ಚಿರಂಜೀವಿ ಹುಲ್ಲಹಳ್ಳಿ
ಆಂದೋಲನ ಸಂದರ್ಶನ : ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್
ಮೈಸೂರು: ‘ಆಂದೋಲನ’ ದಿನ ಪತ್ರಿಕೆ ನಡೆಸಿದ ಕಿರು ಸಂದರ್ಶನದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಎಂ.ಚಂದ್ರಶೇಖರ್ ರೈತರ ಸಮಸ್ಯೆಗಳ ಪರಿಹಾರ ಮತ್ತು ಇಲಾಖೆಯಲ್ಲಿನ ಸವಲತ್ತುಗಳು ಮತ್ತು ಸೌಲಭ್ಯಗಳನ್ನು ದೊರೆಕಿಸುವ ಕಾರ್ಯಕ್ರಮಗಳನ್ನು ತಿಳಿಸಿದರು.
ಕೆಲವು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಲಾಖೆಯ ಅಧಿಕಾರಗಳ ಮೇಲೆ ದಬ್ಬಾಳಿಕೆ ನಡೆಸಲು ರಸಗೊಬ್ಬರದ ಕೊರತೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಈಗಾಗಲೇ ಜಿಲ್ಲೆಯಲ್ಲಿ ೩ ಭಾಗಗಳಲ್ಲಿ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮತ್ತು ಉಗ್ರಾಣವನ್ನು ಪತ್ತೆ ಹಚ್ಚಲಾಗಿದೆ. ಕಾಳಸಂತೆಯ ರಸಗೊಬ್ಬರದ ಕಡಿವಾಣಕ್ಕಾಗಿ ಸಹಾಯವಾಣಿಯನ್ನು ಕೂಡ ತೆರೆಯಲಾಗಿದ್ದು, ನಿತ್ಯ ೫ರಿಂದ ೧೦ ಕರೆಗಳು ಬರುತ್ತಿವೆ. ಇದರಲ್ಲಿ ಒಂದೆರಡು ಕರೆಗಳು ಮಾತ್ರ ನಿಜವಾಗಿರುತ್ತವೆ. ಕಾಳಸಂತೆಯಲ್ಲಿ ರಸಗೊಬ್ಬರದ ಮಾರಾಟದ ಕಡಿವಾಣಕ್ಕೆ ರೈತರ ಬೆಂಬಲ ಮತ್ತು ಮಾಹಿತಿ ನೀಡಿ ಎನ್ನುವುದು ಅವರ ಮನವಿ.
ಅತಿವೃಷ್ಟಿಯಿಂದಾದ ಬೆಳೆ ಪರಿಹಾರ ರೈತರಿಗೆ ತಲುಪುತ್ತಿದೆಯೇ?
ಜಿಲ್ಲೆಯಲ್ಲಿ ಮುಂಗಾರು ನಿಧಾನವಾಗಿ ಆರಂಭವಾದರೂ ವಾಡಿಕೆ ಮಳೆ ಪ್ರಯಾಣದಲ್ಲಿ ಕೊರತೆ ಕಾಣಲಿಲ್ಲ. ಜೊತೆಗೆ ಕೇರಳ ಭಾಗದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಜಲಾಶಯಗಳು ಸಂಪೂರ್ಣ ಭರ್ತಿಯಾದವು. ಕೆರೆ-ಕಟ್ಟೆಗಳ ಕೊಡಿ ಬಿದ್ದ ಹಿನ್ನೆಲೆಯಲ್ಲಿ ಅತಿವೃಷ್ಠಿ ಸಂಭವಿಸಿ ಜಿಲ್ಲೆಯ ೪೧೮ ಹೆಕ್ಟೇರ್ ಬೆಳೆ ಹಾನಿಗೆ ತುತ್ತಾಯಿತು. ತಕ್ಷಣ ಕಾರ್ಯ ಪ್ರವೃತ್ತರಾದ ಇಲಾಖೆಯು ಹಾನಿಗೊಳಗಾದ ಬೆಳೆ ಮತ್ತು ಜಮೀನಿನ ಸಮೀಕ್ಷೆ ನಡೆಸಿ ಪರಿಹಾರ ದೊರೆಕುವಂತೆ ಮಾಡಿದೆ.
ಇದರಿಂದ ಬೆಳೆಯಾಗಿ ಸಂಕಷ್ಟಕ್ಕೆ ಸಿಲುಕಿದ ೭೫೦ ಕ್ಕೂ ಹೆಚ್ಚು ಮಂದಿಗೆ ಪರಿಹಾರ ಹಣ ತಲುಪುವಂತಾಗಿದೆ. ಹಣ ಬಿಡುಗಡೆಯಾದ ತಕ್ಷಣವೇ ಇನ್ನುಳಿದ ರೈತರಿಗೆ ಪರಿಹಾರ ಸಿಗಲಿದ್ದು, ಆತಂಕ ಪಡುವ ಅಗತ್ಯವಿಲ್ಲ. ಸದ್ಯಕ್ಕೆ ಯಾವುದೇ ಹಾನಿ ಅಥವಾ ರೋಗ ಬಾಧಿಸುವ ಭೀತಿ ಇಲ್ಲ.
ಕೃಷಿ ಸಂಜೀಜಿನಿ ಯೋಜನೆಯ ಪ್ರಗತಿ ಹೇಗಿದೆ?
ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ಬಾಧೆಗಳು, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ನಿಖರವಾಗಿ ಹಾಗೂ ಸಮಯೋಚಿತವಾಗಿ ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರವು ಕೃಷಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಈಗಾಗಲೇ ಕೃಷಿ ಸಂಜೀವಿನಿ ಕಾರ್ಯನಿರ್ವಹಿಸುತ್ತಿದ್ದು, ಕೃಷಿಯಲ್ಲಿ ಆಸಕ್ತರು, ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿಗಳು ತಮ್ಮ ಬಿಡುವಿನ ಸಮಯದಲ್ಲಿ ಸ್ವ-ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊದಲು ಜಿಲ್ಲೆಗೆ ಒಂದು ವಾಹನ ಇತ್ತು. ಈಗ ಪ್ರತಿ ತಾಲ್ಲೂಕಿಗೂ ತಲಾ ೧ ವಾಹನ ಸೇವೆ ಒದಗಿಸಿದೆ. ರೈತರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇಲಾಖೆಯಿಂದಿರುವ ವಿಶೇಷ ಕಾರ್ಯಕ್ರಮಗಳೇನು?
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹಿಸುವ ಸಲುವಾಗಿ ಡೀಸೆಲ್ ಖರೀದಿಗೆ ಸಹಾಯಧನ ನೀಡುವ ರೈತ ಶಕ್ತಿ ಎಂಬ ವಿನೂತನ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಯೋಜನೆಯಡಿ ಪ್ರತಿೊಂಬ್ಬ ರೈತರಿಗೂ, ಎಕರೆಗೆ ತಲಾ ೨೫೦ ರೂ.ನಂತೆ ಗರಿಷ್ಠ ೫ ಎಕರೆಯವರೆಗೆ ಸಹಾಯಧನ ನೀಡಲಾಗುತ್ತದೆ.
ಪ್ರಸ್ತುತದ ಬೆಳೆಗಳಿಗೆ ರೋಗ ಬಾಧಿಸುವ ಸೂಚನೆ ಇದೆಯೇ?
ಜಿಲ್ಲೆಯಲ್ಲಿ ಮುಂಗಾರು ತಡವಾಗಿ ಆಗಮಿಸಿದ್ದು, ಪ್ರಸ್ತುತ ಭತ್ತ, ರಾಗಿ, ಮುಸುಕ್ಕಿನ ಜೋಳ, ಕಬ್ಬು, ಉರುಳಿ ಮುಂತಾದ ಬೆಳೆಗಳು ಹೆಚ್ಚು ಹೆಕ್ಟೇರ್ನಲ್ಲಿವೆ. ಯಾವುದೇ ರೋಗ ಬಾಧಿಸುವ ಭೀತಿಯಿಲ್ಲ. ರೋಗಕ್ಕೆ ತುತ್ತಾಗುವ ಮುಂಚೆಯೇ ಕೀಟ ನಾಶಕಗಳನ್ನು ಸಿಂಪಡಿಸಿಕೊಳ್ಳಬೇಕು. ಕೃಷಿ ಇಲಾಖೆಯನ್ನು ಸಂಪರ್ಕಿಸಿ ಸೂಕ್ತ ಸಲಹೆಗಳನ್ನು ಪಡೆದು ಬೆಳೆಯನ್ನು ರಕ್ಷಿಸಿ ಹೆಚ್ಚಿನ ಇಳುವರಿ ಪಡೆದುಕೊಳ್ಳಬಹುದು. ಇದಕ್ಕಾಗಿ ಕೃಷಿ ಸಂಜೀವಿನಿ ವಾಹನಗಳನ್ನು ರೈತರ ಜಮೀನಿಗೆ ಕಳುಹಿಸಲಾಗುತ್ತಿದೆ ಎನ್ನುವುದು ಅವರ ವಿವರಣೆ.
ಮುಂಬೈ: ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…
ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…
ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…
ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…
ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…
ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…