ಅಂಕಣಗಳು

ಅಂಚಿನ ಸಮುದಾಯಗಳ ದುಃಖ ನೋಡು ತಾಯೀ ಭುವನೇಶ್ವರಿ…

ಬಾನು ಮುಷ್ತಾಕ್ ಅವರ ಭಾಷಣದ ಒಂದೆರಡು ವಾಕ್ಯಗಳನ್ನು ಎತ್ತಿಕೊಂಡು ಒಂದು ವರ್ಗ ದಿಢೀರನೆವಿರೋಧ ವ್ಯಕ್ತಪಡಿಸುತ್ತಿದೆ. ಭಾಜಪ ಮತ್ತದರ ಸೈದ್ಧಾಂತಿಕ ಸಂಗಾತಿಗಳ ಈ ಪ್ರವೃತ್ತಿ ರಾಜ್ಯಕ್ಕೋ ದೇಶಕ್ಕೋ ಹೊಸದೇನಲ್ಲ.

ಧರ್ಮದ ಗುರುತಿನಿಂದಾಚೆ ಏನನ್ನೂ ಗುರುತಿಸಲಾರದವರು, ಗೌರವಿಸಲಾರದವರು ಇದೀಗ ಬಾನು ಅವರ ಮಾತುಗಳನ್ನೆತ್ತಿಕೊಂಡು ಕ್ಯಾತೆ ತೆಗೆದಿದೆ. ಇದು ನಿರೀಕ್ಷಿತ. ಆದರೆ ಇದೇ ವೇಳೆಗೆ ಬಾನು ಮುಷ್ತಾಕ್ ಸಹಿತ ಪ್ರಗತಿಪರರ ಬಗ್ಗೆ ಅಸಹನೆ ಇರುವ ಸಾರಸ್ವತ, ಸಾಂಸ್ಕೃತಿಕ ಲೋಕದ ಮಂದಿ ಭುವನೇಶ್ವರಿಯ ಗುರಾಣಿ ಹಿಡಿದು ದಾಳಿ ಮಾಡುತ್ತಿದ್ದಾರೆ.

‘ಬೆರಳು ಚಂದ್ರನೆಡೆ ಬೆಟ್ಟು ಮಾಡಿದರೆ, ಮುಠ್ಠಾಳ ಬೆರಳಿನ ತುದಿ ನೋಡುತ್ತಾನೆ’ ಎಂಬ ಚೀನಾದ ಗಾದೆಯೊಂದಿದೆ. ಬಾನು ಅವರ ಆಶಯ, ಆತಂಕಗಳನ್ನು ಅರ್ಥ ಮಾಡಿಕೊಳ್ಳದೇ ಅವರು ನೀಡುವ ಸಾಂದರ್ಭಿಕ ಉದಾಹರಣೆಯನ್ನು ಎತ್ತಿಕೊಂಡು ದಾಳಿ ಮಾಡುವುದು ಧೂರ್ತತನ.

ಒಂದೆರಡು ಅಂಶಗಳನ್ನು ಗಮನಿಸೋಣ. ಸ್ಟ್ಯಾಂಡರ್ಡ್ ಕನ್ನಡ ಮೂಲತಃ ಬ್ರಾಹ್ಮಣರ ‘ಶುದ್ಧ ಕನ್ನಡ’. ಅದೂ ಮೈಸೂರು, ಮಲ್ಲೇಶ್ವರಂ, ಬಸವನಗುಡಿಯ ಮಾದರಿ. ಇದರಿಂದಾಚೆಯ ಕನ್ನಡವನ್ನೆಲ್ಲ ಐತೆ, ಪೈತೆ ಮಾದರಿ ಎಂದು ತಾತ್ಸಾರದಿಂದ ಹೊರಗಿಟ್ಟಾಗಿದೆ. ಈ ಭಾಷಾ ತಾತ್ಸಾರವೂ ಜಾತಿಯ ಶ್ರೇಷ್ಠತೆಯ ಭಾಷಾ ರೂಪ ಅಷ್ಟೇ.

ಈ ಸ್ಟ್ಯಾಂಡರ್ಡ್ ಕನ್ನಡದ ಯಜಮಾನಿಕೆಯ ಭಾಷೆಯ ಮಾದರಿ ಹೇಗಿದೆಯೆಂದರೆ, ಅದರ ಎದುರು ತುಳು, ಕೊಂಕಣಿ, ಕೊಡವ, ಬಂಜಾರ, ಉರ್ದು, ಕೊರಚ ಇತ್ಯಾದಿ ಹತ್ತಾರು ಸಣ್ಣಪುಟ್ಟ ಭಾಷೆಗಳು ಹೊಸ್ತಿಲಿನಿಂದಾಚೆ ನಿಂತಿರುವ ಸ್ಥಿತಿ ಇದೆ. ಈ ಭಾಷೆಗಳನ್ನಾಡುವ ಮಕ್ಕಳು ಶಾಲೆಯೊಳಗೆ ಈ ಭಾಷಾ ಪದ ಪ್ರಯೋಗ ಮಾಡದಂತೆ, ನಮ್ಮ ಶಿಕ್ಷಣ ವ್ಯವಸ್ಥೆಯ ಕನ್ನಡ ನೋಡಿಕೊಂಡಿದೆ. ಇವೆಲ್ಲಾ ಭಾಷೆಗಳ ಪದ ಶ್ರೀಮಂತಿಕೆ ಕನ್ನಡದೊಳಕ್ಕೆ ಬಂದರೆ ಕನ್ನಡ ಬೆಳೆಯುತ್ತದೆ ಎಂಬ ಪ್ರಜ್ಞೆಯೂ ಈ ವ್ಯವಸ್ಥೆಗಿಲ್ಲ. ಇನ್ನೊಂದೆಡೆ ಪ್ರಾದೇಶಿಕ ಭಾಷೆ, ಸಮುದಾಯಗಳ ಭಾಷೆಗಳನ್ನೆಲ್ಲಾ ಗೇಲಿ, ಹಾಸ್ಯದ ಕ್ಯಾರಿಕೇಚರ್ ಆಗಿ ಪ್ರದರ್ಶಿಸುತ್ತಾ ಇವು ಕೀಳರಿಮೆಯಲ್ಲಿ ಬಳಲುವಂತೆ ನಮ್ಮ ಯಜಮಾನ ಕನ್ನಡ ಮಾಡಿದೆ.

ಬಾನು ಮುಷ್ತಾಕ್ ಎತ್ತಿರುವುದು ಈ ಪ್ರಶ್ನೆಯನ್ನೇ. ಉದಾ: ಮುಸ್ಲಿಂ ಲೇಖಕಿ, ದಲಿತ ಲೇಖಕ ಎಂದು ಗುರುತಿಸುವ ರೀತಿ ನಾವು ಬ್ರಾಹ್ಮಣ ಲೇಖಕ/ ಲೇಖಕಿಯನ್ನೆಲ್ಲಾ ಜಾತಿ ಗುರುತಿನ ಮೂಲಕ ಉಲ್ಲೇಖಿಸಿದರೆ, ನಾಳೆ ಭೂಕಂಪವೇ ಆಗಿ ಬಿಡಬಹುದು. ಇವರೆಲ್ಲಾ ‘ಕನ್ನಡ ಲೇಖಕ/ ಲೇಖಕಿಯರು!!’ ಉಳಿದವರು ಮುಸ್ಲಿಂ/ ದಲಿತ/ ಅಂಚಿನ ಹಣೆಪಟ್ಟಿಯ ಸೂಚಿಯ ಮೂಲಕ ಸ್ಥಾನ ಪಡೆದವರು! ಈ ವ್ಯಂಗ್ಯ ತಟ್ಟಿದ ದಿನ ಬಾನು ಅವರ ಆಳದ ವಿಷಾದ ಅರ್ಥವಾದೀತು.

ಇನ್ನು ಈ ಭುವನೇಶ್ವರಿ ಬಗ್ಗೆ ಸಣ್ಣ ವಿವರಣೆ. ಈ ದಸರಾ ಉತ್ಸವಕ್ಕೆ ಭುವನೇಶ್ವರಿ ಎಂಟ್ರಿ ಆಗಿ ಐದು ದಶಕ ಆಗಿದೆ, ಅಷ್ಟೆ! ಮಹಾರಾಜರ ದಸರಾ ಅಂತ್ಯವಾಗಿ ಜನರ ದಸರಾ ಶುರುವಾದಾಗ ಅಂಬಾರಿಯಲ್ಲಿ ಕೂತ ಆಶಯ ರೂಪ – ಭುವನೇಶ್ವರಿ.

ಅಚ್ಚರಿ ಎಂದರೆ ಇತಿಹಾಸದ ಎಲ್ಲೂ ಈ ನಾಡಿನ ಅಧಿದೇವತೆ ಎಂದು ಭುವನೇಶ್ವರಿಯನ್ನು ಗುರುತಿಸಿದ್ದಿಲ್ಲ! ಅಷ್ಟೇಕೆ, ಭಾರತ ಪುಲ್ಲಿಂಗದ ಭೌಗೋಳಿಕ ವಿಶೇಷವಾಗಿತ್ತು. ಸಾವರ್ಕರ್ ಕೂಡಾ ಭಾರತವನ್ನು ‘ಫಾದರ್ ಲ್ಯಾಂಡ್’ ಎಂದು ಕರೆದಿದ್ದರು. ಅದನ್ನು ಭಾರತಾಂಬೆ ಎಂದು ಬದಲಾಯಿಸಿದ್ದು ೨೦ನೇ ಶತಮಾನದ ಆದಿಯಲ್ಲಿ. ಅರವಿಂದ ಘೋಷ್ ಭಾರತದ ಭೂಪಟ ಹೆಣ್ಣಿನ ತರ ಇದೆ ಎಂದು ರೇಖು ಬಿಡಿಸಿದರೆ ; ಅವನೀಂದ್ರನಾಥ ಠಾಗೋರ್, ಸಾದಾ ಸೀರೆಯ ಭಾರತಮಾತೆಯ ಚಿತ್ರ ಬರೆದರು. ಭಾರತಮಾತೆ ಹುಟ್ಟಿದ್ದು ಹೀಗೆ. ಅದೇ ರಾಷ್ಟ್ರೀಯ ಭಾವನೆಯ ಮಥನದಲ್ಲಿ ಕರ್ನಾಟಕದ ನಮ್ಮ ಹಿರಿಯರು, ಕನ್ನಡ ನಾಡನ್ನು ಹಾಗೇ ಕಲ್ಪಿಸಿಕೊಂಡು, ಭಾರತಾಂಬೆಯ ಮಗಳು ಕನ್ನಡಾಂಬೆ ನಮ್ಮ ತಾಯಿಯಾದಳು. ಶತಮಾನದ ಚರಿತ್ರೆ ಮಾತ್ರ ಇರುವ ಈ ಬೆಳವಣಿಗೆ, ಪ್ರಜಾಸತ್ತಾತ್ಮಕ ಆಶಯಗಳ ಕಾರಣಕ್ಕೇ ಹುಟ್ಟಿತು.

ರಾಜರ ಕಾಲದಲ್ಲಿ ಭೂಮಿಯೆಂಬುದು ತಾಯಿಯೆಂದು ಪರಿಗಣಿತವಾದ ಉದಾಹರಣೆ ಎಲ್ಲಿದೆ? ರಾಜ ಎಲ್ಲ ಕಾಲದಲ್ಲೂ ಭೂಮಿಯ ಗಂಡ! ಜನಸಾಮಾನ್ಯರು ಮಾತ್ರ ಭೂಮ್ತಾಯಿ ಅಂತ ಕೈಮುಗಿತಿದ್ದರು. ನಮ್ಮ ನಾಡು, ತಾಯ್ನಾಡು, ತಾಯ್ನುಡಿ, ತಾಯ್ನಾಡಿಗೊಂದು ಸ್ವರೂಪ ಎಲ್ಲವೂ ಕಳೆದ ಶತಮಾನದ ರಾಷ್ಟ್ರೀಯ, ಪ್ರಜಾಸತ್ತಾತ್ಮಕ ಚಳವಳಿಯಿಂದ ಹುಟ್ಟಿಕೊಂಡಿದ್ದೇ ಹೊರತು, ಇತಿಹಾಸದ ಸೊತ್ತಂತೂ ಅಲ್ಲ. ಈ ತಾಯ್ನಾಡು ಅಲ್ಲಿನ ನುಡಿ- ಎಲ್ಲರನ್ನೂ ಒಳಗೊಂಡು, ಸಲಹಿ ಬೆಳೆಸುವಂತಿರಬೇಕೆ ಹೊರತು, ತನ್ನೊಳಗಿನ ಇತರ ಅಶಕ್ತ ಭಾಷಾ ಲೋಕಕ್ಕೆ ಕೀಳರಿಮೆ ತುಂಬಬಾರದು. ಈ ಪ್ರಶ್ನೆ ಎತ್ತಿದಾಗ, ಅಸಹನೆ ತೋರುವುದೇ ಯಜಮಾನಿಕೆಯ ದರ್ಪದ ಸಂಕೇತ.

” ಅಚ್ಚರಿ ಎಂದರೆ ಇತಿಹಾಸದ ಎಲ್ಲೂ ಈ ನಾಡಿನ ಅಧಿದೇವತೆ ಎಂದು ಭುವನೇಶ್ವರಿಯನ್ನು ಗುರುತಿಸಿದ್ದಿಲ್ಲ! ಅಷ್ಟೇಕೆ, ಭಾರತ ಪುಲ್ಲಿಂಗದ ಭೌಗೋಳಿಕ ವಿಶೇಷವಾಗಿತ್ತು. ಸಾವರ್ಕರ್ ಕೂಡಾ ಭಾರತವನ್ನು ‘-ದರ್ ಲ್ಯಾಂಡ್’ ಎಂದು ಕರೆದಿದ್ದರು. ಅದನ್ನು ಭಾರತಾಂಬೆ ಎಂದು ಬದಲಾಯಿಸಿದ್ದು ೨೦ನೇ ಶತಮಾನದ ಆದಿಯಲ್ಲಿ.”

-ಸುರೇಶ್ ಕಂಜರ್ಪಣೆ

ಆಂದೋಲನ ಡೆಸ್ಕ್

Recent Posts

ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು

ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’…

3 hours ago

ಅರವತ್ತು ದಿನಗಳು ಕಳೆಯಿತು…ಫಲದ ನಿರೀಕ್ಷೆಯಲ್ಲಿ!

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ತೋಳ ಬಂತು ತೋಳ ಕತೆಯನ್ನು ನೆನಪಿಸುವಂತಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಕಾಂಗ್ರೆಸ್…

3 hours ago

ಇಂದು ಕೊಡಗು ಜಿಲ್ಲೆಯಲ್ಲಿ ಕಕ್ಕಡ 18ರ ಸಂಭ್ರಮ

ನವೀನ್ ಡಿಸೋಜ ಮನೆಮನೆಗಳಲ್ಲಿ ಘಮಘಮಿಸಲಿದೆ ಮದ್ದುಸೊಪ್ಪಿನ ಖಾದ್ಯ; ವಿಭಿನ್ನ ಹಬ್ಬದಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸೋಮವಾರ (ಆ.೩)ಕಕ್ಕಡ…

3 hours ago

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ…

3 hours ago

ಗ್ರಾಪಂಗಳ ಅತ್ಯುತ್ತಮ ಕೆಲಸಕ್ಕೆ ಉತ್ತಮ ಪ್ರಶಸ್ತಿ

ಕೆ.ಬಿ.ರಮೇಶನಾಯಕ ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಗ್ರಾಪಂಗಳನ್ನು ಹುರಿದುಂಬಿಸಲು ಜಿಪಂ ಹೊಸ ಯೋಜನೆ ಪ್ರಶಸ್ತಿಗೆ ನಾಲ್ಕು ಕಾರ್ಯಸೂಚಿಯಲ್ಲಿ ಪ್ರಗತಿ ಸಾಧಿಸಿದ ಗ್ರಾಪಂಗಳ…

3 hours ago

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

1 day ago