ಅಂಕಣಗಳು

ಸಂಶೋಧನೆಯಲ್ಲಿ ಖಾಸಗಿ ಕಂಪೆನಿಗಳೆಲ್ಲಿವೆ?

ಪ್ರೊ.ಆರ್.ಎಂ.ಚಿಂತಾಮಣಿ

ಯಾವುದೇ ದೇಶದ ಅಭಿವೃದ್ಧಿ ಮಾನದಂಡಗಳಲ್ಲಿ ಒಂದು ಪ್ರಮುಖ ಮಾನದಂಡವೆಂದರೆ ಸಂಶೋಧನೆಯಲ್ಲಿಯ ಹೂಡಿಕೆಗಳು. ಸಂಶೋಧನೆಗಳಿಂದ ಹೊಸದನ್ನು ಕಂಡು ಹಿಡಿಯುವುದು ಮತ್ತು ಅದನ್ನು ದೇಶದ ಅಭಿವೃದ್ಧಿಗೆ ಅನ್ವಯಿಸುವುದು ಅತ್ಯವಶ್ಯ. ಇದನ್ನೇ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸುವುದು (Investment in
Research and Development ) ಎಂದು ಕರೆಯುವುದು. ಆದ್ದರಿಂದ ಸರ್ಕಾರಗಳು ತಮ್ಮ ರಾಷ್ಟ್ರೀಯ ಒಟ್ಟಾದಾಯದಲ್ಲಿ ಒಂದಿಷ್ಟು ಭಾಗವನ್ನು ಪ್ರತಿವರ್ಷ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸುತ್ತವೆ. ಇದರ ಸಕಾರಾತ್ಮಕ ಪರಿಣಾಮ ನಂತರದ ವರ್ಷಗಳಲ್ಲಿ ಕಂಡು ಬರುತ್ತವೆ.

ಸರ್ಕಾರಿ ಕಂಪೆನಿಗಳೂ ತಮ್ಮ ಆದಾಯದಲ್ಲಿ ನಿಗದಿತ ಭಾಗವನ್ನು ಸಂಶೋಧನೆ ಮತ್ತು ಅಭಿವೃದ್ಧಿ (ಆರ್. & ಡಿ.ಯಲ್ಲಿ) ಹೂಡಿಕೆ ಮಾಡುತ್ತವೆ. ಇದರಿಂದ ತಾವು ಬೆಳೆಯುವುದಲ್ಲದೇ ದೇಶದ ಅಭಿವೃದ್ಧಿಗೂ ಕಾಣಿಕೆ ಸಲ್ಲಿಸಿದಂತಾಗುತ್ತದೆ. ಅದು ಅವಶ್ಯವೂ ಹೌದು.

ಖಾಸಗಿ ಕಂಪೆನಿಗಳೂ ಇವರೊಡನೆ ಕೈಜೋಡಿಸ ಬೇಕಲ್ಲವೇ ? ಖಾಸಗಿ ಕಂಪೆನಿಗಳು ಸಂಶೋಧನಾ ಹೂಡಿಕೆ ಪ್ರಮಾಣ ಹೆಚ್ಚಾಗಿರುವ ದೇಶದ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಾಗುವುದು ಸ್ವಾಭಾವಿಕ. ಇತ್ತೀಚೆಗೆ ಕೇಂದ್ರ ಕೈಗಾರಿಕೆ ಮತ್ತು ವಿದೇಶ ವ್ಯಾಪಾರ ಮಂತ್ರಿ ಪಿಯೂಷ್ ಗೋಯೆಲ್‌ರವರು ನಮ್ಮ ‘ಸ್ಟಾರ್ಟ್ ಅಪ್’ಗಳನ್ನು ತರಾಟೆಗೆ ತೆಗೆದುಕೊಂಡು ಅವುಗಳ ಗುಣಮಟ್ಟವನ್ನು ಚೀನಾದ ‘ಸ್ಟಾರ್ಟ್ ಅಪ್’ಗಳ ಗುಣಮಟ್ಟದೊಡನೆ ಹೋಲಿಸಿ ಅವರಿಂದ ನೀವು ಬಹಳಷ್ಟು ಕಲಿಯಬೇಕು ಎಂದು ಕಿವಿಮಾತು ಹೇಳಿದ್ದಾರೆ. ಅಂದರೆ ತಂತ್ರಜ್ಞಾನವೇ ಆಧಾರವಾಗಿರುವ ಈ ಕಂಪೆನಿಗಳಲ್ಲಿ ಅದರಲ್ಲಿ ನಿರೀಕ್ಷಿಸಿದಷ್ಟು ಬೆಳವಣಿಗೆ ಆಗಿಲ್ಲವೆಂದೂ ಅರ್ಥವಲ್ಲವೇ. ಭಾರತದಲ್ಲಿ ಒಟ್ಟಾರೆ ಖಾಸಗಿ ವಲಯದ ಕಂಪೆನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೂಡಿಕೆಗಳ ಬೆಳವಣಿಗೆ ಆಗಿಲ್ಲವೆಂಬ ಆತಂಕದ ಕೂಗು ಕೇಳಿ ಬರುತ್ತಿದೆ. ಅದರಲ್ಲಿ ಹುರುಳಿಲ್ಲವೆಂದಲ್ಲ.

ಇತ್ತೀಚೆಗೆ ವಿಶ್ವಸಂಸ್ಥೆಯ ಅಂಗ ಸಂಸ್ಥೆ ಯುನೈಟೆಡ್ ನೇಷನ್ಸ್ ಕಾನರೆನ್ಸ್ ಆನ್ ಟ್ರೇಡ್ ಆಂಡ್ ಡೆವಲಪ್‌ಮೆಂಟ್ ೨೦೨೩ರಲ್ಲಿ ಅತಿ ಹೆಚ್ಚು ಹೂಡಿಕೆಗಳನ್ನು ಸಂಶೋಧನೆಯಲ್ಲಿ ಮಾಡಿರುವ ಜಗತ್ತಿನ ೨,೦೦೦ ಕಂಪೆನಿಗಳ ಪಟ್ಟಿಯನ್ನು ಹೂಡಿಕೆಯ ಮೊತ್ತವನ್ನು ಮತ್ತು ಅವುಗಳ ದೇಶದ ಹೆಸರನ್ನು ಪ್ರಕಟಿಸಿದೆ. ವಿವರಗಳನ್ನು ಇಲ್ಲಿಯ ಸಂಖ್ಯಾಪಟ್ಟಿಯಲ್ಲಿ ಗಮನಿಸಬಹುದು. ಈ ಮೇಲಿನ ಸಂಖ್ಯಾಪಟ್ಟಿಯನ್ನು ಗಮನಿಸಿದರೆ ಭಾರತ ಕೇವಲ ೧೫ ಕಂಪೆನಿಗಳೊಡನೆ ಮತ್ತು ೫.೫ ಬಿಲಿಯನ್ ಯೂರೋಗಳ ಹೂಡಿಕೆಗಳೊಂದಿಗೆ ಕೆಳಗಿನಿಂದ ಎರಡನೆಯದಾಗಿ ಗೋಚರಿಸುತ್ತದೆ. ಚೀನಾ ಮೊದಲ ಮೂರನೇ ಸ್ಥಾನದಲ್ಲಿ ಕಂಡರೂ ಅದು ಕಂಪೆನಿಗಳ ಸಂಖ್ಯೆ ಮತ್ತು ಹೂಡಿಕೆಯ ಮೊತ್ತದ ವಿಷಯದಲ್ಲಿ ಅಮೆರಿಕದ ಕೆಳಗೆ ಎರಡನೇ ಸ್ಥಾನದಲ್ಲಿರಬೇಕು. ಯಾಕೆಂದರೆ ಯೂರೋಪಿಯನ್ ಯೂನಿಯನ್‌ನಲ್ಲಿ ೨೮ ದೇಶಗಳಿವೆ.

ನಮ್ಮಲ್ಲಿ ದೊಡ್ಡ ಕಂಪೆನಿಗಳೇ ಒಂದು ಸಾವಿರವಾದರೂ ಇರಬಹುದು. ಅಂಥದ್ದರಲ್ಲಿ ಕೇವಲ ೧೫ ಕಂಪೆನಿಗಳು ಈ ಪಟ್ಟಿಯಲ್ಲಿ ಸೇರಿಕೊಂಡಿವೆ ಎಂದರೆ ಏನಿದರ ಅರ್ಥ? ಅಂದರೆ ಬಹುತೇಕ ಭಾರತೀಯ ಕಂಪೆನಿಗಳು ಸಂಶೋಧನೆಯ ಮೇಲೆ ಅತಿ ಕಡಿಮೆ ಖರ್ಚು ಮಾಡುತ್ತವೆ ಅಥವಾ ಬೇರೆಯವರ ಸಂಶೋಧನೆಗಳ -ಲಗಳನ್ನು ಉಪಯೋಗಿಸುತ್ತವೆ ಎಂದು ಹೇಳಬಹುದು. ಸಂಶೋಧನೆಗಾಗಿ ಮಾಡಿರುವ ಖರ್ಚುಗಳಿಗೆ ಆದಾಯ ತೆರಿಗೆ ವಿನಾಯಿತಿಗಳು ಇರುವಾಗಲೂ ಸಂಶೋಧನೆಯ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ ಎಂದಂತಾಯಿತು. ಸಂಶೋಧನೆಗಾಗಿ ಮಾಡುವ ವೆಚ್ಚಗಳು ಭವಿಷತ್ತಿನ ಬೆಳವಣಿಗೆಗೆ ಅಡಿಪಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲ ನಮ್ಮ ಕಾರ್ಪೊರೇಟ್ ವಲಯಕ್ಕೆ ತಿಳಿದಿರುವ ವಿಷಯ. ಆದರೂ ಸಂಶೋಧನೆ ವೆಚ್ಚ ಹೆಚ್ಚುತ್ತಿಲ್ಲ.

ಮೇಲಿನ ಪಟ್ಟಿಯಲ್ಲಿನ ೧೫ ಕಂಪೆನಿಗಳ ಪೈಕಿ ಟಾಟಾ ಮೋಟಾರ‍್ಸ್ ಒಂದೇ ೨.೯೫ ಬಿಲಿಯನ್ ಯೂರೋಗಳನ್ನು ಆರ್.&ಡಿ.ಯಲ್ಲಿ ಹೂಡಿಕೆ ಮಾಡಿದೆ. ಉಳಿದಂತೆ ಸನ್ -ರ್ಮಾ (೩೪೩ ಮಿ.ಯೂ.), ಡಾ.ರೆಡಿ’ಸ್ ಲ್ಯಾಬ್ (೨೯೪ ಮಿ.ಯೂ.), ಅರಬಿಂದೋ -ರ್ಮಾ (೧೮೯ ಮಿ.ಯು.), ಲುಪಿನ್ (೧೮೯ ಮಿ.ಯೂ.) ಮತ್ತು ಸಿಪ್ಲಾ (೧೬೯ ಮಿ.ಯೂ.) ಹೀಗೆ ಔಷಧಿ ಕಂಪೆನಿಗಳುಹೂಡಿಕೆ ಮಾಡಿದ್ದು ಕಂಡು ಬಂದಿದೆ. ಉಳಿದ ಕಂಪೆನಿಗಳಲ್ಲಿ ಕಡಿಮೆ ಮೊತ್ತವಿದೆ.ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳಿಂದ ಕೂಡಲೇ ಲಾಭ ಬರವುದಿಲ್ಲ ಎನ್ನುವುದು ನಿಜವಾದರೂ ನಾಳಿನ ಪೇಟೆಯಲ್ಲಿ ದೀರ್ಘ ಕಾಲದವರೆಗೆ ಸ್ಪರ್ಧೆ ಎದುರಿಸುವ ಶಕ್ತಿಯನ್ನು ತುಂಬುತ್ತದೆ. ಸಮಾಜಕ್ಕೂ ಇದರಿಂದ ಒಳ್ಳೆಯದಾಗುತ್ತದೆ. ಕಂಪೆನಿಗಳ ಸುಸ್ಥಿರ ಬೆಳವಣಿಗೆಯು ಸಂಶೋಧನೆಯಿಂದ ಸಾಧ್ಯವಾಗುತ್ತದೆ.

ಎಲ್ಲ ವಲಯಗಳಲ್ಲಿನ ಕಂಪೆನಿಗಳಿಗೂ ಸಂಶೋಧನೆಯ ಅವಶ್ಯ ಇದೆ. ಅದು ಉತ್ಪನ್ನಗಳಲ್ಲಿನ ಸುಧಾರಣೆಗಾಗಿ ವೈಜ್ಞಾನಿಕ ಸಂಶೋಧನೆಯಾಗಿರಬಹುದು. ಗ್ರಾಹಕರ ನಡೆಯ ಬಗ್ಗೆ ಮಾರುಕಟ್ಟೆ ಸಂಶೋಧನೆಯಾಗಿರಬಹುದು. ಅದು ಸ್ಥಳೀಯ ಸಣ್ಣ ಸಂಶೋಧನೆಯಗಿರಬಹುದು ಅಥವಾ ವ್ಯಾಪಕವಾದ ದೀರ್ಘವಾದ ಸಂಶೋಧನೆ ಇರಬಹುದು. ಒಟ್ಟಿನಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸಂಶೋಧನೆಯು ಬೇಕೇ ಬೇಕು.

” ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗಳಿಂದ ಕೂಡಲೇ ಲಾಭ ಬರವುದಿಲ್ಲ ಎನ್ನುವುದು ನಿಜವಾದರೂ ನಾಳಿನ ಪೇಟೆಯಲ್ಲಿ ದೀರ್ಘ ಕಾಲದವರೆಗೆ ಸ್ಪರ್ಧೆ ಎದುರಿಸುವ ಶಕ್ತಿಯನ್ನು ತುಂಬುತ್ತದೆ. ಸಮಾಜಕ್ಕೂ ಇದರಿಂದ ಒಳ್ಳೆಯದಾಗುತ್ತದೆ. ಕಂಪೆನಿಗಳ ಸುಸ್ಥಿರ ಬೆಳವಣಿಗೆಯು ಸಂಶೋಧನೆಯಿಂದ ಸಾಧ್ಯವಾಗುತ್ತದೆ.”

ಆಂದೋಲನ ಡೆಸ್ಕ್

Recent Posts

ನೀಟ್-ಯುಜಿ ಮರುಪರೀಕ್ಷೆ : ಪರೀಕ್ಷೆ ಬರೆದ 22 ಲಕ್ಷ ವಿದ್ಯಾರ್ಥಿಗಳು

ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…

8 hours ago

ತಮಿಳುನಾಡು ಸೀಫುಡ್‌ ಘಟಕದಲ್ಲಿ ಅನಿಲ ಸೋರಿಕೆ ; 7 ಜನ ಸಾವು, ಹಲವರು ಗಂಭೀರ

ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…

8 hours ago

ಬೆಂಗಾಳಿಗಳನ್ನು ಬಾಂಗ್ಲಾ ವಲಸಿಗರೆಂದು ಗ್ರಹಿಕೆ ; ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕ

ಆಧಾರ್‌ ಕಾರ್ಡ್‌ ಪರಿಶೀಲನೆ ನಂತರ ಶಂಕೆ ನಿವಾರಣೆ ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ…

10 hours ago

ಚಾ.ನಗರ | ಸಿದ್ದಲಿಂಗಪುರ ಬಳಿ ಹುಲಿ ದಾಳಿ ; 4 ಮೇಕೆಗಳು ಸಾವು

ರೈತರು, ದನಗಾಹಿಗಳಲ್ಲಿ ಆತಂಕ ಬೇಗ ಹುಲಿ ಸೆರೆ ಹಿಡಿಯಲು ಆಗ್ರಹ ಚಾಮರಾಜನಗರ : ತಾಲ್ಲೂಕಿನ ಸಿದ್ದಲಿಂಗಪುರದ ಸಮೀಪ ಭಾನುವಾರ ಮಧ್ಯಾಹ್ನ…

11 hours ago

ಕರ್ನಾಟಕದಲ್ಲಿ ಮುಂಗಾರು ವಿಳಂಬ: ಕಂಗಾಲಾದ ರೈತರು

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ವಿಳಂಬವಾಗಿದ್ದು, ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಕೃಷಿ ಇಲಾಖೆಯ ಅಧಿಕಾರಿಗಳು ಬಿತ್ತನೆ ಗುರಿಯ ಶೇಕಡಾ…

14 hours ago

ಇದು ಕೇವಲ ಆರಂಭ: ಮುಂದೆ ಹೋರಾಟ ದೊಡ್ಡಮಟ್ಟದಲ್ಲಿ ಇದೆ ಎಂದ ನಿಖಿಲ್‌ ಕುಮಾರಸ್ವಾಮಿ

ರಾಮನಗರ: ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್‌ ಕೈಗೊಂಡಿರುವ ಕೈಗೊಂಡಿರುವ ಬೃಹತ್‌ ಪಾದಯಾತ್ರೆಯಲ್ಲಿ ಮಾತನಾಡಿದ ಯುವನಾಯಕ ನಿಖಿಲ್‌ ಕುಮಾರಸ್ವಾಮಿ ಇದು ಕೇವಲ…

14 hours ago