ವಾಣಿಜ್ಯ

ಹಣಕೊಡದೇ ಟಿಕೆಟ್‌ ಪಡೆದು ರೈಲಿನಲ್ಲಿ ಪ್ರಯಾಣಿಸಿ…

ನವದೆಹಲಿ : ಟಿಕೆಟ್ ಗೆ ಕಾಸಿಲ್ಲದಿದ್ದರೂ ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ರೈಲ್ವೆ ಇಲಾಖೆ ನೀಡಿದೆ. ಆದರೆ, ನೀವು ಕ್ಯಾಷ್ ಇ ಪಾವತಿ ಆಯ್ಕೆ ಬಳಸಿ ಐಆರ್ ಟಿಸಿ ಆ್ಯಪ್ ನಲ್ಲಿ ಟಿಕೆಟ್ ಕಾಯ್ದಿರಿಸಬೇಕು, ಆದರೆ ಹಣವನ್ನು ಆಗಲೇ ಪಾವತಿಸಬೇಕಿಲ್ಲ, ಬದಲಿಗೆ ನಂತರ ಇಎಂಐ ಮೂಲಕ ಪಾವತಿ ಮಾಡಬಹುದು. ‘ಈಗ ಪ್ರಯಾಣಿಸಿ, ಆಮೇಲೆ ಪಾವತಿಸಿ’ ಎಂಬ ಈ ಹೊಸ ಯೋಜನೆಯನ್ನು ಭಾರತೀಯ ರೈಲ್ವೆ ಇಲಾಖೆಯ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮವು ಹಣಕಾಸು ಸೇವೆಗಳನ್ನು ಒದಗಿಸುವ ಕ್ಯಾಶ್ ಇ ಸಂಸ್ಥೆ ಸಹಯೋಗದಲ್ಲಿ ಪರಿಚಯಿಸಿದೆ. ಈ ಸೇವೆಯು ರೈಲ್ವೆ ಇಲಾಖೆಯ ಐಆರ್ ಸಿಟಿಸಿ ಟ್ರಾವೆಲ್ ಆ್ಯಪ್ ನಲ್ಲಿ ಕ್ಯಾಶ್ ಇ ಪಾವತಿ ಆಯ್ಕೆ ಮೂಲಕ ಟಿಕೆಟ್ ಬುಕ್ ಮಾಡಿ ಹಣವನ್ನು 3 ಅಥವಾ 6 ತಿಂಗಳ ಅವಧಿಯ ತನಕದ ಇಎಂಐ ಮೂಲಕ ಪಾವತಿಸುವ ಅವಕಾಶವನ್ನು ಕಲ್ಪಿಸಿದೆ. ಇಎಂಐ ಪಾವತಿ ಆಯ್ಕೆಯು ಐಆರ್ ಸಿಟಿಸಿ ಟ್ರಾವೆಲ್  ಆ್ಯಪ್ ನಲ್ಲಿ ಕಾಯ್ದಿರಿಸಿದ ಹಾಗೂ ತತ್ಕಾಲ ಟಿಕೆಟ್ ಗಳ ಬುಕ್ಕಿಂಗ್ ಗೆ ಇರುವ ಚೆಕ್ ಔಟ್ ಪುಟದಲ್ಲಿದೆ.

ಕ್ಯಾಶ್ ಇಯ ಟಿಎನ್ ಪಿಎಲ್ ಇಎಂಐ ಪಾವತಿ ಆಯ್ಕೆ ಈ ಸೌಲಭ್ಯವನ್ನು ಯಾವುದೇ ದಾಖಲೆಗಳ ಅಗತ್ಯವಿಲ್ಲದೆ ಎಲ್ಲ ಬಳಕೆದಾರರು ಬಳಸಲು ಅನುವು ನೀಡಿದೆ. ಹೀಗಾಗಿ ಕ್ಯಾಶ್ ಇ ಟಿಎನ್ ಪಿಎಲ್ ಇಎಂಐ ಆಯ್ಕೆಯನ್ನು ಪ್ರಯಾಣಿಕರು ಸುಲಭವಾಗಿ ಬಳಸಿಕೊಳ್ಳಬಹುದು. ಐಆರ್ ಟಿಸಿ ಆ್ಯಪ್ 9 ಕೋಟಿ ಬಾರಿ ಡೌನ್ ಲೋಡ್ ಆಗಿದೆ. ಇದರ ಮೂಲಕ ಪ್ರತಿ ದಿನ 15 ಲಕ್ಷ ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗುತ್ತಿದೆ.

‘ಐಆರ್ ಸಿಟಿಸಿ ನೆರವಿನಿಂದ ಇದು ಭಾರತದ ಅತೀದೊಡ್ಡ ಈಗ ಪ್ರಯಾಣಿಸಿ ನಂತರ ಪಾವತಿಸಿ ಎಂಬ ಇಎಂಐ ಪಾವತಿ ವ್ಯವಸ್ಥೆಯಾಗಿದೆ. ಐಆರ್ ಸಿಟಿಸಿ ಜೊತೆಗಿನ ನಮ್ಮ ಸಹಯೋಗ ದೇಶದಲ್ಲಿ ಡಿಜಿಟಲ್ ಇಎಂಐ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆಯಾಗಿದೆ. ಈ ಸಹಭಾಗಿತ್ವವು ಕ್ಯಾಶ್ ಇಗೆ ಐಆರ್ ಸಿಟಿಸಿಯ ಲಕ್ಷಾಂತರ ಗ್ರಾಹಕರನ್ನು ತಲುಪಲು ಹಾಗೂ ಅವರಿಗೆ ಈ ಹಿಂದೆ ಎಂದೂ ಸಿಗದ ಹಾಗೂ ಈಗ ಆರಾಮದಾಯಕವಾಗಿ ಪ್ರಯಾಣಿಸಿ ನಂತರ ಅವರ ರೈಲ್ವೆ ಟಿಕೆಟ್ ಗೆ ಇಎಂಐ ಮುಖಾಂತರ ಹಣ ಪಾವತಿಸುವ ಅವಕಾಶ ಕಲ್ಪಿಸಿದೆ’ ಎಂದು ಕ್ಯಾಶ್ ಇ ಸಂಸ್ಥಾಪಕ ಅಧ್ಯಕ್ಷ ವಿ.ರಮಣ್ ಕುಮಾರ್ ತಿಳಿಸಿದ್ದಾರೆ.

ಕ್ಯಾಶ್ ಇ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಈಗ ಟಿಕೆಟ್ ಖರೀದಿಸಿ ನಂತರ ಪಾವತಿ ಮಾಡುವ ಆಯ್ಕೆ ನೀಡಿದ್ರೆ ಮೋಸ ಹೋಗುವ ಸಾಧ್ಯತೆ ಇಲ್ವಾ? ಎಂಬ ಪ್ರಶ್ನೆಯೂ ಮೂಡಬಹುದು. ಕ್ಯಾಶ್ ಇ ಕೃತಕ ಬುದ್ಧಿಮತ್ತೆ ಆಧಾರಿತ ಅಲ್ಗೊರಿಥಮ್ ಪ್ಲ್ಯಾಟ್ ಫಾರ್ಮ್ ನಲ್ಲಿ ಸೋಷಿಯಲ್ ಲೋನ್ ಕೋಟಿಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ SLQ ಸಾಲಗಾರನ ಪಾವತಿ ಸಾಮರ್ಥ್ಯವನ್ನು ಆತನ ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ದತ್ತಾಂಶಗಳ ಆಧಾರದಲ್ಲಿ ಗ್ರಹಿಸುತ್ತದೆ. ಆ ಬಳಿಕ ಆತ ಇಎಂಐ ಸೌಲಭ್ಯ ಪಡೆಲು ಅರ್ಹ ಹೌದು, ಅಲ್ಲ ಎಂಬುದನ್ನು ನಿರ್ಧರಿಸುತ್ತದೆ. ಇಎಂಐ ಮೂಲಕ ರೈಲ್ವೆ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆ ತುರ್ತು ಸಂದರ್ಭದಲ್ಲಿ ಅನೇಕ ರೈಲ್ವೆ ಪ್ರಯಾಣಿಕರಿಗೆ ನೆರವಾಗೋದರಲ್ಲಿ ಸಂಶಯವಿಲ್ಲ.

andolana

Share
Published by
andolana

Recent Posts

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 21ನೇ ಘಟಿಕೋತ್ಸವದ ಸಂಭ್ರಮ ಮನೆಮಾಡಿದ್ದು, ಒಟ್ಟು 8 ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್‌…

21 mins ago

ಹುಮನಾಬಾದ್ ಸ್ಫೋಟ: ತನಿಖೆಗೆ ಈಶ್ವರ ಖಂಡ್ರೆ ಆದೇಶ

ಬೆಂಗಳೂರು: ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕು ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು ಶಾಲೆಗೆ…

43 mins ago

ನಿಗೂಢ ವಸ್ತು ಸ್ಫೋಟ: 6 ಶಾಲಾ ಮಕ್ಕಳಿಗೆ ಗಂಭೀರ ಗಾಯ

ಬೀದರ್:‌ ನಿಗೂಢ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ಆರು ಮಕ್ಕಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಹುಮನಾಬಾದ್ ತಾಲ್ಲೂಕಿನ ಮೋಳಕೇರಾ ಗ್ರಾಮದಲ್ಲಿ ನಡೆದಿದೆ.…

2 hours ago

ಮೈಸೂರು| ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಮಾಜಿ ಸಚಿವ ಸಿ.ಟಿ.ರವಿ

ಮೈಸೂರು: ಮಾಜಿ ಸಚಿವ ಸಿ.ಟಿ.ರವಿ ಅವರಿಂದು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌…

2 hours ago

ಮಹಾರಾಷ್ಟ್ರ ಡಿಸಿಎಂ ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ ಪ್ರಮಾಣವಚನ ಸ್ವೀಕಾರ?

ಮುಂಬೈ: ವಿಮಾನ ಪತನ ದುರಂತದಲ್ಲಿ ಸಾವನ್ನಪ್ಪಿದ ಡಿಸಿಎಂ ಅಜಿತ್‌ ಪವಾರ್‌ ಪತ್ನಿ ಸುನೇಂದ್ರ ಪವಾರ್‌ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಲು…

2 hours ago

ಉದ್ಯಮಿ ಸಿ.ಜೆ.ರಾಯ್‌ ಸಾವಿನ ಬಗ್ಗೆ ಸಚಿವ ಪರಮೇಶ್ವರ್‌ ಮಾಹಿತಿ

ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ, ಕಾನ್ಪಿಡೆಂಟ್‌ ಗ್ರೂಪ್‌ ಚೇರ್ಮನ್‌ ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ…

3 hours ago