ನಿಲ್ಲದ ಬೇಟೆಗಾರರ ದುಷ್ಕೃತ್ಯ: ಅರಣ್ಯ ಇಲಾಖೆ ಬಿಗಿ ಪಹರೆಗೆ ಒತ್ತಡ್ಙ
ವರದಿ : ಅನಿಲ್ ಅಂತರಸಂತೆ
ಅಂತರಸಂತೆ: ಆಹಾರ ಅರಸಿ ನಾಡಿಗೆ ಬರುವ ಸಾಕಷ್ಟು ಕಾಡುಪ್ರಾಣಿಗಳು ಕಳ್ಳಬೇಟೆಗಾರರ ಉರುಳಿಗೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಹುಟ್ಟಿಸಿದೆ.
ಅರಣ್ಯ ಇಲಾಖೆ ಕಾಡಂಚಿನ ಸುವಾರು ೩-೪ ಕಿಮೀ ವ್ಯಾಪ್ತಿಯಲ್ಲಿ ನೀರು ಹರಿಯುವ ಸ್ಥಳಗಳು, ಕಾಡುಪ್ರಾಣಿಗಳು ಓಡಾಡುವ ಸ್ಥಳಗಳು, ನಿರ್ಜನ ಪ್ರದೇಶಗಳಲ್ಲಿ ನಿರಂತರವಾಗಿ ಉರುಳು ಪತ್ತೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ತನ್ನ ಸಿಬ್ಬಂದಿಗೆ ಮಾರ್ಗದರ್ಶನ ನೀಡಿದೆ. ಆದರೂ ಜಿಂಕೆ, ಕಾಡುಹಂದಿ, ಮೊಲದ ಮಾಂಸಕ್ಕಾಗಿ ಕಳ್ಳಬೇಟೆಗಾರರು ಹಾಕುವ ಉರುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಚಿರತೆಗಳು, ಹುಲಿಗಳು ಸಿಲುಕಿ ಸಾವನ್ನಪ್ಪುತ್ತಿದ್ದು, ಉರುಳು ಹಾಕುವವರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಪ್ರಯತ್ನ ಮುಂದುವರೆಸಿದ್ದರೂ ಪ್ರವಾಣ ಏರಿಕೆಯಾಗುತ್ತಲೆ ಇದೆ. ಇದಕ್ಕೆ ಇತ್ತೀಚೆಗೆ ನಾಗರಹೊಳೆಯ ಅಂತರಸಂತೆ ವನ್ಯಜೀವಿ ವಲಯದ ತಾಯಿ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದ ಪ್ರಕರಣ ಸಾಕ್ಷಿಯಾಗಿದೆ.
ಕಳ್ಳಬೇಟೆಗಾರರು ಸಾಮಾನ್ಯವಾಗಿ ಬೈಕ್ನ ಬ್ರೇಕ್ ಕೇಬಲ್ ತಂತಿ, ಬೈಂಡಿಂಗ್ ವೈಯರ್, ಸೋಲಾರ್ ಬೇಲಿಗೆ ಅಳವಡಿಸುವ ತಂತಿಯನ್ನು ಬಳಸಿ ಹತ್ಯೆಗೆ ಜಾಲ ರೂಪಿಸುತ್ತಿದ್ದಾರೆ.
ಎಲ್ಲೆಲ್ಲಿ ಬಲಿ: ಮಾಂಸ ಹಾಗೂ ಚರ್ಮಕ್ಕಾಗಿ ಕಾಡು ಪ್ರಾಣಿಗಳ ಬೇಟೆಯಾಡಲು ಹಾಕುವ ಉರುಳಿಗೆ ೨೦೧೭ರ ಜನವರಿಯಲ್ಲಿ ನಾಗರಹೊಳೆಯ ಶ್ರೀಮಂಗಲ ಬಳಿ ೬ ವರ್ಷದ ಹೆಣ್ಣುಹುಲಿಯೊಂದು ಸಿಲುಕಿತ್ತು. ತಕ್ಷಣ ಗುರುತಿಸಿದ ಅರಣ್ಯಇಲಾಖೆ ರಕ್ಷಣಾ ಕಾರ್ಯ ನಡೆಸಿದರೂ ಪುನರ್ವಸತಿ ಕೇಂದ್ರದಲ್ಲಿ ಹುಲಿ ಸಾವನ್ನಪ್ಪಿತು.
೨೦೧೯ರ ಮಾರ್ಚ್ನಲ್ಲಿ ಗೋಣಿಕುಪ್ಪದ ಹರಿಹರ ಸಮೀಪ ಒಂದು ವರ್ಷದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಅದೇ ವರ್ಷ ಶ್ರೀಮಂಗಲ ಸಮೀಪ ೨ ವರ್ಷದ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು.
೨೦೧೭ರಲ್ಲಿ ಪೊನ್ನಂಪೇಟೆ ಸಮೀಪ ಒಂದುವರೆ ವರ್ಷದ ಹುಲಿ ಉರುಳಿಗೆ ಸಿಲುಕಿ ರಕ್ಷಣಾ ಕಾರ್ಯದ ವೇಳೆ ಪುನರರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿತ್ತು. ೨೦೨೦ರಲ್ಲಿ ನಾಗರಹೊಳೆಯಲ್ಲಿ ಹೆಣ್ಣು ಹುಲಿಯೊಂದು ಉರುಳಿಗೆ ಸಿಲುಕಿತ್ತು. ಅರಣ್ಯ ಇಲಾಖೆ ಕೂಡಲೇ ರಕ್ಷಿಸಿದ್ದರಿಂದ ಬದುಕುಳಿಯಿತು. ೨೦೧೭ರಲ್ಲಿ ಬಂಡೀಪುರ ಸಫಾರಿ ವಲಯದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಿನ್ಸ್ ಹೆಸರಿನ ಪ್ರವಾಸಿಗರ ನೆಚ್ಚಿನ ಹುಲಿ ಕಳ್ಳಬೇಟೆಗಾರರು ಹಂದಿಗೆ ಹಾಕಿದ್ದ ಸಿಡಿಮದ್ದು ಸೇವಿಸಿ ಸಾವನ್ನಪ್ಪಿದ್ದನ್ನು ಮರೆಯುವಂತಿಲ್ಲ.
ನೂರಾರು ಚಿರತೆಗಳು ಉರುಳಿಗೆ ಸಿಲುಕಿ ಸಾವನ್ನಪ್ಪಿದ ಉದಾಹರಣೆಗಳಿವೆ. ೨೦೨೧ರಲ್ಲಿ ಮೈಸೂರಿನ ಹೊರವಲಯದ ಬೆಳವಾಡಿ ಸಮೀಪ ೪ ವರ್ಷದ ತಾಯಿ ಚಿರತೆ ಮತ್ತು ಒಂದು ವರ್ಷದ ಎರಡು ಮರಿಗಳು ವಿಷಕ್ಕೆ ಬಲಿಯಾಗಿದ್ದವು. ೨೦೨೧ರಲ್ಲಿ ಬಂಡೀಪುರ ಅರಣ್ಯದ ಮೊಳೆಯೊಂರು ವ್ಯಾಪ್ತಿಯಲ್ಲಿ ಹಾಗೂ ಕಳೆದ ವರ್ಷ ಕೆ.ಆರ್.ಪೇಟೆ ಸಮೀಪ ಚಿರತೆಯೊಂದು ಉರುಳಿಗೆ ಬಲಿಯಾಗಿತ್ತು. ೨೦೧೬ರಲ್ಲಿ ಸರಗೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ ಉರುಳಿಗೆ ಕರಡಿಯೊಂದು ಬಲಿಯಾಗಿತ್ತು. ಬಫರ್ ಜೋನ್ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಉರುಳಿನ ಪ್ರಕರಣಗಳು ದಾಖಲಾಗುತ್ತಲೆ ಇದ್ದು ಹುಲಿಗಳೇ ಸಿಲುಕಿರುವ ಪ್ರಕರಣಗಳು ಹೆಚ್ಚು.
ಉರುಳು ಪತ್ತೆ ಕಾರ್ಯಾಚರಣೆ ಹೆಚ್ಚಲಿ; ಉರುಳಿನ ಜಾಲದಿಂದ ಕಾಡುಪ್ರಾಣಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಮತ್ತಷ್ಟು ಕಾರ್ಯ ಪ್ರವೃತ್ತವಾಗಬೇಕಿದೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಎರಡು ದಿನಕ್ಕೊಮ್ಮೆ ತಮ್ಮ ಬೀಟ್ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಮತ್ತಷ್ಟು ಚುರುಕುಗೊಳ್ಳಬೇಕು.ಉರುಳು ಪತ್ತೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸುವುದು, ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿಯಿಂದ ನಿರಂತರವಾಗಿ ಕಾಡಂಚಿನ ಭಾಗಗಳಲ್ಲಿ ಉರುಳು ಪತ್ತೆ ಹಚ್ಚಿ ತೆರವುಗೊಳಿಸಬೇಕು ಎಂಬುದು ತಜ್ಞರ ಸಲಹೆ.
ಈ ಹಿಂದೆ ನಾವು ಅರಣ್ಯದ ಗಡಿಭಾಗದ ಟ್ರಂಚ್ಗಳಲ್ಲಿ ಪ್ರತಿ ೨ ದಿನಕ್ಕೊಮ್ಮೆ ಉರುಳು ಪತ್ತೆ ಕಾರ್ಯಾಚರಣೆ ಮಾಡುತ್ತಿದ್ದೆವು. ಆದರೆ ತಾಯಿಹುಲಿ ಬಲಿಯಾದ ಬಳಿಕ ಕಾಡಂಚಿನ ಸುಮಾರು ೩-೪ ಕಿಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. -ಎಸ್.ಎಸ್.ಸಿದ್ಧರಾಜು, ವಲಯ ಅರಣ್ಯಾಧಿಕಾರಿ, ಅಂತರಸಂತೆ.
ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ…
ಕೊಲಂಬೊ : ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ತಂಡ ಮತ್ತೊಮ್ಮೆ ದೊಡ್ಡ ಅಚ್ಚರಿ ಮೂಡಿಸಿದೆ. ಆತಿಥೇಯ ಶ್ರೀಲಂಕಾವನ್ನು ಆರ್.…
ಮೈಸೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಜತೆಗೆ 10ನೇ ಸ್ಥಾನದೊಳಗೆ ಬರಲು ಶ್ರಮಿಸಬೇಕು.…
ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್…
ಗುಂಡ್ಲುಪೇಟೆ : ಭಾರತದ ಪ್ರಮುಖ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ವನ್ಯಜೀವಿ ಸಫಾರಿ ಪುನಾರಂಭಗೊಳಿಸುವ ಆದೇಶದ ವಿರುದ್ಧ…
ಮಂಡ್ಯ : ಬೂದನೂರು ಉತ್ಸವದ ಪ್ರಯುಕ್ತ ಚಿಕ್ಕಮಂಡ್ಯದಲ್ಲಿ ಫೆ.20ರ ಶುಕ್ರವಾರದಿಂದ ಮೂರು ದಿನಗಳ ಕಾಲ ಹೆಲಿ ಟೂರಿಸಂ (ಹೆಲಿಕಾಪ್ಟರ್ ಜಾಯ್…