Suicide prevention day
ಡಾ.ಸುರ್ಮ ಎಸ್
ಆತ್ಮಹತ್ಯೆಯು ಜಗತ್ತನ್ನು ಕಾಡುತ್ತಿರುವ ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಪ್ರತಿ ವರ್ಷ ಸುಮಾರು ಒಂದು ಮಿಲಿಯನ್ ಜನರು ಜಗತ್ತಿನಾದ್ಯಂತ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಆತ್ಮಹತ್ಯೆ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಸಂಸ್ಥೆಯು ಪ್ರತಿ ವರ್ಷ ಸೆಪ್ಟೆಂಬರ್ ೧೦ ರಂದು ‘ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ’ ಆಚರಿಸುತ್ತದೆ.
ಆತ್ಮಹತ್ಯೆಗೆ ಹಲವಾರು ಮನೋ ಸಾಮಾಜಿಕ ಕಾರಣಗಳಿವೆ. ಅವುಗಳೆಂದರೆ ಮಾನಸಿಕ ಖಿನ್ನತೆ, ಪರೀಕ್ಷೆಯ ಸೋಲು, ಹಣಕಾಸಿನ ತೊಂದರೆ, ವೈವಾಹಿಕ ಸಮಸ್ಯೆಗಳು, ಕೌಟುಂಬಿಕ ದೌರ್ಜನ್ಯ, ತೀವ್ರ ಬಡತನ, ಕೆಲಸದ ಒತ್ತಡ, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಮತ್ತು ನೋವು, ಭಾವನಾತ್ಮಕ ಸಂಬಂಧಗಳಲ್ಲಿ ಬಿರುಕು, ಹತಾಶೆ, ಜೀವನದ ಬಗೆಗಿನ ಜುಗುಪ್ಸೆ, ಒಂಟಿತನ, ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಿಕೆ, ಭವಿಷ್ಯದ ಬಗೆಗೆ ಅನಿಶ್ಚಿತತೆ, ಭಯ ಮತ್ತು ಆತಂಕ, ಜೀವನದಲ್ಲಿ ಹಠಾತ್ ಸಂಭವಿಸುವ ಕಷ್ಟನಷ್ಟಗಳು ಮುಂತಾದವು.
ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಲ್ಲಿ ಕಂಡುಬರುವ ವರ್ತನಾ ಮುನ್ಸೂಚನೆಗಳು.
* ಸದಾ ಖಿನ್ನತೆಯ ಭಾವದಿಂದ ಬಳಲುವುದು ಮತ್ತು ದುಃಖಿತರಾಗಿ ಕಾಣಿಸಿಕೊಳ್ಳುವುದು
* ವಿಪರೀತ ಹತಾಶೆ ಭಾವನೆಗಳನ್ನು ವ್ಯಕ್ತಪಡಿಸುವುದು
* ಊಟ, ನಿದ್ರೆ, ಔಷಧಿಗಳನ್ನು ತ್ಯಜಿಸುವಂತಹ ವಿನಾಶಕಾರಿ ವರ್ತನೆಗಳನ್ನು ವ್ಯಕ್ತಪಡಿಸುವುದು
* ಸ್ವ-ನಿಂದನೆ ಮತ್ತು ಸ್ವ-ದ್ವೇಷಿಸುವಿಕೆಯನ್ನು ನಿರಂತರವಾಗಿ ಅಭಿವ್ಯಕ್ತಪಡಿಸುವುದು
* ಕುಟುಂಬ ಮತ್ತು ಸ್ನೇಹಿತರಿಂದ ದೂರವಿರಲು ಬಯಸುವುದು
* ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ ಎಂಬ ಬಹಿರಂಗ ಹೇಳಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು
* ಜೀವನದಲ್ಲಿನ ಕಷ್ಟಗಳನ್ನು ನಿಯಂತ್ರಿಸಲಾಗದೆ ಅಸಹಾಯಕತೆಯನ್ನು ತೋರ್ಪಡಿಸುವುದು
* ‘ನಾನು ನಿಮಗೆ ಹೆಚ್ಚುಕಾಲ ಸಮಸ್ಯೆಯಾಗಿ ಉಳಿಯುವುದಿಲ್ಲ’ ಎಂದು ಕುಟುಂಬದ ಸದಸ್ಯರೊಂದಿಗೆ ಹೇಳಿಕೊಳ್ಳುವುದು.
* ಬದುಕು ಶೂನ್ಯವಾಗಿದೆ, ಬದುಕುವ ಆಸಕ್ತಿ ಇನ್ನು ಉಳಿದಿಲ್ಲ ಎಂದು ಪದೇ ಪದೇ ಹೇಳುವುದು
* ಜೀವನವೇ ಸಾಕಾಗಿದೆ ಯಾರಾದರೂ ಸಹಾಯ ಮಾಡಲಿ ಎಂದು ನಿರೀಕ್ಷಿಸುವುದು
* ಆತ್ಮಹತ್ಯೆ ತಡೆಗಟ್ಟುವಿಕೆಗೆ ಮನೋವೈಜ್ಞಾನಿಕ ಪರಿಹಾರಗಳು: ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಗಳಲ್ಲಿ ಕಂಡುಬರುವಂತಹ ವರ್ತನಾ ಮುನ್ಸೂಚನೆಗಳನ್ನು ಪ್ರಾರಂಭದಲ್ಲೇ ಗುರುತಿಸಿ ಗಂಭೀರವಾಗಿ ಪರಿಗಣಿಸಿ ಕೆಳಕಂಡ ಮನೋವೈಜ್ಞಾನಿಕ ಪರಿಹಾರಗಳನ್ನು ಅನುಸರಿಸುವ ಮೂಲಕ ಆತ್ಮಹತ್ಯೆಯನ್ನು ತಡೆಗಟ್ಟಬಹುದು.
* ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಯೊಂದಿಗೆ ಮುಖಾ ಮುಖಿಯಾಗಿ ಆತನ ಸಮಸ್ಯೆಯನ್ನು ಸಹಾನುಭೂತಿಯಿಂದ ಆಲಿಸಿ ಮತ್ತು ಭಾವನೆಗಳಿಗೆ ಸ್ಪಂದಿಸಿ,ಅರ್ಥಮಾಡಿಕೊಂಡು ಸಮಸ್ಯೆಗೆ ಪರಿಹಾರದ ಮಾರ್ಗಗಳನ್ನು ಸೂಚಿಸುವ ಮೂಲಕ ಆತನಲ್ಲಿ ಬದುಕಿನ ಬಗೆಗೆ ಭರವಸೆಯನ್ನುಂಟುಮಾಡಿ ಆತ್ಮಹತ್ಯೆಯ ಪ್ರಯತ್ನವನ್ನು ತಡೆಗಟ್ಟಬಹುದು.
* ಮಾನಸಿಕ ಖಿನ್ನತೆ, ಹತಾಶೆ, ಜೀವನದ ಬಗೆಗಿನ ಜುಗುಪ್ಸೆ, ಒಂಟಿತನ, ಭಾವನಾತ್ಮಕ ಅಸಮತೋಲನ, ಜೀವನದ ಬಗೆಗಿನ ನಕಾರಾತ್ಮಕ ಆಲೋಚನೆಗಳು, ಆತ್ಮಹತ್ಯೆಗೆ ಪ್ರಮುಖಮಾನಸಿಕ ಕಾರಣಗಳಾಗಿರುವುದರಿಂದ ಸಮುದಾಯಕ್ಕೆ ಮಾನಸಿಕ ಆರೋಗ್ಯದ ಬಗೆಗೆ ಅರಿವಿನ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ, ಆರೋಗ್ಯ ಕ್ಷೇತ್ರಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಸಮುದಾಯ ಶಿಬಿರಗಳಲ್ಲಿ ಆಯೋಜಿಸುವುದರಿಂದ ಆತ್ಮಹತ್ಯೆ ಪ್ರಯತ್ನಗಳನ್ನು ನಿಯಂತ್ರಿಸಬಹುದು
* ಮನೋವೈದ್ಯರು, ಮನಃಶಾಸ್ತ್ರಜ್ಞರು, ಆಪ್ತ ಸಮಾಲೋಚಕರು, ಸಮುದಾಯಆರೋಗ್ಯ ಪರಿಣತರು, ಆತ್ಮಹತ್ಯೆಯನ್ನು ತಡೆಗಟ್ಟಲು ಮಧ್ಯಪ್ರವೇಶಿಸುವಿಕೆ ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಕ್ತಿಗಳಲ್ಲಿ ಮನೋಸ್ಥೆ ರ್ಯವನ್ನು ಹೆಚ್ಚಿಸುವುದರ ಮುಖಾಂತರ ಆತ್ಮಹತ್ಯೆಯನ್ನುತಡೆಗಟ್ಟಬಹುದು
* ವಿದ್ಯಾರ್ಥಿ ಮತ್ತು ಯುವ ಸಮುದಾಯಕ್ಕೆ ಸ್ವ-ಪ್ರಜ್ಞೆ, ಒತ್ತಡ ನಿರ್ವಹಣೆ, ಭಾವನಾತ್ಮಕ ನಿರ್ವಹಣೆ, ದೃಢವರ್ತನೆ, ಸಮಸ್ಯೆ ಬಗೆಹರಿಸುವಿಕೆ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ, ಸಕಾರಾತ್ಮಕ ಆಲೋಚನೆ ಮತ್ತು ವಿಮರ್ಶಾತ್ಮಕಚಿಂತನೆ ಮುಂತಾದ ಜೀವನ ಕೌಶಲಗಳನ್ನು ಕಲಿಸುವುದರಿಂದ ಸದೃಢ ಮಾನಸಿಕ ಸಾಮರ್ಥ್ಯಗಳು ಅಭಿವೃದ್ಧಿಯಾಗುತ್ತವೆ. ಪರಿಣಾಮವಾಗಿ, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ನಿಭಾಯಿಸುವ ಸಾಮರ್ಥ್ಯಗಳನ್ನು ಸ್ವತಃ ರೂಢಿಸಿಕೊಳ್ಳುವುದರಿಂದ ಆತ್ಮಹತ್ಯೆಯ ಪ್ರಯತ್ನಗಳು ನಿಯಂತ್ರಿಸಲ್ಪಡುತ್ತವೆ
ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜೀವವು ಅತ್ಯಮೂಲ್ಯವಾದುದ್ದು. ಪ್ರತಿಯೊಂದು ಜೀವವನ್ನು ಸಂರಕ್ಷಿಸುವುದು ಸಾಮಾಜಿಕ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷದ ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ ಧ್ಯೇಯ ವಾಕ್ಯ‘ಆತ್ಮಹತ್ಯೆ ಬಗೆಗಿನ ಕಥನಗಳನ್ನು ಬದಲಿಸೋಣ’ ಎಂಬುದಾಗಿದೆ. ಆದ್ದರಿಂದ ಸಮಾಜ, ಆರೋಗ್ಯ ಕ್ಷೇತ್ರದ ವೃತ್ತಿಪರರು, ಸಂಸ್ಥೆಗಳು, ಆತ್ಮಹತ್ಯೆಗೆ ಪ್ರಯತ್ನಿಸುವಂತಹ ವ್ಯಕ್ತಿಗಳನ್ನು ಗುರುತಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅನುಕಂಪ ಮತ್ತು ಸಹಾನುಭೂತಿಯನ್ನು ನೀಡುವ ಮೂಲಕ ಅವರುಗಳಲ್ಲಿ ಬದುಕಿನ ಭರವಸೆಯನ್ನುಮೂಡಿಸಿ ಜೀವಗಳನ್ನು ಉಳಿಸುವುದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆಯ ಉದ್ದೇಶವಾಗಿರುತ್ತದೆ.
(ಲೇಖಕರು: ಮನೋಶಾಸ್ತ್ರಜ್ಞರು, ಮನೋವಿಜ್ಞಾನ ಅಧ್ಯಯನ ವಿಭಾಗ ಕರ್ನಾಟಕ ರಾಜ್ಯ ಮುಕ್ತ ವಿವಿ , ಮೈಸೂರು)
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…