ಅಂಕಣಗಳು

ಅರೆ ಘನಸ್ಥಿತಿಯ ಜೀವಾಮೃತ

• ಜಯಶಂಕರ್ ಬದನಗುಪ್ಪೆ

ಅರೆ ಘನಸ್ಥಿತಿಯ ಜೀವಾಮೃತ ಪರಿಸರ ಸ್ನೇಹಿ ಹಾಗೂ ಬಹುಪಯೋಗಿಯೂ ಹೌದು, ಸಸ್ಯಮಿತ್ರ ಜತೆಗೆ ರೈತ ಮಿತ್ರನೂ ಹೌದು.

ಅರೆ ಘನಸ್ಥಿತಿಯ ಜೀವಾಮೃತವನ್ನು ಹೆಚ್ಚಿನ ಪ್ರಮಾಣದ ಹಸುವಿನ ಸಗಣಿ (100 ಕೆ.ಜಿ.) ಮತ್ತು ಜೈವಿಕ ಪದಾರ್ಥ ಗಳಾದ 1 ಕೆ.ಜಿ. ಬೆಲ್ಲ, 1 ಕೆ.ಜಿ. ಬೇಳೆಕಾಳು ಹಿಟ್ಟು, ಕೈ ಬೆರಳೆಣಿಕೆಯಷ್ಟು ಫಲವತ್ತಾದ ಮಣ್ಣನ್ನು ಕಡಿಮೆ ಪ್ರವಾಣದ ನೀರಿನಲ್ಲಿ ಬೆರೆಸಿ ತಯಾರಿಸಲಾಗುತ್ತದೆ. ನಂತರ ಈ ಎಲ್ಲ ಪದಾರ್ಥಗಳ ಮಿಶ್ರಣದ ಸಣ್ಣ ಚೆಂಡುಗಳನ್ನು ತಯಾರಿಸಿ ಒಣಗಿಸಲಾಗುತ್ತದೆ. ನಂತರ ಅವುಗಳನ್ನು ಸಿಂಕ್ಲರ್ (ತುಂತುರು ನೀರಾವರಿ) ಅಥವಾ ಡ್ರಿಪ್ಟರ್‌ನ (ಹನಿ ನೀರಾವರಿ) ಬಾಯಿಯ ಬಳಿ ಇಡಲಾಗುತ್ತದೆ. ಈ ಅರೆ ಘನ ಜೀವಾಮೃತದ ಉಂಡೆಯ ಮೇಲೆ ನೀರು ಬಿದ್ದು ಸ್ಪರ್ಶಿಸಲ್ಪಟ್ಟಾಗಲೆಲ್ಲಾ ಸೂಕ್ಷ್ಮ ಜೀವಿಗಳು ಸಕ್ರಿಯಗೊಳ್ಳುತ್ತವೆ.

ಘನಸ್ಥಿತಿ ಜೀವಾಮೃತ ತಯಾರಿ ಹೇಗೆ?: ನೀರಿನ ಲಭ್ಯತೆ ಕಡಿಮೆ ಇದ್ದಾಗ ಇದನ್ನು ತಯಾರಿಸಲಾಗುತ್ತದೆ. ಕಾರ್ಮಿಕರ ಕೊರತೆಯ ಸಂಭವವಿದ್ದಾಗ ನಂತರದ ಬಳಕೆಗಾಗಿ ಈ ಘನ ಸ್ಥಿತಿಯ ಜೀವಾ ಮೃತ ಜೈವಿಕ ಗೊಬ್ಬರ)ವನ್ನು ಸಂಗ್ರಹಿಸಿಡಬಹುದು. ಇದಕ್ಕೆ 200 ಕೆಜಿ ಹಸುವಿನ ಸಗಣಿ ಬೇಕಾಗುತ್ತದೆ. ಅದನ್ನು ನೆಲದ ಮೇಲೆ ಏಕ ರೂಪವಾಗಿ ಹರಡಲಾಗುತ್ತದೆ ನಂತರ 20 ಲೀಟರ್ ನೀರನ್ನು ಸೇರಿಸಿ ಸಂಪೂರ್ಣವಾಗಿ ಮಿಶ್ರಣ ಮಾಡಲಾಗುತ್ತದೆ. ಈ ಮಿಶ್ರಣವನ್ನು ರಾಶಿಯಾಗಿ (ಗುಡ್ಡೆಯ ರೂಪದಲ್ಲಿ) ಪರಿವರ್ತಿಸ ಲಾಗುತ್ತದೆ. 2 ದಿನಗಳು ಸೆಣಬಿನ ಚೀಲದಿಂದ ಮುಚ್ಚಿ ಹುದುಗಲು ಹಾಗೆಯೇ ಬಿಡಲಾಗುತ್ತದೆ. ನಂತರ ನೆಲದ ಮೇಲೆ ಹರಡಿ ಸಂಪೂರ್ಣವಾಗಿ ಒಣಗಿಸಲಾಗುತ್ತದೆ. ಬಳಿಕ ಅದನ್ನು ಕೋಣೆಯಲ್ಲಿ ಸೆಣಬಿನ ಚೀಲಗಳಲ್ಲಿ (ಜೀವಾಮೃತವನ್ನು) 6 ತಿಂಗಳುಗಳ ಕಾಲ ಸಂಗ್ರಹಿಸಿಡಬಹುದು. ಮಳೆಗಾಲದಲ್ಲಿ ಅಥವಾ ಯಾವುದೇ ನೀರಿನ ಲಭ್ಯತೆ ಇರುವ ಸಂದರ್ಭಗಳಲ್ಲಿ ಇದನ್ನು ಭೂಮಿಗೆ ಸೇರಿಸಬಹುದು. ಫಸಲು ಫಲವತ್ತಾಗಿ ಬೆಳೆಯುತ್ತದೆ. ಜೈವಿಕ ಕ್ರಿಯೆಗಳು ನಡೆಯಲು ಇದು ಉತ್ತೇಜಿಸುವುದರಿಂದ ಮಣ್ಣು ಕೂಡ ಆರೋಗ್ಯವಾಗಿರಲು ಸಹಾಯವಾಗುತ್ತದೆ.

200 ಕೆ.ಜಿ. ಘನಸ್ಥಿತಿ ಜೀವಾಮೃತವನ್ನು 1 ಎಕರೆ ಭೂಮಿಗೆ ಬಳಸಬಹುದು. ಬಿತ್ತನೆ ಅವಧಿಯಲ್ಲಿ, ಫಸಲು ಹೂ ಬಿಡುವ ಅವಧಿ ಯಲ್ಲಿ ಪ್ರತಿ ಎಕರೆ ಭೂಮಿಯಲ್ಲಿ ಎರಡು ಬೆಳೆ ರೇಖೆಗಳ ನಡುವೆ 50 ಕೆ.ಜಿ. ಅರೆ ಘನಸ್ಥಿತಿಯ ಗೊಬ್ಬರವನ್ನು ಸೇರಿಸಿದರೆ ಅದ್ಭುತ ಇಳುವರಿ ಯನ್ನು ನಿರೀಕ್ಷಿಸಬಹುದು.

ಅರೆ ಘನಸ್ಥಿತಿ ಜೀವಾಮೃತವನ್ನು 3 ವಿಧಾನಗಳಲ್ಲಿ ಬಳಸಬಹುದು: ನೀರಾವರಿ ನೀರಿನ ಕಾಲುವೆ, ಸ್ಪ್ರಿಂಕ್ಲರ್‌, ಹನಿ‌ ನೀರಾವರಿ ಜೀವಾಮೃತವನ್ನು 1 ಎಕರೆಗೆ 200 ಲೀಟರ್ ಗಿಂತ ಕಡಿಮೆಯಿಲ್ಲದ ನೀರಿನಲ್ಲಿ ತಯಾರಿಸ ಬೇಕು ಮತ್ತು ಮಿಶ್ರಣವನ್ನು ಸಿಂಪಡಣಾ ಅಥವಾ ಡ್ರಿಪ್ ಮೂಲಕ ಬಳಸುವ ಮೊದಲು ಅದನ್ನು ಫಿಲ್ಟರ್ ಮಾಡಬೇಕು. ಬಳಿಕ ಬೆಳೆಗಳ ಬೇರುಗಳಿಗೆ ಸುರಿಯಬಹುದು. ಈ ಬಗೆಯ ಜೀವಾಮೃತವನ್ನು ಬೆಳೆಗಳಿಗೆ ಅಥವಾ ಹಣ್ಣಿನ ಗಿಡಗಳಿಗೆ ಬೆಳವಣಿಗೆಯ ಹಾರ್ಮೋನ್ ಅಥವಾ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟಿರಿಯಲ್ ಸ್ಟೇ ಆಗಿಯೂ ಸಿಂಪಡಿಸಬಹುದು.

ಈ ಜೀವಾಮೃತವನ್ನು ನೇರವಾಗಿ ಬೇರಿನ ಮೇಲೆ ಅಥವಾ ಗದ್ದೆಯಲ್ಲಿನ ಸಾಲುಗಳಲ್ಲಿ ಇತರ ವಿಧದ ಸಸ್ಯಗಳಿಗೆ ಸಿಂಪಡಿಸಬಹುದು. ಜೀವಾಮೃತವನ್ನು ಕೈಯಿಂದಲೂ ನೀಡಬಹುದು. ಎರಡು ಮುಖ್ಯ ತರಕಾರಿ ಸಸ್ಯಗಳ ನಡುವೆ ಜೀವಾಮೃತವನ್ನು (50 ಮಿಲಿ) ಸೇರಿಸಲಾಗುತ್ತದೆ. ಈ ಪ್ರಕ್ರಿಯನ್ನು ಪ್ರತಿ ತಿಂಗಳು ಮೂರು ಬಾರಿ ಮಾಡಬೇಕು. ಕೊಯಿಲು ಪೂರ್ಣಗೊಳ್ಳುವವರೆಗೆ ಸತತ 4 ತಿಂಗಳ ವರೆಗೆ ಇದನ್ನು ಅನುಸರಿಸಬೇಕು.

ವೇಳಾಪಟ್ಟಿ: ಜೀವಾಮೃತದ ಮೊದಲ ಸಿಂಪಡಣೆಯನ್ನು ಬಿತ್ತನೆ ಮಾಡಿದ ಒಂದು ತಿಂಗಳ ನಂತರ ಮಾಡಬೇಕು. 5 ಲೀಟರ್ ಜೀವಾಮೃತವನ್ನು 100ಲೀ. ನೀರಿಗೆ ಬೆರೆಸಿ 1 ಎಕರೆ ತರಕಾರಿ ಬೆಳೆಗಳಿಗೆ ಸಿಂಪಡಿಸಬಹುದು. ಬೇಸಿಗೆಯ ಋತುವಿನಲ್ಲಿ, ಮುಂಜಾನೆ ಅಥವಾ ಸಂಜೆ ಇದನ್ನು ಸಿಂಪಡಿಸುವುದು ಸೂಕ್ತ. ಚಳಿಗಾಲದಲ್ಲಿ ಯಾವುದೇ ಸಮಯದಲ್ಲಾದರೂ ಇದನ್ನು ಸಿಂಪಡಿಸಬಹುದು. ಮೊದಲ ಸಿಂಪಡಣೆಯ 21 ದಿನಗಳ ನಂತರ 2ನೇ ಸಿಂಪಡಣೆ ಮಾಡಬೇಕು. 10 ಲೀಟರ್ ಫಿಲ್ಟರ್ ಮಾಡಿದ ಜೀವಾಮೃತಕ್ಕೆ 150 ಲೀಟರ್ ನೀರನ್ನು ಸೇರಿಸಿ ಮಿಶ್ರಣ ಮಾಡಿ ನೀಡುವುದು ಉತ್ತಮ. 2ನೇ ಸಿಂಪಡಣೆಯ 21 ದಿನಗಳ ನಂತರ 3ನೇ ಸಿಂಪಡಣೆ ಮಾಡಬೇಕು. ಇಲ್ಲಿ 20 ಲೀಟರ್ ಫಿಲ್ಟರ್ ಮಾಡಿದ ಜೀವಾಮೃತದಲ್ಲಿ 200 ಲೀಟರ್ ನೀರನ್ನು ಸೇರಿಸಿ ಮಿಶ್ರಣವನ್ನು ಬೆಳೆಗಳಿಗೆ ಉಣಿಸಲಾಗುತ್ತದೆ.
(jshnkrm@gmail.com)

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago