ಜಿಲ್ಲೆಗಳು

ಜನವರಿ 26ರಿಂದ ಬಿಆರ್‌ಟಿಯಲ್ಲಿ ಹಕ್ಕಿ ಸಮೀಕ್ಷೆ

ಪಕ್ಷಿಗಳ ಪ್ರಭೇದ ಪತ್ತೆಗಾಗಿ ಈ ಸರ್ವೆ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.26ರಿಂದ 29ರತನಕ ಹಕ್ಕಿಗಳ ಸಮೀಕ್ಷೆ ನಡೆಯಲಿದೆ.
2012ರ ಆಸುಪಾಸಿನಲ್ಲಿ ನಡೆದಿದ್ದ ಸಮೀಕ್ಷೆ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಕಂಡುಬಂದಿದ್ದವು. ಈಗೆಷ್ಟು ಪ್ರಭೇದಗಳಿವೆ ಎಂಬುದನ್ನು ತಿಳಿಯಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಇದು ಹಕ್ಕಿಗಳ ಸಂಖ್ಯೆಯನ್ನು ಎಣಿಸುವ ಸಮೀಕ್ಷೆಯಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಂಜಾನೆ ಮಂಜು ಆವರಿಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆ 8.30ರ ಸುಮಾರಿಗೆ ಪ್ರಾರಂಭಿಸಿ ಸಂಜೆ 4ಗಂಟೆವರೆಗೂ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿಂದೆ ಎಲ್ಲಾದರೂ ಪಕ್ಷಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೆ ಅಥವಾ ಈ ಬಗ್ಗೆ ತರಬೇತಿ ಹೊಂದಿದ್ದರು ಅಂಥವರನ್ನು ಸಮೀಕ್ಷೆಗೆ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ.
ಬಿಆರ್‌ಟಿ ಕಚೇರಿಯಲ್ಲಿ ನೇರವಾಗಿ ಅಥವಾ ಆನ್‌ಲೈನ್‌ನಲ್ಲಿ ಪಕ್ಷಿ ವೀಕ್ಷಕರು ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.  574.82ಚದರ ಕಿಮೀ ಪ್ರದೇಶ ಹೊಂದಿರುವ ಬಿಆರ್‌ಟಿಯಲ್ಲಿ ಬಫರ್ ಏರಿಯಾ  215.72ಚಕಿಮೀ., ಕೋರ್ ಏರಿಯಾ 359.10ಚಕಿಮೀ ಇದೆ. ಕೆ.ಗುಡಿ, ಪುಣಜನೂರು, ಚಾ.ನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಬೈಲೂರು ವನ್ಯಜೀವಿ ವಲಯಗಳಿದ್ದು ಸಮೀಕ್ಷೆ ಸಂದರ್ಭದಲ್ಲಿ ಯಾವ ವಲಯದತ್ತ ಯಾರ್ಯಾರು ಹೋಗಬೇಕೆಂದು ವಿಂಗಡಿಸಲಾಗುತ್ತದೆ. ಹಾಗಾಗಿ ಮೊದಲೆರಡು ದಿನ ಅರಣ್ಯ ವೀಕ್ಷಕರ ಆಯ್ಕೆ, ವಿಂಗಡಣೆಗೇ ಹಿಡಿಯಲಿದೆ. ಕೊನೆಯ 2ದಿನಗಳು ಮಾತ್ರ ಸಮೀಕ್ಷೆ ಜರುಗಲಿದೆ ಎಂದು ಬಿಆರ್‌ಟಿ ನಿರ್ದೇಶಕಿ ದೀಪ್ ಜೆ.ಕಾಂಟ್ರಾಕ್ಟರ್ ಪತ್ರಿಕೆಗೆ ತಿಳಿಸಿದರು.
ಪಕ್ಷಿಗಳ ಶಬ್ದ, ಗೂಡುಕಟ್ಟಿರುವ ಸ್ಥಳ ಗಮನಿಸಿಕೊಂಡು ಅವನ್ನು ಬೈನಾಕ್ಯುಲರ್ ಮುಖಾಂತರ ಗುರುತಿಸಲಾಗುತ್ತದೆ. ಈಗಿನ ವಾತಾವರಣ ಗಮನಿಸಿದರೆ ಅಪರೂಪದ ಹಾಗೂ ವಿಭಿನ್ನ ಪ್ರಭೇದದ ಪಕ್ಷಿಗಳು ಸಮೀಕ್ಷೆ ಸಂದರ್ಭದಲ್ಲಿ ಕಂಡುಬರುವಂತೆ ಕಾಣುತ್ತದೆ. ದಟ್ಟ ಅರಣ್ಯದ ಒಳಗೆ ಸಮೀಕ್ಷೆ ನಡೆಯುವುದರಿಂದ ಭದ್ರತೆಗಾಗಿ ಇಲಾಖೆ ಸಿಬ್ಬಂದಿ ಜೊತೆಯಲ್ಲಿರುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.


ಗೂಗಲ್ ಪಾರಂ ಮುಖಾಂತರ ರಾಜ್ಯದ ಹೊರಗಿನ 12ಜನರ ಸಹಿತ 122ಮಂದಿ ಪಕ್ಷಿ ವೀಕ್ಷಕರು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಜ.18ರವರೆಗೂ ನೊಂದಣಿ ನಡೆಯಲಿದ್ದು ಯಾರು ಅರ್ಹರಿದ್ದಾರೆ ಅವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ,
ದೀಪ್ ಜೆ.ಕಾಂಟ್ರಾಕ್ಟರ್, ಬಿಆರ್‌ಟಿ ನಿರ್ದೇಶಕರು.


ಸಮೀಕ್ಷೆ ಚಳಿಗಾಲದಲ್ಲೇ ಯಾಕೆ?
ಹಕ್ಕಿಗಳು ಮರಿಗಳ ಜೊತೆ ಇರುವ ಮತ್ತು ಸಂತಾನೋತ್ಪತ್ತಿಯ ಸಮಯವಿದು. ಮರಿಗಳ ಕಾರಣಕ್ಕೆ ಹಕ್ಕಿಗಳು ಪದೇಪದೇ ಗೂಡಿನತ್ತ ಎಡತಾಕುತ್ತಿರುತ್ತವೆ. ಈ ಕಾರಣಕ್ಕೆ ಸಾಮಾನ್ಯವಾಗಿ ಚಳಿಗಾಲದಲ್ಲೇ ಸಮೀಕ್ಷೆ ನಡೆಯುತ್ತದೆ.
2020ರ ಡಿಸೆಂಬರ್‌ನಲ್ಲಿ ಬಿಆರ್‌ಟಿಯಲ್ಲಿ ಹಕ್ಕಿಗಳ ಹಬ್ಬ ಕೂಡ ನಡೆದಿತ್ತು. 2021ರ ಫೆಬ್ರವರಿಯಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಪಕ್ಷಿಗಳ ಸಮೀಕ್ಷೆ ಜರುಗಿತ್ತು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago