ಬೇಗೂರು(ಗುಂಡ್ಲುಪೇಟೆ) : ಬಾಲಕಿಯನ್ನು ಮದುವೆಯಾಗಿ ಮಗು ನೀಡಲು ಕಾರಣಕರ್ತನಾದ ಯುವಕನು ಜೈಲು ಪಾಲಾಗಿರುವ ಘಟನೆ ತಾಲ್ಲೂಕಿನ ಬೇಗೂರು ಸಮೀಪದ ತೊಂಡವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಹದೇವಸ್ವಾಮಿ(26) ಬಿನ್ ರಂಗಸ್ವಾಮಿ ಎಂಬಾತನೆ ಬಾಲಕಿಯೋರ್ವಳನ್ನು ಪ್ರೀತಿಸಿ ಆಕೆಗೆ ಮಗುವನ್ನು ನೀಡಿದ ತಪ್ಪಿಗೆ ಜೈಲುಪಾಲಾಗಿದ್ದಾನೆ.
17 ವರ್ಷ 2 ತಿಂಗಳಾಗಿರುವ ಬಾಲಕಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿರುವಾಗ ಈ ಘಟನೆ ಹೂರಬಿದ್ದಿದೆ. ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಸಿ.ಡಿ.ಪಿ.ಓ ಭೇಟಿ ನೀಡಿ ತಪ್ಪಿತಸ್ಥ ಆರೋಪಿ ವಿರುದ್ದ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೇಗೂರು ಪೊಲೀಸ್ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಂತ್ರಸ್ಥ ಬಾಲೆ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತಾಯಿ ಮಗು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಚಿರತೆ ಸೆರೆಗೆ ಅಗತ್ಯ ಕ್ರಮ : ಸಚಿವ ಮಾಧುಸ್ವಾಮಿ