ಫೈರ್ ಮಾಡಿದ ಮೃತದೇಹ ಬಿಟ್ಟ ಕರಡಿ!
ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡಾನೆಗಳ ಉಪಟಳ ಹೆಚ್ಚಾಗುತ್ತಿರುವ ಮಧ್ಯೆಯೇ ಇದೀಗ ಕರಡಿ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನುಭೀಕರವಾಗಿ ಬಲಿತೆಗೆದುಕೊಂಡಿರುವ ಘಟನೆ ತಾಲ್ಲೂಕಿನ ಪುಣಜನೂರು ಬಳಿ ಶನಿವಾರ ನಡೆದಿದೆ.
ಪುಣಜನೂರು ರಾಜು(50) ಬಿನ್.ಭದ್ರಪ್ಪ ಮೃತಪಟ್ಟವರು.ಇವರೊಂದಿಗೆ ಇದ್ದ ಸಂಬಂಧಿಯೊಬ್ಬರು ಕರಡಿ ದಾಳಿಯಿಂದ ಬಚಾವಾಗಿದ್ದಾರೆ.
ವಿಷಯ ತಿಳಿದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ
ಏನೆಲ್ಲಾ ಕೂಗಾಟ ಮಾಡಿದರೂ ರಾಜು ಅವರ ದೇಹವನ್ನು ಬಿಡದೆ ಸುಮಾರು 1ಕಿಮೀದೂರ ಎಳೆದು -ಎತ್ತಿಕೊಂಡು ಓಡಾಡಿದೆ. ಮಾಂಸ ಖಂಡಗಳನ್ನು ಕಿತ್ತು ತಿಂದು ಸಿಕ್ಕಸಿಕ್ಕ ಜಾಗಗಳೆಲ್ಲಾ ಕಚ್ಚಿ ದೇಹವನ್ನು ಗುರುತಿಸಲಾಗದ ಮಟ್ಟಿಗೆ ಮಾಡಿದೆ.
ಅರಣ್ಯ ಸಿಬ್ಬಂದಿ ಮೇಲಿಂದ ಮೇಲೆ ಏರ್ ಫೈರ್ ಮಾಡಿ ಕರಡಿಯನ್ನು ಓಡಿಸುವ ವೇಳೆಗೆ ಮೃತದೇಹವನ್ನು ಒದರಿ ಬಿಸಾಡಿತ್ತು.
ಬಿ ಆರ್ ಟಿ ಗೆ ಸೇರಿದ ಪುಣಜನೂರು ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಡಿ ದಾಳಿಯಿಂದ ಮೃತ ಪಟ್ಟ ವರದಿಯಾಗಿರಲಿಲ್ಲ.ಈಘಟನೆ ಪುಣಜನೂರು ಸುತ್ತಮುತ್ತಲಿನ ಕಾಡಂಚಿನ ಜನರಲ್ಲಿ ಆತಂಕ ಉಂಟು ಮಾಡಿದೆ.
ಮಧ್ಯಾಹ್ನ 3.30ರಲ್ಲಿ ಘಟನೆ ನಡೆದಿದ್ದು ಮೃತರು ದನ ಮೇಯಿಸಲು ಹೋಗಿದ್ದರೇ? ಅಥವಾ ಆ ಮಾರ್ಗದಲ್ಲಿ ಬೇರೆ ಎಲ್ಲಾದರೂ ಹೋಗಿದ್ದರೇ ಎಂಬುದನ್ನು ವಿಚಾರ ಮಾಡಲಾಗುತ್ತಿದೆ.
ಮೃತರಿಗೆ ಪತ್ನಿ, ಪುತ್ರ ಇದ್ದು ದನಕರು ಮತ್ತು ಕುರಿ ಸಾಕಾಣಿಕೆ ಯಿಂದ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.ಘಟನಾ ಸ್ಥಳದ ಬಳಿಯಲ್ಲೇ ಸಂಜೆ 7ಘಂಟೆಯಲ್ಲಿಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವನ್ಯ
ಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಸರ್ಕಾರದಿಂದ 15ಲಕ್ಷರೂ.ಪರಿಹಾರ ನೀಡಲು ಅವಕಾಶವಿದೆ.ಕರಡಿ ಏನಾದರೂ ಮತ್ತೆ ಪ್ರತ್ಯಕ್ಷವಾದರೆ ಅದಕ್ಕೆ ಅರಿವಳಿಕೆ ನೀಡಿ ಬೇರೆಡೆ ಬಿಡಲು ಘಟನಾ ಸ್ಥಳದ ಸುತ್ತಮುತ್ತ ಹೆಚ್ಚಿನ ಅರಣ್ಯ ಸಿಬ್ಬಂದಿಹಾಕುವುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.
ಪುಣಜನೂರು ವಲಯದ ಹುಚ್ಚನಕೆಂಬಾರೆ ಎಂಬ ಅರಣ್ಯದ ಒಳಗಡೆಕರಡಿದಾಳಿ ನಡೆದಿರುವುದಾಗಿ ಬಿ ಆರ್ ಟಿ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸಿಎಫ್ ಸುರೇಶ್, ಆರ್ ಎಫ್ ಒ ನಸೀರ್ ಅಹಮ್ಮದ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.
ಭೇರ್ಯ ಮಹೇಶ್ ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP ಕೆ.ಆರ್.ನಗರ :…
ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ…
‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…
ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…