ಅಂಕಣಗಳು

ಅಪರೂಪದ ಶಿಲ್ಪಿ ಅಪ್ಪನೆರವೆಂಡ ಕಿರಣ್ ಸುಬ್ಬಯ್ಯ

ನಂದಿನಿ ಎನ್.

‘ಪ್ರಶಸ್ತಿಗಾಗಿ ಅಧಿಕಾರಿಗಳಿಗೆ, ಸರ್ಕಾರಕ್ಕೆ ಬೆಣ್ಣೆ ಹಚ್ಚಬೇಕೇ? ಹಚ್ಚು ವುದಾದರೆ ಎಷ್ಟು? ತಿಳಿದವರು ಸಲಹೆ ನೀಡಿ’ ಎಂಬ ಆಂಗ್ಲ ಬರಹದ ಕೆಂಪು ಬಣ್ಣದ ಫಲಕ, ಯಾದವಗಿರಿ ಕಡೆಗೆ ಹೊರಟವಳಿಗೆ, ಹೈವೇ ವೃತ್ತದ ಬಳಿ ಕಣ್ಣಿಗೆ ಬಿತ್ತು.

ಇದೆಂಥ ಮಜ ಎಂದು ತಕ್ಷಣಕ್ಕೆ ಅನ್ನಿಸಿದರೂ, ಅತಿರೇಕದ ಬರಹ ಅನ್ನಿಸಿದ್ದು ಸುಳ್ಳಲ್ಲ ! ಯಾರಿದು ಬರೆದವರು ಎಂದು ಹುಡುಕುತ್ತಿದ್ದ ಕಣ್ಣಿಗೆ ಬಿದ್ದದ್ದು ‘KS Museum of Sculptures ಮತ್ತು ‘A ಕಿರಣ್ ಸುಬ್ಬಯ್ಯ’ ಎಂಬ ಹೆಸರು. ಕುತೂಹಲದಿಂದ ‘ಶಿಲ್ಪನಿಕೇತನ’ ದ ಆ ಬರಹದ ಕೆಳಗಿದ್ದ ಮೊಬೈಲ್ ಗೆ ಫೋನಾಯಿಸಿದೆ. ಫೋನಿನಲ್ಲಿ ನಿರ್ಧರಿಸಿದಂತೆ ಮಧ್ಯಾಹ್ನ ಎರಡರ ಹೊತ್ತಿಗೆ ಶಿಲ್ಪನಿಕೇತನಕ್ಕೆ ಹೋದವಳನ್ನು ಸ್ವಾಗತಿಸಿದ್ದು ಕೈಯಲ್ಲಿ ಸುಡುತ್ತಿದ್ದ ಸಿಗರೇಟ್ ಹಿಡಿದಿದ್ದ, 73 ರ ತುಂಬು ಹರೆಯದ, ಸುರದ್ರೂಪಿ, ಅಪರೂಪದ ಶಿಲ್ಪಿ, ಶ್ರೀಯುತ ಅಪ್ಪನೆರವೆಂಡ ಕಿರಣ್ ಸುಬ್ಬಯ್ಯರವರು . ಅವರೊಡನೆ ಉಭಯ ಕುಶಲೋಪರಿಯೊಂದಿಗೆ ಗೇಟು ದಾಟುತ್ತಿದ್ದಂತೆ ಕಂಡಿದ್ದೊಂದು ಸುಂದರ ಗಣಪ ! ಕುಳಿತು ಮಾತನಾಡೋಣ ಎನ್ನುವ ಅವರ ಸಲಹೆಗೆ ತದನಂತರ ಎಂದು ಹೇಳಿ ಶಿಲ್ಪಗಳನ್ನು ನೋಡಲು ಮೊದಲು ಮಾಡಿದೆ. ಗಣಪನ ಹಿಂದೆ ಕುಳಿತಿದ್ದ 135 ಹೆಡೆಯ ಶೇಷ ತುಂಬಾ ಆಕರ್ಷಕನಾಗಿದ್ದ. ಆದರೆ ನನಗೋ ಅಲ್ಲಿಗೆ ಹೋಗುವ ಮುನ್ನ ಜಾಲತಾಣದಲ್ಲಿ ನೋಡಿದ್ದ ಅವರ ಅಪರೂಪದ, ಒಂದೇ ಕಲ್ಲಿನಲ್ಲಿ ಕೆತ್ತಿರುವ ಬಹುಮುಖ ಶಿಲ್ಪಗಳನ್ನು ನೋಡಲು ಮನಸ್ಸು ಹಾತೊರೆಯುತ್ತಿತ್ತು.

ದ್ವಿಮುಖ ಶಿಲ್ಪದಿಂದ ಹಿಡಿದು ಪಂಚಮುಖಿ ಶಿಲ್ಪಗಳನ್ನು ಕೆತ್ತಿರುವ ಹೆಗ್ಗಳಿಕೆ ಕಿರಣ್‌ ಅವರದ್ದು ! ಒಂದೇ ಶಿಲ್ಪದಲ್ಲಿ ರಾಜ, ರಾಣಿ, ಅರ್ಧನಾರೀಶ್ವರ ಹೀಗೆ ಅನೇಕ ಮುಖಗಳನ್ನು ನೋಡಬಹುದು. ಈ ರೀತಿಯ ಶಿಲ್ಪಗಳು ಪ್ರಪಂಚದ ಬೇರೆಲ್ಲೂ ಕಾಣಸಿಗದು ಎಂಬುದು ಸುಬ್ಬಯ್ಯರ ಅಂಬೋಣ! ಚಿತ್ರಕಲೆಯಿಂದ ಪ್ರಾರಂಭಗೊಂಡ ಇವರ ಕಲಾಪಯಣ, ಕೃಷ್ಣ ಶಿಲೆಯಲ್ಲಿ ನುಣುಪಾಗಿ ಸಾಂಪ್ರದಾಯಿಕ ಹಾಗೂ ಸಮಕಾಲೀನ ಶಿಲ್ಪಗಳನ್ನು ಕೆತ್ತುವುದಲ್ಲದೇ, ಕಾಷ್ಠ ಶಿಲ್ಪಗಳನ್ನೂ ಕೆತ್ತನೆ ಮಾಡುವ ತನಕ ಮುಟ್ಟಿದೆ. ಇದಲ್ಲದೇ ಕೊಡವ ಭಾಷೆಗೆ ಲಿಪಿಯನ್ನು ಅಭಿವೃದ್ಧಿಗೊಳಿಸಿರುವ ಇವರ ಸಾಮರ್ಥ್ಯ ಮತ್ತು ಬದ್ದತೆಗೆ ನಾವು ತಲೆದೂಗಲೇಬೇಕು.

ಕೊಡಗಿನ ಪಾರಣೆ ಗ್ರಾಮ ಇವರ ಮೂಲ ಸ್ಥಾನ. ಕೊಡವ ಮನೆತನದವರಾದ ಇವರು ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಹಾಗೂ ನೆಲೆಸಿದ್ದು ಮೈಸೂರು. ಅನಾಸಕ್ತಿ ಆಧುನಿಕ ಶಿಕ್ಷಣವನ್ನು ಮೊಟುಕುಗೊಳಿಸಿದರೂ, ಆಸಕ್ತಿ ಕಲೆಯ ರೂಪದಲ್ಲಿ ವಿದ್ಯೆಯ ಕೈಹಿಡಿಯಿತು. ಒಬ್ಬನೇ ಮಗ ಎಲ್ಲ ರಂತಿರದೆ ಭಿನ್ನ ಹಾದಿಯಲ್ಲಿ ಬದುಕಬಲ್ಲನೇ ಎಂಬ ಪೋಷಕರ ಆತಂಕ, ಪ್ರತಿಭಾವಂತ ವಿದ್ಯಾರ್ಥಿಯಾ ದರೂ ಗುರುಗಳಿಂದಲೇ ಶೋಷಣೆಗೆ ಒಳಗಾದ ಅವಮಾನ, ಬೆಂಬಲಿಸಬೇಕಾಗಿದ್ದ ಸಮಾಜದಲ್ಲಿನ ಇತರ ಗಣ್ಯ ಶಿಲ್ಪಿಗಳಿಂದ ದೊರೆತ ಅಸೂಯೆ, ಇವೆಲ್ಲವನ್ನು ಮೀರಿ ನಿಂತು, ಏಕಲವ್ಯನಂತೆ ಸಾಧನೆಯೊಂದರಿಂದಲೇ ಅಪ್ರತಿಮ ಶಿಲ್ಪಿಯಾದ ಕಿರಣ್ ಸುಬ್ಬಯ್ಯರ ಜೀವನ ಗಾಥೆ ನಿಜಕ್ಕೂ ರೋಚಕ!

ಶ್ರೀಮತಿ ಸ್ವಾತಿ ಅಕ್ಕಮ್ಮರನ್ನು ವಿವಾಹವಾಗಿ ಮೂವರು ಪುತ್ರಿಯರನ್ನು ಪಡೆದು, ಜೀವನೋಪಾಯಕ್ಕಾಗಿ ಶಾಸ್ತ್ರೀಯ ಶಿಲ್ಪಗಳನ್ನು ಕೆತ್ತಿ ಮಾರಬೇಕಾಯ್ತು, ಕಟ್ಟಡ ಕಟ್ಟಿ ಬಾಡಿಗೆಗೆ ಕೊಡುವುದಲ್ಲದೇ, ಕೊನೆಗೆ ಅದನ್ನೂ ಮಾರಬೇಕಾಯ್ತು. ಆದರೂ ಯಾವುದಕ್ಕೂ ವಿಚಲಿತರಾಗದೆ ಬಹುಮುಖ ಶಿಲ್ಪ ಕೆತ್ತನೆಯನ್ನು ತಪಸ್ಸಿನಂತೆ ಮುಂದುವರಿಸಿಕೊಂಡು ಬಂದದ್ದು ಸಾಮಾನ್ಯ ಸಂಗತಿಯಂತೂ ಅಲ್ಲ ! ಕಾರಣ, ಈ ವಿಭಿನ್ನ ಶಿಲ್ಪಕಲಾ ಪ್ರಾಕಾರಕ್ಕೆ ಭಾರತದಲ್ಲಿ ಹೆಚ್ಚಿನ ಅರಿವಾಗಲಿ, ಬೇಡಿಕೆಯಾಗಲಿ ಇಲ್ಲ . ಅಂತರ ರಾಷ್ಟ್ರೀಯ ಮತ್ತು ಪಶ್ಚಿಮ ದೇಶಗಳು ಇಂತಹ ವಿಭಿನ್ನ ಕಲೆಗಳಿಗೆ ಹೆಚ್ಚಿನ ಮಾರುಕಟ್ಟೆಗಳನ್ನು ಒದಗಿಸುತ್ತವೆ. ಆದ್ದರಿಂದ ಇಂತಹ ಕಲಾವಿದರಿಗೆ ಸರ್ಕಾರ ಮಾನ್ಯತೆ ಮತ್ತು ಪ್ರಚಾರ ಕೊಡಬೇಕಾಗು ಇದೆ. ಆದರೆ ಸರ್ಕಾರ ಬೆಂಬಲಿಸುವುದು ಒತ್ತಟ್ಟಿಗಿರಲಿ, ವಾಸ ಸ್ಥಳದಲ್ಲಿ ಶಿಲ್ಪ ಸಂಗ್ರಹಾಲಯ ದಂತಹ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಡಿ ಹೆಚ್ಚಿನ ಸುಂಕ ವಸೂಲಿ ಮಾಡಲಾಗು ತ್ತಿದೆ ಎಂದು ಬೇಸರಿಸುತ್ತಾರೆ ಸುಬ್ಬಯ್ಯ. ಹಲವಾರು ರಾಜಕೀಯ ಪಕ್ಷಗಳ ಮುಖಂಡರು ಬಂದು ಶಿಲ್ಪಗಳನ್ನು, ಸುಬ್ಬಯ್ಯರನ್ನು ಹೊಗಳಿ, ಸಾಕಷ್ಟು ಆಶ್ವಾಸನೆಗಳನ್ನು ಕೊಟ್ಟಿದ್ದಾರೆ ಆದರೆ ಯಾವುದೂ ನೆರವೇರಿಲ್ಲ ಅಷ್ಟೇ ! ಸಂಗ್ರಹಾಲಯದ ಮುಂದಿದ್ದ ಫಲಕವನ್ನು ವಿಲಕ್ಷಣ ಎಂದೆಣಿಸಿದ ನನಗೆ ಅವರ ಕಥೆಯನ್ನು ಕೇಳಿ ಉತ್ತರ ಸಿಕ್ಕಂತಾಯಿತು!!
nandininagacharya@gmail.com

andolanait

Recent Posts

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ : ವೇತನ ಪರಿಷ್ಕರಣೆಗೆ ಒಪ್ಪಿದೆ ; ರದ್ದಾಗುತ್ತಾ ಮುಷ್ಕರ?

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಿಬ್ಬಂದಿಗೆ 26 ತಿಂಗಳ ಬಾಕಿ…

5 hours ago

ಮಹಾರಾಷ್ಟ್ರ | ಮುಸ್ಲಿಮರಿಗೆ ನೀಡಲಾಗಿದ್ದ ಶೇ.5ಮೀಸಲಾತಿ ರದ್ದು

ಮುಂಬೈ : ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು…

5 hours ago

ಮೈಸೂರು | ಹೀಲಿಯಂ ಅನಿಲ ಬಲೂನ್‌ ನಿಷೇಧ ; ಕಮಿಷನರ್‌ ಆದೇಶ

ಮೈಸೂರು : ಇತ್ತೀಚಿಗೆ ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಘಟನೆಗೆ ಸಂಬಂಧಿದಂತೆ, ಸಾರ್ವಜನಿಕ ಶಾಂತಿ, ಸುರಕ್ಷತೆ…

6 hours ago

ನಮೀಬಿಯಾ ವಿರುದ್ಧ ಗೆಲುವು : ಸೂಪರ್‌ 8 ಸುತ್ತಿಗೆ ಎಂಟ್ರಿ ಕೊಟ್ಟ ಪಾಕಿಸ್ತಾನ

ಕೊಲಂಬೊ : ಐಸಿಸಿ ಪುರುಷರ ಟಿ20 ವರ್ಲ್ಡ್ ಕಪ್ 2026ರಲ್ಲಿ ಪಾಕಿಸ್ತಾನ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು…

6 hours ago

ಸೇನಾ ವಿಚಾರ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ: ಲೋಕಸಭೆಯಲ್ಲಿ ಗದ್ದಲ, ಕೋಲಾಹಲ

ನವದೆಹಲಿ: ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದ ಕುರಿತು ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಲೇಖನದ ಪ್ರತಿಯನ್ನು ರಾಹುಲ್‌ ಗಾಂಧಿ ಸದನದಲ್ಲಿ ಪ್ರದರ್ಶಿಸಿದರು. ಈ…

6 hours ago

ಭಾರತದಲ್ಲಿ ಎಐ ಪ್ರಯಾಣ ಅಸಾಧಾರಣವಾಗಿರಲಿದೆ : ಗೂಗಲ್‌ ಸಿಇಒ ಸುಂದರ್‌ ಪಿಚೈ

ಹೊಸದಿಲ್ಲಿ : ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತದ ಕೃತಕ ಬುದ್ಧಿಮತ್ತೆ (AI) ಪ್ರಯಾಣವು "ಅಸಾಧಾರಣ" ಆಗಿರುವುದಾಗಿ ಹೇಳಿದ್ದಾರೆ.…

6 hours ago