ಮೈಸೂರು: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ಯುವಕರ ನಡುವೆ ಗಲಾಟೆಯಾಗಿದ್ದು, ಘಟನೆಯಲ್ಲಿ ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಸಂಬಂಧ ವಿಜಯನಗರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಚಾಕು ಇರಿತಕ್ಕೆ ಒಳಗಗಿರುವ ಅಶಿತ್(37)ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಚಾಕುವಿನಿಂದ ಇರಿದ ಆರೋಪಿ ವಿನಾಯಕ ಹಾಗೂ ಇಬ್ಬರು ಸಹಚರರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಚಿತ್ ಎಂಬಾತನಿಗೆ ಓರ್ವ ಯುವತಿಯೊಡನೆ ಆತ್ಮೀಯ ಸ್ನೇಹವಿತ್ತು. ಕಳೆದ 20 ದಿನಗಳ ಹಿಂದೆ ವಿನಾಯಕ ಎಂಬಾತ ಯುವತಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ. ಈ ಸಂಬಂಧ ಸುಚಿತ್ ಹಾಗೂ ವಿನಾಯಕ ಅವರ ನಡುವೆ ಗಲಾಟೆ ಆಗಿತ್ತು.
ಈ ವಿಚಾರವನ್ನು ಸುಚಿತ್ ತನ್ನ ಸ್ನೇಹಿತ ಅಶಿತ್ಗೆ ತಿಳಿಸಿದ್ದ. ಅಲ್ಲದೆ, ಒಂದು ವಾರದ ಹಿಂದೆ ವಿನಾಯಕ್ ಮೇಲೆ ಹಲ್ಲೆ ನಡೆಸಿದ್ದ ಆಶಿತ್ ಆತನಿಗೆ ಎಚ್ಚರಿಕೆ ನೀಡಿದ್ದ. ಇಷ್ಟಾದರೂ ಸುಮ್ಮನಾಗದ ವಿನಾಯಕ್ ಭಾನುವಾರ ಫೋನ್ ಮೂಲಕ ಆಶಿತ್ನನ್ನು ಸಂಪರ್ಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮನೆಗೆ ಬರುವಂತೆ ಸವಾಲೊಡ್ಡಿದ್ದ ಎನ್ನಲಾಗಿದೆ.
ಹೀಗಾಗಿ ವಿಜಯನಗರದಲ್ಲಿರುವ ವಿನಾಯಕ್ ಮನೆಗೆ ಆಶಿತ್ ಹೋಗಿದ್ದಾನೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ. ಆಶಿತ್ಗೆ ವಿನಾಯಕ್ ಹಾಗೂ ಇಬ್ಬರು ಸ್ನೇಹಿತರು ಚಾಕುವಿನಿಂದ ಇರಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣೆ ಪೊಲೀಸರು ವಿನಾಯಕ್ ಹಾಗೂ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous Articleಬೆಂಗಳೂರು ಡೈರಿ : ಜಾ.ದಳ, ಕಾಂಗ್ರೆಸ್ ಬಲಿಷ್ಟರ ಸೆಳೆಯಲು ಶಾ ಸೂಚನೆ?