ವಾಣಿಜ್ಯ

ಅಮೇರಿಕಾದ ಕಾರ್ನಿಂಗ್‌ನಿಂದ ಭಾರತದಲ್ಲಿ ಕಾರ್ಖಾನೆ ಸ್ಥಾಪನೆ

ಚೆನ್ನೈ : ಐಫೋನ್ ಗಳಿಗೆ ಗೊರಿಲ್ಲಾ ಗ್ಲಾಸ್‌ ಪೂರೈಕೆ ಮಾಡುವ ಅಮೇರಿಕಾ ಮೂಲದ ಕಾರ್ನಿಂಗ್‌ ಸಂಸ್ಥೆಯು ಭಾರತ ದೇಶದಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ.
ಎಕನಾಮಿಕ್ ಟೈಮ್ಸ್‌ ವರದಿಯ ಪ್ರಕಾರ ಕಾರ್ನಿಂಗ್‌ ಕಂಪನಿಯು ತಮಿಳುನಾಡಿನಲ್ಲಿ ಗೊರಿಲ್ಲಾ ಗ್ಲಾಸ್‌ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನ ಶ್ರೀ ಪೆರುಂಬುದೂರಿನ ಬಳಿ ಇರುವ ಪಿಳ್ಳೈಪ್ಪಾಕ್ಕಂನಲ್ಲಿ 1000 ಕೋಟಿ ರೂ. ಬಂಡವಾಳದಲ್ಲಿ ಕಾರ್ಖಾನೆ ಆರಂಭವಾಗಲಿದೆ. ಈ ಕಾರ್ಖಾನೆಯಲ್ಲಿ 300 ಜನರಿಗೆ ಉದ್ಯೋಗಾವಕಾಶ ಇರಲಿದೆ ಎಂದು ಹೇಳಲಾಗುತ್ತಿದೆ.
ಇದೇ ಮೊದಲ ಬಾರಿಗೆ ಕಾರ್ನಿಂಗ್‌ ಕಂಪನಿಯು ಭಾರತ ದೇಶಕ್ಕೆ ಪ್ರವೇಶ ಮಾಡುತ್ತಿದೆ. ಕೆಲ ತಿಂಗಳುಗಳ ಹಿಂದೆ ಕಾರ್ನಿಂಗ್‌ ಕಂಪನಿಯು  ತಮ್ಮಲ್ಲಿ ಹೂಡಿಕೆ ಮಾಡಲಿದೆ ಎಂದು ತೆಲಂಗಾಣ ಸರ್ಕಾರ ಹೇಳಿತ್ತು. ಬ್ಯುಸಿನೆಸ್‌ ಸ್ಟಾಂರ್ಡ್‌ ನಲ್ಲಿ ಬಂದಿದ್ದ ವರದಿಯ ಪ್ರಕಾರ ಭಾರತದ ಆಪ್ಟೀಮಸ್‌ ಇನ್ಪ್ರಾಕಾಮ್‌ ಹಾಗೂ ಅಮೇರಿಕಾದ ಕಾರ್ನಿಂಗ್‌ ಸಂಸ್ಥೆಗಳು ಜೊತೆಯಾಗಿ ಉನ್ನತ ಗುಣಮಟ್ಟದ ಸ್ಮಾರ್ಟ್‌ ಫೋನ್‌ ಕವರ್‌ ಗ್ಲಾಸ್‌ ಫ್ಯಾಕ್ಟರಿಯನ್ನು ಆರಂಭಿಸಬಹುದು. 2024 ರ ಕೊನೆಯ ಒಳಗೆ ಈ ಘಟಕಗಳು ತಮ್ಮ ಕಾರ್ಯವನ್ನು ಶುರು ಮಾಡಬಹುದು ಎಂದಿತ್ತು.
ಆಪಲ್‌ ಐಫೋನ್‌ ಅಸೆಂಬ್ಲಿಂಗ್‌ ಮಾಡುವ ಫಾಕ್ಸ್ ಕಾನ್‌ ಹಾಗೂ ಪೆಗಾಟ್ರಾನ್‌ ನ ಘಟಕಗಳು ತಮಿಳುನಾಡಿನಲ್ಲಿಯೇ ಇರುವುದರಿಂದ ತೆಲಂಗಾಣದ ಬದಲಾಗಿ ತಮಿಳುನಾಡಿನಲ್ಲಿ ಗೊರಿಲ್ಲಾ ಗ್ಲಾಸ್‌ ಉತ್ಪಾದನಾ ಘಟಕ ಪ್ರಾರಂಭ ಮಾಡಲು ಕಾರ್ನಿಂಗ್‌ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮುಂಬರುವ 2024 ರ ಜನವರಿ ತಿಂಗಳಿನಲ್ಲಿ ನಡೆಯಲಿರುವ ಗ್ಲೋಬಲ್‌ ಇನ್ವೆಸ್ಟರ್‌ ಮೀಟ್‌ ನಲ್ಲಿ ತಮಿಳುನಾಡು ಸರ್ಕಾರ ಹಾಗೂ ಕಾರ್ನಿಂಗ್‌ ಕಂಪನಿಯ ನಡುವೆ ಒಪ್ಪಂದ ನಡೆಯುವ ಸಾಧ್ಯತೆಗಳಿವೆ. ಒಪ್ಪಂದದ ಬಳಿಕ ಗೊರಿಲ್ಲಾ ಗ್ಲಾಸ್‌ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಒಂದು ವರ್ಷಗಳ ಕಾಲಾವಕಾಶ ಬೇಕಾಗಬಹುದು.
lokesh

Share
Published by
lokesh

Recent Posts

ಓದುಗರ ಪತ್ರ: ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಕಲ್ಪಿಸಿ

ದೇಶದ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರು ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗವೇ ಅವರ ಜೀವಕ್ಕೆ ಮುಳುವಾಗುತ್ತಿದೆ. ಭಾನುವಾರ ಉತ್ತರ ಕನ್ನಡ ಜಿಲ್ಲೆಯ…

1 hour ago

ಓದುಗರ ಪತ್ರ: ರೌಂಡ್ ಕ್ಯಾಂಟೀನ್ ಶೀಘ್ರ ಪುನರಾರಂಭವಾಗಲಿ

ಮೈಸೂರಿನ ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟೀನ್ ಕಳೆದ ೫೦ ವರ್ಷಗಳಿಂದ ವಿದ್ಯಾರ್ಥಿಗಳನ್ನು, ಬೋಧಕ -ಬೋಧಕೇತರ ಸಿಬ್ಬಂದಿಗಳನ್ನು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದು…

1 hour ago

ಓದುಗರ ಪತ್ರ: ದೇವನೂರರ ಸಲಹೆಗಳು ಅನುಷ್ಠಾನಗೊಳ್ಳಲಿ

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕೆ.ಪಿ.ಎಸ್. ಶಾಲೆಗಳ ರೂಪರೇಷೆ ಹಾಗೂ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ…

1 hour ago

ಓದುಗರ ಪತ್ರ: ಮಹಿಳೆಯರಿಗೂ ಪ್ರಾತಿನಿಧ್ಯ ದೊರಕಲಿ

ಇತ್ತೀಚಿನ ದಿನಗಳಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳು, ವಿಶ್ವವಿದ್ಯಾನಿಲಯ, ಶಾಲಾ ಕಾಲೇಜು ಮೊದಲಾದ ಕಡೆ ನಡೆಯುವ ಚರ್ಚಾಗೋಷ್ಠಿ , ವಿಚಾರಸಂಕಿರಣಗಳಲ್ಲಿ…

1 hour ago

ಇಂಧನ ಬೆಲೆ ಏರಿಕೆ-ಮೊಸಳೆ ಬಂತು ಮೊಸಳೆ ಕಥೆ!

ರಾಜಾರಾಂ ತಲ್ಲೂರು ಇಂದು ದೇಶ ಅನುಭವಿಸುತ್ತಿರುವ ತೈಲ ಶಾಕ್‌ಗೆ ಸರ್ಕಾರದ ಅನಧಿಕೃತ ಹಸ್ತಕ್ಷೇಪ ಕಾರಣ ಸುವ್ಯವಸ್ಥೆಗೆಂದು ರೂಪಿಸಲಾದ ನಿಯಮಗಳನ್ನು, ಆ…

1 hour ago

‘ಬೇಡು ಹಬ್ಬದ ಹೆಸರಿನಲ್ಲಿ ತೊಂದರೆ ನೀಡಿದಲ್ಲಿ ಕಾನೂನು ಕ್ರಮ’

ನವೀನ್ ಡಿಸೋಜ ಕಂಡ ಕಂಡವರನ್ನು ನಿಂದಿಸಿ, ಹಣ ಸಂಗ್ರಹಿಸುವ ವಿಭಿನ್ನ ಹಬ್ಬ; ಕಾನೂನು ಪಾಲಿಸಲು ಪೊಲೀಸ್ ಇಲಾಖೆ ಸೂಚನೆ  ಮಡಿಕೇರಿ: ಅಶ್ಲೀಲ…

1 hour ago