ಅಂಕಣಗಳು

ಪೋಷಕರೇ ಮಕ್ಕಳ ಬಗ್ಗೆ ಎಚ್ಚರವಿರಲಿ

– ಡಾ.ಭಾಗ್ಯವತಿ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಮನೋವೈದ್ಯಕೀಯ ವಿಭಾಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ.

ವಿಶ್ವ ಆಟಿಸಂ ಜಾಗೃತಿ ದಿನವು ವಾರ್ಷಿಕವಾಗಿ ಏಪ್ರಿಲ್ 2ರಂದು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದಿನವಾಗಿದ್ದು, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪ್ರಪಂಚದಾದ್ಯಂತ ಆಟಿಸಂ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತವೆ.

ವಿಶ್ವ ಆಟಿಸಂ ದಿನವು ಕೇವಲ ಏಳು ಅಧಿಕೃತ ಆರೋಗ್ಯ-ನಿರ್ದಿಷ್ಟ ವಿಶ್ವಸಂಸ್ಥೆಯ ದಿನಗಳಲ್ಲಿ ಒಂದಾಗಿದೆ. ಮಕ್ಕಳಲ್ಲಿಯೂ ಆಟಿಸಂ ಕಂಡು ಬರುತ್ತದೆ. ವಿಶ್ವ ಆಟಿಸಂ ಜಾಗೃತಿ ದಿನ ಇದನ್ನು 2007ರಲ್ಲಿ ವಿಶ್ವಸಂಸ್ಥೆ ಅಧಿಕೃತವಾಗಿ ಘೋಷಿಸಿತು. ಈ ದಿನದ ಉದ್ದೇಶ ಆಟಿಸಂ ಇರುವ ವ್ಯಕ್ತಿಗಳಿಗೆ ಸಮಾನ ಹಕ್ಕುಗಳಿಗಾಗಿ ಹೋರಾಡುವುದು ಮತ್ತು ಸಾಮಾಜಿಕ ಸ್ವೀಕೃತಿಯನ್ನು ಹೆಚ್ಚಿಸಿ ಅರಿವು ಮೂಡಿಸುವುದಾಗಿದೆ.

ಆಟಿಸಂ ಒಂದು ನ್ಯೂರೋಡೆವಲಪ್ ಮೆಂಟ್  (ನರಗಳ ಬೆಳವಣಿಗೆ )ಸಂಬಂಧಿತ ವೈಶಿಷ್ಟವಾಗಿದೆ.  ಇದು ಮಗು ಬಾಲ್ಯದಲ್ಲಿ ಬೆಳೆಯುವ ಸಂದರ್ಭದಲ್ಲಿ ಕಂಡುಬರುವ ಮೆದುಳಿನ ಬೆಳವಣಿಗೆಯಲ್ಲಿ ಆಗುವ ವ್ಯತ್ಯಾಸದಿಂದಾಗಿ ಅದರ ಸಂವಹನ, ಸಾಮಾಜಿಕ ಪರಸ್ಪರತೆ, ವರ್ತನೆ ಮತ್ತು ಕಲಿಕೆ ಹಾದಿಗಳ ಮೇಲೆ ಪರಿಣಾಮ ಬೀರುತ್ತದೆ.

ಪ್ರತಿ ಮಗುವಿನ ಆಟಿಸಂ ಅನುಭವ ವಿಭಿನ್ನವಾಗಿರಬಹುದು. ಆದರೆ, ಸಾಮಾನ್ಯವಾಗಿ ಕಂಡುಬರುವ ಕೆಲವು ಲಕ್ಷಣಗಳನ್ನು ನಾವು ಕಾಣಬಹುದು.

ಆಟಿಸಂ ಇರುವ ಮಕ್ಕಳಿಗೆ ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಕೊಡಿಸಬಹುದು. ಆದರೆ, ಕೆಲವು ಮಕ್ಕಳಿಗೆ ವಿಶೇಷ ಶಿಕ್ಷಣದ ಅಗತ್ಯವಿರುತ್ತದೆ. ಪೋಷಕರು ಮಕ್ಕಳು ಹೇಗೆ ಕಲಿಯುತ್ತಾರೆ ಎಂಬುದನ್ನು ಅರ್ಥೈಸಿಕೊಂಡು ಸಹಾಯ ಮಾಡಬೇಕು. ಆಟಿಸಂ ಇರುವ ಮಕ್ಕಳಿಗೆ ಪ್ರೀತಿ, ಸಹಾನುಭೂತಿ ಮತ್ತು ಸಮರ್ಥ ಬೆಂಬಲ ನೀಡುವುದು ಅತ್ಯಗತ್ಯ. ಹಾಗೆಯೇ ಅವರ ಸಾಮರ್ಥ್ಯಗಳನ್ನು ಗುರುತಿಸಿ ಅವರಿಗೆ ಬೇಕಾದ ಪ್ರೋತ್ಸಾಹವನ್ನು ನೀಡುವುದು ಪೋಷಕರ ಜವಾಬ್ದಾರಿಯಾಗಿದೆ.

ಕುಟುಂಬದ ಸದಸ್ಯರು ಶಿಕ್ಷಕರು ಮತ್ತು ಸ್ನೇಹಿತರು ಇಂತಹ ಮಕ್ಕಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕು. ಪೋಷಕರು ಸಹಾಯಕರ ಗುಂಪುಗಳಲ್ಲಿ ಸೇರಿಕೊಂಡು ಅನುಭವವನ್ನು ಹಂಚಿಕೊಳ್ಳಬೇಕು. ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದೆ ಸಮಾಜದಲ್ಲಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಆಟಿಸಂ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಜಾಗೃತಿ ಮೂಡಿಸಬೇಕಿದೆ.

ಆಟಿಸಂ ಮಕ್ಕಳ ಪೋಷಕರು ಏನು ಮಾಡಬೇಕು?

  • ಶೀಘ್ರ ಪತ್ತೆ ಮತ್ತು ಚಿಕಿತ್ಸೆ ನೀಡುವುದು.
  • ಮಕ್ಕಳ ಬೆಳವಣಿಗೆಯನ್ನು ಗಮನಿಸಿ ಒಂದು ಅಥವಾ ಎರಡು ವರ್ಷದಲ್ಲಿ ಮಾತು ನಿಧಾನ, ವರ್ತನೆ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ತಜ್ಞರ ಸಲಹೆ ಪಡೆಯಬೇಕು.
  • ಮಕ್ಕಳನ್ನು ಚಿಕಿತ್ಸೆಗೆ ಒಳಪಡಿಸಿ ವೈದ್ಯರಿಂದ ಸಲಹೆ ಸೂಚನೆಗಳನ್ನು ತೆಗೆದುಕೊಳ್ಳುವುದು.

ಸಂವಹನ ಸಮಸ್ಯೆಗಳು

  • ಮಾತು ತಡವಾಗಿ ಅಥವಾ ಸರಿಯಾಗಿ ಬಾರದಿರುವುದು.
  • ಇತರರ ಜೊತೆ ಕಣ್ಣಿನಲ್ಲಿ ಕಣ್ಣೆದುರು ನೋಡುವುದಿಲ್ಲ.
  • ತಮ್ಮ ಭಾವನೆಗಳನ್ನು ಅಥವಾ ಅಗತ್ಯಗಳನ್ನು ಸರಿಯಾಗಿ ವ್ಯಕ್ತಪಡಿಸಲು ಕಷ್ಟಕರ.
  • ಕೆಲವು ಮಕ್ಕಳು ಮಾತನಾಡದೆ ಇರುತ್ತಾರೆ ಅಥವಾ ಅಪ್ರಸ್ತುತ ಶಬ್ದಗಳನ್ನು ಪುನರಾವರ್ತನೆ ಮಾಡುತ್ತಾರೆ.
  • ಇನ್ನೂ ಸಾಮಾಜಿಕ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಇತರೆ ಮಕ್ಕಳೊಂದಿಗೆ ಆಡಲು, ಮಾತುಕತೆ ನಡೆಸಲು ಆಸಕ್ತಿ ಕಡಿಮೆಯಾಗುತ್ತದೆ.  ಸ್ನೇಹಿತರನ್ನು ಮಾಡಿಕೊಳ್ಳಲು ಕಷ್ಟವಲ್ಲದೆ ತಾಯಿ ಅಥವಾ ತಂದೆಯ ಪ್ರಕ್ರಿಯೆಗಳಿಗೆ
    ಸ್ಪಂದಿಸದಿರುವುದು ಕಂಡುಬರುತ್ತದೆ.
  • ನಿರ್ದಿಷ್ಟ ದಿನಾಚರಣೆ ಅಥವಾ ಶಿಸ್ತುಬದ್ಧವಾಗಿ ಇರುವುದು. ಕೆಲವು ವಿಶೇಷ ವಿಷಯಗಳಲ್ಲಿ ಮಾತ್ರ
    ಆಸಕ್ತಿ ತೋರುವುದು. (ಉದಾಹರಣೆಗೆ ಅಂಕಿಗಳು, ನಕ್ಷೆಗಳು, ಕಾರು ಮತ್ತು ಇಂಜಿನ್‌ಗಳ ಬಗ್ಗೆ ಅಗಾಧವಾದ ಆಸಕ್ತಿ
    ಹೊಂದಿರುವುದನ್ನು ಕಾಣಬಹುದು.)
  • ನಿರ್ದಿಷ್ಟ ಆಟಗಳು ಅಥವಾ ಚಟುವಟಿಕೆಗಳನ್ನು ಪದೇಪದೇ ಮಾಡುವುದು. ಬೆಳಕು, ಶಬ್ದ ಅಥವಾ ಸ್ಪರ್ಶದ ಮೇಲಿನ ಅತಿಯಾದ ಸಂವೇದನಾಶೀಲತೆ ನೋಡಬಹುದು.
ಆಂದೋಲನ ಡೆಸ್ಕ್

Recent Posts

ಗಣರಾಜ್ಯೋತ್ಸವ ಸಂಭ್ರಮ : ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಧ್ವಜಾರೋಹಣ, ಪರೇಡ್‌ ಆರಂಭ

ಬೆಂಗಳೂರು : ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ…

39 mins ago

ಫ್ಲೀಸ್. . ಬಸ್ ನಿಲ್ಲಿಸಿ ಸಾರ್. . !

ಶಿವಪುರ, ನಾಚನಹಳ್ಳಿಪಾಳ್ಯ, ರೈಲ್ವೆ ವರ್ಕ್‌ಶಾಪ್‌ ನಿಲುಗಡೆ ತಾಣದಲ್ಲಿ ನಿಲ್ಲದ ಬಸ್‌ಗಳು ಕೈ ಸಂಜ್ಞೆಗೂ ಕ್ಯಾರೇ ಎನ್ನದ ಡ್ರೈವರ್‌ಗಳು; ಮಹಿಳೆಯರು, ವಯೋವೃದ್ಧರು,…

52 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ಬೆಂಗಳೂರು ಡೈರಿ : ಗಾಂಧಿ, ಬುದ್ಧ, ಬಸವ ಅರ್ಜೆಂಟಾಗಿ ಬೇಕು

ಕಷ್ಟ-ಸುಖಗಳಿಗೆ ಸ್ಪಂದಿಸುವ ಮನಃಸ್ಥಿತಿ ಕಳೆದುಕೊಂಡ ಜನತೆ ಕೈಯಲ್ಲಿ ಹಿಡಿದಿದ್ದ ದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ ಚಿದಾನಂದ ಇದ್ದಕ್ಕಿದ್ದಂತೆ 'ಥೋ'…

1 hour ago

ಸರ್ಕಾರ, ರಾಜ್ಯಪಾಲರ ಸಂಘರ್ಷ ; ನ್ಯಾಯಾಂಗ ಮಧ್ಯಪ್ರವೇಶ ಅಗತ್ಯ

ಕಳೆದ ಗುರುವಾರ ಆರಂಭವಾದ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಯಥಾವತ್ತು ಓದುವುದಕ್ಕೆ ರಾಜ್ಯಪಾಲರು ನಿರಾಕರಿಸಿದ್ದಲ್ಲದೆ, ತಾವೇ…

1 hour ago

ದೇಶದ ಐಕ್ಯತೆ, ಪ್ರಗತಿಯ ಸಂಕೇತ-ಸಂವಿಧಾನ

ಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ಪರಿಣಾಮಕಾರಿ ಆಗಲಿ ಡಾ.ಡಿ.ಜೆ.ಶಶಿಕುಮಾರ್ ದೇಶದ ಐಕ್ಯತೆ, ಭದ್ರತೆ ಮತ್ತು ಪ್ರಗತಿಗೆ ಕಾರಣವಾಗಿರುವ ಭಾರತದ ಸಂವಿಧಾನ ರಚನೆಯಾಗಿ…

1 hour ago

ದಿಲ್ಲಿ ಗಣರಾಜ್ಯೋತ್ಸವ | ಚಾ.ನಗರದ ಇಬ್ಬರು ಮಹಿಳೆಯರಿಗೆ ಆಹ್ವಾನ

ಹೊಸದಿಲ್ಲಿ : ಇಲ್ಲಿನ ಕೆಂಪುಕೋಟೆಯಲ್ಲಿ ಇಂದು ನಡೆಯುವ ಗಣರಾಜ್ಯೋತ್ಸವಕ್ಕೆ ಸಂತೇಮರಹಳ್ಳಿ ಹೋಬಳಿ ವ್ಯಾಪ್ತಿಯ ಇಬ್ಬರು ಮಹಿಳೆಯರು ವಿಶೇಷ ಆಹ್ವಾನಿತರಾಗಿ ಆಯ್ಕೆಯಾಗಿದ್ದಾರೆ.…

2 hours ago