ಅಂಕಣಗಳು

ಮಾರಗೋಡನಹಳ್ಳಿಯ ಹಾಡು ಹಕ್ಕಿ ನಿಂಗಮ್ಮ

  • ಕೀರ್ತಿ

‘ಎಲ್ಲ ದೇವರಿಗೂ ಸಲ್ಲುವಂಥ ತಾಳೆ ಹೂವೆ, ಮಲ್ಲಯ್ಯನಿಗ್ಯಾಕೆ ಮರಿಯಾದೆ? ’ ಎಂದು ನಿಂಗಮ್ಮ ಜನಪದ ಹಾಡಿಗೆ ಸೊಲ್ಲು ಹಾಕುತ್ತಿದ್ದರು. ಗುಂಪಿನಲ್ಲಿದ್ದ ಲಕ್ಷಮ್ಮ, ಮಹದೇವಮ್ಮ, ನಾಗಮ್ಮ ಅವರೆಲ್ಲರಿಗಿಂತ ನಿಂಗಮ್ಮ ಅವರೇ ಹಿರಿಯರು.

ವಯಸ್ಸು ಕೇಳಿದರೆ ೯೦ ದಾಟಿದೆ ಎನ್ನುತ್ತಾರೆ. ಆದರೂ ಬತ್ತದ ಉತ್ಸಾಹದಲ್ಲೇ ಪದವನ್ನು ಹಾಡುತ್ತಲೇ ಇರುತ್ತಾರೆ. ಹಾಡಿಗೆಂದು ಗಂಟೆಗಟ್ಟಲೆ ಕೂರುವಾಗ, ತಮಗಿರುವ ದೈಹಿಕ ನೋವಿನ ಅರಿವೇ ಇರದಂತೆ ಹಾಡಿಗೆ ಧ್ವನಿಯಾಗುತ್ತಾರೆ. ಕಣ್ಣು ಮುಚ್ಚಿ, ಪದದೊಳಗೆ ತಲ್ಲೀನರಾಗಿಬಿಡುತ್ತಾರೆ.

ತಿ. ನರಸೀಪುರದ ಮಾರಗೋಡನಹಳ್ಳಿ ಯವರಾದ ನಿಂಗಮ್ಮ ಅವರಿಗೆ ಪದಗಳ ಜೊತೆಗೆಲ್ಲ ಆತ್ಮ ಸಂಬಂಧವಂತೆ. ಇಸ್ಕೂಲ್‌ಗೆ ಹೋಗಿ ಪಾಠ ಕಲಿಯುವುದಿರಲಿ, ಶಾಲೆಯ ದಾರಿಯನ್ನೇ ತಿಳಿಯದ ಇವರ ಬಾಯಿಯಲ್ಲಿ ಅದೆಷ್ಟೋ ಹಾಡುಗಳು ಜೀವ ಪಡೆದು, ಕುಣಿಯುತ್ತವೆ. ಈ ವಯಸ್ಸಿನಲ್ಲಿ ಅವೆಲ್ಲವನ್ನೂ ಹೇಗೆ ನೆನಪಿಟ್ಟುಕೊಳ್ಳುತ್ತೀರಿ ಎಂದು ಕುತೂಹಲಕ್ಕೆ ಕೇಳಿದರೆ, ‘ಸ್ವಚ್ಛ ಮನಸ್ಸಿಂದ ಹಾಡ್ತೀನಿ. ನೆಪ್ಪಿರತ್ತೆ ಕಣವ್ವಾ’ ಎಂದು ಅಚ್ಚರಿ ಹುಟ್ಟಿಸುತ್ತಾರೆ.

ನಿಂಗಮ್ಮ ಅವರು ಚಿಕ್ಕ ವಯಸ್ಸಿನಲ್ಲೇ ಮದುವೆಯಾದರು. ಬಡತನ, ದುಡಿಮೆಯ ಅನಿವಾರ್ಯತೆಯಿಂದಾಗಿ ನಾಟಿ ಕೆಲಸಕ್ಕೆ ಹೋಗುವಂತಾಯಿತು. ಅತ್ತ ಬಿಸಿಲ ಬೇಗೆ ಮೈ ಸುಡುತ್ತಿದ್ದರೂ , ಇತ್ತ ನಾಟಿಗೆ ಬಂದ ಹೆಂಗಸರು ಗುನುಗುತ್ತಿದ್ದ ದೇವರ ಪದಗಳು ಕಿವಿಗೆ ಬೀಳುತ್ತಿತ್ತು. ಪದ ಕಲಿಕೆ ಆರಂಭವಾಗಿದ್ದೇ ಅಲ್ಲಿಂದ ಎನ್ನುತ್ತಾರೆ ನಿಂಗಮ್ಮ ಅವರು. ಸರಿಸುಮಾರು ೩೦ನೇ ವಯಸ್ಸಿನ ತನಕವೂ ಈ ಕಲಿಕೆ ನಿರಂತರವಾಗಿತ್ತು.

ನಂತರ ಮದುವೆ ಕಾರ್ಯಕ್ರಮಗಳಿಗೆ ಹೋಗುವುದು ರೂಢಿಯಾಯಿತು. ಅವರು ಹಾಡದ ಪದಗಳಿಲ್ಲ. ದಂಡಿನ ಮಾರಮ್ಮನ ಹಾಡು, ಬಿಳಿಗಿರಿ ರಂಗಯ್ಯನ ಹಾಡು, ಸೋಬಾನೆ ಪದ, ಅತ್ತೆ ಸೊಸೆಯರ ಕುರಿತಾದ ಹಾಡುಗಳೆಲ್ಲ ಪ್ರಮುಖವಾದವು. ತಾಳ, ಲಯಬದ್ಧವಾದ ಶಾಸ್ತ್ರೀಯ ಕಲಿಕೆ ಇಲ್ಲದಿದ್ದರೂ ಮನಸ್ಸಿಟ್ಟು ಹಾಡುವುದೇ ಮುಖ್ಯ ಎನ್ನುತ್ತಾ ನಿಂಗಮ್ಮ ಬದುಕುತ್ತಿದ್ದಾರೆ.

೭೦ರ ವಯಸ್ಸಿನವರೆಗೂ ನಾಟಿ ಕೆಲಸಕ್ಕೆ ಹೋಗುತ್ತಿದ್ದರು. ಸಹಜವಾದ ಕಾಲಿನ ಸೆಳೆತ, ವೃದ್ಧಾಪ್ಯದ ತೊಂದರೆಯಿಂದಾಗಿ ದುಡಿಯುವುದು ಅಸಾಧ್ಯವಾಗತೊಡಗಿತು. ಆದರೆ, ಜೀವದ ಉಸಿರಿರುವ ತನಕ ಹಾಡುವುದನ್ನು ಮಾತ್ರ ನಿಲ್ಲಿಸುವುದೇ ಇಲ್ಲ ಎಂದು ಹೇಳುವಾಗ ನಿಂಗಮ್ಮ ಅವರ ಜೀವನೋತ್ಸಾಹ ಚಿಮ್ಮುತ್ತದೆ!

ಆಕಾಶವಾಣಿಯಲ್ಲಿ ಜನಪದ ಸಂಗೀತ ಕಲಾವಿದರಾಗಿ ಅಪರಿಚಿತರಾಗೇ ಉಳಿದ ಅನೇಕ ಹಾಡುಗಾರ್ತಿಯರ ನಡುವೆ ನಿಂಗಮ್ಮ ಅವರೂ ಒಬ್ಬರು. ಸಂಸಾರದ ತಾಪತ್ರಯದೊಳಗೆ ನಿಂಗಮ್ಮ ಒಂಟಿಯಾಗಿದ್ದರೂ ಪದ ಹೇಳಲು ಹೋಗುವುದೆಂದರೆ ಅವರಿಗೆ ಸಂಭ್ರಮದಂತೆ ಎಂದು ನಿಂಗಮ್ಮ ಅವರ ಹಾಡಿನ ಬಳಗದ ಜೊತೆಗಾರ್ತಿಯರು ಹೇಳುತ್ತಾರೆ.

ವಯಸ್ಸಿನ ಮುಪ್ಪುತನವನ್ನು ಮರೆಸುವಷ್ಟು ಪದಗಳೆಲ್ಲ ನಿಂಗಮ್ಮ ಅವರಿಗೆ ನಿತ್ಯ ಚೈತನ್ಯವನ್ನು ನೀಡುತ್ತವೆ ಎಂಬುದು ಸುಳ್ಳಲ್ಲ. ನಮ್ಮ ಸುತ್ತಲಿನ ಜನಪದ ಹಾಡುಗಾರ್ತಿಯರು ನಮ್ಮೊಳಗೆ ಕಳೆದುಹೋಗದಿರಲಿ.

 

ಆಂದೋಲನ ಡೆಸ್ಕ್

Recent Posts

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ ಆಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗುತ್ತಿವೆ ಎಂದು ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, 200…

9 mins ago

ನಮಗೂ ಸಚಿವ ಸ್ಥಾನ ಕೊಡಿ: ಸಂಪುಟ ಪುನಾರಚನೆಗೆ 24 ಎಂಎಲ್‌ಸಿಗಳಿಂದ ಪತ್ರ

ಬೆಂಗಳೂರು: ಸಚಿವ ಸಂಪುಟ ಪುನಾರಚನೆಗೆ 31 ಶಾಸಕರು ಒತ್ತಾಯ ಮಾಡಿ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದ ಬೆನ್ನಲ್ಲೇ, ಇದೀಗ 24…

19 mins ago

ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ: ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಮರ್ಥನಿದ್ದೇನೆ. ಈವರೆಗೂ ವಹಿಸಿದ ಎಲ್ಲಾ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಅದನ್ನು ಸಾಬೀತು ಪಡಿಸಿದ್ದೇನೆ ಎಂದು…

24 mins ago

ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ: ಎಚ್.ಡಿ.ದೇವೇಗೌಡ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿಗಳ ಚುನಾವಣೆಗಳಲ್ಲಿ ಎನ್‌ಡಿಎ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ…

28 mins ago

ವಿರಾಜಪೇಟೆಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ವಿರಾಜಪೇಟೆ: ವಿರಾಜಪೇಟೆಯಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ…

35 mins ago

ನನ್ನ ಇಲಾಖೆಯಲ್ಲಿ 4 ಸಾವಿರ ಹುದ್ದೆಗಳಿಗೆ ನೇಮಕಾತಿ: ಸಚಿವ ಪರಮೇಶ್ವರ್‌

ಬೆಂಗಳೂರು: ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ನಡೆದ ಬೃಹತ್‌ ಹೋರಾಟ ಕುರಿತು ಗೃಹ ಸಚಿವ ಪರಮೇಶ್ವರ್‌…

2 hours ago