ಜಿಲ್ಲೆಗಳು

ಬಿ.ಆರ್.ಹಿಲ್ಸ್ ಹೆದ್ದಾರಿಯಲ್ಲಿ ಕಿತ್ತು ಹೋದ ಡಾಂಬರು

ಜಲ್ಲಿಯಿಂದ ಮುಚ್ಚಿದರೂ ಮತ್ತೆ ಹಳ್ಳ ನಿರ್ವಾಣ; ಸಂಚಾರ ದುಸ್ತರ

ವರದಿ: ಪ್ರಸಾದ್ ಲಕ್ಕೂರು

ಚಾಮರಾಜನಗರ: ನಗರದಿಂದ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ(೮೦)ಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.

ಕಳೆದ ಮೂರು ತಿಂಗಳಿಂದ ಸುರಿದ ಸತತ ಮಳೆಗೆ ಡಾಂಬರು ಕಿತ್ತು ಬಂದಿದೆ. ಇತ್ತೀಚೆಗೆ ಎಂ.ಸ್ಯಾಂಡ್ ಮತ್ತು ಜಲ್ಲಿ ಮಿಶ್ರಣ ಮಾಡಿ ಹಾಕಿ ಗುಂಡಿಗಳಿಗೆ ತೇಪೆ ಹಾಕಿದ್ದರೂ ಪ್ರೋಂಜನವಾಗಿಲ್ಲ. ವಾಹನಗಳ ಓಡಾಟದಿಂದ ಜಲ್ಲಿ ಚದುರಿ ಹೋಗಿ ಮತ್ತಷ್ಟು ತೊಂದರೆಯಾಗಿದೆ.

ನಗರದ ರಾಮಸಮುದ್ರದ ಬಡಾವಣೆಯ ಮುಂಭಾಗದ ತಿರುವಿನಲ್ಲಿ ರಸ್ತೆ ಪದೇ ಪದೇ ಕಿತ್ತು ಹೋಗುತ್ತಿದೆ. ಗುಣಮಟ್ಟದ ಡಾಂಬರು ಹಾಕಿ ಸರಿಪಡಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡದೆ ಇರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ನಾಗವಳ್ಳಿಯಲ್ಲಿ ೩ ಕಡೆ ಪೈಪ್‌ಲೈನ್ ಹಾಕಲು ಹೆದ್ದಾರಿಯನ್ನು ೬ ತಿಂಗಳ ಹಿಂದೆಯೇ ಅಗೆದು ಹಳ್ಳ ಮಾಡಲಾಗಿದೆ. ಇನ್ನೂ ಸರಿಯಾಗಿ ಡಾಂಬರು ಹಾಕಿ ಮುಚ್ಚದೆ ಹಾಗೆಯೇ ಬಿಡಲಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿಯ ಹೊಂಡರಬಾಳು ಗ್ರಾಮದ ಬಳಿಯಿಂದ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದೊಳಗೆ ೨೫ ಕಿ.ಮೀ.ಸಾಗಲಿದ್ದು, ಐತಿಹಾಸಿಕ ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸಲಿದೆ.

ಅರಣ್ಯದೊಳಗೆ ಕಿರಿದಾದ ಹೆದ್ದಾರಿಯು ೭-೮ ಕಡೆ ಕಿತ್ತು ಹೋಗಿದೆ. ತಾತ್ಕಾಲಿಕವಾಗಿ ಜಲ್ಲಿ ಮತ್ತು ಎಂ.ಸ್ಯಾಂಡ್ ಬಳಿಸಿ ಮುಚ್ಚಿದರೂ ಮತ್ತೆ ಹಳ್ಳವಾಗಿದೆ. ಜಲ್ಲಿ ಚದುರಿ ಹೋಗಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವು ಕಡೆ ರಸ್ತೆಯ ಬದಿ ಕೊಚ್ಚಿ ಹೋಗಿ ಮಂಡಿುುಂದ್ದದ ಹಳ್ಳ ಬಿದ್ದಿದೆ. ಬೈಕ್‌ನಲ್ಲಂತೂ ಓಡಾಡಲು ಸರ್ಕಸ್ ವಾಡಬೇಕಿದೆ.

 ವೀಕೆಂಡ್‌ನಲ್ಲಿ ಹೆಚ್ಚು ವಾಹನ ಓಡಾಟ
ಹೆದ್ದಾರಿಯಲ್ಲಿ ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್ ಚಾಮರಾಜನಗರದಿಂದ – ಬಿಳಿಗಿರಿರಂಗನಬೆಟ್ಟಕ್ಕೆ ಸಂಚರಿಸುತ್ತದೆ. ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯಕ್ಕೆ ಹೋಗಿ ಬರುತ್ತಾರೆ. ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಕೆ.ಗುಡಿಯಲ್ಲಿರುವ ಜಂಗಲ್ ರೆಸಾರ್ಟ್‌ಗೆ ತೆರಳುತ್ತಾರೆ. ವಾಸ್ತವ್ಯ ಹೂಡಿ
ಸಫಾರಿ ಹೋಗಿ ಅರಣ್ಯದ ಸೊಬಗು ಸವಿದು ಖುಷಿ ಪಡುತ್ತಾರೆ. ಇನ್ನು ಕೆ.ಗುಡಿ ವಲಯಾರಣ್ಯ ಕಚೇರಿಯ ನಲ್ಲೂರು ಸಮೀಪವಿದ್ದು, ಪ್ರತಿನಿತ್ಯ ಅರಣ್ಯಾಧಿಕಾರಿಗಳ ಜೀಪು, ಸಫಾರಿ ವಾಹನಗಳು ಓಡಾಡುತ್ತವೆ. ಆದರೆ, ಅರಣ್ಯದೊಳಗಿನ ಕಿರಿದಾದ ಹೆದ್ದಾರಿ ಕಿತ್ತು ಹೋಗಿದ್ದರಿಂದ ಚಾಲಕರು ಪ್ರಯಾಸ ಪಡಬೇಕಿದೆ.

 ಹಿತಕರ ವನಸಿರಿ; ಸಂಚಾರ ಕಿರಿಕಿರಿ
ಹೊಂಡರಬಾಳು ಬಳಿಯ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ನಿಂದ ಹೊರಟರೆ ಗಗನ ಚುಂಬಿ ಮರಗಳು, ಹಸಿರು ನೆಲ, ಅಲ್ಲಲ್ಲಿ ಜಿಂಕೆಗಳ ಪ್ರತ್ಯಕ್ಷ, ಪಕ್ಷಿಗಳ ಕಲರವ, ಜನರು-ವಾಹನಗಳ ಸದ್ದುಗದ್ದಲವಿಲ್ಲದ ತಂಪಾದ ಹಿತಕರ ವಾತಾವರಣ ಕಣ್ಮನ ಸೆಳೆಯುತ್ತದೆ. ಪ್ರಕೃತಿಯು ಸಿರಿ ಮನಸ್ಸಿಗೆ ಹಿತ ನೀಡಿದರೂ ಹೆದ್ದಾರಿ ಮಾತ್ರ ಸಂಚಾರಕ್ಕೆ ಕಿರಿಕಿರಿ ಮಾಡುತ್ತದೆ.

 ಮಳೆಯಿಂದ ಹುಲಿ ಸಂರಕ್ಷಿತಾರಣ್ಯದೊಳಗೆ ಕಿತ್ತುಹೋದ ಹೆದ್ದಾರಿಯನ್ನು ದುರಸ್ತಿ ಮಾಡಿಸಿಕೊಡಿ ಎಂದು ಅರಣ್ಯ ಇಲಾಖೆಯ ವತಿಯಿಂದ ಲೋಕೋಪಯೋಗಿ ಇಲಾಖೆ ಈಗಾಗಲೇ ಮನವಿ ಮಾಡಲಾಗಿದೆ. -ವಿನೋದ್‌ಗೌಡ, ಕೆ.ಗುಡಿ ವಲಯ ಅರಣ್ಯಾಧಿಕಾರಿ.

andolana

Recent Posts

ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…

3 hours ago

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

8 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

9 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

9 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

10 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

10 hours ago