ಜಿಲ್ಲೆಗಳು

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ : ಕಾಡುಪ್ರಾಣಿಗಳ ದಾಳಿ ತಡೆಗೆ ಕ್ಷಿಪ್ರ ಕಾರ್ಯಪಡೆ

* ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ
* ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮುನ್ನೇಚ್ಚರಿಕೆ

ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟ ಆರ್‌ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕ್ಷಿಪ್ರ ಕಾರ್ಯಾಪಡೆ ರಚಿಸಿ ನಿಯೋಜಿಸಲಾಗಿದೆ.
ಸಂರಕ್ಷಿತಾರಣ್ಯದ ಅಂಚಿನಲ್ಲಿ ರೈತರು ಬೆಳೆದಿರುವ ಕಬ್ಬು, ಬಾಳೆ, ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳು ಕಟಾವಿಗೆ ಬಂದಿವೆ. ಬೆಳೆಗಳಿಂದ ಕಾಡು ಪ್ರಾಣಿಗಳು ಆಕರ್ಷಿತವಾಗಿ ಕಾಡಿನಿಂದ ಹೊರಗೆ ಬರುವುದನ್ನು ತಡೆಗಟ್ಟಲು, ಬೆಳೆ ಹಾನಿ ಆಗದಂತೆ ತಡೆಯುವುದು ಕಾರ್ಯಪಡೆಯ ಉದ್ದೇಶವಾಗಿದೆ.
ಕಾಡಂಚಿನ ಗ್ರಾಮಗಳ ಜನರಿಗೆ ಕಾರ್ಯಪಡೆ ಸಿಬ್ಬಂದಿ ಈಗಾಗಲೇ ಕರಪತ್ರಗಳನ್ನು ಹಂಚಿಕೆ ಮಾಡಿ ಅರಿವು ಮೂಡಿಸುವ ಕಾರ್ಯ ಕೈಗೊಂಡಿದೆ. ಅಲ್ಲದೆ ಅರಣ್ಯ ಸಹಾಯವಾಣಿ ೧೯೨೬ಕ್ಕೆ ಕರೆ ಮಾಡಿ ಸಂಪರ್ಕಿಸಿ ಎಂದು ಮನವರಿಕೆ ಮಾಡುತ್ತಿದ್ದಾರೆ.
ಕಾಡಾನೆ, ಹುಲಿ, ಚಿರತೆ, ಕರಡಿಗÀಳು ಜನವಸತಿ ಪ್ರದೇಶದಲ್ಲಿ ಕಂಡು ಬಂದಾಗ ತುರ್ತಾಗಿ ಹತ್ತಿರದ ಅರಣ್ಯ ಇಲಾಖೆಯ ಕಚೇರಿಗೆ ಮಾಹಿತಿ ನೀಡಬೇಕು.
ಕಾಡಾನೆಗಳು ಜನವಸತಿ ಪ್ರದೇಶದಲ್ಲಿ ಕಂಡಾಗ ಹೆಚ್ಚು ಜನ ಸೇರಿದಲ್ಲಿ ಆನೆಗಳು ಗಾಬರಿಗೊಂಡು ತೊಂದರೆ ಮಾಡುವ ಸಂಭವವಿರುತ್ತದೆ. ಅನಾವಶ್ಯಕವಾಗಿ ಕಾಡಾನೆಗಳ ಸುತ್ತ ಜನ ಗುಂಪು ಸೇರಬಾರದು. ವನ್ಯಪ್ರಾಣಿಗಳಿಂದ ಜನರು ಆದಷ್ಟು ದೂರವಿರಬೇಕು.
ವನ್ಯಪ್ರಾಣಿಗಳಿಗೆ ತೊಂದರೆಯಾಗುವ ಪಟಾಕಿ ಸಿಡಿಸುವುದು, ಗುಂಡು ಹಾರಿಸುವುದು, ಬೆಂಕಿ
ಜ್ವಾಲೆ ಎಸೆಯುವುದು, ಕಲ್ಲುಗಳನ್ನು ಎಸೆಯುವಂತಹ ಯಾವುದೇ ವರ್ತನೆಗಳನ್ನು ಜನರು ಮಾಡಬಾರದು ಎಂದು ಕರಪತ್ರದಲ್ಲಿ ಮುದ್ರಿಸಲಾಗಿದೆ.
ಈ ಸಂಬAಧ ಭಿತ್ತಿಪತ್ರಗಳನ್ನು ಅರಣ್ಯದ ರಸ್ತೆಗಳಲ್ಲಿ ಹೆಚ್ಚು ಜನರು ಓಡಾಡುವ ಸ್ಥಳಗಳಲ್ಲಿ ಅಂಟಿಸಲಾಗಿದೆ. ಸಂರಕ್ಷಿತಾರಣ್ಯದ ೬ ವಲಯಗಳ ಅಧಿಕಾರಿಗಳ ಮೊ.ಸಂಖ್ಯೆಗಳನ್ನು ನೀಡಲಾಗಿದೆ.

ಅರಣ್ಯಾಧಿಕಾರಿಗಳ ಸಂಪರ್ಕ ಸಂಖ್ಯೆ

ಚಾ.ನಗರ ಪ್ರಾದೇಶಿಕ ವಲಯ : ಉಪ ವಲಯ ಅರಣ್ಯಾಧಿಕಾರಿ ಆರ್. ಚಂದ್ರಕುಮಾರ್ (೯೪೫೬೦೩೭೯೪೪), ಉಪ ವಲಯ ಅರಣ್ಯಾಧಿಕಾರಿ ಸಿ. ಹರ್ಷ (೮೧೪೭೫೮೩೬೪೫), ಉಪ ವಲಯ ಅರಣ್ಯಾಧಿಕಾರಿ ಅಮರನಾಥ್ (೯೪೮೩೯೦೭೭೯೫)
ಕೊಳೇಗಾಲ ವಲಯ : ಗುಂಡಾಲ್ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಿ. ಪ್ರಭುಸ್ವಾಮಿ ಮೊ.ಸಂ ೯೭೩೧೦೨೫೬೫೭, ಅರೇಪಾಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಂ. ಮಹೇಶ ಮೊ.ಸಂ ೯೦೦೮೮೭೭೪೯೨
ಬೈಲೂರು ವಲಯ : ಉಪ ವಲಯ ಅರಣ್ಯಾಧಿಕಾರಿ ಎಂ. ರವಿಕುಮಾರ್ (೮೬೬೦೩೫೧೪೦೫), ಉಪ ವಲಯ ಅರಣ್ಯಾಧಿಕಾರಿ ಎನ್. ಗಿರೀಶ್ (೮೧೦೫೪೬೨೧೫೦)
ಕೆ.ಗುಡಿ ವಲಯ : ಉಪ ವಲಯ ಅರಣ್ಯಾಧಿಕಾರಿ ಸೈಯದ್ ಇಕ್ರಂಪಾಷಾ (೯೯೦೧೨೩೬೨೫೩), ಉಪ ವಲಯ ಅರಣ್ಯಾಧಿಕಾರಿ ಕೆ. ಮಂಜುನಾಥ (೮೧೪೭೫೮೩೬೪೫), ಉಪ ವಲಯ ಅರಣ್ಯಾಧಿಕಾರಿ ಸಿ. ಸದಾಶಿವಂ (೯೪೮೩೯೦೭೭೯೫).
ಪುಣಜನೂರು ವಲಯ : ಬೂದಿಪಡಗ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೃಷ್ಣಮೂರ್ತಿ (೮೯೪೫೯೮೯೯೭೩)
ಯಳಂದೂರು ವಲಯ : ಗುಂಬಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪಿ.ರಮೇಶ (೯೯೦೦೮೮೮೩೧೩), ಪುರಾಣಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಪುನೀತ್ (೯೯೪೫೧೫೪೫೮೪),

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

3 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

5 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago