ಅಂಕಣಗಳು

ಉಪದ್ರವಕಾರಿ ಶ್ವಾನಗಳ ನಿಯಂತ್ರಣಕ್ಕೆ ಪರಿಹಾರ ಕ್ರಮ ಅಗತ್ಯ

ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು

ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ ಒಂದು ಪರಿ ಹಾರ ಕಂಡುಕೊಳ್ಳುವುದು ಅತ್ಯಗತ್ಯ. ನಾನು ೮೩ ವರ್ಷ ವಯಸ್ಸಿನವನು. ನಾಯಿಗಳೊಂದಿಗೇ ಬೆಳೆದವನು. ಕೆಲವೊಮ್ಮೆ ಅವು ಅನಾರೋಗ್ಯದಿಂದ ನನ್ನನ್ನು ಕಚ್ಚಿರುವ ಘಟನೆಗಳೂ ನಡೆದಿವೆ. ಬೀದಿಗಳಲ್ಲಿ ನನ್ನ ನಾಯಿಗಳನ್ನು ರಕ್ಷಿಸಲು ಪ್ರಯತ್ನಿಸುವಾಗ ಕೆಲವೊಮ್ಮೆ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡು ಹಲವಾರು ಬಾರಿ ರೇಬಿಸ್ ನಿರೋಧಕ ಚುಚ್ಚುಮದ್ದುಗಳನ್ನೂ ಹಾಕಿಸಿಕೊಂಡಿದ್ದೇನೆ. ನಮ್ಮ ಜಮೀನು/ಎಸ್ಟೇಟ್‌ನಲ್ಲಿ ಕಾಡು ನಾಯಿಗಳ ಜೊತೆಗೂ ನಾನು ಅನುಭವವನ್ನು ಹೊಂದಿದ್ದೇನೆ. ನ್ಯಾಯಾಂಗ ತೀರ್ಪುಗಳ ಸಾಧಕ/ಬಾಧಕಗಳ ವಿಚಾರಕ್ಕೆ ಹೋಗದೆ, ಮಾನವೀಯ ದೃಷ್ಟಿಯ ಆಧಾರದ ಮೇಲೆ ಈ ಕೆಳಗಿನ ಸಲಹೆಗಳನ್ನು ನೀಡುತ್ತಿದ್ದೇನೆ

ಎಲ್ಲೆಲ್ಲಿ ಬೀದಿ ನಾಯಿಗಳು ಅಪಾಯವಾಗಿ ಪರಿಣಮಿಸಿವೆಯೋ ಅಲ್ಲೆಲ್ಲ…:

೧ ಬೀದಿನಾಯಿಗಳನ್ನು ಹಿಡಿಯಿರಿ, ಪಶುವೈದ್ಯರಿಂದ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅನಾರೋಗ್ಯದಿಂದ ಬಳಲುತ್ತಿರುವ ಶ್ವಾನಗಳನ್ನು ಆರೋಗ್ಯವಂತ ನಾಯಿಗಳಿಂದ ಬೇರ್ಪಡಿಸಿ, ಆರೋಗ್ಯವಂತ ನಾಯಿಗಳ ಕಿವಿಗೆ ಒಂದು ಗುರುತಿನ ಸಂಖ್ಯೆಯೊಂದಿಗೆ ಜಿಪಿಎಸ್ ಟ್ಯಾಗ್ ಅನ್ನು ಅಳವಡಿಸಿ

೨ ಬೀದಿ ನಾಯಿಗಳನ್ನು ದತ್ತು ಪಡೆಯಲು ಶ್ವಾನಪ್ರಿಯರನ್ನು ಆಹ್ವಾನಿಸುವ ಬಗ್ಗೆ ಆಗಾಗ್ಗೆ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಬಹುದು. ದತ್ತು ಪಡೆಯುವವರ ಆಧಾರ್ ಸಂಖ್ಯೆ ಇತ್ಯಾದಿಗಳನ್ನು ಪಡೆದು ನೋಂದಣಿ ಮಾಡಿಕೊಡಬಹುದು. ಆದರೆ, ನಾಯಿಯನ್ನು ಮತ್ತೆ ಬೀದಿಗಿಳಿಯಲು ಬಿಡುವುದಿಲ್ಲ ಮತ್ತು ಹಾಗೊಮ್ಮೆ ಬಿಟ್ಟು ಉಲ್ಲಂಘಿ ಸಿದರೆ ಅದಕ್ಕೆ ದತ್ತು ಪಡೆದವರೇ ಜವಾಬ್ದಾರರಾಗುತ್ತಾರೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು

೩ ಶ್ವಾನಪ್ರಿಯರು ಉಳಿದ ಆರೋಗ್ಯವಂತ ನಾಯಿಗಳನ್ನು ಸೂಕ್ತ ಕಾಳಜಿ ಮತ್ತು ತಪಾಸಣೆಯೊಂದಿಗೆ ಆಶ್ರಯ ಕೇಂದ್ರಗಳಲ್ಲಿ ನೋಡಿಕೊಳ್ಳಬಹುದು

೪ ಆರೋಗ್ಯವಂತ ನಾಯಿಗಳ ಸಂಖ್ಯೆ ಹೆಚ್ಚಿದ್ದರೆ ಅಥವಾ ಅವು ನಿರ್ವಹಿಸಲು ಸಾಧ್ಯವಾಗದಷ್ಟು ಸಂಖ್ಯೆಯಲ್ಲಿದ್ದರೆ, ಅವುಗಳನ್ನು ದಟ್ಟವಾದ ಅರಣ್ಯ ಪ್ರದೇಶಗಳಿಗೆ ಕರೆದೊಯ್ದು ಬಿಡುವ ಮೂಲಕ ಹುಲಿ, ಚಿರತೆ ಮುಂತಾದ ಕಾಡು ಪ್ರಾಣಿಗಳಿಗೆ ಸುರಕ್ಷಿತ ಆಹಾರವಾಗುವಂತೆ ಮಾಡಬಹುದು. ನಾಯಿ ಮಾಂಸವನ್ನು ಕಾಡುಪ್ರಾಣಿಗಳು ಸೇವಿಸುವ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಬಹುದು. ಆದರೆ, ಆಹಾರಕ್ಕಾಗಿ ಹಳ್ಳಿಗಳ ಮೇಲೆ ದಾಳಿ ಮಾಡುವಾಗ ಕಾಡು ಪ್ರಾಣಿಗಳು ನಾಯಿಗಳನ್ನು ಕೂಡ ಹೊತ್ತೊಯ್ಯುವುದು ನಿಜವಷ್ಟೇ. ಕಾಡಿನ ಬಳಿ ಕುರಿ/ಹಸುಗಳನ್ನು ಮೇಯಿಸುವ ರೈತರ ಮೇಲೆ ಹಸಿವಿನಿಂದ ಕಂಗೆಟ್ಟ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿವೆ; ಅವರನ್ನು ಕೊಲ್ಲುತ್ತಿವೆ, ತಿನ್ನುತ್ತಿವೆ. ಅವು ಎಷ್ಟಾದರೂ ಮಾಂಸಾಹಾರ ಪ್ರಾಣಿಗಳು, ಎಷ್ಟೇ ಹಸಿವಾದರೂ ಅವು ಹುಲ್ಲು ತಿನ್ನುವುದುಂಟೇ? ಪ್ರಾಣಿಗಳ ಜೀವಕ್ಕಿಂತ ಮನುಷ್ಯರ ಜೀವ ಹೆಚ್ಚು ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಸಲಹೆಗಳನ್ನು ನೀಡಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯವು ಒಳ್ಳೆಯದಲ್ಲ ಸರಿ. ಆದರೆ ಭಾರತ ಗೋಮಾಂಸದ ಅಗ್ರ ರಫ್ತುದಾರ ದೇಶ ಗಳಲ್ಲಿ ಒಂದೆಂಬ ಅಂಶವೂ ಇಲ್ಲಿ ಗಮನಾರ್ಹವಾಗಿದೆ.

ಆಂದೋಲನ ಡೆಸ್ಕ್

Recent Posts

ಎಚ್‌.ಡಿ.ಕೋಟೆ: ಗುಜರಿ ಗೋಡೌನ್‌ಗೆ ಬೆಂಕಿ: ಲಕ್ಷಾಂತರ ರೂ ಬೆಲೆಬಾಳುವ ಸಾಮಗ್ರಿ ನಾಶ

ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್ ಜಕ್ಕಳ್ಳಿ ಸಮೀಪವಿರುವ ಜಫ್ರುಲ್ಲಾ ಎಂಬುವರಿಗೆ ಸೇರಿದ ಗುಜರಿ ಗೋಡೌನ್‌ಗೆ ಬೆಂಕಿ ತಗುಲಿ, ಲಕ್ಷಾಂತರ ರೂಪಾಯಿ ವೆಚ್ಚದ…

9 mins ago

ವಂದೇ ಭಾರತ್‌ ರೈಲಿನಲ್ಲಿ ಕೊಟ್ಟ ಮೊಸರಿನಲ್ಲಿ ಹುಳು ಪತ್ತೆ: IRCTCಗೆ 10 ಲಕ್ಷ ರೂ ದಂಡ

ಪಾಟ್ನಾ: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಿದ ಮೊಸರಿನಲ್ಲಿ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10…

19 mins ago

ಹನೂರು: ಬಿಆರ್‌ಟಿ ವನ್ಯಜೀವಿ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: 80 ಎಕರೆಗೂ ಹೆಚ್ಚು ಅರಣ್ಯ ನಾಶ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಬೈಲೂರು ವಲಯ ವ್ಯಾಪ್ತಿಯ…

29 mins ago

ಪಾಲಿಕೆ ಬಜೆಟ್‌ ಸತ್ವ ಇಲ್ಲದ ಬಜೆಟ್‌: ಮಾಜಿ ಮೇಯರ್‌ ಶಿವಕುಮಾರ್‌ ಆಕ್ರೋಶ

ಮೈಸೂರು: ಜನಸ್ನೇಹಿ ಪಾದಾಚಾರಿ ಮಾರ್ಗಗಳ ಅಭಿವೃದ್ಧಿಗೆ 10 ಕೋಟಿ ರೂ ಮೀಸಲಿಟ್ಟಿರುವ ಪಾಲಿಕೆಯು ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ…

48 mins ago

ಗುಂಡ್ಲುಪೇಟೆ| ಮದ್ದೂರು ವಲಯದಲ್ಲಿ ಮತ್ತೆರಡು ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲ್ಲೂಕಿನ ಮದ್ದೂರು ವಲಯದಲ್ಲಿ ಮತ್ತೆರಡು ಹುಲಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹುಲಿಗಳ ಚಲನವಲನದ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ…

1 hour ago

ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿದ ಸರ್ಕಾರ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಬಜೆಟ್‌ ಮೂಲಕ ಜನರನ್ನು ಸಾಲದ ಕೂಪಕ್ಕೆ ತಳ್ಳಿರುವುದನ್ನು ಅಧಿವೇಶನದಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಹಾಗೆಯೇ ಅನೇಕ ಸಮಸ್ಯೆಗಳನ್ನು…

1 hour ago