ದಲಿತರ ಪಾಲಿನ ವಿನೋಬಾ ಭಾವೆ ಕೃಷ್ಣಮ್ಮಾಳ್

ಪಂಜುಗಂಗೊಳ್ಳಿ ೧೯೮೧ರಲ್ಲಿ ‘ಉಳುವವನ ಮುಕ್ತಿಗೆ ಭೂಮಿ’ ಎಂಬ ವಿನೂತನ ಮಾದರಿಯ ಚಳವಳಿಯೊಂದನ್ನು ಹುಟ್ಟು ಹಾಕಿದರು

 

ಪಂಜು ಗಂಗೊಳ್ಳಿ

 

ಶ್ರೀಮಂತ ಕುಟುಂಬದಿಂದ ಬಂದ ಜಗನ್ನಾಥನ್ ಗಾಂಧೀಜಿಯ ಕರೆಗೆ ಓಗೊಟ್ಟು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು, ಅವರ ಅಸಹಕಾರ ಚಳವಳಿಗೆ ಸೇರಿಕೊಂಡವರು. ಅಲ್ಲಿ ಕೃಷ್ಣಮ್ಮಾಳ್- ಜಗನ್ನಾಥನ್ ನಡುವೆ ಪ್ರೇಮಾಂಕುರವಾದರೂ ದೇಶ ಸ್ವತಂತ್ರವಾಗುವ ತನಕ ಮದುವೆಯಾಗಬಾರದೆಂದು ನಿಶ್ಚಯಿಸಿದರು. ೧೯೪೨ರಲ್ಲಿ ಜಗನ್ನಾಥನ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ವರ್ಷಗಟ್ಟಳೆ ಜೈಲುವಾಸಿಯಾದರು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ, ೧೯೫೦ರಲ್ಲಿ ಇಬ್ಬರೂ ಮದುವೆಯಾದರು.

ದಲಿತರು ಕೆಲವು ರಸ್ತೆಗಳಲ್ಲಿ ಕಾಲಿಡುವಂತಿಲ್ಲ. ಪಾದರಕ್ಷೆಗಳನ್ನು ಧರಿಸುವಂತಿಲ್ಲ. ಧೋತಿಯನ್ನು ಮಂಡಿಗಿಂತ ಕೆಳಕ್ಕೆ ಬಿಡುವಂತಿಲ್ಲ. ಅವರ ನೆರಳು ಭೂಮಾಲೀಕರ ಮನೆಯ ಮೇಲೆಬಿದ್ದರೂ ಸಾಕು, ಒದೆತ ಬೀಳುತ್ತಿತ್ತು. ಯಾವತ್ತೂ ಅರೆಹೊಟ್ಟೆ. ಬಸವನ ಹುಳ, ಅಪರೂಪಕ್ಕೆ ಇಲಿಗಳನ್ನೂ ತಿಂದು ಜೀವಿಸುತ್ತಿದ್ದರು. ಯಾರಿಗೂ ಭೂಮಿ ಇರಲಿಲ್ಲ…

ಇದು ೧೯೭೭ರಲ್ಲಿ ಟೈಮ್ಸ್ ಪತ್ರಿಕೆಯ ಅಂಕಣಕಾರ ಡೇವಿಡ್ ಆಲ್ಬರ್ಟ್ ಎನ್ನುವವರು ತಮಿಳುನಾಡಿನ ನಾಗಪಟ್ಟಿನಮ್, ತಿರುವಾರ್ ಜಿಲ್ಲೆಗಳ ಕಲವು ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಆತ ಕಂಡ ಕೆಲವು ದೃಶ್ಯಗಳು! ಈಗ ಅದೇ ಹಳ್ಳಿಗಳಿಗೆ ಹೋಗಿ ನೋಡಿದರೆ ನಿಮಗೆ ಎಲ್ಲಿಯೂ ಇಂತಹ ಅಮಾನವೀಯವಾದ ದೃಶ್ಯಗಳು ಕಾಣಸಿಗವು. ದಲಿತರ ಚಲನವಲನದ ಮೇಲೆ ಯಾವ ನಿರ್ಭಂಧನೆಗಳಿಲ್ಲ. ಅವರ ಮಕ್ಕಳು ಇತರ ಮಕ್ಕಳಂತೆ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಹೊಟ್ಟಗೆ ಉಣ್ಣಲು ಆಹಾರದ ಕೊರತೆ ಇಲ್ಲ. ನೂರಾರು ವರ್ಷಗಳಿಂದ ಭೂರಹಿತರಾಗಿದ್ದ ಸುಮಾರು ಹದಿನೇಳು ಸಾವಿರಕ್ಕೂ ಹೆಚ್ಚಿನ ದಲಿತ ಕುಟುಂಬಗಳು ಜಮೀನು ಹೊಂದಿ, ಭೂಮಾಲೀಕರ ಹಂಗಿಲ್ಲದೆ ಗೌರವದ ಬದುಕು ಬದುಕುತ್ತಿದ್ದಾರೆ. ಈ ಬದಲಾವಣೆಯಾದುದು ಈಗ ಅಲ್ಲ, ೨೦೦೭ರ ಹೊತ್ತಿಗೇ ಈ ಬದಲಾವಣೆಗಳಾಗಿದ್ದವು. ಈ ಬದಲಾವಣೆ ಹೇಗೆ ಸಾಧ್ಯವಾಯಿತು? ಅದಕ್ಕೂ ಮುಖ್ಯವಾಗಿ, ಯಾರು ಈ ಬದಲಾವಣೆಯನ್ನು ಸಾಧ್ಯವಾಗಿಸಿದರು?

ಕೃಷ್ಣಮ್ಮಾಳ್ ಜಗನ್ನಾಥನ್ ಎಂಬ ಒಬ್ಬ ಭೂರಹಿತ ದಲಿತ ಮಹಿಳೆ ಈ ಬದಲಾವಣೆಗೆ ಕಾರಣವೆಂದರೆ ಯಾರಿಗಾದರೂ ಆಶ್ಚರ್ಯವಾಗದಿರದು! ೧೯೨೬ರಲ್ಲಿ ಒಂದು ಬಡ ದಲಿತ ಕುಟುಂಬದಲ್ಲಿ ಜನಿಸಿದ ಕೃಷ್ಣಮ್ಮಾಳ್ ಸ್ವತಃ ಜಾತಿ ವ್ಯವಸ್ಥೆಯ ಸಾಮಾಜಿಕ ಶೊಷಣೆಯ ಎಲ್ಲಾ ನೋವನ್ನುಂಡು ಬೆಳೆದರೂ ಕಾಲೇಜು ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾದರು. ಅದೇ ಅವರನ್ನು ಮಹಾತ್ಮ ಗಾಂಧೀಜಿಯ ಸರ್ವೋದಯ ಚಳವಳಿಗೆ ಧುಮುಕುವಂತೆ ಪ್ರೇರೇಪಿಸಿತು. ಅಲ್ಲಿ ಅವರಿಗೆ ಶಂಕರಲಿಂಗಮ್ ಜಗನ್ನಾಥನ್ ಎಂಬವರ ಪರಿಚಯವಾಯಿತು. ಶ್ರೀಮಂತ ಕುಟುಂಬದಿಂದ ಬಂದ ಜಗನ್ನಾಥನ್ ಗಾಂಧೀಜಿಯ ಕರೆಗೆ ಓಗೊಟ್ಟು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು, ಅವರ ಅಸಹಕಾರ ಚಳವಳಿಗೆ ಸೇರಿಕೊಂಡವರು. ಇಬ್ಬರ ನಡುವೆ ಪ್ರೇಮಾಂಕುರವಾದರೂ ದೇಶ ಸ್ವತಂತ್ರವಾಗುವ ತನಕ ಮದುವೆಯಾಗಬಾರದೆಂದು ನಿಶ್ಚಯಿಸಿದರು. ೧೯೪೨ರಲ್ಲಿ ಜಗನ್ನಾಥನ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ವರ್ಷಗಟ್ಟಳೆ ಜೈಲುವಾಸಿಯಾದರು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ, ೧೯೫೦ರಲ್ಲಿ ಇಬ್ಬರೂ ಮದುವೆಯಾದರು.

೧೯೫೦ರಿಂದ ೧೯೫೨ರ ವರೆಗೆ ಶಂಕರಲಿಂಗಮ್ ವಿನೋಬಾ ಭಾವೆಯೊಂದಿಗೆ ಉತ್ತರ ಭಾರತದಲ್ಲಿ ಭೂದಾನ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಇದೇ ಹೊತ್ತಲ್ಲಿ ಕೃಷ್ಣಮ್ಮಾಳ್ ಮದ್ರಾಸಿನಲ್ಲಿ ಟೀಚ ತರಬೇತಿಯನ್ನು ಮುಗಿಸಿದರು. ಶಂಕರಲಿಂಗಮ್ ತಮಿಳುನಾಡಿಗೆ ಬಂದು, ದಂಪತಿಗಳು ೧೯೫೩ರಿಂದ ೧೯೬೭ರ ವರೆಗೆ ತಮಿಳುನಾಡಿನಲ್ಲಿ ಭೂದಾನ ಚಳವಳಿಯನ್ನು ನಡೆಸಿ, ನೂರಾರು ಭೂರಹಿತ ಕುಟುಂಬಗಳಿಗೆ ನೆಲೆದ ಒಡೆತನ ಸಿಗುವಂತೆ ಮಾಡಿದರು. ಈ ನಿಟ್ಟಿನಲ್ಲಿ ಅವರಿಗೆ ಜೀವಬೆದರಿಕೆಗಳು ಬಂದರೂ ಜಗ್ಗದೆ, ಗಂಡಹೆಂಡಿರು ಸಾವಿರಾರು ಭೂರಹಿತ ದಲಿತ ಕುಟುಂಬಗಳನ್ನು ಭೂಮಾಲೀಕರ ಜೀತದಿಂದ ಪಾರು ಮಾಡಿದರು.

೧೯೬೮ರಲ್ಲಿ ತಂಜಾವೂರಿನ ಕಿಝ್ವನ್ಮಣಿ ಎಂಬ ಹಳ್ಳಿಯಲ್ಲಿ ದಲಿತ ಕೂಲಿಕಾರರು ಹೆಚ್ಚಿನ ಕೂಲಿಗಾಗಿ ಬೇಡಿಕೆ ಇಟ್ಟಾಗ ಭೂ ಮಾಲೀಕರು ದಲಿತರ ಮನೆಗಳಿಗೆ ಬೆಂಕಿಯಿಟ್ಟು ೪೦ ಜನ ಹೆಂಗಸರು, ಮಕ್ಕಳನ್ನು ಜೀವಂತ ಸುಟ್ಟು ಹಾಕಿದರು. ಈ ಹಿನ್ನೆಲೆಯಲ್ಲಿ ಕೃಷ್ಣಮ್ಮಾಳ್ ಮತ್ತು ಜಗನ್ನಾಥನ್ ೧೯೮೧ರಲ್ಲಿ ‘ಉಳುವವನ ಮುಕ್ತಿಗೆ ಭೂಮಿ’ ಎಂಬ ತಮ್ಮದೇ ಆದ ವಿನೂತನ ಮಾದರಿಯ ಚಳವಳಿಯೊಂದನ್ನು ಹುಟ್ಟು ಹಾಕಿದರು. ಇದು ವಿನೋಬಾ ಭಾವೆಯವರ ಭೂದಾನ ಚಳವಳಿಗಿಂತ ಬಹಳ ಭಿನ್ನವಾದುದು. ಈ ಯೋಜನೆಯಡಿ ಭೂಮಾಲೀಕರಿಂದ ನೆಲವನ್ನು ಬೇಡುವುದಿಲ್ಲ. ಬದಲಿಗೆ, ಅವರಿಂದ ಜಮೀನನ್ನು ಕ್ರಯ ಕೊಟ್ಟು ನೇರವಾಗಿ ಖರೀದಿಸಲಾಗುತ್ತದೆ!

ಯೋಜನೆಯ ಮೊದಲ ಹಂತವಾಗಿ, ತಮ್ಮಲ್ಲಿರುವ ಹೆಚ್ಚುವರಿ ಜಮೀನನ್ನು ಮಾರುವಂತೆ ಭೂಮಾಲೀಕರನ್ನು ಒಲಿಸುವುದು. ನಂತರದ ಹಂತದಲ್ಲಿ, ಜಮೀನು ಖರೀದಿಗೆ ಬೇಕಾದ ಹಣವನ್ನು ಹೊಂದಿಸುವುದು. ಇದಕ್ಕಾಗಿ ದಲಿತ ಜನಾಂಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ‘ದಿ ನೇಷನಲ್ ಶೆಡ್ಯೂಲ್ಡ್ ಕಾಸ್ಟ್ ಫೈನಾನ್ಸ್ ಆಂಡ್ ಡೆವಲಪ್ಮೆಂಟ್ ಕಾರ್ಪೋರೇಷನ್’ ಮೊದಲಾದ ಸಂಸ್ಥೆಗಳ ಸಹಾಯ ಪಡೆಯುವುದು. ಪ್ರಾರಂಭದಲ್ಲಿ ಈ ಕಾರ್ಯಕ್ಕೆ ಬ್ಯಾಂಕುಗಳನ್ನು ಒಪ್ಪಿಸುವುದೇ ಬಹುದೊಡ್ಡ ತೊಡಕಾಗಿತ್ತು. ಅದರ ಜೊತೆಯಲ್ಲಿ ರಾಜಕೀಯ, ಸರ್ಕಾರಿ ನೌಕರಿಶಾಹಿ ವಿರೋಧವೂ ತೀವ್ರವಾಗಿತ್ತು. ಆದರೂ ಕೃಷ್ಣಮ್ಮಾಳ್ ಇವೆಲ್ಲ ಅಡೆತಡೆಗಳನ್ನು ದಾಟಿ, ‘ಉಳುವವನ ಮುಕ್ತಿಗೆ ಭೂಮಿ’ ಯೋಜನೆಯಡಿ ಸಾವಿರಾರು ಭೂ ರಹಿತ ದಲಿತ ಕುಟುಂಬಗಳು ಸ್ವಂತ ಜಮೀನು ಪಡೆದು, ಭೂಮಾಲೀಕರ ಹಂಗಿನಿಂದ ಪಾರಾಗಿಸುವಲ್ಲಿ ಸಫಲರಾದರು. ಈ ಯೋಜನೆ ದಲಿತರಿಗೆ ಭೂಮಿ ಒಡೆತನ ಕೊಡಿಸುವುದು ಮಾತ್ರವಲ್ಲದೆ ಹಲವು ರೀತಿ ಔದ್ಯೋಗಿಕ ತರಬೇತಿಗಳನ್ನು ನೀಡಿ, ಅವರಿಗೆ ಸ್ವಾವಲಂಬಿಗಳಾಗಿ ಬದುಕಲು ದಾರಿಯನ್ನೂ ಕಲ್ಪಿಸಿದೆ.

ಕೃಷ್ಣಮ್ಮಾಳ್ ಮತ್ತು ಜಗನ್ನಾಥನ್ ಸಾಮಾಜಿಕ ಕಾರ್ಯಗಳಿಗಾಗಿ ಏಳು ಸರ್ಕಾರೇತರ ಸಂಸ್ಥೆಗಳನ್ನು ಹುಟ್ಟು ಹಾಕಿದ್ದಾರೆ. ಹಲವು ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳನ್ನು ಸಕ್ರಿಯ ಸದಸ್ಯರಾಗಿ ದುಡಿದಿದ್ದಾರೆ. ಜಮ್ನಾಲಾಲ್ ಬಜಾಜ್ ಪ್ರಶಸ್ತಿ, ಪರ್ಯಾಯ ನೊಬೆಲ್ ಎಂದು ಪ್ರಖ್ಯಾತವಾದ ರೈಟ್ ಲೈವ್ಲಿಹುಡ್ ಪ್ರಶಸ್ತಿ, ಪದ್ಮಶ್ರೀ ಮೊದಲಾದ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು. ಶಂಕರಲಿಂಗಮ್ ಜಗನ್ನಾಥನ್ ೨೦೧೩ರಲ್ಲಿ ತೀರಿಕೊಂಡಾಗ ಅವರಿಗೆ ಸರಿಯಾಗಿ ನೂರು ವರ್ಷ ಪ್ರಾಯವಾಗಿತ್ತು. ಕೃಷ್ಣಮ್ಮಾಳ್‌ರಿಗೆ ಈಗ ೯೬ರ ಇಳಿಪ್ರಾಯ.

andolana

Recent Posts

ದ್ವಿತೀಯ ಪಿಯುಸಿ ಫಲಿತಾಂಶ: ಇದೊಂದು ಐತಿಹಾಸಿಕ ದಿನ ಎಂದ ಮಧು ಬಂಗಾರಪ್ಪ

ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48ರಷ್ಟು ಫಲಿತಾಂಶ ಬಂದಿದೆ…

11 hours ago

ಎರಡು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಕ್ತಾಯ: ವೋಟಿಂಗ್‌ ಪ್ರಮಾಣವೆಷ್ಟು.?

ದಾವಣಗೆರೆ/ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…

12 hours ago

ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೈಕೋರ್ಟ್‌…

12 hours ago

ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಬಿಸಿ ಗಾಳಿ ಎಚ್ಚರಿಕೆ

ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ…

12 hours ago

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಆರು ಗ್ಯಾರಂಟಿ ಜಾರಿ: ಪ್ರಧಾನಿ ನರೇಂದ್ರ ಮೋದಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…

12 hours ago

ಭಾರತ ತಲುಪಿದ ಗ್ರೀನ್‌ ಆಶಾ: 15,000 ಟನ್‌ ಎಲ್‌ಪಿಜಿ ಹೊತ್ತು ತಂದ ನೌಕೆ

ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್‌ ಎಲ್‌ಪಿಜಿ ಹೊತ್ತ ಟ್ಯಾಂಕರ್‌ ಹಾರ್ಮುಜ್‌ ಜಲಸಂಧಿಯನ್ನು…

13 hours ago