ಈದ್ಗಾಕ್ಕೆ ಭೂಮಿ ನೀಡಿ ತಂದೆ ಆಸೆ ಪೂರೈಸಿದ ಸೋದರಿಯರು

ಈ ಜೀವ- ಈ ಜೀವನ ಪಂಜುಗಂಗೊಳ್ಳಿ ಅನಿತ, ಸರೋಜ ದಾನ ನೀಡಿದ ೨.೧ ಎಕರೆ ಭೂಮಿಯ ಈಗಿನ ಮಾರುಕಟ್ಟೆ ಬೆಲೆ ಕನಿಷ್ಟವೆಂದರೂ ೧.೨ ಕೋಟಿ ರೂಪಾಯಿ!

 

ಇತ್ತ ದೇಶದ ಹಲವೆಡೆ ಮಂದಿರ ಮಸೀದಿಗಳ ಹೆಸರಲ್ಲಿ ಜನರನ್ನು ಒಡೆಯುವ ಕೃತ್ಯಗಳು ನಡೆಯುತ್ತಿದ್ದರೆ, ಅದಕ್ಕೆ ಪ್ರತಿರೋಧವೋ ಎಂಬಂತೆ ಇದೇ ಮಂದಿರ ಮಸೀದಿಗಳ ಮೂಲಕ ಜಾತಿಧರ್ಮಗಳನ್ನು ಮೀರಿ ಜನರನ್ನು ಬೆಸೆಯುವ ಪ್ರಯತ್ನಗಳೂ ನಡೆಯುತ್ತಿವೆ. ಇದು ಅಂತಹ ಎರಡು ಉದಾಹರಣೆಗಳು.

ಡೆಹ್ರಾಡೂನ್‌ನ ಕಾಶೀಪುರದ ಲಾಲಾ ಭೃಜನಂದನ್ ರಸ್ತೋಗಿ ತನ್ನ ಜೀವಿತಾವಧಿಯುದ್ದಕ್ಕೂ ಕೋಮು ಸೌಹಾರ್ದದತೆಯನ್ನು ಬದುಕಿದ್ದ ಒಬ್ಬ ಸಾಧಾರಣ ರೈತ. ಗ್ರಾಮದ ಮುಸ್ಲಿಮರ ಯಾವುದೇ ಹಬ್ಬ, ವಿಶೇಷ ದಿನಗಳು ಬರಲಿ, ಅವರಿಗೆ ಪ್ರಪ್ರಥಮ ದೇಣಿಗೆ ಬರುತ್ತಿದ್ದುದು ಲಾಲಾ ಭೃಜನಂದನ್ ರಸ್ತೋಗಿಯವರಿಂದ. ಹಬ್ಬಹರಿದಿನಗಳಂದು ಮುಸ್ಲಿಂ ಶೃದ್ಧಾಳುಗಳಿಗೆ ಸಿಹಿ ತಿಂಡಿ ಹಾಗೂ ಹಣ್ಣುಗಳನ್ನು ಹಂಚುತ್ತಿದ್ದರು. ಕಾಶೀಪುರದ ಮುಸ್ಲಿಮರೆಲ್ಲರಿಗೂ ಲಾಲಾ ಭೃಜನಂದನ್ ಗೌರವದ ವ್ಯಕ್ತಿಯಾಗಿದ್ದರು.

೨೦೦೩ರಲ್ಲಿ ಅವರು ತೀರಿಕೊಂಡಾಗ ಅವರಿಗೆ ತೊಂಭತ್ತರ ಹತ್ತಿರದ ಪ್ರಾಯವಾಗಿತ್ತು. ಭೃಜನಂದನ್ ತೀರಿಕೊಂಡ ನಂತರ ಅವರ ಮಗ ರಾಕೇಶ್ ಕೂಡಾ ತಂದೆಯ ಕೋಮುಸೌಹಾರ್ದ ಜೀವನಕ್ರಮವನ್ನು ಮುಂದುವರಿಸಿದ್ದಾರೆ.

ಲಾಲಾ ಭೃಜನಂದನ್‌ಗೆ ಹೊಲಗದ್ದೆಗಳ ರೂಪದಲ್ಲಿ ಕೆಲವು ಎಕರೆ ಜಮೀನಿತ್ತು. ಅವರ ಮರಣಾನಂತರ ಅದು ಸಹಜವಾಗೇ ಮಗ ರಾಕೇಶ್ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಅನಿತಾ ಮತ್ತು ಸರೋಜರ ಪಾಲಿಗೆ ಬಂದಿತು. ಇತ್ತೀಚೆಗೆ ಒಂದು ದಿನ ಅನಿತಾ ಮತ್ತು ಸರೋಜ ಮನೆಯಲ್ಲಿ ಯಾರೋ ಸಂಬಂಧಿಕರೊಂದಿಗೆ ಮಾತಾಡುತ್ತಿರುವಾಗ, ಭೃಜನಂದನ್ ತನ್ನ ಜಮೀನಿನ ಚಿಕ್ಕದೊಂದು ಭಾಗವನ್ನು ಈದ್ ಸಮಯದಲ್ಲಿ ನಮಾಜು ಮಾಡಲು ಸಾಕಷ್ಟು ಸ್ಥಳಾವಕಾಶವಿಲ್ಲದ ತನ್ನೂರಿನ ಮುಸ್ಲಿಂ ಬಾಂಧವರಿಗೆ ಕೊಡಬೇಕು ಅಂತ ಆಸೆ ಪಟ್ಟಿದ್ದರು, ಆದರೆ, ಅದನ್ನು ತನ್ನ ಮಕ್ಕಳ ಎದುರು ಹೇಳಲು ಧೈರ್ಯವಾಗದೆ ಅವರಾಸೆ ಹಾಗೆಯೇ ಉಳಿಯಿತು ಎಂಬ ವಿಷಯ ಅವರಿಗೆ ತಿಳಿಯುತ್ತದೆ.

೬೨ ವರ್ಷ ಪ್ರಾಯದ ಅನಿತಾ ತನ್ನ ಸಂಸಾರದೊಂದಿಗೆ ದೆಹಲಿಯಲ್ಲಿ ನೆಲಸಿದ್ದರೆ, ೫೭ ವರ್ಷದ ಸರೋಜ ತನ್ನ ಗಂಡ ಮಕ್ಕಳೊಂದಿಗೆ ಮೀರತ್‌ನಲ್ಲಿ ವಾಸಿಸುತ್ತಿದ್ದಾರೆ. ಇಬ್ಬರೂ ಆ ವಿಚಾರವನ್ನು ಕೂಲಂಕಷವಾಗಿ ಚರ್ಚಿಸಿ, ಮುಂದೇನು ಮಾಡಬೇಕೆಂಬುದನ್ನು ತೀರ್ಮಾನಿಸುತ್ತಾರೆ. ಅದರಂತೆ, ಮೇ ತಿಂಗಳ ೪ರಂದು ಕಾಶೀಪುರಕ್ಕೆ ಬಂದು, ತಮ್ಮ ಸಹೋದರ ರಾಕೇಶ್‌ನ ನೆರವು ಪಡೆದು, ಈದುಲ್ ಫಿತ್‌ರ್‌ಗೆ ಎರಡು ದಿನಗಳಿರುವಾಗ ೨.೧ ಎಕರೆ ಜಮೀನನ್ನು ಸ್ಥಳೀಯ ಈದ್ಗಾಕ್ಕೆ ದಾನ ನೀಡಿ, ತಂದೆಯ ಕೊನೇ ಆಸೆಯನ್ನು ಪೂರೈಸುತ್ತಾರೆ! ಆ ಜಮೀನಿನ ಈಗಿನ ಮಾರುಕಟ್ಟೆ ಬೆಲೆ ಕನಿಷ್ಟವೆಂದರೆ ೧.೨ ಕೋಟಿ ರೂಪಾಯಿ!

 

ಕಾಶೀಪುರದ ಈದ್ಗಾದ ಅಕ್ಕಪಕ್ಕದಲ್ಲಿ ಒಂದು ಗುರುದ್ವಾರ ಮತ್ತು ಮತ್ತೊಂದು ಹನುಮಾನ್ ಮಂದಿರವಿದೆ. ಯಾವತ್ತೂ ಇಲ್ಲಿ ಕೋಮು ಸಂಘರ್ಷ ನಡೆದುದಿಲ್ಲ. ಬದಲಿಗೆ, ಒಬ್ಬರಿಗೊಬ್ಬರಿಗೆ ಹೊಂದಿಕೊಂಡು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮೂರೂ ಧರ್ಮಗಳ ಧಾರ್ಮಿಕ ಕೇಂದ್ರದಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದ್ದ ದಿನ ಅದರ ಬಗ್ಗೆ ಪರಸ್ಪರ ತಿಳಿದುಕೊಂಡು ಒಬ್ಬರಿಗೊಬ್ಬರು ಸಹಕಾರ ನೀಡಿ ಆ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಉದಾಹರಣೆಗೆ, ಈದ್ಗಾ, ಗುರುದ್ವಾರ ಮತ್ತು ಹನುಮಾನ್ ಮಂದಿರದಲ್ಲಿ ಏಕಕಾಲಕ್ಕೆ ಲೌಡ್ ಸ್ಪೀಕರುಗಳನ್ನು ಬಳಸುವ ಪ್ರಸಂಗ ಬಂದರೆ ಆಗ ವಾಲ್ಯೂಮ್ ಕಡಿಮೆ ಮಾಡಿ, ಒಬ್ಬರಿಂದೊಬ್ಬರಿಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತಾರೆ.

ಕಾಶೀಪುರದ ಈದ್ಗಾದ ಅಕ್ಕಪಕ್ಕದಲ್ಲಿ ಒಂದು ಗುರುದ್ವಾರ ಮತ್ತು ಮತ್ತೊಂದು ಹನುಮಾನ್ ಮಂದಿರವಿದೆ. ಯಾವತ್ತೂ ಇಲ್ಲಿ ಕೋಮುಸಂಘರ್ಷ ನಡೆದುದಿಲ್ಲ. ಬದಲಿಗೆ, ಒಬ್ಬರಿಗೊಬ್ಬರಿಗೆ ಹೊಂದಿಕೊಂಡು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಮೂರೂ ಧರ್ಮಗಳ ಧಾರ್ಮಿಕ ಕೇಂದ್ರದಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದ್ದ ದಿನ ಅದರ ಬಗ್ಗೆ ಪರಸ್ಪರ ತಿಳಿದುಕೊಂಡು ಒಬ್ಬರಿಗೊಬ್ಬರು ಸಹಕಾರ ನೀಡಿ ಆ ಕಾರ್ಯಕ್ರಮವನ್ನು ಮುಗಿಸುತ್ತಾರೆ. ಉದಾಹರಣೆಗೆ, ಈದ್ಗಾ, ಗುರುದ್ವಾರ ಮತ್ತು ಹನುಮಾನ್ ಮಂದಿರದಲ್ಲಿ ಏಕಕಾಲಕ್ಕೆ ಲೌಡ್ ಸ್ಪೀಕರುಗಳನ್ನು ಬಳಸುವ ಪ್ರಸಂಗ ಬಂದರೆ ಆಗ ವಾಲ್ಯೂಮ್ ಕಡಿಮೆ ಮಾಡಿ, ಒಬ್ಬರಿಂದೊಬ್ಬರಿಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತಾರೆ.

ಕೇರಳದ ಅರನ್ಮುಲ ಎಂಬಲ್ಲಿನ ಹನೀಫ್ ಮತ್ತು ಜಾಸ್ಮಿನ್ ಎಂಬ ದಂಪತಿಗಳು ಬಹಳ ವರ್ಷಗಳಿಂದ ಹಜ್ ಯಾತ್ರೆ ಮಾಡುವ ಕನಸು ಕಾಣುತ್ತಿದ್ದರು. ಈ ಬಾರಿ ಹಜ್ ಯಾತ್ರೆಗೆ ಹೋಗಿಯೇ ಬಿಡಬೇಕು ಎಂದು ನಿರ್ಧರಿಸಿ, ಬೇಕಾಗುವ ಹಣಕ್ಕಾಗಿ ತಮ್ಮ ಜಮೀನು ಮಾರಾಟ ಮಾಡುವ ತೀರ್ಮಾನ ಮಾಡುತ್ತಾರೆ. ಆದರೆ, ಕೊನೇಯ ಗಳಿಗೆಯಲ್ಲಿ ತಮ್ಮ ನಿರ್ಧಾರ ಬದಲಾಯಿಸಿ, ಹಜ್ ಯಾತ್ರೆ ಮಾಡಲು ತಾವು ಮಾರಬೇಕೆಂದಿದ್ದ ೨೮ ಸೆಂಟ್ಸ್ ಜಮೀನನ್ನು ಕೇರಳ ಸರ್ಕಾರಕ್ಕೆ ದಾನ ನೀಡುತ್ತಾರೆ!

ಹನೀಫ್ ಮತ್ತು ಜಾಸ್ಮಿನ್ ದಂಪತಿಗಳು ಹಾಗೆ ತೀರ್ಮಾನ ಮಾಡಲು ಮಾನವೀಯವಾದ ಒಂದು ಕಾರಣವಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಅವರ ನೆರೆಮನೆಯವರೊಬ್ಬರು ತಮ್ಮ ಕುಟುಂಬದ ಸದಸ್ಯರೊಬ್ಬರು ತೀರಿಕೊಂಡಾಗ, ಅವರಿಗೆ ಸ್ವಂತ ಜಾಗವಿಲ್ಲದ ಕಾರಣ ಅಂತ್ಯಸಂಸ್ಕಾರ ಮಾಡಲು ಬಹಳ ಪರದಾಡಬೇಕಾಯಿತು. ಆಗ, ಅವರ ನೆರೆಮನೆಯಲ್ಲಿ ವಾಸಿಸುತ್ತಿದ್ದ ಅವರದೇ ಸಮುದಾಯದವರೊಬ್ಬರು ನಾಲ್ಕು ಸೆಂಟ್ಸ್ ಜಾಗ ಕೊಟ್ಟಾಗ ಅದರಲ್ಲಿ ಅವರು ಮೃತರ ಸಂತ್ಯಸಂಸ್ಕಾರ ನಡೆಸಿದರು. ಅದನ್ನು ನೋಡಿದ ಹನೀಫ್ ಮತ್ತು ಜಾಸ್ಮಿನ್ ದಂಪತಿಗಳು ಜಾಗ ಮಾರಿ ಆ ದುಡ್ಡಿನಿಂದ ಹಜ್ ಯಾತ್ರೆಗೆ ಹೋಗುವ ಬದಲು ಆ ಜಾಗವನ್ನು ಸ್ವಂತ ನೆಲೆಯಿಲ್ಲದವರಿಗಾಗಿ ಕೇರಳ ಸರ್ಕಾರ ಜಾರಿಗೆ ತಂದಿರುವ ‘ಮನಸ್ಸೋಡಿತಿರಿ ಮಣ್ಣು’ ಯೋಜನೆಗೆ ದಾನ ನೀಡಿದರು.

ಕೇರಳ ಸರ್ಕಾರ ‘ಮನಸ್ಸೋಡಿತಿರಿ ಮಣ್ಣು’ ಯೋಜನೆಗೆ ಈವರೆಗೆ ೧೩ ಕಡೆಗಳಲ್ಲಿ ಸುಮಾರು ೯೨೬ ಸೆಂಟ್ಸ್ ಜಾಗವನ್ನು ಪಡೆದುಕೊಂಡಿದೆ. ಮತ್ತು, ಬೇರೆ ೩೦ ಕಡೆ ೮೦೦ ಸೆಂಟ್ಸ್ ಜಾಗ ಸಿಗುವ ಭರವಸೆ ಸಿಕ್ಕಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಈವರೆಗೆ ೨,೯೫,೦೦೦ ಮನೆಗಳನ್ನು ನಿರ್ಮಿಸಿ ಸ್ವಂತ ಮನೆಯಿಲ್ಲದ ಬಡಬಗ್ಗರಿಗೆ ಹಸ್ತಾಂತರಿಸಿದೆ. ಇನ್ನು ೩೫,೦೦೦ ಮನೆಗಳು ನಿರ್ಮಾಣ ಹಂತದಲ್ಲಿದೆ. ಮೂರು ವರ್ಷಗಳಲ್ಲಿ ರಾಜ್ಯದ ಸುಮಾರು ೨.೫ ಲಕ್ಷ ಭೂರಹಿತರಿಗೆ ಮನೆ ನಿರ್ಮಿಸಿ ಕೊಡುವುದು ಸರ್ಕಾರ ‘ಮನಸ್ಸೋಡಿತಿರಿ ಮಣ್ಣು’ ಯೋಜನೆಯ ಗುರಿಯಾಗಿದೆ.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

5 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago