ಜಿಲ್ಲೆಗಳು

ಸಿಎಂ ಆಗಮನಕ್ಕೆ ಸಜ್ಜಾಗಿ ನಿಲ್ಲುವ ಧ್ವಜ

ಮೈಸೂರು: ನಾಡಹಬ್ಬ ಮೈಸೂರು ದಸರಾ ಎಂದರೆ ಬರೀ ಜಂಬೂ ಸವಾರಿ, ಮೆರವಣಿಗೆ ನೆನಪಿಗೆ ಬರುತ್ತದೆ. ಆದರೆ, ಲಕ್ಷಾಂತರಜನರಕಣ್ಮನ ಸೆಳೆಯುವ ಈ ಮೆರವಣಿಗೆಯು ಹೊರಡುವುದೇ ನಂದೀಧ್ವಜ ಪೂಜೆ ಬಳಿಕ ಎಂಬುದು ವಿಶೇಷ. ಹೀಗಾಗಿ ದಸರಾದ ಅವಿಭಾಜ್ಯ ಅಂಗ ನಂದೀಧ್ವಜ ಕುಣಿತವಾಗಿದೆ. ವಿಜಯದಶಮಿ ದಿನದಂದು ಇದಕ್ಕೆಎಲ್ಲಿಲ್ಲದ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಇದು ಇತರ ಜಾತ್ರೆ, ಹಬ್ಬದ ವೇಳೆಯೂ ಪ್ರಮುಖ ಎನಿಸಿರುವ ಜಾನಪದಕಲೆಯಾಗಿದೆ.

ಶಿವನ ಲಾಂಛನಎನ್ನಲಾದ ನಂದೀಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿದ ನಂತರವೇ ಜಂಬೂಸವಾರಿ ವಿದ್ಯುಕ್ತವಾಗಿ ಹೊರಡುವುದಕ್ಕೆ ಚಾಲನೆ ಸಿಕ್ಕಿದಂತಾಗಿದೆ.ಚಿನ್ನದ ಅಂಬಾರಿ ಹೊತ್ತ ಗಜಪಡೆಗೆ ಗಣ್ಯರು ಪುಷ್ಪಾರ್ಚನೆ ನೀಡಿದರೂ, ನಂದೀಕಂಬಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆಕಲಾವಿದರುತಮ್ಮ ನೃತ್ಯ ಪ್ರದರ್ಶನ ನೀಡಿ ಮೆರವಣಿಗೆ ಶುರು ಮಾಡಲಿದ್ದಾರೆ.ಇದಕ್ಕೂ ಮೊದಲುರಾಜರಕಾಲದಲ್ಲಿಯೂ ನಂದೀಧ್ವಜತಂಡವನ್ನು ಓಲಗ, ಬಿರುದಾವಳಿ, ಗೌರವಾದರಗಳೊಡನೆ ಅರಮನೆಗೆಕರೆದೊಯ್ದು, ಅಂಬಾವಿಲಾಸ ಅರಮನೆಯಲ್ಲಿ ಬೆಳಗ್ಗೆ ಊಟ ಮಾಡಿಸಿ ಸತ್ಕರಿಸುವು ಸಂಪ್ರದಾಯವಿತ್ತು.ಬಳಿಕ ತಂಡವನ್ನುಅರಮನೆಯ ಬಲರಾಜದ್ವಾರದ ಬಳಿಗೆ ಕರೆದೊಯ್ದುರಾಜರು ನಂದೀಧ್ವಜಕ್ಕೆ ಪೂಜೆ ಸಲ್ಲಿಸಿದಾಗ ಮೆರವಣಿಗೆಗೆ ಚಾಲನೆ ದೊರೆಯುತ್ತಿತ್ತು.

ಅಲ್ಲದೆ ಈಗಲೂ ಚಾಮುಂಡಿಬೆಟ್ಟದಲ್ಲಿ ನವರಾತ್ರಿ ಚಾಲನೆ ವೇಳೆಯೂ ನಂದೀಧ್ವಜಕ್ಕೆ ಪೂಜೆ ಸಲ್ಲಿಸುವುದು ಈ ಜಾನಪದಕಲೆಯ ಮಹತ್ವ ತಿಳಿಸುತ್ತದೆ.

ಸದ್ದಿಗೆ ತಲೆಬಾಗದವರಿಲ್ಲ: ನಂದೀಧ್ವಜವನ್ನುಗಟ್ಟಿಮುಟ್ಟಾದ ಬಿದಿರಿನ ಗಳ ಬಳಸಿಕೊಂಡು ಅದರ ಸುತ್ತ ಟೊಳ್ಳಾದ ಬಳೆಗಳನ್ನು ಒಂದರ ಮೇಲೊಂದರಂತೆ ಇರಿಸಿ, ಈ ಬಳೆಗಳ ಟೊಳ್ಳಿನೊಳಗೆ ಚಿಕ್ಕಕಲ್ಲುಅಥವಾ ಹುಣಸೆ ಬೀಜತುಂಬಿರುತ್ತಾರೆ. ಇವು ಖಣಿಖಣಿ ಸದ್ದು ಮಾಡುತ್ತವೆ. ಕಂಬದಲ್ಲಿನ ಪೀಠದಲ್ಲಿ ನಂದೀ ವಿಗ್ರಹಇರುತ್ತದೆ, ಪೀಠದ ಮೇಲೆಯೇ ಇರುವ ಈ ಬಳೆಗಳಿಗೆ ಗಗ್ಗರ, ಹರಡೆ, ಗಗ್ಗ ಎಂಬ ಹೆಸರಿವೆ. ಹರಡೆ ಮೇಲೆ, ಕೆಳಗೆ ಕೊಳಗ ಎಂದು ಕರೆಯುವತಟ್ಟೆಯಾಕಾರದ ಲೋಹದ ಉಂಗುರಗಳು ಇರುತ್ತವೆ. ನಂದಿ ಕಂಬಕ್ಕೂ ಬಿರಡೆ ಕಂಬ, ವ್ಯಾಸಗೋಲು, ನಂದಿಕಂಬ, ನಂದಿಪಟ ಎಂದೂ ಕರೆಯಲಾಗುತ್ತಿದೆ.

ದಸರಾದಲ್ಲಿ ಬಳಸುವ ನಂದಿಕಂಬ ೩೩ ಅಡಿ ಎತ್ತರವಿದ್ದು, ೧೨೫ ಕೆ.ಜಿ.ತೂಗುತ್ತದೆ. ಇದರಲ್ಲಿ ಹತ್ತು ವರ್ಣಗಳ ಧ್ವಜವಿದ್ದು, ಇದರ ಮೇಲೆ ಪಂಚಕಳಶವಿದೆ.

ಈ ಕುಣಿತಕ್ಕೆಕರಡೆ, ಡೊಳ್ಳು, ಸೊನಾಮಿ, ತಾಳ, ಚಮ್ಮಾಳ ಎಂಬ ವಾದ್ಯಗಳ ಹಿನ್ನೆಲೆ ಇರುತ್ತದೆ. ಇದೊಂದು ಕಲೆಯೂ ಆಗಿದ್ದು, ಕುಣಿಯುವವರು ಭಾರದ ನಂದೀಧ್ವಜವನ್ನುಎದೆ, ನೆತ್ತಿ, ಗಲ್ಲದದ ಮೇಲೆ ನಿಲ್ಲಿಸಿಕೊಂಡು ಚಮತ್ಕಾರ ಪ್ರದರ್ಶಿಸುವುದೂ ಉಂಟು.

ಈ ಕುಣಿತ ಸಾಮಾನ್ಯವಾಗಿ ವೀರಶೈವರಲ್ಲಿ ಹೆಚ್ಚಾಗಿದ್ದು, ರಾಜ್ಯದ ಬಹುತೇಕಕಡೆಕಾಣಬರುತ್ತದೆ.ಇದಕ್ಕೆಧಾರ್ಮಿಕ ನಂಬಿಕೆಯೂಇದ್ದು, ವೀರಭದ್ರಚೆಂಡಾಡಿದ ಋಷಿಮುನಿಗಳ ತಲೆ  ಹರಡೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿ ಉಳಿದುಬಂದಿದೆ.

andolana

Recent Posts

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ ; ವಿಪಕ್ಷಗಳ ವಿರೋಧ

ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…

7 hours ago

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ

ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…

8 hours ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ ಸುಳಿವು

ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…

8 hours ago

ಬಜೆಟ್‌ ದಿನಾಂಕ ಸದ್ಯದಲ್ಲೇ ನಿಗದಿ : ಸಿಎಂ

ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…

8 hours ago

T20 World Cup : ಡಬಲ್‌ ಸೂಪರ್‌ ಓವರ್‌ : 2 ಬಾರಿ ಟೈ ಆದ ಪಂದ್ಯದಲ್ಲಿ ಹರಿಣಗಳ ಮೇಲುಗೈ

ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…

9 hours ago

ಮುಂದುವರೆದ ಡ್ರಗ್ಸ್‌ ಸಮರ : ಮಾದಕ ವಸ್ತು ವಶಕ್ಕೆ ; ಐವರ ಬಂಧನ

ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…

9 hours ago