ಅಂಕಣಗಳು

ಭಾವಗಳನ್ನು ಬಡಿದೆಬ್ಬಿಸಿದ `ವಿನ್ಯಾಸ ಕಾವ್ಯ’

ಜಿ.ಪಿ.ಬಸವರಾಜು

ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸಂಗೀತ ವಿತ್ತು. ಕಣ್ಣು ತುಂಬುವ ಬಣ್ಣಗಳಿದ್ದವು. ಕಾವ್ಯದ ಸಾಲುಗಳಿದ್ದವು. ನಟ ನಟಿಯರಿದ್ದರು. ಅಭಿನಯವೂ ಇತ್ತು. ತುಣುಕು ತುಣುಕು ಚಿತ್ರಗಳೂ ಇದ್ದವು. ಬೆಳಕಿನ ವಿನ್ಯಾಸದಲ್ಲಿ ಹೊಸ ಹೊಸ ಅರ್ಥಗಳಿ ದ್ದವು.

ಪಾತ್ರಗಳು ಆಡುವ ಮಾತುಗಳಲ್ಲಿ ಕಥೆಗಳೂ ಇದ್ದವು. ಅಲ್ಲಿ ಇಲ್ಲಿ ಹರಿ ದಾಡುತ್ತಿದ್ದ ಕಾವ್ಯದ ಸಾಲುಗಳ ಹುಡು ಕಾಟವೂ ಇತ್ತು. ಕತ್ತಲೆ-ಬೆಳಕಿನ ಆಟವೂ, ರಂಗ ವಿನ್ಯಾಸವೆಂಬ ಮೋಹಕ ನೋಟವೂ ಇದ್ದವು. ಶನಿವಾರ (ಜೂನ್ ೧೪, ೨೦೨೫) ಮೈಸೂರಿನ ರಂಗಾಯಣ ದಲ್ಲಿ ಪ್ರದರ್ಶನಗೊಂಡ ‘ವಿನ್ಯಾಸ ಕಾವ್ಯ’ದಲ್ಲಿ ಎಲ್ಲವೂ ಇದ್ದರೂ, ನೇರವಾಗಿ ಬಿಚ್ಚಿಕೊಳ್ಳುವ ಯಾವ ಕಥೆಯೂ ಇರಲಿಲ್ಲ.

ನಾಟಕದಲ್ಲಿ ಕಥೆಯನ್ನು ಹುಡುಕುವ ನೋಟಕರು ಅಂಥ ಕಥೆಗಾಗಿ ಹುಡುಕಾಡಿರಬಹುದು. ಆದರೆ ಅಂಥ ಕಥೆಯನ್ನು ಕಟ್ಟಿಕೊಡಲು ನಿರಾಕರಿಸಿದ ನಾಟಕ, ತುಣುಕು ತುಣುಕು ಚಿತ್ರಗಳನ್ನು ಕೊಡುತ್ತಲೇ ಮನದಾಳದ ಭಾವಗಳನ್ನು ಮೀಟಿತು. ಈ ಭಾವಗಳ ಮೂಲಕವೇ ಪ್ರತಿಯೊಬ್ಬರೂ ತಮ್ಮ ತಮ್ಮ ಕಥೆಗಳನ್ನು ಕಟ್ಟಿಕೊಂಡು ಚಪ್ಪಾಳೆ ತಟ್ಟಿದರು.

ರಂಗಾಯಣದಲ್ಲಿ ವಿನ್ಯಾಸಕಾರರಾಗಿ ಸುದೀರ್ಘಕಾಲ ಸೇವೆ ಸಲ್ಲಿಸಿದ್ದ ಎಚ್. ಕೆ.ದ್ವಾರಕಾನಾಥ್, ರಂಗಾಯಣದ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ (೨೦೨೪- ೨೫) ನಡೆಸಿದ ಹತ್ತು ದಿನಗಳ ಕಾರ್ಯಾಗಾರ ದಲ್ಲಿ ಸಿದ್ಧಪಡಿಸಿದ ಈ ನಾಟಕ ಬಗೆ ಬಗೆಯ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿತ್ತು.

ದ್ವಾರಕಾನಾಥ್ ಅವರ ಪ್ರತಿಭೆ, ಸೂಕ್ಷ್ಮಗ್ರಹಿಕೆ, ಬಣ್ಣ ಮತ್ತು ಗೆರೆಗಳನ್ನು ಬಳಸುವ ಅವರ ಅದ್ಭುತ ಕಲೆಗಾರಿಕೆ ಎಲ್ಲವನ್ನೂ ಬಿಂಬಿಸು ವಂತಿತ್ತು. ಜೊತೆಗೆ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಗಳ ಪ್ರತಿಭೆ ಮತ್ತು ಕೌಶಲಗಳನ್ನು ಕೂಡಾ ಈ ಪ್ರಯೋಗ ತೋರಿಸಿಕೊಟ್ಟಿತು.

ರಂಗದ ಮೇಲೂ ಕೆಲವು ಪ್ರತಿಮೆಗಳು, ಸಂಕೇತಗಳು, ಅಭಿನಯದ ವಿನ್ಯಾಸಗಳು, ಬೆಳಕಿನ ಸಂಯೋಜನೆ, ಧ್ವನಿಯ ಏರಿಳಿತ ಗಳು ಒಂದು ನಾಟಕ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತೋರಿಸಿಕೊಟ್ಟವು. ಮಹೇಶ್ ಕಲ್ಲತ್ತಿ ಅವರ ಬೆಳಕಿನ ವಿನ್ಯಾಸ  ಎಂದೂ ಕಳಪೆಯಾಗುವುದಿಲ್ಲ. ಹಾಗೆಯೇ ಉಮೇಶ್ ಸಾಲಿಯಾನ ಅವರ ಧ್ವನಿ ವಿನ್ಯಾಸ ಕೂಡಾ. ತಮ್ಮನ್ನು ತಾವು ಮರೆತು ಪಾತ್ರದಲ್ಲಿ ಪೂರ್ಣವಾಗಿ ತಲ್ಲೀನರಾಗಿ ಅಭಿನಯಿಸಿದ ನಟ ನಟಿಯರು ಪ್ರೇಕ್ಷಕರ ನೆನಪಿನಲ್ಲಿ ಜಾಗ ಪಡೆದುಕೊಂಡರು.

ನೇರವಾಗಿ ಕಥೆ ಹೇಳದಿದ್ದರೂ, ಈ ಪ್ರಯೋಗದಲ್ಲಿನ ಪ್ರತಿಮೆಗಳು, ರೂಪಕಗಳು ಸಮಕಾಲೀನ ಸಮಸ್ಯೆಗಳನ್ನು ಸಂಕೇತಗಳಲ್ಲಿ ಕಾಣಿಸಿ, ಚಿಂತನೆಗೆ ಹಚ್ಚಿದವು. ಪುರಾಣಕಾಲದಿಂದ ಇಂದಿನವರೆಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಸವಾಲು ಗಳು ಹೇಗೆ ಮೂಲಭೂತವಾಗಿ ಉಳಿದು ಬಂದಿವೆ ಎಂಬುದನ್ನೂ ಈ ಪ್ರತಿಮೆಗಳು ತೋರಿಸಿದವು. ಬಣ್ಣಗಳು, ಗೆರೆಗಳು, ರಂಗ ವಿನ್ಯಾಸ ಎಲ್ಲವೂ ಸೇರಿ ರಂಗ ಪ್ರಯೋಗಕ್ಕೆ ಹೊಸ ಆಯಾಮ ನೀಡಿದವು.

ಈ ನಾಟಕ ಕೇವಲ ಒಂದು ಪ್ರಯೋಗಕ್ಕೆ ಕೊನೆಯಾಗಬಾರದು. ಹಾಗೆಯೇ ಇದನ್ನು ಅಭ್ಯಾಸ ಮಾಲಿಕೆಯ ಪ್ರಯೋಗ ಎಂದೂ ಪರಿಗಣಿಸಬೇಕಾಗಿಲ್ಲ. ಪ್ರತಿಯೊಂದು ನಾಟಕವೂ ಪ್ರಯೋಗವೇ. ಅದು ರಂಗದ ಮೇಲೆ ಬಂದಾಗ ಕಂಡುಕೊಳ್ಳುವ ಯಶಸ್ಸೇ ನಿಜವಾದ ಯಶಸ್ಸು, ದ್ವಾರಕಿ ಅವರ ಪ್ರತಿಭೆಯ ಮೇಲೆ ಬೆಳಕು ಚೆಲ್ಲಿದ ‘ವಿನ್ಯಾಸ ಕಾವ್ಯ’ವು ಅವರು ಒಬ್ಬ ಸಮರ್ಥ ರಂಗನಿರ್ದೇಶಕ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿತು.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

6 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

6 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

8 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

22 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago