ಪಕ್ಷಿಗಳ ಪ್ರಭೇದ ಪತ್ತೆಗಾಗಿ ಈ ಸರ್ವೆ
ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜ.26ರಿಂದ 29ರತನಕ ಹಕ್ಕಿಗಳ ಸಮೀಕ್ಷೆ ನಡೆಯಲಿದೆ.
2012ರ ಆಸುಪಾಸಿನಲ್ಲಿ ನಡೆದಿದ್ದ ಸಮೀಕ್ಷೆ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಕಂಡುಬಂದಿದ್ದವು. ಈಗೆಷ್ಟು ಪ್ರಭೇದಗಳಿವೆ ಎಂಬುದನ್ನು ತಿಳಿಯಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಇದು ಹಕ್ಕಿಗಳ ಸಂಖ್ಯೆಯನ್ನು ಎಣಿಸುವ ಸಮೀಕ್ಷೆಯಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಮುಂಜಾನೆ ಮಂಜು ಆವರಿಸಿಕೊಂಡಿರುತ್ತದೆ. ಹಾಗಾಗಿ ಬೆಳಿಗ್ಗೆ 8.30ರ ಸುಮಾರಿಗೆ ಪ್ರಾರಂಭಿಸಿ ಸಂಜೆ 4ಗಂಟೆವರೆಗೂ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಹಿಂದೆ ಎಲ್ಲಾದರೂ ಪಕ್ಷಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರೆ ಅಥವಾ ಈ ಬಗ್ಗೆ ತರಬೇತಿ ಹೊಂದಿದ್ದರು ಅಂಥವರನ್ನು ಸಮೀಕ್ಷೆಗೆ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ.
ಬಿಆರ್ಟಿ ಕಚೇರಿಯಲ್ಲಿ ನೇರವಾಗಿ ಅಥವಾ ಆನ್ಲೈನ್ನಲ್ಲಿ ಪಕ್ಷಿ ವೀಕ್ಷಕರು ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. 574.82ಚದರ ಕಿಮೀ ಪ್ರದೇಶ ಹೊಂದಿರುವ ಬಿಆರ್ಟಿಯಲ್ಲಿ ಬಫರ್ ಏರಿಯಾ 215.72ಚಕಿಮೀ., ಕೋರ್ ಏರಿಯಾ 359.10ಚಕಿಮೀ ಇದೆ. ಕೆ.ಗುಡಿ, ಪುಣಜನೂರು, ಚಾ.ನಗರ, ಯಳಂದೂರು, ಕೊಳ್ಳೇಗಾಲ ಹಾಗೂ ಬೈಲೂರು ವನ್ಯಜೀವಿ ವಲಯಗಳಿದ್ದು ಸಮೀಕ್ಷೆ ಸಂದರ್ಭದಲ್ಲಿ ಯಾವ ವಲಯದತ್ತ ಯಾರ್ಯಾರು ಹೋಗಬೇಕೆಂದು ವಿಂಗಡಿಸಲಾಗುತ್ತದೆ. ಹಾಗಾಗಿ ಮೊದಲೆರಡು ದಿನ ಅರಣ್ಯ ವೀಕ್ಷಕರ ಆಯ್ಕೆ, ವಿಂಗಡಣೆಗೇ ಹಿಡಿಯಲಿದೆ. ಕೊನೆಯ 2ದಿನಗಳು ಮಾತ್ರ ಸಮೀಕ್ಷೆ ಜರುಗಲಿದೆ ಎಂದು ಬಿಆರ್ಟಿ ನಿರ್ದೇಶಕಿ ದೀಪ್ ಜೆ.ಕಾಂಟ್ರಾಕ್ಟರ್ ಪತ್ರಿಕೆಗೆ ತಿಳಿಸಿದರು.
ಪಕ್ಷಿಗಳ ಶಬ್ದ, ಗೂಡುಕಟ್ಟಿರುವ ಸ್ಥಳ ಗಮನಿಸಿಕೊಂಡು ಅವನ್ನು ಬೈನಾಕ್ಯುಲರ್ ಮುಖಾಂತರ ಗುರುತಿಸಲಾಗುತ್ತದೆ. ಈಗಿನ ವಾತಾವರಣ ಗಮನಿಸಿದರೆ ಅಪರೂಪದ ಹಾಗೂ ವಿಭಿನ್ನ ಪ್ರಭೇದದ ಪಕ್ಷಿಗಳು ಸಮೀಕ್ಷೆ ಸಂದರ್ಭದಲ್ಲಿ ಕಂಡುಬರುವಂತೆ ಕಾಣುತ್ತದೆ. ದಟ್ಟ ಅರಣ್ಯದ ಒಳಗೆ ಸಮೀಕ್ಷೆ ನಡೆಯುವುದರಿಂದ ಭದ್ರತೆಗಾಗಿ ಇಲಾಖೆ ಸಿಬ್ಬಂದಿ ಜೊತೆಯಲ್ಲಿರುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಗೂಗಲ್ ಪಾರಂ ಮುಖಾಂತರ ರಾಜ್ಯದ ಹೊರಗಿನ 12ಜನರ ಸಹಿತ 122ಮಂದಿ ಪಕ್ಷಿ ವೀಕ್ಷಕರು ಈಗಾಗಲೇ ಹೆಸರು ನೊಂದಾಯಿಸಿಕೊಂಡಿದ್ದಾರೆ. ಜ.18ರವರೆಗೂ ನೊಂದಣಿ ನಡೆಯಲಿದ್ದು ಯಾರು ಅರ್ಹರಿದ್ದಾರೆ ಅವರನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ,
–ದೀಪ್ ಜೆ.ಕಾಂಟ್ರಾಕ್ಟರ್, ಬಿಆರ್ಟಿ ನಿರ್ದೇಶಕರು.
ಸಮೀಕ್ಷೆ ಚಳಿಗಾಲದಲ್ಲೇ ಯಾಕೆ?
ಹಕ್ಕಿಗಳು ಮರಿಗಳ ಜೊತೆ ಇರುವ ಮತ್ತು ಸಂತಾನೋತ್ಪತ್ತಿಯ ಸಮಯವಿದು. ಮರಿಗಳ ಕಾರಣಕ್ಕೆ ಹಕ್ಕಿಗಳು ಪದೇಪದೇ ಗೂಡಿನತ್ತ ಎಡತಾಕುತ್ತಿರುತ್ತವೆ. ಈ ಕಾರಣಕ್ಕೆ ಸಾಮಾನ್ಯವಾಗಿ ಚಳಿಗಾಲದಲ್ಲೇ ಸಮೀಕ್ಷೆ ನಡೆಯುತ್ತದೆ.
2020ರ ಡಿಸೆಂಬರ್ನಲ್ಲಿ ಬಿಆರ್ಟಿಯಲ್ಲಿ ಹಕ್ಕಿಗಳ ಹಬ್ಬ ಕೂಡ ನಡೆದಿತ್ತು. 2021ರ ಫೆಬ್ರವರಿಯಲ್ಲಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಪಕ್ಷಿಗಳ ಸಮೀಕ್ಷೆ ಜರುಗಿತ್ತು.
ಕೃಷಿ ಫಸಲು ನಾಶ ಮಾಡಿ, ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆ ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ…
ಜೆರುಸಲೆಂ : ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದ ಬಳಿಕ ಇರಾನ್ನಿಂದ ಇಸ್ರೇಲ್ ಮೇಲೆ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ…
ಬೆಂಗಳೂರು : ಏಪ್ರಿಲ್ 1 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲಿಯಂ, ವಿದ್ಯುತ್ ಮತ್ತು ರಸಗೊಬ್ಬರ ವಲಯಗಳ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ…
ಬೆಂಗಳೂರು : 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಕರ್ನಾಟಕ ಹೈಕೋರ್ಟ್ ಅರ್ಜಿ ಆಹ್ವಾನಿಸಿದೆ. ಕಾನೂನು ಪದವಿ ಸೇರಿದಂತೆ ವಿವಿಧ…
ಕೆ.ಆರ್.ಪೇಟೆ : ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿದ ಪರಿಣಾಮ…