ಜಿಲ್ಲೆಗಳು

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ : ಕಾಡುಪ್ರಾಣಿಗಳ ದಾಳಿ ತಡೆಗೆ ಕ್ಷಿಪ್ರ ಕಾರ್ಯಪಡೆ

* ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ
* ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮುನ್ನೇಚ್ಚರಿಕೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಆರ್‌ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕ್ಷಿಪ್ರ ಕಾರ್ಯಾಪಡೆ ರಚಿಸಿ ನಿಯೋಜಿಸಲಾಗಿದೆ.
ಸಂರಕ್ಷಿತಾರಣ್ಯದ ಅಂಚಿನಲ್ಲಿ ರೈತರು ಬೆಳೆದಿರುವ ಕಬ್ಬು, ಬಾಳೆ, ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳು ಕಟಾವಿಗೆ ಬಂದಿವೆ. ಬೆಳೆಗಳಿಂದ ಕಾಡು ಪ್ರಾಣಿಗಳು ಆಕರ್ಷಿತವಾಗಿ ಕಾಡಿನಿಂದ ಹೊರಗೆ ಬರುವುದನ್ನು ತಡೆಗಟ್ಟಲು, ಬೆಳೆ ಹಾನಿ ಆಗದಂತೆ ತಡೆಯುವುದು ಕಾರ್ಯಪಡೆಯ ಉದ್ದೇಶವಾಗಿದೆ.
ಕಾಡಂಚಿನ ಗ್ರಾಮಗಳ ಜನರಿಗೆ ಕಾರ್ಯಪಡೆ ಸಿಬ್ಬಂದಿ ಈಗಾಗಲೇ ಕರಪತ್ರಗಳನ್ನು ಹಂಚಿಕೆ ಮಾಡಿ ಅರಿವು ಮೂಡಿಸುವ ಕಾರ್ಯ ಕೈಗೊಂಡಿದೆ. ಅಲ್ಲದೆ ಅರಣ್ಯ ಸಹಾಯವಾಣಿ ೧೯೨೬ಕ್ಕೆ ಕರೆ ಮಾಡಿ ಸಂಪರ್ಕಿಸಿ ಎಂದು ಮನವರಿಕೆ ಮಾಡುತ್ತಿದ್ದಾರೆ.
ಕಾಡಾನೆ, ಹುಲಿ, ಚಿರತೆ, ಕರಡಿಗÀಳು ಜನವಸತಿ ಪ್ರದೇಶದಲ್ಲಿ ಕಂಡು ಬಂದಾಗ ತುರ್ತಾಗಿ ಹತ್ತಿರದ ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಬೇಕು.
ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಕಂಡಾಗ ಹೆಚ್ಚು ಜನ ಸೇರಿದಲ್ಲಿ ಆನೆಗಳು ಗಾಬರಿಗೊಂಡು ತೊಂದರೆ ಮಾಡುವ ಸಂಭವವಿರುತ್ತದೆ. ಅನಾವಶ್ಯಕವಾಗಿ ಕಾಡಾನೆಗಳ ಸುತ್ತ ಜನ ಗುಂಪು ಸೇರಬಾರದು. ವನ್ಯಪ್ರಾಣಿಗಳಿಂದ ಜನರು ಆದಷ್ಟು ದೂರವಿರಬೇಕು.
ವನ್ಯಪ್ರಾಣಿಗಳಿಗೆ ತೊಂದರೆಯಾಗುವ ಪಟಾಕಿ ಸಿಡಿಸುವುದು, ಗುಂಡು ಹಾರಿಸುವುದು, ಬೆಂಕಿ
ಜ್ವಾಲೆ ಎಸೆಯುವುದು, ಕಲ್ಲುಗಳನ್ನು ಎಸೆಯುವಂತಹ ಯಾವುದೇ ವರ್ತನೆಗಳನ್ನು ಜನರು ಮಾಡಬಾರದು ಎಂದು ಕರಪತ್ರದಲ್ಲಿ ಮುದ್ರಿಸಲಾಗಿದೆ.
ಈ ಸಂಬAಧ ಭಿತ್ತಿಪತ್ರಗಳನ್ನು ಅರಣ್ಯದ ರಸ್ತೆಗಳಲ್ಲಿ ಹೆಚ್ಚು ಜನರು ಓಡಾಡುವ ಸ್ಥಳಗಳಲ್ಲಿ ಅಂಟಿಸಲಾಗಿದೆ. ಸಂರಕ್ಷಿತಾರಣ್ಯದ ೬ ವಲಯಗಳ ಅಧಿಕಾರಿಗಳ ಮೊ.ಸಂಖ್ಯೆಗಳನ್ನು ನೀಡಲಾಗಿದೆ.

ಅರಣ್ಯಾಧಿಕಾರಿಗಳ ಸಂಪರ್ಕ ಸಂಖ್ಯೆ

ಚಾ.ನಗರ ಪ್ರಾದೇಶಿಕ ವಲಯ : ಉಪ ವಲಯ ಅರಣ್ಯಾಧಿಕಾರಿ ಆರ್. ಚಂದ್ರಕುಮಾರ್ (೯೪೫೬೦೩೭೯೪೪), ಉಪ ವಲಯ ಅರಣ್ಯಾಧಿಕಾರಿ ಸಿ. ಹರ್ಷ (೮೧೪೭೫೮೩೬೪೫), ಉಪ ವಲಯ ಅರಣ್ಯಾಧಿಕಾರಿ ಅಮರನಾಥ್ (೯೪೮೩೯೦೭೭೯೫)
ಕೊಳೇಗಾಲ ವಲಯ : ಗುಂಡಾಲ್ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಿ. ಪ್ರಭುಸ್ವಾಮಿ ಮೊ.ಸಂ ೯೭೩೧೦೨೫೬೫೭, ಅರೇಪಾಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಂ. ಮಹೇಶ ಮೊ.ಸಂ ೯೦೦೮೮೭೭೪೯೨
ಬೈಲೂರು ವಲಯ : ಉಪ ವಲಯ ಅರಣ್ಯಾಧಿಕಾರಿ ಎಂ. ರವಿಕುಮಾರ್ (೮೬೬೦೩೫೧೪೦೫), ಉಪ ವಲಯ ಅರಣ್ಯಾಧಿಕಾರಿ ಎನ್. ಗಿರೀಶ್ (೮೧೦೫೪೬೨೧೫೦)
ಕೆ.ಗುಡಿ ವಲಯ : ಉಪ ವಲಯ ಅರಣ್ಯಾಧಿಕಾರಿ ಸೈಯದ್ ಇಕ್ರಂಪಾಷಾ (೯೯೦೧೨೩೬೨೫೩), ಉಪ ವಲಯ ಅರಣ್ಯಾಧಿಕಾರಿ ಕೆ. ಮಂಜುನಾಥ (೮೧೪೭೫೮೩೬೪೫), ಉಪ ವಲಯ ಅರಣ್ಯಾಧಿಕಾರಿ ಸಿ. ಸದಾಶಿವಂ (೯೪೮೩೯೦೭೭೯೫).
ಪುಣಜನೂರು ವಲಯ : ಬೂದಿಪಡಗ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ (೮೯೪೫೯೮೯೯೭೩)
ಯಳಂದೂರು ವಲಯ : ಗುಂಬಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪಿ.ರಮೇಶ (೯೯೦೦೮೮೮೩೧೩), ಪುರಾಣಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪುನೀತ್ (೯೯೪೫೧೫೪೫೮೪),

andolanait

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

1 hour ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

3 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

4 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

4 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

4 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

4 hours ago