ನವದೆಹಲಿ : ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಇದರಿಂದ ಭಾರತೀಯ ಆರ್ಥಿಕತೆಗೆ ಬೃಹತ್ ಮಟ್ಟದ ಉತ್ತೇಜನ ಸಿಗುವ ಸಾಧ್ಯತೆಗಳಿವೆ. ಬೃಹತ್ ತೈಲದ ಅಮದು ವೆಚ್ಚದಿಂದಾಗಿ ದೇಶದ ಚಾಲ್ತಿ ಖಾತೆ ನಿಯಂತ್ರಣ ಮಿತಿಮೀರಲು ಶುರುವಾಗಿತ್ತು.ದುಬಾರಿ ತೈಲವನ್ನು ಖರೀದಿ ಮಾಡಲು ಹೆಚ್ಚು ಹಣ ನೀಡಬೇಕಾದುದರಿಂದ ದೇಶದ ರೂಪಾಯಿಯ ಮೌಲ್ಯ ಕುಸಿಯುತ್ತಿತ್ತು.
ಇದೀಗ ಜಾಗತಿಕ ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ ಗೆ 4.63 ರಷ್ಟು ಕುಸಿದಿದೆ. ಇದರಿಂದ ತೈಲದ ಬೆಲೆ 77.42 ಡಾಲರ್ ಗೆ ತಲುಪಿದೆ . ಕ್ರೂಡ್ ಆಯಿಲ್ ಫ್ಯೂಚರ್ಸ್ ಶೇ.4.9 ರಷ್ಟು ಕುಸಿತ ಕಂಡಿದ್ದು,ಬ್ಯಾರೆಲ್ ಗೆ 72.90 ಡಾಲರ್ ಗೆ ತಲುಪಿದೆ.
ಯು ಎಸ್ ನ ಕಚ್ಚಾ ತೈಲದ ದಾಸ್ತಾನುಗಳಲ್ಲಿನ ಹೆಚ್ಚಳದಿಂದ ಇಳುವರಿಯಲ್ಲಿ ಚೇತರಿಕೆಯಲ್ಲಿ ಕಂಡಿದೆ. ನಾಲ್ಕು ವಾರಗಳಿಂದ ಕಚ್ಚಾ ತೈಲದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡುಬರುತ್ತಿದೆ.
ಅಕ್ಟೋಬರ್ ನಲ್ಲಿ ದೇಶದ ಸರಕು ವ್ಯಾಪಾರದ ಕೊರತೆ ಗರಿಷ್ಠ ಮಟ್ಟಕ್ಕೇರಿತ್ತು. ಸದ್ಯ ತೈಲದ ಬೆಲೆ ಇಳಿಕೆ ಆಗುತ್ತಿರುವುದರಿಂದ ವ್ಯಾಪಾರದ ಕೊರತೆ ಕಡಿಮೆಯಾಗುವ ನಿರೀಕ್ಷೆ ಇದೆ.
ಭಾರತ ದೇಶವು ಕಚ್ಚಾತೈಲದ ಅಗತ್ಯಕ್ಕಿಂತ ಶೇಕಡ 80 ಹೆಚ್ಚಿಗೆ ಆಮದು ಮಾಡಿಕೊಳ್ಳುತ್ತದೆ. ಇದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಳವಾದಾಗ ಚಾಲ್ತಿ ಖಾತೆ ಕೊರತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.
ತೈಲಬೆಲೆಗಳು ಹಣದುಬ್ಬರವನ್ನು ಹೆಚ್ಚು ಮಾಡುತ್ತವೆ. ಸಿ ಎನ್ ಜಿ ಮತ್ತು ಎಲ್ ಪಿ ಜಿ ಹಾಗೂ ರಸ ಗೊಬ್ಬರಗಳ ಮೇಲಿನ ಸರ್ಕಾರದ ಸಬ್ಸಿಡಿ ಹೆಚ್ಚಾಗಲು ಕಾರಣವಾಗುತ್ತವೆ.
ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ನಾಲ್ಕು ತಿಂಗಳ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಭಾರತ ದೇಶದ ಆರ್ಥಿಕತೆಗೆ ಪೂರಕವಾಗಲಿದೆ.
ಮಾಸ್ಕೋ: ಉಕ್ರೇನ್ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿದೆ. ಈ ವೈಮಾನಿಕ…
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…
ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್ಪಿಜಿಯನ್ನು ಹೊತ್ತ…