ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ಸಲ್ಲಿಸಿಕೊಂಡು ಜನರ ಮನಗೆಲ್ಲುವ ನಂದೀಧ್ವಜವನ್ನುಕಾಣಬಹುದು.(ಸಾಂದರ್ಭಿಕಚಿತ್ರ)
ಮೈಸೂರು: ನಾಡಹಬ್ಬ ಮೈಸೂರು ದಸರಾ ಎಂದರೆ ಬರೀ ಜಂಬೂ ಸವಾರಿ, ಮೆರವಣಿಗೆ ನೆನಪಿಗೆ ಬರುತ್ತದೆ. ಆದರೆ, ಲಕ್ಷಾಂತರಜನರಕಣ್ಮನ ಸೆಳೆಯುವ ಈ ಮೆರವಣಿಗೆಯು ಹೊರಡುವುದೇ ನಂದೀಧ್ವಜ ಪೂಜೆ ಬಳಿಕ ಎಂಬುದು ವಿಶೇಷ. ಹೀಗಾಗಿ ದಸರಾದ ಅವಿಭಾಜ್ಯ ಅಂಗ ನಂದೀಧ್ವಜ ಕುಣಿತವಾಗಿದೆ. ವಿಜಯದಶಮಿ ದಿನದಂದು ಇದಕ್ಕೆಎಲ್ಲಿಲ್ಲದ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಇದು ಇತರ ಜಾತ್ರೆ, ಹಬ್ಬದ ವೇಳೆಯೂ ಪ್ರಮುಖ ಎನಿಸಿರುವ ಜಾನಪದಕಲೆಯಾಗಿದೆ.
ಶಿವನ ಲಾಂಛನಎನ್ನಲಾದ ನಂದೀಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ ನಂತರವೇ ಜಂಬೂಸವಾರಿ ವಿದ್ಯುಕ್ತವಾಗಿ ಹೊರಡುವುದಕ್ಕೆ ಚಾಲನೆ ಸಿಕ್ಕಿದಂತಾಗಿದೆ.ಚಿನ್ನದ ಅಂಬಾರಿ ಹೊತ್ತ ಗಜಪಡೆಗೆ ಗಣ್ಯರು ಪುಷ್ಪಾರ್ಚನೆ ನೀಡಿದರೂ, ನಂದೀಕಂಬಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆಕಲಾವಿದರುತಮ್ಮ ನೃತ್ಯ ಪ್ರದರ್ಶನ ನೀಡಿ ಮೆರವಣಿಗೆ ಶುರು ಮಾಡಲಿದ್ದಾರೆ.ಇದಕ್ಕೂ ಮೊದಲುರಾಜರಕಾಲದಲ್ಲಿಯೂ ನಂದೀಧ್ವಜತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆಕರೆದೊಯ್ದು, ಅಂಬಾವಿಲಾಸ ಅರಮನೆಯಲ್ಲಿ ಬೆಳಗ್ಗೆ ಊಟ ಮಾಡಿಸಿ ಸತ್ಕರಿಸುವು ಸಂಪ್ರದಾಯವಿತ್ತು.ಬಳಿಕ ತಂಡವನ್ನುಅರಮನೆಯ ಬಲರಾಜದ್ವಾರದ ಬಳಿಗೆ ಕರೆದೊಯ್ದುರಾಜರು ನಂದೀಧ್ವಜಕ್ಕೆ ಪೂಜೆ ಸಲ್ಲಿಸಿದಾಗ ಮೆರವಣಿಗೆಗೆ ಚಾಲನೆ ದೊರೆಯುತ್ತಿತ್ತು.
ಅಲ್ಲದೆ ಈಗಲೂ ಚಾಮುಂಡಿಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆಯೂ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವುದು ಈ ಜಾನಪದಕಲೆಯ ಮಹತ್ವ ತಿಳಿಸುತ್ತದೆ.
ಸದ್ದಿಗೆ ತಲೆಬಾಗದವರಿಲ್ಲ: ನಂದೀಧ್ವಜವನ್ನುಗಟ್ಟಿಮುಟ್ಟಾದ ಬಿದಿರಿನ ಗಳ ಬಳಸಿಕೊಂಡು ಅದರ ಸುತ್ತ ಟೊಳ್ಳಾದ ಬಳೆಗಳನ್ನು ಒಂದರ ಮೇಲೊಂದರಂತೆ ಇರಿಸಿ, ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕಕಲ್ಲುಅಥವಾ ಹುಣಸೆ ಬೀಜತುಂಬಿರುತ್ತಾರೆ. ಇವು ಖಣಿಖಣಿ ಸದ್ದು ಮಾಡುತ್ತವೆ. ಕಂಬದಲ್ಲಿನ ಪೀಠದಲ್ಲಿ ನಂದೀ ವಿಗ್ರಹಇರುತ್ತದೆ, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿವೆ. ಹರಡೆ ಮೇಲೆ, ಕೆಳಗೆ ಕೊಳಗ ಎಂದು ಕರೆಯುವತಟ್ಟೆಯಾಕಾರದ ಲೋಹದ ಉಂಗುರಗಳು ಇರುತ್ತವೆ. ನಂದಿ ಕಂಬಕ್ಕೂ ಬಿರಡೆ ಕಂಬ, ವ್ಯಾಸಗೋಲು, ನಂದಿಕಂಬ, ನಂದಿಪಟ ಎಂದೂ ಕರೆಯಲಾಗುತ್ತಿದೆ.
ದಸರಾದಲ್ಲಿ ಬಳಸುವ ನಂದಿಕಂಬ ೩೩ ಅಡಿ ಎತ್ತರವಿದ್ದು, ೧೨೫ ಕೆ.ಜಿ.ತೂಗುತ್ತದೆ. ಇದರಲ್ಲಿ ಹತ್ತು ವರ್ಣಗಳ ಧ್ವಜವಿದ್ದು, ಇದರ ಮೇಲೆ ಪಂಚಕಳಶವಿದೆ.
ಈ ಕುಣಿತಕ್ಕೆಕರಡೆ, ಡೊಳ್ಳು, ಸೊನಾಮಿ, ತಾಳ, ಚಮ್ಮಾಳ ಎಂಬ ವಾದ್ಯಗಳ ಹಿನ್ನೆಲೆ ಇರುತ್ತದೆ. ಇದೊಂದು ಕಲೆಯೂ ಆಗಿದ್ದು, ಕುಣಿಯುವವರು ಭಾರದ ನಂದೀಧ್ವಜವನ್ನುಎದೆ, ನೆತ್ತಿ, ಗಲ್ಲದದ ಮೇಲೆ ನಿಲ್ಲಿಸಿಕೊಂಡು ಚಮತ್ಕಾರ ಪ್ರದರ್ಶಿಸುವುದೂ ಉಂಟು.
ಈ ಕುಣಿತ ಸಾಮಾನ್ಯವಾಗಿ ವೀರಶೈವರಲ್ಲಿ ಹೆಚ್ಚಾಗಿದ್ದು, ರಾಜ್ಯದ ಬಹುತೇಕಕಡೆಕಾಣಬರುತ್ತದೆ.ಇದಕ್ಕೆಧಾರ್ಮಿಕ ನಂಬಿಕೆಯೂಇದ್ದು, ವೀರಭದ್ರಚೆಂಡಾಡಿದ ಋಷಿಮುನಿಗಳ ತಲೆ ಹರಡೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿ ಉಳಿದುಬಂದಿದೆ.
ಇಸ್ಲಾಮಾಬಾದ್: ಪಶ್ಚಿಮ ಏಷ್ಯಾ ಯುದ್ಧವನ್ನು ಕೊನೆಗೊಳಿಸಲು ಇಸ್ಲಾಮಾಬಾದ್ನಲ್ಲಿ ಅಮೇರಿಕಾ-ಇರಾನ್ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ. ಸಂಸದೀಯ ಸ್ಪೀಕರ್ ಮೊಹಮ್ಮದ್…
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹೀಟ್ ವೇವ್ ಎಚ್ಚರಿಕೆ…
ಬೆಂಗಳೂರು: ಇಲ್ಲಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳನ್ನು ಸಜೀವ ದಹನ ಮಾಡಿದ್ದ ಪ್ರಕರಣಕ್ಕೆ…
ನವದೆಹಲಿ: ಇದೇ ಏಪ್ರಿಲ್.15ರಿಂದ ಈ ವರ್ಷದ ಅಮರನಾಥ ಯಾತ್ರೆಗೆ ಮುಂಗಡ ನೋಂದಣಿ ಆರಂಭವಾಗಲಿದೆ. ಭಾರತದಾದ್ಯಂತ ಒಂದೇ ಸಮಯಕ್ಕೆ ಬುಕಿಂಗ್ ಪ್ರಾರಂಭವಾಗಲಿದ್ದು,…
ಕೊಡಗು: ಕಾಫಿ ತೋಟದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ.…
ನವದೆಹಲಿ: ಸಂಸತ್ತಿನ ಆವರಣದಲ್ಲಿ ಕಾರಿನಿಂದ ಇಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ…