ಮಹದೇವ ಮತ್ತು ತಂಡದಿಂದ ಕಂಸಾಳೆ, ಕೆರೆಮನೆ ಶಿವಾನಂದ ಹೆಗಡೆ ಯಕ್ಷಗಾನ
ಬಿ.ಎನ್.ಧನಂಜಯಗೌಡ
ಮೈಸೂರು: ಸಭಿಕರೆಡೆಯಿಂದ ನಾಟ್ಯದ ನಡಿಗೆಯಲ್ಲಿ ಬಂದ ನವಿಲೊಂದು, ವನರಂಗದ ವೇದಿಕೆಯ ಮೇಲೆ ಬಂದು ಗರಿಬಿಚ್ಚಿ ಕುಣಿದು ಕುಪ್ಪಳಿಸುತ್ತಾ ತನ್ನ ಗರಿಗಳಲ್ಲಿ ನಾನಾ ಬಗೆಯ ಜನಪದ ಕಲೆಗಳ ಚಿತ್ರಗಳನ್ನು ಅನಾವರಣಗೊಳಿಸಿತು.
ಇನ್ನು ಮೊದಲ ದಿನ ಕಾರ್ಯಕ್ರಮದಲ್ಲಿ ಬೀಸು ಕಂಸಾಳೆಯ ಸದ್ದುಗದ್ದಲ, ಯಕ್ಷಗಾನದ ತಾಳಮದ್ದಳೆ ನೆರೆದಿದ್ದ ಕಲಾಸ್ತರನ್ನು ರಂಜಿಸಿತು. ಇನ್ನು ಡಾ.ಪಿ.ಕೆ.ರಾಜಶೇಖರ್ ಅವರು ಮಾತಿನ ಮಧ್ಯೆ ಹೇಳಿದ ಜನಪದ ಹಾಡುಗಳು, ಜನಪದ ಒಗಟು, ಕಥೆಗಳನ್ನು ಹೇಳುವ ಮೂಲಕ ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತುವ ಮೂಲಕ ಇದೊಂದು ಜನಪದಹಾಸ್ಯ ಕಾರ್ಯಕ್ರಮವೂ ಆಯಿತು.
ನಂಜನಗೂಡಿನ ಮಹದೇವ ಮತ್ತು ತಂಡದವರು ಸುಮಾರು ೩೦ ನಿಮಿಷಗಳ ಕಾಲ ಪ್ರದರ್ಶಿಸಿದ ಕಂಸಾಳೆಯ ತಾಳಗಳಿಗೆ ವೀಕ್ಷಕರು ಕುಳಿತಲ್ಲಿಯೇ ಕಾಲು ಕುಣಿಸುತ್ತಾ, ಚಪ್ಪಾಳೆ ತಟ್ಟುತ್ತಾ ಎಂಜಾಯ್ ಮಾಡಿದರು. ಇನ್ನು ಕಂಸಾಳೆ ನೃತ್ಯದಲ್ಲಿ ಕಂಡು ಬಂದ ಸಾಹಸಮಯ ದೃಶ್ಯಗಳಿಗೆ ಚಪ್ಪಾಳೆಯ ಜೊತೆಗೆ ಸಿಳ್ಳೆಗಳು ಕೇಳಿ ಬಂದವು.
ಆ ನಂತರ ಕೆರೆಮನೆ ಶಿವಾನಂದ ಹೆಗಡೆಯವರು ಪ್ರದರ್ಶಿಸಿದ ‘ಪಂಚವಟಿ’ ಕಥೆಯಾಧಾರಿತ ಯಕ್ಷಗಾನ ವೀಕ್ಷಕರನ್ನು ಬಹುವಾಗಿ ಆಕರ್ಷಿಸಿತು. ಯಕ್ಷಗಾನದ ಪ್ರತಿ ದೃಶ್ಯಗಳನ್ನು ವೀಕ್ಷಕ ವೃಂದ ಸದ್ದುಗದ್ದಲಗಳನ್ನು ಮಾಡದೇ ತದೇಕಚಿತ್ತದಿಂದ ವೀಕ್ಷಿಸಿತು. ತಾಳಮದ್ದಳೆಯ ಸದ್ದು ಮತ್ತು ಯಕ್ಷಗಾನದ ಹಿಮ್ಮೇಳದ ಹಾಡು, ಹೌಹಾರಿಕೆ ಇಡೀ ರಂಗಾಯಣವನ್ನು ಸುತ್ತುವರೆದಿತ್ತು. ಎರಡೂ ತಂಡದ ಕಲಾವಿದರಿಗೆ ಪ್ರಶಸ್ತಿ ಮತ್ತು ಸ್ಮರಣಿಕೆಯನ್ನು ನೀಡುವ ಮೂಲಕ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ನಮ್ಮ ಜನಪದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಯುವಪಡೆಯನ್ನು ಸಿದ್ಧಗೊಳಿಸಬೇಕಾದ ಜವಾಬ್ದಾರಿ ಸರ್ಕಾರ ಸೇರಿದಂತೆ ನಮ್ಮೆಲ್ಲರ ಮೇಲಿದೆ ಎಂದರು.
ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ಜನಪದವನ್ನು ಪಠ್ಯದ ಮೂಲಕ ಬೋಧಿಸುವುದು, ಕಲೆಯಾಗಿ ಕಲಿಸುವ ಅಗತ್ಯವಿದೆ. ಮೈಸೂರು ವಿವಿಯಲ್ಲಿ ಬಹಳ ಉತ್ಸಾಹದಿಂದ ಜನಪದ ವಿಭಾಗವನ್ನು ಆರಂಭಿಸಲಾಯಿತು. ಆದರೆ, ಈಗ ಅದು ಮಾಮೂಲಿಯಾಗಿ ಒಂದು ವಿಷಯವಾಗಿದೆ. ಎಲ್ಲೂ ಸೀಟು ಸಿಗದೇ ಇದ್ದಾಗ ಡಿಗ್ರಿ ಸರ್ಟಿಫಿಕೇಟ್ ಪಡೆಯಲು ಅಂತಿಮವಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಸೇರುತ್ತಾರೆ ಎಂದರು.
ಜನಪದ ಅತ್ಯಂತ ಪ್ರಾಚೀನ ಕಲೆಯಾಗಿದ್ದು, ಇದಕ್ಕೆ ಪ್ರಸರಣ ಗುಣವೂ ಇದೆ. ಇಂತಹ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಕಲಿಯತ್ತಾ, ಅನುಸರಿಸುತ್ತಾ ಹೋದರೆ ಎಲ್ಲರೂ ಪರಕೀಯರು, ಪರದೇಶಿಗಳು ಆಗುತ್ತೀರಾ. ಹಾಗಾಗಿ, ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಾ ಸ್ವದೇಶಿಗಳಾಗಿಯೇ ನಾವಿರಬೇಕು ಎಂದರು.
ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ, ಕಲೆಯ ವಿಷಯಕ್ಕೆ ಬಂದಾಗ ನಮ್ಮ ದೇಶಕ್ಕೆ ಯಾವುದೇ ದೇಶವು ಪ್ರತಿಸ್ಪರ್ಧಿಯಾಗಲಾರದು. ಅಷ್ಟು ಕಲೆಗಳು ನಮ್ಮಲ್ಲಿ ಇವೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನಗಳನ್ನು ನೀಡುವ ಮೂಲಕ ಆದ್ಯತೆ ನೀಡಬೇಕು ಎಂದರು.
ಎಲ್ಲ ಕಲೆಗಳು ನಮ್ಮ ಜನಪದ ಅಡಿಗಲ್ಲಿನ ಮೇಲೆ ನಿಂತಿವೆ. ಅದೇ ಇಲ್ಲವಾದರೆ, ಬೇರೆ ಎಲ್ಲ ಕಲೆಗಳು ಕುಸಿಯುತ್ತವೆ. ಪಾಶ್ಚಿಮಾತ್ಯ ಪ್ರಭಾವ ನಮ್ಮ ಅಸ್ಮಿತೆಯನ್ನು ಕುಂದಿಸುವ ಹಂತಕ್ಕೆ ಬಂದಿದೆ. ಹೀಗಾದರೆ, ನಮ್ಮ ಕಲೆಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಅವುಗಳನ್ನು ನಾವುಗಳು ಗಟ್ಟಿಗೊಳಿಸಿ, ಕಟ್ಟಬೇಕು. ಮರೆಯಾಗುತ್ತಿರುವ ಕಲೆಗಳ ಬಗ್ಗೆ ಚಿಂತನೆ ನಡೆಸುವ ವೇದಿಕೆಯೂ ಇದಾಗಬೇಕು ಎಂದರು.
ಭಾರತದ ನೆಲದಲ್ಲಿ ನಿಂತು ಭಾರತೀಯತೆ ಬಗ್ಗೆ ಹೇಳುವ ಪರಿಸ್ಥಿತಿ ಬಂದಿರುವುದು ಆತಂಕ ಹುಟ್ಟಿಸುತ್ತದೆ. ಭಾರತವೇ ಬಹುರೂಪಿ. ಬಹುರೂಪಿ ಭಾರತವನ್ನು ನಮ್ಮ ಮನಸ್ಸಿಗೆ ತೆಗೆದುಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲ ಮಠಪತಿ, ರಂಗೋತ್ಸವದ ಸಂಚಾಲಕ ಜಗದೀಶ್ ಮನುವಾರ್ತೆ, ಜನಪದೋತ್ಸವದ ಸಂಚಾಲಕರಾದ ಗೀತ ಮೋಂಟಡ್ಕ ಹಾಜರಿದ್ದರು.
ಪೋಟೋಗಳು : ನವಿಲು ವೇಷಧಾರಿಯೊಬ್ಬರು ಸಭಿಕರೆಡೆಯಿಂದ ವೇದಿಕೆಗೆ ಬಂದು ಕುಣಿಯುವ ಮೂಲಕ ಬಹುರೂಪಿ ಜನಪದೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಡಾ.ಪಿ.ಕೆ.ರಾಜಶೇಖರ್, ಕೆರೆಮನೆ ಶಿವಾನಂದ ಹೆಗಡೆ ಇತರರು ಹಾಜರಿದ್ದರು.
ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ನಲ್ಲಿ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ. ನಟ ದರ್ಶನ್ ಅವರ…
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಷ್ಕರ್ ಎ ತೈಬಾ ಉಗ್ರ ಸಂಘಟನೆಯ ಶಂಕಿತರು ಬಂಧನವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ…
ಮೈಸೂರು: ಸಚಿವ ಎಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಯಾದರೆ ನನಗೆ ಖುಷಿಯಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಕೂಗು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದೂರಾಡಳಿತವನ್ನು ಅಂತ್ಯಗೊಳಿಸಿ ರಾಜ್ಯದಲ್ಲಿ ಬಿಜೆಪಿ…
ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಆದಷ್ಟು ಶೀಘ್ರವಾಗಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ…
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿನ ಝಳ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ…