ಇದೇ ರೀತಿ ಸುತ್ತ ಮುತ್ತಲ ರೈತರ ಬೆಳೆಗಳ ಮೇಲೆ ಅಡ್ಡಾಡಿ ಹೋಗಿವೆ.
ತಮಿಳುನಾಡಿನ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಅರಕಲವಾಡಿ ಗ್ರಾಮವಿದ್ಧುಈ ಗ್ರಾಮ ಕೊಂಗಳ್ಳಿಬೆಟ್ಟಕ್ಕೆ
ಸನಿಹದಲ್ಲಿದೆ. ತಮಿಳುನಾಡು ಕಡೆಯಿಂದ ಸುಮಾರು 50 ಆನೆಗಳು ಮಂಗಳವಾರ ರಾತ್ರಿ ಹಿಂಡಾಗಿ ಬಂದು ಬೆಳೆ ನಾಶ ಮಾಡಿವೆ. ಜಮೀನಿನಲ್ಲೇ ವಾಸ ಮಾಡುವ ನಮಗೆ ಭಯ ಆಗುತ್ತಿದೆ ಎಂದು ಅರಕಲವಾಡಿ ರೈತ ಹನುಮಯ್ಯ ಅತಂಕ ತೋಡಿಕೊಂಡಿದ್ದಾರೆ.

ಮೂರು ಗುಂಪಾಗಿವೆ ಆನೆಗಳ ಹಿಂಡು..
ತಮಿಳುನಾಡಿನ ಸತ್ಯಮಂಗಲ ಅರಣ್ಯದ ಜೀರಗಹಳ್ಳಿವಲಯದಿಂದ ಅರಳವಾಡಿ ಮಾರ್ಗ ವಾಗಿ ಅರಕಲವಾಡಿಗೆ ಬಂದಿದ್ದ ಹಿಂಡು ಆನೆಗಳನ್ನು ಓಡಿಸುವ ಸಂದರ್ಭ ದಲ್ಲಿ ಆನೆಗಳು 3ಗುಂಪುಗಳಾಗಿದ್ದು ಅದರಲ್ಲಿ ಆರು
ಅರಕಲವಾಡಿಯಲ್ಲಿಯೇ ಬೀಡು ಬಿಟ್ಟಿದ್ದವು. ಆನೆಗಳು ಹೋದ ಕಡೆಯಲ್ಲೆಲ್ಲಾ ಗಾಳಿಯಲ್ಲಿ ಗುಂಡು ಹಾರಿಸಿ ಪಟಾಕಿ ಸಿಡಿಸಿ ಓಡಿಸ ಲಾಯಿತು. ಕೆ.ಗುಡಿ, ಪುಣಜನೂರು, ನಗರ ಸೇರಿದಂತೆ ಮೂರೂ ವಲಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆನೆಗಳನ್ನು ಬೆನ್ನತ್ತಿದ್ದರು. ಎಸಿಎಫ್ ಸುರೇಶ್, ಆರ್ ಎಫ್ ಒ ವಿನೋದ್ ಗೌಡ ಒಳಗೊಂಡಂತೆ ಆರ್ ಆರ್ ಟಿ ತಂಡ,ವಾಚರ್ ಮತ್ತು ಗಾರ್ಡ್ ಗಳು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.
ಆನೆಗಳನ್ನು ನಮ್ಮ ಸಿಬ್ಬಂದಿ ಕಾಡಿಗೆ ಅಟ್ಟುವಲ್ಲಿ ನಿರತರಾಗಿದ್ದಾರೆ. ಸಂಜೆಯಾದರೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಬಿ ಆರ್ ಟಿ. ಟೈಗರ್‌ ಪ್ರಾಜೆಕ್ಟ್ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ತಿಳಿಸಿದ್ದಾರೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago