ಜಿಲ್ಲೆಗಳು

ಕರಡಿ ದಾಳಿಗೆ ಪುಣಜನೂರು ವ್ಯಕ್ತಿ ಬಲಿ

ಫೈರ್ ಮಾಡಿದ ಮೃತದೇಹ ಬಿಟ್ಟ ಕರಡಿ!

ಚಾಮರಾಜನಗರ: ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಕಾಡಾನೆಗಳ ಉಪಟಳ ಹೆಚ್ಚಾಗುತ್ತಿರುವ ಮಧ್ಯೆಯೇ ಇದೀಗ ಕರಡಿ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನುಭೀಕರವಾಗಿ ಬಲಿತೆಗೆದುಕೊಂಡಿರುವ ಘಟನೆ ತಾಲ್ಲೂಕಿನ ಪುಣಜನೂರು ಬಳಿ ಶನಿವಾರ ನಡೆದಿದೆ.
ಪುಣಜನೂರು ರಾಜು(50) ಬಿನ್.ಭದ್ರಪ್ಪ ಮೃತಪಟ್ಟವರು.ಇವರೊಂದಿಗೆ ಇದ್ದ ಸಂಬಂಧಿಯೊಬ್ಬರು ಕರಡಿ ದಾಳಿಯಿಂದ ಬಚಾವಾಗಿದ್ದಾರೆ.
ವಿಷಯ ತಿಳಿದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ
ಏನೆಲ್ಲಾ ಕೂಗಾಟ ಮಾಡಿದರೂ ರಾಜು ಅವರ ದೇಹವನ್ನು ಬಿಡದೆ ಸುಮಾರು 1ಕಿಮೀದೂರ ಎಳೆದು -ಎತ್ತಿಕೊಂಡು ಓಡಾಡಿದೆ. ಮಾಂಸ ಖಂಡಗಳನ್ನು ಕಿತ್ತು ತಿಂದು ಸಿಕ್ಕಸಿಕ್ಕ ಜಾಗಗಳೆಲ್ಲಾ ಕಚ್ಚಿ ದೇಹವನ್ನು ಗುರುತಿಸಲಾಗದ ಮಟ್ಟಿಗೆ ಮಾಡಿದೆ.
ಅರಣ್ಯ ಸಿಬ್ಬಂದಿ ಮೇಲಿಂದ ಮೇಲೆ ಏರ್ ಫೈರ್ ಮಾಡಿ ಕರಡಿಯನ್ನು ಓಡಿಸುವ ವೇಳೆಗೆ ಮೃತದೇಹವನ್ನು ಒದರಿ ಬಿಸಾಡಿತ್ತು.
ಬಿ ಆರ್ ಟಿ ಗೆ ಸೇರಿದ ಪುಣಜನೂರು ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕರಡಿ ದಾಳಿಯಿಂದ ಮೃತ ಪಟ್ಟ ವರದಿಯಾಗಿರಲಿಲ್ಲ.ಈಘಟನೆ ಪುಣಜನೂರು ಸುತ್ತಮುತ್ತಲಿನ ಕಾಡಂಚಿನ ಜನರಲ್ಲಿ ಆತಂಕ ಉಂಟು ಮಾಡಿದೆ.
ಮಧ್ಯಾಹ್ನ 3.30ರಲ್ಲಿ ಘಟನೆ ನಡೆದಿದ್ದು ಮೃತರು ದನ ಮೇಯಿಸಲು ಹೋಗಿದ್ದರೇ? ಅಥವಾ ಆ ಮಾರ್ಗದಲ್ಲಿ ಬೇರೆ ಎಲ್ಲಾದರೂ ಹೋಗಿದ್ದರೇ ಎಂಬುದನ್ನು ವಿಚಾರ ಮಾಡಲಾಗುತ್ತಿದೆ.
ಮೃತರಿಗೆ ಪತ್ನಿ, ಪುತ್ರ ಇದ್ದು ದನಕರು ಮತ್ತು ಕುರಿ ಸಾಕಾಣಿಕೆ ಯಿಂದ ಜೀವನ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.ಘಟನಾ ಸ್ಥಳದ ಬಳಿಯಲ್ಲೇ ಸಂಜೆ 7ಘಂಟೆಯಲ್ಲಿಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವನ್ಯ
ಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಸರ್ಕಾರದಿಂದ 15ಲಕ್ಷರೂ.ಪರಿಹಾರ ನೀಡಲು ಅವಕಾಶವಿದೆ.ಕರಡಿ ಏನಾದರೂ ಮತ್ತೆ ಪ್ರತ್ಯಕ್ಷವಾದರೆ ಅದಕ್ಕೆ ಅರಿವಳಿಕೆ ನೀಡಿ ಬೇರೆಡೆ ಬಿಡಲು ಘಟನಾ ಸ್ಥಳದ ಸುತ್ತಮುತ್ತ ಹೆಚ್ಚಿನ ಅರಣ್ಯ ಸಿಬ್ಬಂದಿಹಾಕುವುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.
ಪುಣಜನೂರು ವಲಯದ ಹುಚ್ಚನಕೆಂಬಾರೆ ಎಂಬ ಅರಣ್ಯದ ಒಳಗಡೆಕರಡಿದಾಳಿ ನಡೆದಿರುವುದಾಗಿ ಬಿ ಆರ್ ಟಿ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸಿಎಫ್ ಸುರೇಶ್, ಆರ್ ಎಫ್ ಒ ನಸೀರ್ ಅಹಮ್ಮದ್ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago