ಜಿಲ್ಲೆಗಳು

ಆಂದೋಲನ ಸಂದರ್ಶನ : ವರ್ಷದಲ್ಲೇ ಚಂದ್ರಯಾನ 3 ಉಡಾವಣೆಗೆ ಸಿದ್ಧತೆ

ಭಾರತವೂ ಸಣ್ಣ ಸಣ್ಣ ಉಪಗ್ರಹ ಉಡಾವಣೆಗಳ ಸಾಮರ್ಥ್ಯ ಹೊಂದಬೇಕಿದೆ:ಅಣ್ಣಾದೊರೈ ಸಲಹೆ

ರವಿಕೋಟಿ/ ಕೆ.ಬಿ.ರಮೇಶ ನಾಯಕ

ಮೈಸೂರು: ಈಗಾಗಲೇ ಚಂದ್ರಯಾನ ೧,೨ ಪೂರ್ಣಗೊಳಿಸಿದ್ದೇವೆ. ಚಂದ್ರಯಾನ ೩ಕ್ಕೂ ಸಿದ್ದತೆಗಳು ನಡೆಯುತ್ತಿದ್ದು, ಈ ವರ್ಷದ ಜೂನ್ ಹೊತ್ತಿಗೆ ಉಡಾವಣೆಯಾಗಲಿದೆ. ಭಾರತವೂ ಬಾಹ್ಯಾಕಾಶ ವಲಯದಲ್ಲಿ ಗಣನೀಯ ಸಾಧನೆ ಮಾಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿಯಾಗುವ ವಿಶ್ವಾಸವಿದೆ.

ಮೂರೂವರೆ ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಸ್ಥೆ( ಇಸ್ರೋ)ದಲ್ಲಿ ಕೆಲಸ ಮಾಡಿರುವ ಇಸ್ರೋ ಮಾಜಿ ವಿಜ್ಞಾನಿ, ಚಂದ್ರಯಾನ ೧ ಮತ್ತು ೨ ರ ಯೋಜನಾ ನಿರ್ದೇಶಕ ಡಾ.ಮೈಲಸ್ವಾಮಿ ಅಣ್ಣಾದೊರೈ ಹೇಳಿದ ನುಡಿಗಳಿವು.

ಮೈಸೂರಿನ ಎನ್‌ಐಇ ಸಂಸ್ಥೆ ಆಯೋಜಿಸಿದ್ದ ಕಾರ‌್ಯಕ್ರಮದಲ್ಲಿ ಭಾಗವಹಿಸಲೆಂದು ಆಗಮಿಸಿದ್ದ ಸಂದರ್ಭದಲ್ಲಿ ಆಂದೋಲನಕ್ಕೆ ವಿಶೇಷ ಸಂದರ್ಶನ ನೀಡಿ ಬಾಹ್ಯಾಕಾಶ ಕ್ಷೇತ್ರದೊಂದಿಗಿನ ನಂಟು, ಅದರ ಬದಲಾವಣೆಗಳು, ಜಾಗತಿಕ ಸ್ಪರ್ಧೆ, ಚಂದ್ರಯಾನ ಸಹಿತ ಹಲವು ವಿಷಯಗಳ ಕುರಿತು ಮಾತನಾಡಿದರು.

ಮುಂದುವರಿದ ರಾಷ್ಟ್ರಗಳಂತೆ ಭಾರತದಲ್ಲೂ ಸಣ್ಣ ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಬೇಕು. ಕಡಿಮೆ ಖರ್ಚಿನಲ್ಲಿ ಮತ್ತು ವೇಗವಾಗಿ ತಲುಪುವಂತಹ ಉಪಗ್ರಹಗಳನ್ನು ಉಡಾವಣೆ ಮಾಡಿದಷ್ಟು ದೇಶ ಮತ್ತಷ್ಟು ಮುಂದುವರಿಯಲು ಕಾರಣವಾಗುತ್ತದೆ. ಭವಿಷ್ಯದಲ್ಲಿ ನಾಸಾದಷ್ಟು ಸಾಮರ್ಥ್ಯವನ್ನು ಇಸ್ರೋ ಹೊಂದುವ ವಿಶ್ವಾಸವಿದೆ ಎನ್ನುವುದು ಅವರ ಖಚಿತ ಅಭಿಪ್ರಾಯ.

ಆಂದೋಲನ: ೪೦ ವರ್ಷಗಳ ಕಾಲ ಚಂದ್ರಯಾನದ ಬಗ್ಗೆ ಕೆಲಸ ಮಾಡಿದ್ದೀರಾ, ಯಾವ ರೀತಿ ಸವಾಲು ಇತ್ತು?ಈಗ ಹೋಗಿರುವುದಕ್ಕೆ ಏನನ್ನಿಸುತ್ತಿದೆ ?

ಅಣ್ಣಾದೊರೈ: ಹೌದು, ನೀವು ಹೇಳುವ ಮಾತಿನಂತೆ ೪೦ ವರ್ಷಗಳ ಕಾಲ ಕೆಲಸ ಮಾಡಿದ್ದು ಖುಷಿ ತಂದಿದೆ. ಸವಾಲಿನಲ್ಲಿ ಕೆಲಸ ಮಾಡಿದ್ದರಿದ್ದರಿಂದ ಈಗ ಅ ಹಂತಕ್ಕೆ ಬಂದಿದ್ದೇವೆ. ಈಗಾಗಲೇ ಚಂದ್ರಯಾನ ೧, ೨ ಕೈಗೊಂಡಿದ್ದೇವೆ. ಚಂದ್ರಯಾನ ೩ಕ್ಕೂ ಸಿದ್ದತೆಗಳು ಆಗಿವೆ. ಕಡಿಮೆ ಅವಧಿಯಲ್ಲಿ ಚಂದ್ರಯಾನದ ಆನ್ವೇಷಣೆ ನಡೆಸಲಾಗಿದೆ. ಅಲ್ಲಿ ಏನು ಸಿಗುತ್ತಿದೆ ಎಂಬುದನ್ನು ಮುಂದೆ ನೋಡೋಣ.

ಆಂದೋಲನ: ಬಾಹ್ಯಾಕಾಶ ಕ್ಷೇತ್ರಕ್ಕೆ ಖಾಸಗಿ ಪ್ರವೇಶ ಅವಶ್ಯಕತೆ ಇದೆಯೇ

ಅಣ್ಣಾದೊರೈ: ಬಾಹ್ಯಾಕಾಶಕ್ಕೂ ಖಾಸಗಿಯಾಗಿ ಪ್ರವೇಶ ಆಗಬೇಕು. ಅದರಿಂದ ಪೈಪೋಟಿ ಉಂಟಾಗಲಿದೆ. ಸ್ಪರ್ಧಾತ್ಮಕತೆ ಬರಲಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಬಿಟ್ಟು ಹೋದವರ ಜಾಗಕ್ಕೆ ಮತ್ತೊಬ್ಬರನ್ನು ತಂದು ಕೂರಿಸಬಹುದು.ಆದರೆ, ಆವರ ಅನುಭವಗಳನ್ನು ತರಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ಅನುಭವ ಮುಖ್ಯ. ಅಂತಹವರನ್ನು ಉಳಿಸಿಕೊಳ್ಳಬೇಕು. ೬೦ ವರ್ಷದ ನಂತರವೂ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಮುಂದುವರಿಸಬೇಕಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಬೇಕು ಎಂದರೆ ಪರಿಣಿತರು ಕೂಡ ಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲೂ ಬೆಳವಣಿಗೆ ಮತ್ತು ಬದಲಾವಣೆ ಆಗಬೇಕು.

ಆಂದೋಲನ: ಬಾಹ್ಯಕಾಶ ಕ್ಷೇತ್ರದಲ್ಲಿ ಏನು ಫೋಕಸ್ ಮಾಡಬೇಕಿದೆ

ಅಣ್ಣಾದೊರೈ: ದೇಶದಲ್ಲಿ ಉಪಗ್ರಹ ಉಡಾವಣೆಗಳು ನಡೆಯುತ್ತಿವೆ. ಆದರೆ, ಮತ್ತಷ್ಟು ವೇಗವಾಗಿ ಉಡಾವಣೆಗಳು ಆಗಬೇಕು. ಕಡಿಮೆ ಖರ್ಚಿನಲ್ಲಿ ಮತ್ತು ದೊಡ್ಡಪ್ರಮಾಣದಲ್ಲಿ ನಡೆಯಬೇಕು. ನಮ್ಮಲ್ಲಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಂದ್ರಯಾನ ಮಾಡಿದ್ದೇವೆ. ಮಾಡುತ್ತಿದ್ದೇವೆ. ನಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚುವ ಕೆಲಸ ಆಗಲೇಬೇಕಿದೆ. ಆಗ ನಾವು ಈ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಮುಂದುವರಿದಿದ್ದೇವೆ ಎಂಬುದು ಗೊತ್ತಾಗುತ್ತದೆ.

ಆಂದೋಲನ: ನಮ್ಮಲ್ಲಿರುವ ಬುದ್ಧಿವಂತಿಕೆ ಬಳಸಿಕೊಳ್ಳಲಾಗುತ್ತಿದೆಯೇ

ಅಣ್ಣಾದೊರೈ: ನಮ್ಮಲ್ಲಿರುವ ಬುದ್ಧಿವಂತಿಕೆ,ಜ್ಞಾನ,ಮೆದುಳಿನ ಸಾಮರ್ಥ್ಯವನ್ನು ನಾವು ಉಪಯೋಗಿಸಿಕೊಳ್ಳಬೇಕು. ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರವನ್ನು ಆಕರ್ಷಣೀಯವಾಗಿ ಮಾಡಬೇಕು. ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಂಡರೆ ಅದರಿಂದ ಸಂಪನ್ಮೂಲ ಬರಲಿದೆ. ಜೊತೆಗೆ ಉದ್ಯೋಗ ಸೃಷ್ಟಿಗೂ ಅವಕಾಶ ದೊರೆಯಲಿದೆ. ಅಮೆರಿಕಾದ ನಾಸಾ ಜಗತ್ತಿನಲ್ಲೇ ಗಮನ ಸೆಳೆದಂತೆ ಮುಂದೆ ಇಸ್ರೋ ಕೂಡ ಅಷ್ಟೇ ಸಾಮರ್ಥ್ಯವನ್ನು ಹೊಂದಬಹುದು. ಅದೇ ರೀತಿ ಆಗಬಹುದು ಎನ್ನುವ ನಿರೀಕ್ಷೆ ನಮ್ಮಲ್ಲಿದೆ.

ಆಂದೋಲನ: ಸಂಶೋಧನೆಗಳು ಅಷ್ಟಾಗಿ ಆಗುತ್ತಿಲ್ಲ ಎನ್ನಿಸುತ್ತಿಲ್ಲವೇ ?

ಅಣ್ಣಾದೊರೈ: ಸಂಶೋಧನೆಗಳು ಆಗುತ್ತಿವೆ. ನಾವು ಮಾಡುವ ಸಂಶೋಧನೆಗಳು ಜಗತ್ತಿಗೆ ತೋರಿಸುವ ಮಟ್ಟಿಗೆ ಆಗಬೇಕು ಎಂದರೆ ಅದಕ್ಕೆ ಸಮಯಬೇಕು. ಒಂದು ಉಪಗ್ರಹಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳು ಬೇಕಾಯಿತು. ಪ್ರಯತ್ನ ಪಡಬೇಕು.ಶ್ರಮ ಹಾಕುತ್ತಲೇ ಇರಬೇಕು. ನೀತಿ ನಿರೂಪಕರು ಹೇಳುವಂತೆ ಕಾಲಮಿತಿಯೊಳಗೆ ಮಾಡುವುದಲ್ಲ. ಆಡಳಿತಗಾರರು ಒಂದು ವರ್ಷದ್ದನ್ನು ಆರು ತಿಂಗಳಲ್ಲಿ ಮಾಡುತ್ತೇವೆ ಎನ್ನುತ್ತಾರೆ. ಆದರೆ, ಅದಕ್ಕೆ ನಿಗದಿತ ಸಮಯ ಬೇಕಾಗುತ್ತದೆ.

andolanait

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

33 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

59 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

3 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago