ಜಿಲ್ಲೆಗಳು

ವಿದ್ಯಾರಣ್ಯರು ವಿಭೂತಿ ಪುರುಷರು: ಸಿ.ಪಿ.ಕೃಷ್ಣಕುಮಾರ್

ಮೈಸೂರು: ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದ ವಿದ್ಯಾರಣ್ಯರು ಆದರ್ಶಪ್ರಾಯರು. ಅವರು ವಿಭೂತಿ ಪುರುಷರು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬಣ್ಣಿಸಿದರು.
ಹಿಮಾಲಯ ಪ್ರತಿಷ್ಠಾನವು ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರಣ್ಯರ ವ್ಯಕ್ತಿತ್ವ ಲೋಕೋತ್ತರವಾದುದು. ಧ್ರುವ ನಕ್ಷತ್ರದಂತೆ ಬೆಳಗಿದವರು. ಅವರ ಆದರ್ಶವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್ ಮಾತನಾಡಿ, ವಿದ್ಯಾರಣ್ಯರು ಒಳ್ಳೆಯ ನಾಡನ್ನು ಕಟ್ಟಿದ್ದಾರೆ. ನಾವು ಅದೇ ರೀತಿ ಉತ್ತಮ ಸಮಾಜವನ್ನು ಕಟ್ಟೋಣ, ಕೆಟ್ಟದ್ದನ್ನು ಮನೆಯಲ್ಲಿಯೇ ಬಿಡೋಣ ಎಂದು ಮನವಿ ,ಮಾಡಿದರು.
ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಕೆ.ಗುರುಪಾದ ಹೆಗಡೆ(ವಿದ್ವತ್ತು), ಆರ್.ವೆಂಕಟೇಶ್(ಕಲೆ), ಡಾ.ಗೀತಾ ಅವಧಾನಿ(ವೈದ್ಯಕೀಯ), ವಸಂತ ವೆಂಕಟೇಶ್(ಮುಕ್ತಕ ಸಾಹಿತ್ಯ), ಕೆ.ಲಕ್ಷ್ಮೀ(ಸಾಹಿತ್ಯ), ಅಂಶಿ ಪ್ರಸನ್ನಕುಮಾರ್(ಪತ್ರಿಕಾರಂಗ), ಡಾ.ಪಿ.ಎನ್.ಗಣೇಶ್‌ಕುಮಾರ್(ಯೋಗ), ಕೆ.ದಶರಥ(ಸಮಾಜ ಸೇವೆ) ಹಾಗೂ ಚಂದನ್‌ಗೌಡ(ಮಣ್ಣಿನ ಸೇವೆ) ಅವರಿಗೆ ‘ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಅರ್ಕಧಾಮದ ಸಂಸ್ಥಾಪಕ ಶ್ರೀನಿವಾಸ ಅರ್ಕ ಅವರು ಕಮಲಾ ರಾಜೇಶ್ ಅವರ ‘ಶ್ರೀನಿವಾಸ ಕಲ್ಯಾಣ’ ಕೃತಿ ಬಿಡುಗಡೆ ಮಾಡಿದರು. ಕೃತಿ ಕುರಿತು ರಾಜ್ಯ ಮುಕ್ತಕ ಕವಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಎಂ.ಮುತ್ತುಸ್ವಾಮಿ ಮಾತನಾಡಿದರು. ಸಮಾಜ ಸೇವಕ ಕೆ.ರಘುರಾಂ, ವಾಣಿ ವಿಲಾಸ ನೀರು ಸರಬರಾಜು ಕಾರ್ಯಗಾರದ ಕಾರ್ಯಪಾಲಕ ಇಂಜಿನಿಯರ್ ಡಿ. ಅಶ್ವಿನ್, ಕೆಎಸ್‌ಆರ್‌ಟಿಸಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಟಿ.ಬಸವರಾಜು, ಉದ್ಯಮಿ ಎಂ.ಆರ್.ರಾಹುಲ್ ಹಾಜರಿದ್ದರು. ಹಿವಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ ಸ್ವಾಗತಿಸಿದರು. ಕಾರ್ಯದರ್ಶಿ ಉಮಾಶಂಕರ್ ಅಯ್ಯು ನಿರೂಪಿಸಿದರು. ಉಪಾಧ್ಯಕ್ಷ ಬಿ. ಉಮೇಶ್ ಮೊದಲಾದವರು ಇದ್ದರು. ತನಿಷಾ, ತ್ರಿಶಾಂಕ್ ಪ್ರಾರ್ಥಿಸಿದರು.

andolanait

Recent Posts

ಭಾರತವನ್ನು ನರಕಕೂಪ ಎಂದು ಹೀಯಾಳಿಸಿದ ಡೊನಾಲ್ಡ್ ಟ್ರಂಪ್‌: ವಿದೇಶಾಂಗ ಇಲಾಖೆ ಕಿಡಿ

ನವದೆಹಲಿ: ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತವನ್ನು ನರಕಕೂಪ ಎಂದು ಉಲ್ಲೇಖಿಸಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ…

13 mins ago

ಕಾಂತಾರ ಮಿಮಿಕ್ರಿ ವಿವಾದ: ತಿಂಗಳೊಳಗೆ ಚಾಮುಂಡಿ ಬೆಟ್ಟಕ್ಕೆ ರಣವೀರ್‌ ಭೇಟಿಗೆ ಕೋರ್ಟ್‌ ಸೂಚನೆ

ಬೆಂಗಳೂರು: ಕಾಂತಾರ ಚಾಪ್ಟರ್-‌1 ಚಿತ್ರದ ದೈವಪಾತ್ರವನ್ನು ಮಿಮಿಕ್ರಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಒಂದು ತಿಂಗಳೊಳಗೆ…

32 mins ago

ಬಿಜೆಪಿ ಸೇರಿದ 7 ಬಂಡಾಯ ಸಂಸದರನ್ನು ಅನರ್ಹಗೊಳಿಸಿ: ಉಪರಾಷ್ಟ್ರಪತಿಗೆ ಎಎಪಿ ಪತ್ರ: ಸಂಜಯ್‌ ಸಿಂಗ್‌ ಮಾಹಿತಿ

ನವದೆಹಲಿ: ಏಳು ರಾಜ್ಯಸಭಾ ಸಂಸದರು ಪಕ್ಷವನ್ನು ತೊರೆದು ಬಿಜೆಪಿ ಸೇರುವ ನಿರ್ಧಾರವನ್ನು ಆಮ್‌ ಆದ್ಮಿ ಪಕ್ಷ ಸಂವಿಧಾನಬಾಹಿರ ಎಂದು ಕರೆದಿದೆ.…

54 mins ago

ಸಚಿವ ಸುಧಾಕರ್‌ಗೆ ಇನ್ನೂ ಪ್ರಜ್ಞೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯದ ಯೋಜನೆ ಮತ್ತು ಸಾಂಖ್ಯಿತ ಇಲಾಖೆ ಸಚಿವ…

1 hour ago

ಹಕ್ಕಿಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ

ಬೆಂಗಳೂರು: ಹಕ್ಕಿಜ್ವರ ನಿಯಂತ್ರಣದ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಕೋಳಿ, ಮಾಂಸ ಮತ್ತು ಮೊಟ್ಟೆಗಳನ್ನು…

1 hour ago

ಕಾಂಗ್ರೆಸ್‌ನಲ್ಲಿ 100ಕ್ಕೆ 100 ಗೊಂದಲ ಇರುವುದು ನಿಜ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್‌ನಲ್ಲಿ 100ಕ್ಕೆ 100 ಗೊಂದಲ ಇರುವುದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ಉಪಾಚುನಾವಣೆಯಲ್ಲಿ…

2 hours ago