ಜಿಲ್ಲೆಗಳು

ದಸರಾ ಸುಗಮ ಸಂಚಾರಕ್ಕೆ ಸಕಲ ಸಿದ್ಧತೆ

ಬಸ್‌ಗಳ ಮಾರ್ಗಸೂಚಿ ಬಿಡುಗಡೆ ಮಾಡಿದ ಸಂಚಾರ ಪೊಲೀಸರು

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಅ.೪ ಮತ್ತು ೫ ರಂದು ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ಬಸ್ಸುಗಳು ಸಂಚರಿಸುವ ಮಾರ್ಗ ಬದಲಿಸಲಾಗಿದೆ.

ನಗರದ ಹೊರ ಭಾಗಗಳಿಂದ ಬರುವ ಹಾಗೂ ನಗರದಿಂದ ಹೊರ ಹೋಗುವ
ಗ್ರಾಮಾಂತರ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚರಿಸುವ ಮಾರ್ಗಗಳು ಇಂತಿವೆ.

೧. ಮೈಸೂರು-ಬೆಂಗಳೂರು

ಮೈಸೂರು-ಬೆಂಗಳೂರು ರಸ್ತೆ- ನಾಡಪ್ರಭು ಕೆಂಪೇಗೌಡ ವೃತ್ತ- ಎಡ ತಿರುವು- ರಿಂಗ್ ರಸ್ತೆ ಮೂಲಕ ಮಹದೇವಪುರ ರಿಂಗ್ ರಸ್ತೆ ಜಂಕ್ಷನ್- ಬಲ ತಿರುವು- ಸಾತಗಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ.

೨. ಹುಣಸೂರು ಮಾರ್ಗ
ಆಗಮನ:
ಹುಣಸೂರು ರಸ್ತೆ- ಆರ್.ವೆಂಕಟರಮಣಯ್ಯ ವೃತ್ತ (ಪಡುವಾರಹಳ್ಳಿ)- ಬಯಲು ರಂಗಮಂದಿರ ರಸ್ತೆ- ಬೋಗಾದಿ ರಸ್ತೆ ಜಂಕ್ಷನ್- ಎಂ.ಡಿ ಜಂಕ್ಷನ್- ಡಾ. ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಅಂಡರ್‌ಬ್ರಿಡ್ಜ್ ರಸ್ತೆ ಮೂಲಕ- ಏಕಲವ್ಯ ವೃತ್ತ- ಕೆ.ಆರ್.ಬಿ ರಸ್ತೆ-ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.
ನಿರ್ಗಮನ:
ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ- ಕೆ.ಆರ್.ಬಿ-ರಸ್ತೆ- ಕೌಟಿಲ್ಯ ವೃತ್ತ- ಡಿ.ಸಿ. ಕಚೇರಿ ಆರ್ಚ್ ಗೇಟ್ ಜಂಕ್ಷನ್- ಹುಣಸೂರು ರಸ್ತೆ- ಕಲಾ ಮಂದಿರ ಜಂಕ್ಷನ್- ವಾಲ್ಮೀಕಿ ಜಂಕ್ಷನ್ ಮಾರ್ಗವಾಗಿ ಮುಂದೆ ಸಾಗುವುದು.

೩. ಬೋಗಾದಿ ಮಾರ್ಗ
ಆಗಮನ:
ಬೋಗಾದಿ ರಸ್ತೆ- ಎಂ.ಡಿ ಜಂಕ್ಷನ್- ಡಾ.ಪದ್ಮ ವೃತ್ತ- ಅಗ್ನಿಶಾಮಕ ಠಾಣೆ ಜಂಕ್ಷನ್- ಅಂಡರ್ ಬ್ರಿಡ್ಜ್ ರಸ್ತೆ ಮೂಲಕ- ಏಕಲವ್ಯ ವೃತ್ತ- ಕೆ.ಆರ್.ಬಿ ರಸ್ತೆ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.

ನಿರ್ಗಮನ:
ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ – ಕೆ.ಆರ್.ಬಿ ರಸ್ತೆ- ಕೌಟಿಲ್ಯ ವೃತ್ತ- ಬೋಗಾದಿ ರಸ್ತೆ – .ಎಂ.ಡಿ ಜಂಕ್ಷನ್ ಮೂಲಕ ಬೋಗಾದಿ ರಸ್ತೆಯಲ್ಲಿ ಮುಂದೆ ಸಾಗುವುದು.

೪. ಎಚ್.ಡಿ. ಕೋಟೆ ಮಾರ್ಗ
ಆಗಮನ:
ಮಾನಂದವಾಡಿ ರಸ್ತೆ-ಶ್ರೀನಿವಾಸ ವೃತ್ತ- ಜೆ.ಎಲ್.ಬಿ. ರಸ್ತೆ- ವೇದಾಂತ ಹೆಮ್ಮಿಗೆ ವೃತ್ತ (ಎಸ್‌ಡಿಎಂ ಕಾಲೇಜು) – ಕಾಂತರಾಜ ಅರಸು ರಸ್ತೆ- ಅಶೋಕ ವೃತ್ತ (ಬಲ್ಲಾಳ್)- ಕೆ.ಜಿ.ಕೊಪ್ಪಲು ಅಂಡರ್ ಬ್ರಿಡ್ಜ್ ಜಂಕ್ಷನ್- ಕೆ.ಆರ್.ಬಿ ರಸ್ತೆ- ಏಕಲವ್ಯ ವೃತ್ತ- ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ.

ನಿರ್ಗಮನ:
ಮಹಾರಾಜ ಕಾಲೇಜು ಮೈದಾನದ ತಾತ್ಕಾಲಿಕ ಬಸ್ ನಿಲ್ದಾಣ – ಕೆ.ಆರ್.ಬಿ ರಸ್ತೆ- ಕೌಟಿಲ್ಯ ವೃತ್ತ- ರಾಧಾಕೃಷ್ಣ ಮಾರ್ಗ- ಪ್ರಾಚ್ಯ ವಸ್ತುಸಂಗ್ರಹಾಲಯದ ಕಟ್ಟಡದ ಪೂರ್ವ ಭಾಗದ ರಸ್ತೆಗೆ ಬಲತಿರುವು ಪಡೆದು ಕೆ.ಆರ್.ಬಿ ರಸ್ತೆ- ಏಕಲವ್ಯ ವೃತ್ತ- ಕೆ.ಜಿ.ಕೊಪ್ಪಲು ರೈಲ್ವೆ ಅಂಡರ್ ಬ್ರಿಡ್ಜ್ ಜಂಕ್ಷನ್- ಅಶೋಕ ವೃತ್ತ (ಬಲ್ಲಾಳ್)- ವೇದಾಂತ ಹೆಮ್ಮಿಗೆ ವೃತ್ತ (ಎಸ್.ಡಿ.ಎಂ)- ಜೆ.ಎಲ್.ಬಿ ರಸ್ತೆ- ಶ್ರೀನಿವಾಸ ವೃತ್ತ- ಮಾನಂದವಾಡಿ ರಸ್ತೆ ಮೂಲಕ ಸಾಗುವುದು.

೫. ನಂಜನಗೂಡು ಮಾರ್ಗ
ನಂಜನಗೂಡು ರಸ್ತೆಯಲ್ಲಿ ಗುಂಡೂರಾವ್ ನಗರದ ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ನಂಜನಗೂಡು ರಸ್ತೆ ಮೂಲಕ ಮುಂದೆ ಸಾಗಬೇಕು. (ಗುಂಡೂರಾವ್ ನಗರದ ಮೈದಾನದಿಂದ ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

೬. ಬನ್ನೂರು, ತಿ.ನರಸೀಪುರ ಮಾರ್ಗ
ಟಿ.ನರಸಿಪುರ ರಸ್ತೆ ಟಿ ಜಂಕ್ಷನ್- ಲಲಿತಮಹಲ್ ರಸ್ತೆ ಮೂಲಕ ಲಲಿತಮಹಲ್ ಆಟದ ಮೈದಾನದಲ್ಲಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಟಿ.ನರಸೀಪುರ ರಸ್ತೆ ಮೂಲಕ ಮುಂದೆ ಸಾಗಬೇಕು. (ಲಲಿತಮಹಲ್ ಮೈದಾನದಿಂದ ನಗರದ ಕಡೆಗೆ ಪ್ರವೇಶಿಸುವಂತಿಲ್ಲ.)

ಭಾಗ-೦೨
ಅ.೫ರಂದು ಬೆಳಿಗ್ಗೆ ೭ರಿಂದ ರಾತ್ರಿ ೯ರವರೆಗೆ ನಗರ ವ್ಯಾಪ್ತಿಯಲ್ಲಿ
ನಗರ ಸಾರಿಗೆ ಬಸ್ಸುಗಳು ಸಂಚರಿಸುವ ಮಾರ್ಗ ಮತ್ತು ನಿಲುಗಡೆಯ ಸ್ಥಳ

ಕುವೆಂಪುನಗರ, ರಾಮಕೃಷ್ಣನಗರ ಹಾಗೂ ಸರಸ್ವತಿಪುರಂ ಕಡೆಯಿಂದ ನಗರಕ್ಕೆ ಆಗುಸುವ/ ನಿರ್ಗಮಿಸುವ ನಗರ ಸಾರಿಗೆ ಬಸ್ಸುಗಳು ರಾಮಸ್ವಾಮಿ ವೃತ್ತದ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ ಮತ್ತು ಹತ್ತಿಸಿಕೊಂಡು ಮುಂದೆ ಸಾಗಬೇಕು.

 

andolana

Recent Posts

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

8 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

8 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

8 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

8 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

8 hours ago

ಪಿರಿಯಾಪಟ್ಟಣ: ಗರಿಗೆದರಿದ ತಂಬಾಕು ಕೃಷಿ ಚಟುವಟಿಕೆ

ನವೀನ್‌ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…

8 hours ago