ಜಿಲ್ಲೆಗಳು

ಆಂದೋಲನ ಸಂದರ್ಶನ : 5 ಲಕ್ಷಕ್ಕೂ ಹೆಚ್ಚು ಮಂದಿಗೆ ಯಶಸ್ವಿನಿ ಉಪಯೋಗ

ಯಶಸ್ವಿನಿ ಯೋಜನೆ ಕುರಿತು ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯ್‌ ಕುಮಾರ್ ಅಭಿಮತ

ಬಿ ಎನ್‌. ಧನಂಜಯಗೌಡ
ಮೈಸೂರು:
ಮುಖ್ಯಮಂತ್ರಿಗಳು ೨೦೨೨-೨೩ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಯಶಸ್ವಿನಿ ಯೋಜನೆಯನ್ನು ಪರಿಷ್ಕರಿಸಿ ಮರು ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನ.2ರಿಂದ ಸದಸ್ಯರ ನೋಂದಣಿ ಪ್ರಾರಂಭವಾಗಲಿದೆ ಈ ಕುರಿತು ‘ಆಂದೋಲನ’ ಜೊತೆ ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯ್‌ ಕುಮಾರ್ ಮಾತನಾಡಿದ್ದಾರೆ.

ಆಂದೋಲನ: ಯಶಸ್ವಿ ಯೋಜನೆ ನೋಂದಣಿ ಮೈಸೂರಲ್ಲಿ ಯಾವಾಗಿನಿಂದ ಆರಂಭವಾಗಲಿದೆ?
ವಿಜಯಕುಮಾರ್: ಸರ್ಕಾರ ಆದೇಶ ಮಾಡಿದೆ. ಆದರೆ, ನೋಂದಣಿ ಸಂಬಂಧ ಮತ್ತು ಹಣವನ್ನು ಹೇಗೆ ಕಲೆಕ್ಟ್ ಮಾಡಬೇಕು ಎಂಬ ಬಗ್ಗೆ ಇನ್ನೂ ಮಾರ್ಗಸೂಚಿ ಬಂದಿಲ್ಲ. ನೋಂದಣಿ ನಮೂನೆಗಳು ಇನ್ನೂ ಬಂದಿಲ್ಲ. ಹಾಗಾಗಿ, ನ.೨ರ ನಂತರ ಪ್ರಕ್ರಿಯೆ ಆರಂಭಿಸಲು ಮಾರ್ಗಸೂಚಿ ಬರಬಹುದು.

ಆಂದೋಲನ: ಈ ಯೋಜನೆಗೆ ಯಾರೆಲ್ಲ ಅರ್ಹರು, ನೋಂದಣಿ ಎಲ್ಲಿ ಆಗಲಿದೆ?
ವಿಜಯಕುಮಾರ್: ಯಾವುದೇ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದವರು. ನೋಂದಣಿ ಮಾಡಿಕೊಳ್ಳಬಹುದು. ಮೈಸೂರು ಜಿಲ್ಲೆಯಲ್ಲಿ ಸುಮಾರು ೨ ಸಾವಿರ ಸಹಕಾರ ಸಂಘಗಳು ಇದ್ದು. ಎಲ್ಲ ಸಹಕಾರ ಸಂಘಗಳಲ್ಲೂ ನೋಂದಣಿ ಮಾಡಿಸಬಹುದು. ನಮ್ಮಲ್ಲಿ ೫ರಿಂದ ೬ ಲಕ್ಷ ಸಹಕಾರ ಸಂಘಗಳ ಸದಸ್ಯರಿದ್ದು ಅವರೆಲ್ಲರೂ ಒಳಪಡಬಹುದು.

ಆಂದೋಲನ: ಈ ಹಿಂದೆ ನೋಂದಣಿ ಮಾಡಿಕೊಡವರು ಮತ್ತು ಹೊಸ ನೋಂದಣಿ ಹೇಗೆ?
ವಿಜಯಕುಮಾರ್: ಇದು ಪ್ರತಿವರ್ಷ ನವೀಕರಣ ಇರಲಿದೆ. ಹೊಸ ಸದಸ್ಯರು ಸದಸ್ಯತ್ವ ಪಡೆದು ಮೂರು ತಿಂಗಳ ನಂತರ ಅವರೂ ನೋಂದಣಿ ಮಾಡಿಸಬಹುದು.

ಆಂದೋಲನ: ನೋಂದಣಿಯಾದ ಸದಸ್ಯರು ಪಾವತಿಸಬೇಕಾದ ಹಣವೆಷ್ಟು?
ವಿಜಯಕುಮಾರ್: ಗ್ರಾಮೀಣ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗೆ ನಾಲ್ಕು ಮಂದಿಯುಳ್ಳ ಕುಟುಂಬಕ್ಕೆ ತಲಾ ೫೦೦ ರೂ. ಹಾಗೂ ನಗರ ಪ್ರದೇಶದವರಿಗೆ ೧೦೦೦ ರೂ. ವಂತಿಗೆ ನಿಗದಿ ಪಡಿಸಲಾಗಿದೆ. ನಾಲ್ಕು ಮಂದಿಗಿಂತ ಹೆಚ್ಚಿನ ಸದಸ್ಯರು ಇರುವ ಕುಟುಂಬಗಳಿಗೆ ಹೆಚ್ಚುವರಿ ಸದಸ್ಯರಿಗೆ ತಲಾ ೨೦೦ ರೂ. ವಂತಿಗೆ ಪಾವತಿಸಿ, ನೋಂದಾಯಿಸಬಹುದು.

ಆಂದೋಲನ: ಯೋಜನೆಯಲ್ಲಿ ನೋಂದಣಿಯಾದ ಕುಟುಂಬ ನಗದು ರಹಿತವಾಗಿ ಎಷ್ಟು ಮೊತ್ತದವರೆಗೆ ಚಿಕಿತ್ಸೆ ಪಡೆಯಬಹುದು?
ವಿಜಯಕುಮಾರ್: ಈ ಯೋಜನೆಯಡಿ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒಂದು ಕುಟುಂಬಕ್ಕೆ ೫ ಲಕ್ಷ ರೂ. ವರೆಗಿನ ವೆಚ್ಚದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಪ್ರಸಕ್ತ ಆಯವ್ಯಯದಲ್ಲಿ ೩೦೦ ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಹೆಚ್ಚುವರಿ ಹಣವನ್ನು ಅವರೇ ಪಾವತಿಸಬೇಕು.

ಆಂದೋಲನ : ಯೋಜನೆಯ ನೆಟ್‌ವರ್ಕ್ ಹೊಂದಿರುವ ಆಸ್ಪತ್ರೆಗಳು ಯಾವುವು?
ವಿಜಯಕುಮಾರ್: ಈ ಬಗ್ಗೆ ಸರ್ಕಾರ ಇನ್ನೂ ಪಟ್ಟಿಯನ್ನು ನೀಡಿಲ್ಲ. ಈ ಕಾರಣದಿಂದಲೇ ನೋಂದಣಿ ಪ್ರಕ್ರಿಯೆ ವಿಧಾನದ ಮಾರ್ಗಸೂಚಿ ನಮಗೆ ಬಂದಿಲ್ಲ.

ಯಶಸ್ವಿನಿ ಯೋಜನೆ ಹಿನ್ನೆಲೆ
ಮೈಸೂರು: ಸಹಕಾರ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡಲು ೨೦೦೩ರಲ್ಲಿ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿತ್ತು. ಆದರೆ ೨೦೧೮ರಲ್ಲಿ ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಿದ ಸರ್ಕಾರ ೨೦೧೮ರ ಮೇ ೩೧ರಂದು ಯಶಸ್ವಿನಿ ಆರೋಗ್ಯ ಯೋಜನೆಯನ್ನು ರದ್ದುಗೊಳಿಸಿತ್ತು. ಇದೇ ಯೋಜನೆಗೆ ಈಗ ಮರು ಚಾಲನೆ ನೀಡಲಾಗುತ್ತಿದೆ.

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

6 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

7 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

8 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

9 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

14 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

14 hours ago